ಆ್ಯಪ್ನಗರ

ಆಯುಷ್‌ ಅಭಿಯಾನದಲ್ಲಿ ಉದ್ಯೋಗ: ರಾಮನಗರ ಮತ್ತು ಕನಕಪುರ ಆಸ್ಪತ್ರೆಗಳಲ್ಲಿ ನೇಮಕ

ಹೋಮಿಯೋಪತಿ ಸ್ನಾತಕೋತ್ತರ ಪದವೀಧರರು ಲಭ್ಯವಿಲ್ಲದಿದ್ದಲ್ಲಿ, ಇದೇ ವಿಷಯದಲ್ಲಿ ಪದವಿ ಮಾಡಿರುವ ಹಾಗೂ ಮೂರು ವರ್ಷಗಳ ಸೇವಾನುಭವ ಇರುವವರು ಅರ್ಜಿ ಸಲ್ಲಿಸಬಹುದು.

Vijaya Karnataka 22 Jul 2019, 11:46 am
ಬೆಂಗಳೂರು: ರಾಮನಗರ ಜಿಲ್ಲಾ ಆಯುಷ್‌ ಕಚೇರಿ ರಾಷ್ಟ್ರೀಯ ಆಯುಷ್‌ ಅಭಿಯಾನದಲ್ಲಿ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದೆ. 2017-18ನೇ ಸಾಲಿನಲ್ಲಿ ಮೇಲ್ದರ್ಜೆಗೇರಿಸಲಾದ ಆಸ್ಪತ್ರೆಗಳಿಗೆ ತಾತ್ಕಾಲಿಕವಾಗಿ ಮಂಜೂರಾಗಿರುವ ತಜ್ಞವೈದ್ಯರು/ಅರೆ ವೈದ್ಯಕೀಯ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಅನುಮತಿ ನೀಡಲಾಗಿದ್ದು, ಅದರಂತೆ ರಾಮನಗರದ ಸರಕಾರಿ ಯುನಾನಿ ಆಸ್ಪತ್ರೆ ಮತ್ತು ಕನಕಪುರದ ಸರಕಾರಿ ಆಯುರ್ವೇದ ಆಸ್ಪತ್ರೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
Vijaya Karnataka Web Ayush


ಅರ್ಹತೆಗಳೇನು?
ತಜ್ಞ ವೈದ್ಯರು: ಹೋಮಿಯೋಪತಿ ವಿಭಾಗದಲ್ಲಿ ಖಾಲಿ ಇರುವ ತಜ್ಞ ವೈದ್ಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹೋಮಿಯೋಪತಿಯಲ್ಲಿ ಸ್ನಾತಕೋತ್ತರ ಪದವಿ ಮಾಡಿರಬೇಕು. ಒಂದು ವೇಳೆ ಹೋಮಿಯೋಪತಿ ಸ್ನಾತಕೋತ್ತರ ಪದವೀಧರರು ಲಭ್ಯವಿಲ್ಲದಿದ್ದಲ್ಲಿ, ಇದೇ ವಿಷಯದಲ್ಲಿ ಪದವಿ ಮಾಡಿರುವ ಹಾಗೂ ಮೂರು ವರ್ಷಗಳ ಸೇವಾನುಭವ ಇರುವವರು ಅರ್ಜಿ ಸಲ್ಲಿಸಬಹುದು. ಆಯುರ್ವೇದ ವಿಭಾಗಕ್ಕೆ ಅರ್ಜಿ ಸಲ್ಲಿಸುವವರು ಎಂಎಸ್‌ (ಶಲ್ಯತಂತ್ರ) ಮತ್ತು ಎಂಡಿ (ಪಂಚಕರ್ಮ/ ಕಾಯ ಚಿಕಿತ್ಸಾ) ಸ್ನಾತಕೋತ್ತರ ಪದವಿ ಮಾಡಿರಬೇಕು.

ಆಯುಷ್‌ ವಿತರಕರು: ಎಸ್‌ಎಸ್‌ಎಲ್‌ಸಿ ತೇರ್ಗಡೆ ಹಾಗೂ ಔಷಧ ವಿಜ್ಞಾನದಲ್ಲಿ ಡಿಪ್ಲೊಮಾ ಮಾಡಿರುವವರು ಅರ್ಜಿ ಸಲ್ಲಿಸಬಹುದು.

ಮಸಾಜಿಸ್ಟ್‌: ಕನಿಷ್ಠ 7ನೇ ತರಗತಿ ಪಾಸಾಗಿರುವ ಮತ್ತು ಆಯುಷ್‌ ಆಸ್ಪತ್ರೆ/ ಚಿಕಿತ್ಸಾಲಯಗಳಲ್ಲಿ ಮಸಾಜಿಸ್ಟ್‌ ಆಗಿ ಕೆಲಸ ಮಾಡಿದ ಅನುಭವ ಇರುವವರು ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

ಕ್ಷಾರಸೂತ್ರ ಅಟೆಂಡರ್‌ ಮತ್ತು ಸ್ತ್ರೀರೋಗ ಅಟೆಂಡರ್‌: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿ ಓದಿರಬೇಕು ಮತ್ತು ಆಯುಷ್‌ ಆಸ್ಪತ್ರೆ/ ಚಿಕಿತ್ಸಾಲಯಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿರಬೇಕು. ಮಲ್ಟಿಪರ್ಪಸ್‌ ಹುದ್ದೆಗೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ.

ಗರಿಷ್ಠ ವಯೋಮಿತಿ: ಸಾಮಾನ್ಯ ಅಭ್ಯರ್ಥಿಗಳಿಗೆ 35 ವರ್ಷ, ಒಬಿಸಿ ವರ್ಗದವರಿಗೆ 38 ವರ್ಷ ಹಾಗೂ ಎಸ್‌ಸಿ/ಎಸ್‌ಟಿ ವರ್ಗದ ಅಭ್ಯರ್ಥಿಗಳಿಗೆ 40 ವರ್ಷ.

ಸಂಕ್ಷಿಪ್ತ ಮಾಹಿತಿ
ಒಟ್ಟು ಹುದ್ದೆಗಳು: 16
ಅರ್ಜಿ ವಿತರಣೆ: ಜುಲೈ 20-30ರ ಸಂಜೆ 5 ಗಂಟೆ ತನಕ
ಅರ್ಜಿ ಸಲ್ಲಿಸಲು ಕೊನೇದಿನ: ಆಗಸ್ಟ್‌ 15, 2019
ಅರ್ಜಿ ದೊರೆಯುವ ಸ್ಥಳ: ಜಿಲ್ಲಾ ಆಯುಷ್‌ ಕಚೇರಿ, ರಾಮನಗರ
ಹೆಚ್ಚಿನ ವಿವರಗಳಿಗೆ ದೂರವಾಣಿ: 080-27272709

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ