KEA KSSCL Application Link: ರಾಜ್ಯ ಬೀಜ ನಿಗಮದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ?
How To Apply For KEA KSSCL Jobs 2022: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ರಾಜ್ಯ ಬೀಜ ನಿಗಮ ನಿಯಮಿತದ ವಿವಿಧ ಹುದ್ದೆಗಳ ಭರ್ತಿಗೆ ಇತ್ತೀಚೆಗೆ ಅಧಿಸೂಚನೆ ಬಿಡುಗಡೆ ಮಾಡಿತ್ತು. ಈ ಸದರಿ ಹುದ್ದೆಗಳಿಗೆ ಇಂದಿನಿಂದ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ವಿಧಾನ, ಇತರೆ ಮಾಹಿತಿ ಇಲ್ಲಿದೆ.
Vijaya Karnataka Web 23 Jun 2022, 10:54 am
ಹೈಲೈಟ್ಸ್:
- ರಾಜ್ಯ ಬೀಜ ನಿಗಮದಲ್ಲಿ ಉದ್ಯೋಗಾವಕಾಶ.
- ಒಟ್ಟು 32 ಹುದ್ದೆಗಳಿಗೆ ಅರ್ಜಿ ಆಹ್ವಾನ.
- ಜೂನ್ 22 ರಿಂದ ಅರ್ಜಿ ಸ್ವೀಕಾರ ಆರಂಭ.
ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತದಲ್ಲಿ ಖಾಲಿ ಇರುವ ವಿವಿಧ ಒಟ್ಟು 32 ಹುದ್ದೆಗಳ ಭರ್ತಿಗೆ ಇತ್ತೀಚೆಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಲಾಗಿತ್ತು. ಸದರಿ ಹುದ್ದೆಗಳಿಗೆ ಅರ್ಜಿ ಸ್ವೀಕಾರ ಆರಂಭವಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗಿನ ವಿಧಾನಗಳನ್ನು ಅನುಸರಿಸಿ, ಆನ್ಲೈನ್ ಮೂಲಕ ಅರ್ಜಿ ಹಾಕಿರಿ. ಕೆಇಎ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸುವ ಹಂತಗಳು
ಮೊದಲನೇ ಹಂತ: ಅಪ್ಲಿಕೇಶನ್ ಮಾಹಿತಿ ನೀಡಿ, ಸಬ್ಮಿಟ್ ಮಾಡುವುದು.
ಎರಡನೇ ಹಂತ: ಫೋಟೋ ಮತ್ತು ಥಂಬ್ ಅಪ್ಲೋಡ್.
ಮೂರನೇ ಹಂತ: ಅರ್ಜಿ ಶುಲ್ಕ ಪಾವತಿ ಮಾಡುವುದು.
ನಾಲ್ಕನೇ ಹಂತ: ಅರ್ಜಿ ಪ್ರಿಂಟ್ ತೆಗೆದುಕೊಳ್ಳುವುದು.
ಬೀಜ ನಿಗಮ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಹೇಗೆ?
- ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ಸೈಟ್ https://cetonline.karnataka.gov.in/kea/ ಗೆ ಭೇಟಿ ನೀಡಿ.
- ಓಪನ್ ಆದ ಪೇಜ್ನಲ್ಲಿ 'ನೇಮಕಾತಿ' ಎಂದಿರುವ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
- ಕೆಇಎ ನಡೆಸುತ್ತಿರುವ ವಿವಿಧ ನೇಮಕಾತಿಗಳ ಲಿಸ್ಟ್ ಕಾಣುತ್ತದೆ.
- 'ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ=2022' ಎಂದಿರುವಲ್ಲಿ ಕ್ಲಿಕ್ ಮಾಡಿ.
- ನಂತರ ಕೆಇಎ ಮತ್ತೊಂದು ವೆಬ್ಪುಟ ಬಿಡುಗಡೆ ಆಗುತ್ತದೆ. ಇಲ್ಲಿ ನಿಗಮದ ಹುದ್ದೆಗಳ ಆನ್ಲೈನ್ ಅರ್ಜಿಗೆ ಲಿಂಕ್ ನೀಡಲಾಗಿರುತ್ತದೆ.
- ಆನ್ಲೈನ್ ಅರ್ಜಿ ಲಿಂಕ್ ಕ್ಲಿಕ್ ಮಾಡಿ. ನಂತರ ತೆರೆಯುವ ಪುಟದಲ್ಲಿ ಅಗತ್ಯ ಮಾಹಿತಿಗಳನ್ನು ನೀಡಿ ಅಪ್ಲಿಕೇಶನ್ ಪೂರ್ಣಗೊಳಿಸಿ.
ಸ್ಥಳೀಯರಿಗೆ ಶೇ.75 ರಷ್ಟು ಉದ್ಯೋಗಾವಕಾಶ: ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ
ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಪ್ರಮುಖ ದಿನಾಂಕಗಳು (ಕೆಇಎ ವೇಳಾಪಟ್ಟಿ)
ಆನ್ಲೈನ್ ಅಪ್ಲಿಕೇಶನ್ ಸ್ವೀಕಾರ ಆರಂಭ ದಿನಾಂಕ: 22-06-2022
ಆನ್ಲೈನ್ ಅಪ್ಲಿಕೇಶನ್ ಸಲ್ಲಿಕೆಗೆ ಕೊನೆ ದಿನಾಂಕ: 20-07-2022
ಅರ್ಜಿ ಶುಲ್ಕ ಪಾವತಿಗೆ ಕೊನೆ ದಿನಾಂಕ: 25-07-2022
ಖಾಲಿ ಹುದ್ದೆಗಳ ವಿವರ
ಸಹಾಯಕ ವ್ಯವಸ್ಥಾಪಕರು (ಕಾರ್ಯಾಚರಣೆ): 16
ಹಿರಿಯ ಸಹಾಯಕರು: 1
ಕಿರಿಯ ಸಹಾಯಕರು: 9
ಬೀಜ ಸಹಾಯಕರು: 6
WCD Dakshina Kannada Recruitment: ದಕ್ಷಿಣ ಕನ್ನಡದ 87 ಅಂಗನವಾಡಿ ಹುದ್ದೆಗಳ ನೇಮಕ., ಅರ್ಜಿ ಆಹ್ವಾನ
ಅಪ್ಲಿಕೇಶನ್ ಶುಲ್ಕ ಎಷ್ಟು?
ಸಾಮಾನ್ಯ ಅಭ್ಯರ್ಥಿಗಳಿಗೆ ರೂ.750.
OBC ಅಭ್ಯರ್ಥಿಗಳಿಗೆ ರೂ.500.
ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ, ಪ್ರಕ್ರಿಯೆ ಶುಲ್ಕ ರೂ.250.
ಎಸ್ಸಿ / ಎಸ್ಟಿ / ಪ್ರವರ್ಗ-1 / ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ, ಪ್ರಕ್ರಿಯೆ ಶುಲ್ಕ ರೂ.250.
ಕರ್ನಾಟಕ ರಾಜ್ಯ ಬೀಜ ನಿಗಮದ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದವರಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ, ಮೆರಿಟ್ ಆಧಾರದಲ್ಲಿ ಆಯ್ಕೆ ನಡೆಸಲಾಗುತ್ತದೆ. ಪಠ್ಯಕ್ರಮ ಮತ್ತು ಪರೀಕ್ಷೆ ಮಾದರಿಯನ್ನು ಹುದ್ದೆವಾರು ಕೆಇಎ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಲಾಗಿದೆ.
ಯಾವ ಹುದ್ದೆಗೆ ಏನು ವಿದ್ಯಾರ್ಹತೆ?
ಹಿರಿಯ ಸಹಾಯಕರು: ಬಿಕಾಂ/ಬಿಬಿಎಂ ಪದವಿ ಜತೆಗೆ, ಟ್ಯಾಲಿ ಸರ್ಟಿಫಿಕೇಟ್ ಪಡೆದಿರಬೇಕು.
ಕಿರಿಯ ಸಹಾಯಕರು: ಬಿಕಾಂ/ಬಿಬಿಎಂ ಪದವಿ ಜತೆಗೆ, ಟ್ಯಾಲಿ ಸರ್ಟಿಫಿಕೇಟ್ ಪಡೆದಿರಬೇಕು.
ಸಹಾಯಕ ವ್ಯವಸ್ಥಾಪಕರು (ಕಾರ್ಯಾಚರಣೆ): ಬಿಎಸ್ಸಿ ಇನ್ ಕೃಷಿ ಪದವಿ ಪಡೆದಿರಬೇಕು.
ಬೀಜ ಸಹಾಯಕರು: ಕೃಷಿಯಲ್ಲಿ 2 ವರ್ಷದ ಡಿಪ್ಲೊಮ ಪಾಸ್ ಮಾಡಿರಬೇಕು.
ಭರ್ಜರಿ ಗುಡ್ ನ್ಯೂಸ್: 70,000 ಹುದ್ದೆ ನೇಮಕಾತಿ ನೋಟಿಸ್ ಪ್ರಕಟಿಸಿದ ಎಸ್ಎಸ್ಸಿ
ವಯೋಮಿತಿ ಅರ್ಹತೆಗಳು
ಯಾವುದೇ ಹುದ್ದೆಗೆ ಅರ್ಜಿ ಹಾಕಲು ಕನಿಷ್ಠ 18 ವರ್ಷ ಪೂರೈಸಿರಬೇಕು. ಗರಿಷ್ಠ ವಯೋಮಿತಿ ಅರ್ಹತೆ ವರ್ಗಾವಾರು ಕೆಳಗಿನಂತಿದೆ.
ಸಾಮಾನ್ಯ ಅಭ್ಯರ್ಥಿಗಳಿಗೆ 35 ವರ್ಷ.
ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 38 ವರ್ಷ.
ಎಸ್ಸಿ / ಎಸ್ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ.
ಮೊದಲನೇ ಹಂತ: ಅಪ್ಲಿಕೇಶನ್ ಮಾಹಿತಿ ನೀಡಿ, ಸಬ್ಮಿಟ್ ಮಾಡುವುದು.
ಎರಡನೇ ಹಂತ: ಫೋಟೋ ಮತ್ತು ಥಂಬ್ ಅಪ್ಲೋಡ್.
ಮೂರನೇ ಹಂತ: ಅರ್ಜಿ ಶುಲ್ಕ ಪಾವತಿ ಮಾಡುವುದು.
ನಾಲ್ಕನೇ ಹಂತ: ಅರ್ಜಿ ಪ್ರಿಂಟ್ ತೆಗೆದುಕೊಳ್ಳುವುದು.
ಬೀಜ ನಿಗಮ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಹೇಗೆ?
- ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ಸೈಟ್ https://cetonline.karnataka.gov.in/kea/ ಗೆ ಭೇಟಿ ನೀಡಿ.
- ಓಪನ್ ಆದ ಪೇಜ್ನಲ್ಲಿ 'ನೇಮಕಾತಿ' ಎಂದಿರುವ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
- ಕೆಇಎ ನಡೆಸುತ್ತಿರುವ ವಿವಿಧ ನೇಮಕಾತಿಗಳ ಲಿಸ್ಟ್ ಕಾಣುತ್ತದೆ.
- 'ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ=2022' ಎಂದಿರುವಲ್ಲಿ ಕ್ಲಿಕ್ ಮಾಡಿ.
- ನಂತರ ಕೆಇಎ ಮತ್ತೊಂದು ವೆಬ್ಪುಟ ಬಿಡುಗಡೆ ಆಗುತ್ತದೆ. ಇಲ್ಲಿ ನಿಗಮದ ಹುದ್ದೆಗಳ ಆನ್ಲೈನ್ ಅರ್ಜಿಗೆ ಲಿಂಕ್ ನೀಡಲಾಗಿರುತ್ತದೆ.
- ಆನ್ಲೈನ್ ಅರ್ಜಿ ಲಿಂಕ್ ಕ್ಲಿಕ್ ಮಾಡಿ. ನಂತರ ತೆರೆಯುವ ಪುಟದಲ್ಲಿ ಅಗತ್ಯ ಮಾಹಿತಿಗಳನ್ನು ನೀಡಿ ಅಪ್ಲಿಕೇಶನ್ ಪೂರ್ಣಗೊಳಿಸಿ.
ಸ್ಥಳೀಯರಿಗೆ ಶೇ.75 ರಷ್ಟು ಉದ್ಯೋಗಾವಕಾಶ: ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ
ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಪ್ರಮುಖ ದಿನಾಂಕಗಳು (ಕೆಇಎ ವೇಳಾಪಟ್ಟಿ)
ಆನ್ಲೈನ್ ಅಪ್ಲಿಕೇಶನ್ ಸ್ವೀಕಾರ ಆರಂಭ ದಿನಾಂಕ: 22-06-2022
ಆನ್ಲೈನ್ ಅಪ್ಲಿಕೇಶನ್ ಸಲ್ಲಿಕೆಗೆ ಕೊನೆ ದಿನಾಂಕ: 20-07-2022
ಅರ್ಜಿ ಶುಲ್ಕ ಪಾವತಿಗೆ ಕೊನೆ ದಿನಾಂಕ: 25-07-2022
ಖಾಲಿ ಹುದ್ದೆಗಳ ವಿವರ
ಸಹಾಯಕ ವ್ಯವಸ್ಥಾಪಕರು (ಕಾರ್ಯಾಚರಣೆ): 16
ಹಿರಿಯ ಸಹಾಯಕರು: 1
ಕಿರಿಯ ಸಹಾಯಕರು: 9
ಬೀಜ ಸಹಾಯಕರು: 6
WCD Dakshina Kannada Recruitment: ದಕ್ಷಿಣ ಕನ್ನಡದ 87 ಅಂಗನವಾಡಿ ಹುದ್ದೆಗಳ ನೇಮಕ., ಅರ್ಜಿ ಆಹ್ವಾನ
ಅಪ್ಲಿಕೇಶನ್ ಶುಲ್ಕ ಎಷ್ಟು?
ಸಾಮಾನ್ಯ ಅಭ್ಯರ್ಥಿಗಳಿಗೆ ರೂ.750.
OBC ಅಭ್ಯರ್ಥಿಗಳಿಗೆ ರೂ.500.
ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ, ಪ್ರಕ್ರಿಯೆ ಶುಲ್ಕ ರೂ.250.
ಎಸ್ಸಿ / ಎಸ್ಟಿ / ಪ್ರವರ್ಗ-1 / ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ, ಪ್ರಕ್ರಿಯೆ ಶುಲ್ಕ ರೂ.250.
ಕರ್ನಾಟಕ ರಾಜ್ಯ ಬೀಜ ನಿಗಮದ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದವರಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ, ಮೆರಿಟ್ ಆಧಾರದಲ್ಲಿ ಆಯ್ಕೆ ನಡೆಸಲಾಗುತ್ತದೆ. ಪಠ್ಯಕ್ರಮ ಮತ್ತು ಪರೀಕ್ಷೆ ಮಾದರಿಯನ್ನು ಹುದ್ದೆವಾರು ಕೆಇಎ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಲಾಗಿದೆ.
ಯಾವ ಹುದ್ದೆಗೆ ಏನು ವಿದ್ಯಾರ್ಹತೆ?
ಹಿರಿಯ ಸಹಾಯಕರು: ಬಿಕಾಂ/ಬಿಬಿಎಂ ಪದವಿ ಜತೆಗೆ, ಟ್ಯಾಲಿ ಸರ್ಟಿಫಿಕೇಟ್ ಪಡೆದಿರಬೇಕು.
ಕಿರಿಯ ಸಹಾಯಕರು: ಬಿಕಾಂ/ಬಿಬಿಎಂ ಪದವಿ ಜತೆಗೆ, ಟ್ಯಾಲಿ ಸರ್ಟಿಫಿಕೇಟ್ ಪಡೆದಿರಬೇಕು.
ಸಹಾಯಕ ವ್ಯವಸ್ಥಾಪಕರು (ಕಾರ್ಯಾಚರಣೆ): ಬಿಎಸ್ಸಿ ಇನ್ ಕೃಷಿ ಪದವಿ ಪಡೆದಿರಬೇಕು.
ಬೀಜ ಸಹಾಯಕರು: ಕೃಷಿಯಲ್ಲಿ 2 ವರ್ಷದ ಡಿಪ್ಲೊಮ ಪಾಸ್ ಮಾಡಿರಬೇಕು.
ಭರ್ಜರಿ ಗುಡ್ ನ್ಯೂಸ್: 70,000 ಹುದ್ದೆ ನೇಮಕಾತಿ ನೋಟಿಸ್ ಪ್ರಕಟಿಸಿದ ಎಸ್ಎಸ್ಸಿ
ವಯೋಮಿತಿ ಅರ್ಹತೆಗಳು
ಯಾವುದೇ ಹುದ್ದೆಗೆ ಅರ್ಜಿ ಹಾಕಲು ಕನಿಷ್ಠ 18 ವರ್ಷ ಪೂರೈಸಿರಬೇಕು. ಗರಿಷ್ಠ ವಯೋಮಿತಿ ಅರ್ಹತೆ ವರ್ಗಾವಾರು ಕೆಳಗಿನಂತಿದೆ.
ಸಾಮಾನ್ಯ ಅಭ್ಯರ್ಥಿಗಳಿಗೆ 35 ವರ್ಷ.
ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 38 ವರ್ಷ.
ಎಸ್ಸಿ / ಎಸ್ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ.