ಆ್ಯಪ್ನಗರ

ಕೃಷಿ ಸಚಿವಾಲಯದಲ್ಲಿ ನೇರ ಸಂದರ್ಶನದ ಮೂಲಕ ನೇಮಕಾತಿ: ಸೆ.14 ಮತ್ತು 18 ಕ್ಕೆ ಸಂದರ್ಶನ

ಪ್ರೊಟೆಕ್ಷನ್ ಆಫ್ ಪ್ಲಾಂಟ್ ವೆರೈಟೀಸ್ ಅಂಡ್ ಫಾರ್ಮರ್ಸ್‌ ರೈಟ್ಸ್‌ ಅಥಾರಿಟಿ ವಿವಿಧ ಹುದ್ದೆಗಳನ್ನು ಪ್ರಾಜೆಕ್ಟ್‌ ಕೆಲಸಗಳಿಗೆ ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲು ಪ್ರಕಟಣೆ ಹೊರಡಿಸಿದೆ.

Vijaya Karnataka Web 27 Aug 2019, 3:09 pm
ಭಾರತ ಸರ್ಕಾರ ಅಧೀನದ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಸಸ್ಯ ಪ್ರಭೇದಗಳು ಮತ್ತು ರೈತರ ಹಕ್ಕುಗಳ ರಕ್ಷಣೆ ಪ್ರಾಧಿಕಾರದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ಭರ್ತಿ ಮಾಡಲಾಗುತ್ತಿದೆ.
Vijaya Karnataka Web jobs in ministry of agriculture department 2019


ವಿವಿಧ ವಿಭಾಗಗಳಿಗೆ ಭರ್ತಿ ಮಾಡಲಿರುವ ಹುದ್ದೆಗಳ ವಿವರ

ಹಿರಿಯ ಸಂಶೋಧನ ಅಧಿಕಾರಿ: 7

ಟೆಕ್ನಿಕಲ್ ಅಸಿಸ್ಟೆಂಟ್ : 4

ವಿದ್ಯಾರ್ಹತೆ

- ಹಿರಿಯ ಸಂಶೋಧನಾ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವವರು ಜೆನೆಟಿಕ್ಸ್/ಪ್ಲಾಂಟ್ ಬ್ರೀಡಿಂಗ್/ಪ್ಲಾಂಟ್ ಜೆನೆಟಿಕ್ ರಿಸೋರ್ಸ್/ಪ್ಲಾಂಟ್ ಬಯೋಟೆಕ್ನಾಲಜಿ/ ಹಾರ್ಟಿಕಲ್ಚರ್ ಸ್ಪೆಷಿಯಲೈಜೇಶನ್ ಇನ್‌ ಜೆನೆಟಿಕ್ಸ್ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಉತ್ತೀರ್ಣರಾಗಿರಬೇಕು. ಜೊತೆಗೆ ಸಂಶೋಧನೆ ವಿಷಯದಲ್ಲಿ 2 ವರ್ಷದ ಅನುಭವ ಹೊಂದಿರಬೇಕು. ಮೋರ್ಫಾಲಾಜಿಕಲ್ ಸಂಬಂಧಿತ ಬೆಳೆಗಳ ವಿಷಯದಲ್ಲಿ ಸಂಶೋಧನಾ ಅನುಭವ, ಯುಜಿಸಿ, ಸಿಎಸ್‌ಐಆರ್, ಐಸಿಎಆರ್, ಎನ್‌ಇಟಿ ಅರ್ಹತೆ ಹೊಂದಿರುವವರಿಗೂ ಆಧ್ಯತೆ ನೀಡಲಾಗುವುದು.
- ಟೆಕ್ನಿಕಲ್ ಅಸಿಸ್ಟಂಟ್‌ ಹುದ್ದೆಗೆ ಕೃಷಿ ವಿಷಯದಲ್ಲಿ ಬಿಎಸ್ಸಿ, ಸಸ್ಯಶಾಸ್ತ್ರದಲ್ಲಿ ಬೆಳೆ ಪರೀಕ್ಷೆ, ಪ್ರಯೋಗ ಮತ್ತು ಡೇಟಾ ರೆಕಾರ್ಡಿಂಗ್ ವಿಭಾಗದಲ್ಲಿ ಎರಡು ವರ್ಷ ಅನುಭವ ಹೊಂದಿರಬೇಕು.

ವಯೋಮಿತಿ

  • ಹಿರಿಯ ಸಂಶೋಧನಾ ಅಭ್ಯರ್ಥಿಗಳಿಗೆ ಗರಿಷ್ಟ 35 ವರ್ಷ ಮೀರಿರಬಾರದು.
  • ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ. ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇದೆ.

ಮೇಲಿನ ಹುದ್ದೆಗಳನ್ನು ಒಂದು ವರ್ಷದ ಗುತ್ತಿಗೆ ಆಧಾರದಲ್ಲಿ ನೇರ ಸಂದರ್ಶನದ ಮೂಲಕ ನೇಮಕ ಮಾಡಿಕೊಳ್ಳಲಿದ್ದು, ತದನಂತರ ಹುದ್ದೆಯ ಅವಧಿ ಮುಂದುವರೆಸುವ ಸಾಧ್ಯತೆಗಳಿವೆ. ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಸಂಬಂಧಪಟ್ಟ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕು. ಸಂದರ್ಶನಕ್ಕೆ ಹಾಜರಾಗುವವರಿಗೆ ಟಿಎ ಮತ್ತು ಡಿಎ ಭತ್ಯೆ ನೀಡಲಾಗುವುದಿಲ್ಲ.

ಸಂದರ್ಶನ ನಡೆಯುವ ಸ್ಥಳ

ಸೆಪ್ಟೆಂಬರ್ 14, 2019 ರಂದು ಪ್ರೊಟೆಕ್ಷನ್ ಆಫ್ ಪ್ಲಾಂಟ್ ವೆರೈಟೀಸ್ ಅಂಡ್ ಫಾರ್ಮರ್ಸ್‌ ರೈಟ್ಸ್‌ ಅಥಾರಿಟಿ, ಬ್ರ್ಯಾಂಚ್ ಆಫೀಸ್ ಶಿವಮೊಗ್ಗ, ಯುಎಎಚ್‌ಎಸ್‌ ಶಿವಮೊಗ್ಗ, ಅಬ್ಬಲಗೆರೆ ಪೋಸ್ಟ್‌, ಶಿವಮೊಗ್ಗ ಕರ್ನಾಟಕ -577204.

ಸಂದರ್ಶನ ಸಮಯ: ಬೆಳಿಗ್ಗೆ 10 ಗಂಟೆ

ದೆಹಲಿಯಲ್ಲಿ ಪ್ರೊಟೆಕ್ಷನ್ ಆಫ್ ಪ್ಲಾಂಟ್ ವೆರೈಟೀಸ್ ಅಂಡ್ ಫಾರ್ಮರ್ಸ್‌ ರೈಟ್ಸ್‌ ಅಥಾರಿಟಿ, ಎನ್‌ಎಎಸ್‌ಸಿ ಕಾಂಪ್ಲೆಕ್ಸ್, ಡಿಪಿಎಸ್‌ ಮಾರ್ಗ್‌, ತೋಡಪುರ್‌ ಎದುರು ಕಾಂಪ್ಲೆಕ್ಸ್ ನಲ್ಲಿ ಸೆಪ್ಟೆಂಬರ್ 18, 2019 ರಂದು ಬೆಳಿಗ್ಗೆ 10 ಗಂಟೆಗೆ ಸಂದರ್ಶನ ನಡೆಯಲಿದೆ.

ಮೇಲಿನ ಹುದ್ದೆಗಳಿಗೆ ನೇರ ಸಂದರ್ಶನಕ್ಕೆ ಕರೆಯಲಾದ ಪ್ರಕಟಣೆ ನೋಡಲು ಕ್ಲಿಕ್ ಮಾಡಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ