ಆ್ಯಪ್ನಗರ

ಹೊಸ ಸರಕಾರದಿಂದ ಹೆಚ್ಚು ಉದ್ಯೋಗ ಸೃಷ್ಟಿ!

ಉದ್ಯೋಗ ಸೃಷ್ಟಿಯಲ್ಲಿ ಕೇಂದ್ರ ಹಿಂದೆ ಬಿದ್ದಿತ್ತು ಎಂಬ ಆರೋಪ ಈ ಚುನಾವಣೆಯ ಸಂದರ್ಭದಲ್ಲಿ ಕೇಳಿ ಬಂದಿದ್ದರಿಂದ ಮುಂದಿನ ಸರಕಾರ ಈ ನಿಟ್ಟಿನಲ್ಲಿ ಹೆಚ್ಚು ಗಮನ ನೀಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಹೆಚ್ಚು ಉದ್ಯೋಗ ಸೃಷ್ಟಿಸುವ, ರಕ್ಷಣಾ ಸಾಮಗ್ರಿಗಳ ಉತ್ಪಾದನೆ, ಔಷಧಿಗಳ ತಯಾರಿಕೆಯಂತಹ 22 ಪ್ರಮುಖ ಕ್ಷೇತ್ರಗಳನ್ನು (ಚಾಂಪಿಯನ್‌ ಸೆಕ್ಟರ್‌) ಗುರುತಿಸಿ, ಈ ಕ್ಷೇತ್ರಗಳಿಗೆ ಅಗತ್ಯ ಎಲ್ಲ ಬೆಂಬಲ ನೀಡುವ ಮೂಲಕ ಉದ್ಯೋಗ ಸೃಷ್ಟಿ ಹೆಚ್ಚಿಸುವ ಗುರಿಯನ್ನು ಬಿಜೆಪಿ ಹೊಂದಿದೆ.

Vijaya Karnataka 24 May 2019, 11:10 pm
ಕೇಂದ್ರದಲ್ಲಿ ಮತ್ತೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿರುವುದರಿಂದ ಉದ್ಯೋಗ ಸೃಷ್ಟಿಗೆ ಸಂಬಂಧಿಸಿದಂತೆ ಕಳೆದ ಐದು ವರ್ಷಗಳಲ್ಲಿ ಕೇಂದ್ರ ಜಾರಿಗೆ ತಂದಿರುವ ಯೋಜನೆಗಳು ಮುಂದುವರೆಯಲಿದ್ದು, ಇನ್ನಷ್ಟು ಚುರುಕು ಪಡೆಯುವ ನಿರೀಕ್ಷೆ ಇದೆ.
Vijaya Karnataka Web job1


ಉದ್ಯೋಗ ಸೃಷ್ಟಿಯಲ್ಲಿ ಕೇಂದ್ರ ಹಿಂದೆ ಬಿದ್ದಿತ್ತು ಎಂಬ ಆರೋಪ ಈ ಚುನಾವಣೆಯ ಸಂದರ್ಭದಲ್ಲಿ ಕೇಳಿ ಬಂದಿದ್ದರಿಂದ ಮುಂದಿನ ಸರಕಾರ ಈ ನಿಟ್ಟಿನಲ್ಲಿ ಹೆಚ್ಚು ಗಮನ ನೀಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಹೆಚ್ಚು ಉದ್ಯೋಗ ಸೃಷ್ಟಿಸುವ, ರಕ್ಷಣಾ ಸಾಮಗ್ರಿಗಳ ಉತ್ಪಾದನೆ, ಔಷಧಿಗಳ ತಯಾರಿಕೆಯಂತಹ 22 ಪ್ರಮುಖ ಕ್ಷೇತ್ರಗಳನ್ನು (ಚಾಂಪಿಯನ್‌ ಸೆಕ್ಟರ್‌) ಗುರುತಿಸಿ, ಈ ಕ್ಷೇತ್ರಗಳಿಗೆ ಅಗತ್ಯ ಎಲ್ಲ ಬೆಂಬಲ ನೀಡುವ ಮೂಲಕ ಉದ್ಯೋಗ ಸೃಷ್ಟಿ ಹೆಚ್ಚಿಸುವ ಗುರಿಯನ್ನು ಬಿಜೆಪಿ ಹೊಂದಿದೆ. ಈ ಕುರಿತು ಅದು ತನ್ನ ಪ್ರಣಾಳಿಕೆ 'ಸಂಕಲ್ಪ ಪತ್ರ'ದಲ್ಲಿಯೇ ಭರವಸೆ ನೀಡಿದ್ದು, ಇದನ್ನು ಮುಂದಿನ ಸರಕಾರ ಜಾರಿಗೆ ತರುವ ನಿರೀಕ್ಷೆ ಇದೆ.

ಮುಖ್ಯವಾಗಿ ಈ ಹಿಂದಿನ ಕೇಂದ್ರ ಸರಕಾರವು ಕೌಶಲ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಾ ಬಂದಿತ್ತು. ಮುಂದೆ ಕೂಡ ಇದಕ್ಕೆ ಆದ್ಯತೆ ನೀಡಲಿದೆ. ಈ ಕುರಿತು ಬಿಜೆಯು ಹೊಸ ನೀತಿ ರೂಪಿಸುವುದಾಗಿ ಕೂಡ ಪ್ರಣಾಳಿಕೆಯಲ್ಲಿ ಹೇಳಿದೆ.

ಸ್ವಯಂ ಉದ್ಯೋಗಕ್ಕೆ ಪ್ರೋತ್ಸಾಹ ನೀಡುವ 'ಮುದ್ರಾ' ಯೋಜನೆಯು ಇನ್ನಷ್ಟು ಚುರುಕು ಪಡೆಯಲಿದ್ದು, 30 ಕೋಟಿ ಜನರಿಗೆ ಈ ಸಾಲಸೌಲಭ್ಯ ದೊರೆಯುವಂತೆ ಮಾಡುವ ಗುರಿಯನ್ನು ಬಿಜೆಪಿ ಹೊಂದಿದೆ. ಅಲ್ಲದೆ, ಸ್ಟಾರ್ಟ್‌ಅಫ್‌ಗಳನ್ನು ಪ್ರಾರಂಭಿಸುವವರಿಗೆ ನೆರವಾಗಲು 20 ಸಾವಿರ ಕೋಟಿ ರೂ.ಗಳ 'ಸೀಡ್‌ ಸ್ಟಾರ್ಟ್‌ಅಪ್‌ ಫಂಡ್‌' ಪ್ರಾರಂಭಿಸುವುದಾಗಿಯೂ ಪ್ರಣಾಳಿಕೆಯಲ್ಲಿ ಹೇಳಲಾಗಿದೆ.

ಯುವ ಉದ್ಯಮಿಗಳಿಗೆ ಯಾವುದೇ ಗ್ಯಾರಂಟಿ ಇಲ್ಲದೆ 50 ಲಕ್ಷಗಳ ವರೆಗೆ ಸಾಲ ನೀಡುವ ಹೊಸ ಯೋಜನೆಯೊಂದನ್ನು ಜಾರಿಗೆ ತರಲಾಗುವುದು ಎಂದು ಬಿಜೆಪಿಯು ಪ್ರಣಾಳಿಕೆಯಲ್ಲಿ ಹೇಳಿದ್ದು, ಈ ಯೋಜನೆಯನ್ನು ಕೇಂದ್ರ ಪ್ರಕಟಿಸಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.

ಕೇಂದ್ರ ಸರಕಾರದಲ್ಲಿನ ಲಕ್ಷಾಂತರ ಖಾಲಿ ಹುದ್ದೆಗಳ ಭರ್ತಿಗೂ ನೂತನ ಸರಕಾರ ಒತ್ತು ನೀಡುವ ಸಾಧ್ಯತೆಗಳಿದ್ದು, ಸದ್ಯ ರೈಲ್ವೆಯು ಬೃಹತ್‌ ನೇಮಕಾತಿಗಳನ್ನು ಆರಂಭಿಸಿದೆ. ಕಳೆದ ಐದು ವರ್ಷಗಳಲ್ಲಿ ಈ ಬಗ್ಗೆ ಹೆಚ್ಚು ಗಮನ ನೀಡದೇ ಇರುವುದರಿಂದ ಮುಂದೆ ಈ ಬಗ್ಗೆ ಸರಕಾರ ಗಮನ ನೀಡಲಿದೆ ಎಂದು ಹೇಳಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ