ಆ್ಯಪ್ನಗರ

ಕುದುರೆಮುಖ ಐರನ್ ಓರ್ ಕಂಪನಿಗೆ ನೇರ ಸಂದರ್ಶನ ಮೂಲಕ ನೇಮಕಾತಿ

KIOCL Recruitment 2019: ಕೆಐಓಸಿಎಲ್‌ ನಲ್ಲಿ ಅಗತ್ಯ ಇರುವ ಸೀನಿಯರ್ ಸೂಪರ್‌ವೈಸರ್ ಮತ್ತು ಸೂಪರ್‌ವೈಸರ್ ಕಮ್ ಡ್ರಾಫ್ಟ್‌ಮನ್‌ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್‌ ಹೊರಡಿಸಲಾಗಿದೆ. ಇತರೆ ಹೆಚ್ಚಿನ ಮಾಹಿತಿಯನ್ನು ಈ ಕೆಳಗಿನಂತಿದೆ ಓದಿಕೊಳ್ಳಿ.

Vijaya Karnataka Web 14 Oct 2019, 6:27 pm

ಕುದುರೆ ಮುಖ ಐರನ್ ಓರ್ ಕಂಪೆನಿಯಲ್ಲಿ ಅಗತ್ಯವಿರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಹುದ್ದೆಗಳಿಗೆ ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಸಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಯನ್ನು ಕೆಳಗಿನಂತೆ ತಿಳಿಯಿರಿ.
Vijaya Karnataka Web kiocl recruitment 2019 apply online


ಹುದ್ದೆಗಳ ವಿವರ

ಸೀನಿಯರ್ ಸೂಪರ್‌ವೈಸರ್ (ಮಿನೆರಲ್‌ ಎಕ್ಸ್‌ಪ್ಲೋರೇಷನ್)

ಸರ್ವೇಯರ್ ಕಮ್ ಡ್ರ್ಯಾಫ್ಟ್‌ಮೆನ್ (ಮಿನೆರಲ್‌ ಎಕ್ಸ್‌ಪ್ಲೋರೇಷನ್)

ಕರ್ನಾಟಕದ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯಲ್ಲಿ ಉದ್ಯೋಗಾವಕಾಶ

ವೇತನ

ಸೀನಿಯರ್ ಸೂಪರ್‌ವೈಸರ್ ಹುದ್ದೆಗೆ ಮಾಸಿಕ ರೂ.40,000.

ಸರ್ವೇಯರ್ ಕಮ್ ಡ್ರ್ಯಾಫ್ಟ್‌ಮೆನ್ ಹುದ್ದೆಗೆ ರೂ.30,000.

ವಿದ್ಯಾರ್ಹತೆ ಮತ್ತು ಅನುಭವ

- ಬಿಇ ಸಿವಿಲ್, ಬಿಇ ಮೈನಿಂಗ್ ವಿದ್ಯಾರ್ಹತೆಯನ್ನು ಶೇಕಡ.60 ಅಂಕಗಳೊಂದಿಗೆ ಪಾಸ್‌ ಮಾಡಿರಬೇಕು. ಮತ್ತು ಡಿಜಿಎಂಎಸ್ ನೀಡುವ ಮೈನ್‌ ಸರ್ವೇಯರ್ ಸರ್ಟಿಫಿಕೇಟ್ ಹೊಂದಿರಬೇಕು.

- ಸರ್ವೇಯರ್ ಕಮ್ ಡ್ರಾಫ್ಟ್‌ಮನ್ ಹುದ್ದೆಗೆ ಡಿಪ್ಲೊಮ ಇನ್‌ ಮೈನಿಂಗ್ ಮತ್ತು ಮೈನ್‌ ಸರ್ವೇಯಿಂಗ್ / ಸಿವಿಲ್ ಎಂಜಿನಿಯರಿಂಗ್ ಅನ್ನು ಶೇಕಡ 60 ಅಂಕಗಳೊಂದಿಗೆ ಪಾಸ್‌ ಮಾಡಿರಬೇಕು. ಜೊತೆಗೆ ಡಿಜಿಎಂಎಸ್ ನೀಡುವ ಮೈನ್‌ ಸರ್ವೇಯರ್ ಪ್ರಮಾಣ ಪತ್ರ ಹೊಂದಿರಬೇಕು.

- ಕನಿಷ್ಠ 5 ವರ್ಷ ಸರ್ವೇ ಕಾರ್ಯಾನುಭವವನ್ನು, 3 ವರ್ಷ ಮೈನ್‌ ಸರ್ವೇಯಿಂಗ್ ಜೊತೆಗೆ ಹೊಂದಿರಬೇಕು.

ಪೊಲೀಸ್ ಕಾನ್ಸ್‌ಟೇಬಲ್, PSI ಮತ್ತು ಇತರೆ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಯಾವಾಗ? ಇಲ್ಲಿ ತಿಳಿಯಿರಿ..

ವಯೋಮಿತಿ : ಸೆಪ್ಟೆಂಬರ್ 30, 2019 ಕ್ಕೆ ಅನುಗುಣವಾಗಿ ಗರಿಷ್ಠ 35 ವರ್ಷ ವಯೋಮಿತಿ ಮೀರಿರಬಾರದು.

ಈ ಹುದ್ದೆಗಳನ್ನು ಪ್ರಾಥಮಿಕವಾಗಿ 1 ವರ್ಷದ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ. ನಂತರ ಹುದ್ದೆಗಳನ್ನು ಅಗತ್ಯಕ್ಕೆ ಅನುಗುಣವಾಗಿ ಮುಂದುವರೆಸುವ ಸಾಧ್ಯತೆ ಇರುತ್ತದೆ.

ನೇಮಕಾತಿ ವಿಧಾನ : ನೇರ ಸಂದರ್ಶನದ ಮೂಲಕ.

ನೇರ ಸಂದರ್ಶನ ದಿನಾಂಕ: 17-10-2019

ನೇರ ಸಂದರ್ಶನ ಸ್ಥಳ : ಹೋಟೆಲ್ ಗ್ರ್ಯಾಂಡ್, ಕೆಎಸ್‌ಆರ್‌ಟಿಸಿ ಬಸ್‌ ಸ್ಟ್ಯಾಂಡ್, ಹೋಟೆಲ್‌ ಸ್ವಾತಿ ಎದುರು, ಪಟೇಲ್ ನಗರ, ಹೊಸಪೇಟೆ.

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಸಂದರ್ಶನ ದಿನದಂದು ಮೇಲೆ ತಿಳಿಸಿದ ವಿಳಾಸಕ್ಕೆ ಭೇಟಿ ನೀಡಿ, DGM(HR&A) ಅವರನ್ನು ಸಂಪರ್ಕಿಸಿ ಸಮಯ ಬೆಳಿಗ್ಗೆ 9 ರಿಂದ 10 ಗಂಟೆ ಒಳಗೆ ರಿಜಿಸ್ಟರ್ ಮಾಡಿಕೊಳ್ಳಬೇಕು.

ಸಂದರ್ಶನಕ್ಕೆ ಹಾಜರಾಗಲು ಅಧಿಸೂಚನೆಯಲ್ಲಿ ನೀಡಿದ ಅರ್ಜಿ ನಮೂನೆಯನ್ನು ಪ್ರಿಂಟ್‌ ತೆಗೆದುಕೊಂಡು, ಭರ್ತಿ ಮಾಡಬೇಕು. ಅಗತ್ಯ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಡಿ ವಿವಿಧ ಹುದ್ದೆಗಳ ನೇಮಕ: ಅರ್ಜಿಗೆ ಅ.16 ಕೊನೆ ದಿನ

ಇತರೆ ಹೆಚ್ಚಿನ ಮಾಹಿತಿಗಳನ್ನು ಈ ಕೆಳಗೆ ನೀಡಲಾದ ಅಧಿಸೂಚನೆಯಲ್ಲಿ ಓದಿಕೊಳ್ಳಿ.

ಅಧಿಸೂಚನೆಗಾಗಿ ಕ್ಲಿಕ್ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ