ಆ್ಯಪ್ನಗರ

ಮಂಗಳೂರು: ಪುನರ್ವಸತಿ ಕೇಂದ್ರದಲ್ಲಿ ತಜ್ಞರ ನೇಮಕ

ಮಂಗಳೂರು ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

Vijaya Karnataka Web 2 Mar 2020, 12:05 pm

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಯನ್ಸ್‌ ಸೆಂಟರ್‌ ಫಾರ್‌ ದ ಫಿಸಿಕಲಿ ಹ್ಯಾಂಡಿಕ್ಯಾಪ್‌್ಡ ಸಂಸ್ಥೆಯ ಮುಖಾಂತರ ಕಾರ್ಯನಿರ್ವಹಿಸುತ್ತಿರುವ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಯೋಜನೆಯಾದ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಮಾರ್ಚ್ 10ರೊಳಗೆ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ.
Vijaya Karnataka Web Jobs in Mangalore
Mangalore Jobs


ಅರ್ಹತೆಗಳೇನು?

ನೋಡಲ್‌ ಆಫೀಸರ್‌ /ಸಮಾಜ ಸೇವಾ ಕಾರ್ಯಕರ್ತರ ಹುದ್ದೆಗೆ ಎಂಎಸ್‌ಡಬ್ಲೂ ಪುನರ್ವಸತಿ ಸೇವೆ ಅನುಭವ ಬಯಸಲಾಗಿದೆ. ಕೃತಕಾಂಗ ಜೋಡಣೆ ವಿಭಾಗದಲ್ಲಿನ ಪಿಒ ಅಭಿಯಂತರ ಹುದ್ದೆಯ ಅಭ್ಯರ್ಥಿಗಳು ಎಂಜಿನಿಯರಿಂಗ್‌ ಪದವೀಧರರಾಗಿರಬೇಕು. ಪ್ರಾಸ್ಥೊಟಿಸ್ಟ್‌ -ಆಥೋಟಿಸ್ಟ್‌ ಹುದ್ದೆಯ ಅಭ್ಯರ್ಥಿಗಳು ಡಿಪ್ಲೊಮಾ ಇನ್‌ ಪಿಒ/ಐಟಿಐ (ಪಿಟ್ಟರ್‌)2 ವರ್ಷದ ಕ್ಷೇತ್ರ ಮಟ್ಟದ ಅನುಭವ ಹೊಂದಿರಬೇಕು.

ಇಯರ್‌ ಮೊಲ್ಡ್‌ ಟೆಕ್ನಿ‚ಷಿಯನ್‌ ಹುದ್ದೆಗೆ ಅರ್ಜಿ ಸಲ್ಲಿಸುವವರು ಇಯರ್‌ ಮೊಲ್ಡ್‌ ಟೆಕ್ನಾಲಜಿಯಲ್ಲಿ ಸರ್ಟಿಫಿಕೇಟ್‌ ಕೋರ್ಸ್‌ ಪಡೆದಿರಬೇಕು. ಕೀಲು ಮತ್ತು ಮೂಳೆ ತಜ್ಞರ ಹುದ್ದೆ, ಇಎನ್‌ಟಿ ಸ್ಪೆಷಲಿಸ್ಟ್‌ ಹಾಗೂ ಅಪ್ತಲ್ಮಾಜಿಸ್ಟ್‌ ಹುದ್ದೆಗೆ ಅರ್ಜಿ ಸಲ್ಲಿಸುವವರು ಆಯಾ ವಿಭಾಗಗಳಲ್ಲಿಸ್ನಾತಕೋತ್ತರ/ ಡಿಪ್ಲೊಮಾ ಮಾಡಿರಬೇಕು. ಸೈಕಿಯಾಟ್ರಿಸ್ಟ್‌ ಹುದ್ದೆಗೆ ಅರ್ಜಿ ಸಲ್ಲಿಸುವವರು ಸ್ನಾತಕೋತ್ತರ (ಸೈಕಿಯಾಟ್ರಿ ಮೆಡಿಸಿನ್‌) ಓದಿರಬೇಕು. ಹುದ್ದೆಗಳಿಗೆ ಸರಕಾರದ ನಿಯಮಾನುಸಾರ ನೇಮಕಾತಿ ಮಾಡಲಾಗುವುದು.

KPSC: 1279 ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ಅಧಿಸೂಚನೆ ಪ್ರಕಟ.. ಅರ್ಜಿ ಆಹ್ವಾನ

ಅರ್ಜಿ ಸಲ್ಲಿಸಲು ವಿಳಾಸ: ಅಧ್ಯಕ್ಷರು/ಕಾರ್ಯದರ್ಶಿ ಲಯನ್ಸ್‌ ಸೆಂಟರ್‌ ಫಾರ್‌ ದ ಫಿಸಿಕಲೀ ಹ್ಯಾಂಡಿಕ್ಯಾಪ್‌್ಡ ವೆನ್‌ಲಾಕ್‌ ಆಸ್ಪತ್ರೆ, ಮಂಗಳೂರು 575001. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0824-2422300.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ