ಆ್ಯಪ್ನಗರ

ಕನ್ಸಲ್ಟೆಂಟ್‌ ಹುದ್ದೆ ನೇಮಕ: ನಾಳೆ ಸಂದರ್ಶನ

ಆಯಾ ಹುದ್ದೆಗನುಸಾರ ಎಂಎಸ್ಸಿ/ಪದವಿ ವಿದ್ಯಾರ್ಹತೆ ಇರುವ ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಬಹುದು. ಎಂಎಸ್ಸಿ (ಅಗ್ರಿಕಲ್ಚರ್‌/ಅಗ್ರಿಕಲ್ಚರ್‌ ಎಂಜಿನಿಯರಿಂಗ್‌/ ಫೋರೆಸ್ಟ್ರಿ/ ಸಾಯಿಲ್‌ ಎಂಜಿನಿಯರಿಂಗ್‌/ ಹಾರ್ಟಿ ಕಲ್ಚರ್‌)/ ಸ್ನಾತಕೋತ್ತರ (ಸೋಷಿಯಲ್‌ ವರ್ಕ್‌/ ಜರ್ನಲಿಸಂ/ ಮಾಸ್‌ ಕಮ್ಯುನಿಕೇಷನ್‌)/ ಪದವಿ ಅಥವಾ ಬಿಇ (ಕಂಪ್ಯೂಟರ್‌ ಸೈನ್ಸ್‌)/ ಎಂಸಿಎ ವಿದ್ಯಾರ್ಹತೆ ಹೊಂದಿರಬೇಕು.

Agencies 13 Jun 2019, 10:33 am
ಬೆಂಗಳೂರು: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯು ಖಾಲಿ ಇರುವ ಐದು ಕನ್ಸಲ್ಟೆಂಟ್‌ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ಭರ್ತಿ ಮಾಡಲಿದೆ. ನಾಳೆ (ಜೂನ್‌ 14ರಂದು) ಸಂದರ್ಶನ ನಡೆಯಲಿದೆ.
Vijaya Karnataka Web job


ವಾಟರ್‌ಶೆಡ್‌ ಕನ್ಸಲ್ಟೆಂಟ್‌, ಕಮ್ಯುನಿಟಿ ಕೋ ಆರ್ಡಿನೇಟರ್‌, ಎಫೋರೆಸ್ಟೇಷನ್‌, ಸಿಎಸ್‌ಆರ್‌-ಔಟ್‌ರೀಚ್‌ ಕನ್ಸಲ್ಟೆಂಟ್‌ ಮತ್ತು ಐಟಿ ಕನ್ಸಲ್ಟೆಂಟ್‌ ಹುದ್ದೆಗಳಿಗೆ ನೇಮಕ ನಡೆಯಲಿದೆ.

ಅರ್ಹತೆಗಳೇನು?

ಆಯಾ ಹುದ್ದೆಗನುಸಾರ ಎಂಎಸ್ಸಿ/ಪದವಿ ವಿದ್ಯಾರ್ಹತೆ ಇರುವ ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಬಹುದು. ಎಂಎಸ್ಸಿ (ಅಗ್ರಿಕಲ್ಚರ್‌/ಅಗ್ರಿಕಲ್ಚರ್‌ ಎಂಜಿನಿಯರಿಂಗ್‌/ ಫೋರೆಸ್ಟ್ರಿ/ ಸಾಯಿಲ್‌ ಎಂಜಿನಿಯರಿಂಗ್‌/ ಹಾರ್ಟಿ ಕಲ್ಚರ್‌)/ ಸ್ನಾತಕೋತ್ತರ (ಸೋಷಿಯಲ್‌ ವರ್ಕ್‌/ ಜರ್ನಲಿಸಂ/ ಮಾಸ್‌ ಕಮ್ಯುನಿಕೇಷನ್‌)/ ಪದವಿ ಅಥವಾ ಬಿಇ (ಕಂಪ್ಯೂಟರ್‌ ಸೈನ್ಸ್‌)/ ಎಂಸಿಎ ವಿದ್ಯಾರ್ಹತೆ ಹೊಂದಿರಬೇಕು. ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸಬೇಕಾದರೂ ಗರಿಷ್ಠ ವಯೋಮಿತಿ 55 ವರ್ಷ. ಪ್ರತಿ ಹುದ್ದೆಗೂ ನಿಗದಿತ ಸೇವಾನುಭವ ಹೊಂದಿರಬೇಕಾಗುತ್ತದೆ. ಸಂಪೂರ್ಣ ವಿವರಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ನೋಡಿ.

ಸಂದರ್ಶನದ ದಿನಾಂಕ: ಜೂನ್‌ 14, 2019

ಸಂದರ್ಶನ ನಡೆಯುವ ಸ್ಥಳ: ಕಮಿಟಿ ರೂಮ್‌, ಆರ್‌ಡಿಪಿಆರ್‌, ಮೂರನೇ ಮಹಡಿ, ಗೇಟ್‌ ನಂ. 3, ಎಂಎಸ್‌ ಬಿಲ್ಡಿಂಗ್‌, ಬೆಂಗಳೂರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ