ಆ್ಯಪ್ನಗರ

ಜಾನಪದ ವಿವಿಯಲ್ಲಿ ಬೋಧಕ-ಬೋಧಕೇತರ ಹುದ್ದೆ: ಅರ್ಜಿ ಸಲ್ಲಿಸಲು ಇಂದು ಡೆಡ್‌ಲೈನ್‌

ಈ ಹಿಂದೆ​​ ಎರಡು ಬಾರಿ ( 2018ರ ಮಾರ್ಚ್‌ 24 ಮತ್ತು ಸೆಪ್ಟೆಂಬರ್‌ 21) ಅಧಿಸೂಚನೆ ಹೊರಡಿಸಿ, ಈ ನೇಮಕ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಮೂರನೇ ಬಾರಿಗೆ ನೇಮಕಾತಿ ಅಧಿಸೂಚನೆ ಪ್ರಕಟಗೊಂಡಿದ್ದು, ಅರ್ಜಿ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿದೆ.

Vijaya Karnataka Web 11 Jun 2019, 12:18 pm
ಹಾವೇರಿ: ಹಾವೇರಿಯ ಶಿಗ್ಗಾವಿಯಲ್ಲಿರುವ ಕರ್ನಾಟಕ ಜನಪದ ವಿಶ್ವವಿದ್ಯಾಲಯವು ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇಮಕಕ್ಕೆ ಈಗಾಗಲೇ ಮರು ಚಾಲನೆ ನೀಡಿದೆ. ಅರ್ಜಿ ಸಲ್ಲಿಕೆಗೆ ಮಂಗಳವಾರ (ಜೂನ್ 11,2019) ರಂದು ಕೊನೆಯ ದಿನವಾಗಿದೆ.
Vijaya Karnataka Web job2


ಈ ಹಿಂದೆ ಎರಡು ಬಾರಿ ( 2018ರ ಮಾರ್ಚ್‌ 24 ಮತ್ತು ಸೆಪ್ಟೆಂಬರ್‌ 21) ಅಧಿಸೂಚನೆ ಹೊರಡಿಸಿ, ಈ ನೇಮಕ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಮೂರನೇ ಬಾರಿಗೆ ನೇಮಕಾತಿ ಅಧಿಸೂಚನೆ ಪ್ರಕಟಗೊಂಡಿದೆ.

ಈ ಅಧಿಸೂಚನೆಗಳು ಪ್ರಕಟಗೊಂಡ ಸಂದರ್ಭದಲ್ಲಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಮತ್ತೆ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ ಎಂದು ವಿವಿಯು ಸ್ಪಷ್ಟಪಡಿಸಿದೆ. ಹೊಸದಾಗಿ ಅರ್ಜಿ ಸಲ್ಲಿಸ ಬಯಸುವವರು ಇಂದು ಸಂಜೆ 5.30ರೊಳಗೆ (ಜೂನ್‌ 11ರೊಳಗೆ) ನಿಗದಿತ ಅರ್ಜಿ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಕೊನೆಯ ದಿನಾಂಕದ ನಂತರ ಬರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ವಿವಿಯು ಪ್ರಕಟಣೆಯಲ್ಲಿ ಎಚ್ಚರಿಸಿದೆ.

ಹುದ್ದೆಗಳ ವಿವರ

ಬೋಧಕ ವಿಭಾಗದಲ್ಲಿ ಪ್ರೊಫೆಸರ್‌, ಅಸಿಸ್ಟೆಂಟ್‌ ಪ್ರೊಫೆಸರ್‌, ಲೈಬ್ರರಿಯನ್‌ ಮತ್ತು ಅಸಿಸ್ಟೆಂಟ್‌ ಲೈಬ್ರರಿಯನ್‌ ಹುದ್ದೆಗಳಿಗೆ ನೇಮಕ ನಡೆಯಲಿದೆ. ಬೋಧಕೇತರ ವಿಭಾಗದಲ್ಲಿ ಹಿರಿಯ/ ಸಹ/ಸಹಾಯಕ ಸಂಶೋಧನಾಧಿಕಾರಿ, ಸಹ/ ಸಹಾಯಕ ದಾಖಲೀಕರಣಾಧಿಕಾರಿ, ಲೆಕ್ಕ ಸಹಾಯಕ, ಕಿರಿಯ ಸಹಾಯಕ, ಅಧೀಕ್ಷಕರು, ಡಿಟಿಪಿ ಸಹಾಯಕರು, ಡಿ ದರ್ಜೆ ಸಹಾಯಕರು, ಸಹಾಯಕ ಕುಲಸಚಿವರು, ತಾಂತ್ರಿಕ ಸಹಾಯಕರು, ಹಿರಿಯ ಸಹಾಯಕರು ಮತ್ತು ವಾಹನ ಚಾಲಕರ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.

ಅರ್ಹತೆಗಳೇನು?

ಬೋಧಕ ಹುದ್ದೆ: ಪ್ರೊಫೆಸರ್‌ ಮತ್ತು ಅಸೋಸಿಯೇಟ್‌ ಪ್ರೊಫೆಸರ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಸಂಬಂಧಪಟ್ಟ ವಿಷಯಗಳಲ್ಲಿ ಪಿಎಚ್‌.ಡಿ ಪೂರ್ಣಗೊಳಿಸಿರಬೇಕು. ಪ್ರೊಫೆಸರ್‌ ಹುದ್ದೆಯ ಅಭ್ಯರ್ಥಿಗಳು ಸಂಬಂಧಿಸಿದ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದು, ನೆಟ್‌ ಅರ್ಹತೆ ಗಳಿಸಿರಬೇಕು. ಹಾಗೆಯೇ ಲೈಬ್ರರಿ ಸೈನ್ಸ್‌/ಇನ್‌ಫಾರ್ಮೇಶನ್‌ ಸೈನ್ಸ್‌/ಡಾಕ್ಯುಮೆಂಟೇಶನ್‌ ಸೈನ್ಸ್‌ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಲೈಬ್ರರಿಯನ್‌ ಅಥವಾ ಅಸಿಸ್ಟೆಂಟ್‌ ಲೈಬ್ರರಿಯನ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರು. ಇಲ್ಲಿನ ಪ್ರತಿ ಹುದ್ದೆಗೂ ವಿದ್ಯಾರ್ಹತೆ ಹೊರತುಪಡಿಸಿ ಸೇವಾನುಭವ ನಿಗದಿಪಡಿಸಲಾಗಿದ್ದು, ವಿವರಗಳು ಅಧಿಸೂಚನೆಯಲ್ಲಿ ಲಭ್ಯ.

ಬೋಧಕೇತರ: ಹಿರಿಯ/ ಸಹ/ಸಹಾಯಕ ಸಂಶೋಧನಾಧಿಕಾರಿ ಹಾಗೂ ಸಹ/ ಸಹಾಯಕ ದಾಖಲೀಕರಣಾಧಿಕಾರಿ ಹುದ್ದೆಗಳ ಅಭ್ಯರ್ಥಿಗಳು ಸಂಬಂಧಪಟ್ಟ ವಿಷಯಗಳಲ್ಲಿ ಸ್ನಾತಕೋತ್ತರ ಹಾಗೂ ಪಿಎಚ್‌.ಡಿ ವಿದ್ಯಾರ್ಹತೆ ಹೊಂದಿರಬೇಕು. ಸಂಶೋಧನಾಧಿಕಾರಿ ಹುದ್ದೆಗೆ ಮಾತ್ರ ಐದು ವರ್ಷಗಳ ಸೇವಾನುಭವ ಕಡ್ಡಾಯ. ಲೆಕ್ಕ ಸಹಾಯಕ ಹುದ್ದೆಗೆ ಬಿಕಾಂ, ಡಿಟಿಪಿ ಸಹಾಯಕರು, ಡಿ ದರ್ಜೆ ಸಹಾಯಕರ ಹುದ್ದೆಗೆ ಎಸ್‌ಎಸ್‌ಎಲ್‌ಸಿ ಮತ್ತು ತಾಂತ್ರಿಕ ಸಹಾಯಕ ಹುದ್ದೆಗೆ ಡಿಪ್ಲೊಮಾ (ಎಲೆಕ್ಟ್ರಾನಿಕ್ಸ್‌/ಎಲೆಕ್ಟ್ರಿಕಲ್‌/ಮೆಕ್ಯಾನಿಕಲ್‌) ವಿದ್ಯಾರ್ಹತೆ ನಿಗದಿಪಡಿಸಲಾಗಿದೆ. ಸಹಾಯಕ ಕುಲಸಚಿವ ಹುದ್ದೆಗೆ ಅರ್ಜಿ ಸಲ್ಲಿಸುವವರು ಸ್ನಾತಕೋತ್ತರ ಪದವಿ ಮತ್ತು ಅಧೀಕ್ಷಕರು ಹಾಗೂ ಪ್ರಥಮ ದರ್ಜೆ ಹುದ್ದೆಗಳ ಅಭ್ಯರ್ಥಿಗಳು ಪದವಿ ವಿದ್ಯಾರ್ಹತೆ ಹೊಂದಿರಬೇಕು. ಇನ್ನುಳಿದಂತೆ ನೇಮಕ ಸಂಬಂಧಪಟ್ಟಂತೆ ಕೆಲವು ಅರ್ಹತಾ ಷರತ್ತುಗಳನ್ನು ನೀಡಲಾಗಿದೆ. ಇದನ್ನು ವಿವಿಯ ವೆಬ್‌ಸೈಟ್‌ನಿಂದ ಪಡೆದುಕೊಳ್ಳಬಹುದು. ಎಲ್ಲಾ ಹುದ್ದೆಗಳಿಗೂ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ 35 ವರ್ಷ ನಿಗದಿಪಡಿಸಲಾಗಿದೆ.

ಒಟ್ಟು ಹುದ್ದೆಗಳು: 42

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜೂನ್‌ 11, 2019

ಅರ್ಜಿ ಕಳುಹಿಸಲು ವಿಳಾಸ: ಕುಲಸಚಿವರು, ಕರ್ನಾಟಕ ಜಾನಪದ ವಿವಿ, ಗೊಟಗೋಡಿ, ಶಿಗ್ಗಾವಿ, ಹಾವೇರಿ-581205

ಸಹಾಯವಾಣಿ: 0836-2307402

ವೆಬ್‌ವಿಳಾಸ: www.janapadauniversity.ac.in

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ