ಆ್ಯಪ್ನಗರ

ಹುದ್ದೆಯ ಅಮಾನತು ಆದೇಶ ಪರಿಶೀಲನೆ ಇಲ್ಲ

ಭ್ರಷ್ಟಾಚಾರ ಮತ್ತು ಕ್ರಿಮಿನಲ್ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ನಾಗರಿಕ ಸೇವೆಗಳ ಅಧಿಕಾರಿಗಳ ಅಮಾನತು ಆದೇಶವನ್ನು ಮರುಪರಿಶೀಲಿಸಲು ಅವಕಾಶ ನೀಡದಂತೆ ನಿಯಮ ರೂಪಿಸಲು ಕೇಂದ್ರ ಮುಂದಾಗಿದೆ.

Vijaya Karnataka Web 29 Apr 2020, 11:58 am

ಹೊಸದಿಲ್ಲಿ: ಭ್ರಷ್ಟಾಚಾರ ಮತ್ತು ಕ್ರಿಮಿನಲ್ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ಐಎಎಸ್, ಐಪಿಎಸ್ ಮತ್ತು ಐಎಫ್‌ಎಸ್ ಅಧಿಕಾರಿಗಳ ಅಮಾನತು ಆದೇಶಗಳನ್ನು ಯಾವ ಕಾರಣಕ್ಕೂ ಮರುಪರಿಶೀಲಿಸಲು ಅವಕಾಶ ನೀಡದಂತಹ ಕಠಿಣ ನಿಯಮ ರೂಪಿಸಲು ಕೇಂದ್ರ ಸರಕಾರ ಸಿದ್ಧತೆ ನಡೆಸಿದೆ.
Vijaya Karnataka Web rules for ias ips suspension
rules for ias ips suspension


ಭ್ರಷ್ಟಾಚಾರ ಹಾಗೂ ಕ್ರಿಮಿನಲ್ ಪ್ರಕರಣಗಳಲ್ಲಿ ಕೋರ್ಟ್‌ನಿಂದ ದೋಷಿ ಎಂದು ಕರೆಸಿಕೊಂಡ ಐಎಎಸ್, ಐಪಿಎಸ್, ಐಎಫ್‌ಎಸ್‌ ಅಧಿಕಾರಿಗಳ ಅಮಾನತು ಆದೇಶವನ್ನು ನ್ಯಾಯಾಲಯದಿಂದ ಅಂತಿಮ ಆದೇಶ ಬರುವವರೆಗೂ ಮರುಪರಿಶೀಲಿಸಲು ಸಮಿತಿಗಳಿಗೆ ಅವಕಾಶ ನೀಡದಿರಲು 'ಅಖಿಲ ಭಾರತ ಸೇವೆಗಳ ನಿಯಮಗಳು-1969'ರ ನಿಯಮ 3ಕ್ಕೆ ಬದಲಾವಣೆ ತರಲು ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯ ಚಿಂತನೆ ನಡೆಸಿದೆ.

ಈ ಸಂಬಂಧ ಅದು ಪ್ರತಿಕ್ರಿಯೆ ಕೋರಿ ಗೃಹ ಸಚಿವಾಲಯ, ರಾಜ್ಯ ಸರಕಾರಗಳ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದೆ. ಮೇ 15ರೊಳಗೆ ಸಲಹೆ ಕಳುಹಿಸುವಂತೆ ಗಡುವು ವಿಧಿಸಿದೆ.

70 ಸಾವಿರ ಖಾಸಗಿ ಉದ್ಯೋಗಗಳು, 40 ಸಾವಿರ ಸರ್ಕಾರಿ ಉದ್ಯೋಗಗಳಲ್ಲಿ ಯಾವುವು ಬೆಟರ್? ಏಕೆ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ