ಆ್ಯಪ್ನಗರ

ಶೀಘ್ರಲಿಪಿಕಾರರು, ಬೆರಳಚ್ಚುಗಾರ ಹುದ್ದೆ ನೇಮಕಾತಿಗೆ ಹೊಸ ನಿಯಮ: ಏನದು?

ಶೀಘ್ರಲಿಪಿಕಾರರು (Stenographer) ಮತ್ತು ಬೆರಳಚ್ಚುಗಾರರ (Typist) ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು...

Vijaya Karnataka Web 30 Oct 2020, 5:20 pm
ಶೀಘ್ರಲಿಪಿಕಾರರು (Stenographer) ಮತ್ತು ಬೆರಳಚ್ಚುಗಾರರ (Typist) ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಹೊಸ ನಿಯಮವನ್ನು ರೂಪಿಸಿದ್ದು, ಈ ಕುರಿತು ಕರಡು ಪ್ರಕಟಿಸಿದೆ.
Vijaya Karnataka Web ಶೀಘ್ರಲಿಪಿಕಾರರು, ಬೆರಳಚ್ಚುಗಾರ ಹುದ್ದೆ ನೇಮಕಾತಿಗೆ ಹೊಸ ನಿಯಮ: ಏನದು?
stenographer typist recruitment new rules


ಸರ್ಕಾರ ಪ್ರಸ್ತುತ ಪ್ರಕಟಿಸಿರುವ ಕರಡಿಗೆ ಸಲಹೆಗಳು ಅಥವಾ ಆಕ್ಷೇಪಣೆಗಳು ಇದ್ದಲ್ಲಿ ರಾಜ್ಯಪತ್ರ ಪ್ರಕಟಗೊಂಡ 15 ದಿನಗಳ ಒಳಗಾಗಿ ವಿಳಾಸ - 'ಸರ್ಕಾರದ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ವಿಧಾನಸೌಧ, ಬೆಂಗಳೂರು-560001'ಗೆ ಕಳುಹಿಸಬಹುದಾಗಿದೆ.

ಏನದು ಹೊಸ ನಿಯಮ?

ಸರ್ಕಾರವು 1983 ನಿಯಮಗಳ ಪ್ರಕಾರ ಇದ್ದ ಶೀಘ್ರಲಿಪಿಕಾರರು ಹಾಗೂ ಬೆರಳಚ್ಚುಗಾರರ ಹುದ್ದೆಗಳ ಪೈಕಿ ಬೆರಳಚ್ಚುಗಾರ ಹುದ್ದೆಗಳನ್ನು 'ದತ್ತಾಂಶ ನಮೂದನೆ ಸಹಾಯಕರು' ಎಂದು ಪುನರ್ ಪದನಾಮಕರಣ ಮಾಡಲಾಗಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮದ ವಿವಿಧ ಹುದ್ದೆಗಳ ನೇಮಕಾತಿ ರದ್ದು

ಈ ಹಿಂದೆ ಶೀಘ್ರಲಿಪಿಕಾರರ ಹುದ್ದೆಗೆ ಪಿಯುಸಿ ವಿದ್ಯಾರ್ಹತೆ ಜತೆಗೆ ಪ್ರೌಢ ದರ್ಜೆ ಕನ್ನಡ ಶೀಘ್ರಲಿಪಿ ಮತ್ತು ಬೆರಳಚ್ಚು ಪರೀಕ್ಷೆಗಳಲ್ಲಿ ಅಥವಾ ತಾಂತ್ರಿಕ ಶಿಕ್ಷಣ ಇಲಾಖೆಯ ಮೂರು ವರ್ಷದ ಕಮರ್ಷಿಯಲ್ ಪ್ರಾಕ್ಟೀಸ್ ಡಿಪ್ಲೊಮದಲ್ಲಿ ಗಳಿಸಿರುವ ಅಂಕಗಳ ಆಧಾರದ ಮೇಲೆ ಜೇಷ್ಠತಾಂಕದಿಂದ ಆಯ್ಕೆ ಮಾಡಲಾಗುತ್ತಿತ್ತು. ಆದರೆ, ಈಗಿನ ತಿದ್ದುಪಡಿಯಂತೆ ಈ ವಿದ್ಯಾರ್ಹತೆಗಳನ್ನು ಅರ್ಜಿ ಸಲ್ಲಿಸಲು ಮಾತ್ರ ಮಾನದಂಡವಾಗಿ ಪರಿಗಣಿಸಲಾಗುತ್ತದೆ. ನೂತನ ಕರಡಿ ಪ್ರಕಾರ ಶೀಘ್ರಲಿಪಿಕಾರರ ಮತ್ತು ದತ್ತಾಂಶ ನಮೂದನೆ ಸಹಾಯಕ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಈ ಕೆಳಗಿನ ಮಾದರಿಯಲ್ಲಿ ನಡೆಸಲಾಗುತ್ತದೆ.

ಅತೀ ಹೆಚ್ಚು ಸಂಬಳ ನೀಡುವ ಭಾರತದ ಟಾಪ್‌ 10 ಸರ್ಕಾರಿ ಹುದ್ದೆಗಳು ಯಾವುವು ಗೊತ್ತೇ?

ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ

ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ 100 ಅಂಕಗಳ ಸಾಮಾನ್ಯ ಜ್ಞಾನ, ಸಾಮಾನ್ಯ ಕನ್ನಡ, ಇಂಗ್ಲಿಷ್ ಹಾಗೂ ಕಂಪ್ಯೂಟರ್ ಜ್ಞಾನ (ತಲಾ 25 ಅಂಕಗಳಿಗೆ) ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದೆ. ಈ ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಮೆರಿಟ್ ಲಿಸ್ಟ್‌ ಸಿದ್ಧಪಡಿಸಿ 1:5 ಪ್ರಮಾಣದಲ್ಲಿ ಆಯ್ಕೆ ಪ್ರಾಧಿಕಾರವು ಕೌಶಲ ಪರೀಕ್ಷೆಗೆ (Skill Test) ಅವಕಾಶ ಕಲ್ಪಿಸಲಾಗುತ್ತದೆ. ಈ ಸ್ಕಿಲ್ ಟೆಸ್ಟ್‌ಗಳಲ್ಲಿ ಪಡೆದ ಅಂಕಗಳು ಮತ್ತು ಮೀಸಲಾತಿ ಅಡಿ ಆಯ್ಕೆ ನಡೆಸುವುದಾಗಿ ಕರಡಿನಲ್ಲಿ ಪ್ರಸ್ತಾಪಿಸಲಾಗಿದೆ.

ಕೊಂಕಣ ರೈಲ್ವೆಯಲ್ಲಿ ನೇಮಕಾತಿ: ಅರ್ಜಿ ಆಹ್ವಾನ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ