ಆ್ಯಪ್ನಗರ

ಕರ್ನಾಟಕ ಫಾರೆಸ್ಟ್‌ ಗಾರ್ಡ್‌ ಹುದ್ದೆಗೆ ಅರ್ಹತೆಗಳೇನು? ಯಾವೆಲ್ಲಾ ಪರೀಕ್ಷೆ ಇರುತ್ತವೆ?

ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯಲ್ಲಿನ ಅರಣ್ಯ ರಕ್ಷಕ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಪ್ರಕಟಿಸಿದ್ದು, ಆನ್‌ಲೈನ್‌ ಅಪ್ಲಿಕೇಶನ್ ಆಹ್ವಾನಿಸಲಾಗಿದೆ. ಈ ಹುದ್ದೆ ಭರ್ತಿಗೆ ಅಭ್ಯರ್ಥಿಗಳಿಗೆ ನಡೆಸಲಾಗುವ ಪರೀಕ್ಷೆಗಳು, ಬೇಕಾದ ಅರ್ಹತೆಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.

Vijaya Karnataka Web 12 Jun 2020, 8:15 pm
ಕರ್ನಾಟಕ ಅರಣ್ಯ ಇಲಾಖೆಯು 339 ಅರಣ್ಯ ರಕ್ಷಕ ಹುದ್ದೆಗಳ ನೇಮಕಾತಿಗೆ ಆನ್‌ಲೈನ್‌ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಆಯ್ಕೆ ಮಾಡಲಾಗುತ್ತದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕಡ್ಡಾಯವಾಗಿ ಪೂರೈಸಬೇಕಾದ ಅರ್ಹತೆಗಳು ಮತ್ತು ಹುದ್ದೆಗಳ ಆಯ್ಕೆಗೆ ಪಾಸ್‌ ಮಾಡಲೇಬೇಕಾದ ಪರೀಕ್ಷೆಗಳು ಯಾವುವು ಎಂದು ಈ ಕೆಳಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ.
Vijaya Karnataka Web karnataka forest guard exam pattern and eligibility check here
ಕರ್ನಾಟಕ ಫಾರೆಸ್ಟ್‌ ಗಾರ್ಡ್‌ ಹುದ್ದೆಗೆ ಅರ್ಹತೆಗಳೇನು? ಯಾವೆಲ್ಲಾ ಪರೀಕ್ಷೆ ಇರುತ್ತವೆ?



ವಿದ್ಯಾರ್ಹತೆ ಮತ್ತು ನಿಬಂಧನೆಗಳು

ಅಧಿಸೂಚನೆಯ ದಿನಾಂಕದೊಳಗೆ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಶೈಕ್ಷಣಿಕ ಅರ್ಹತೆಗಳನ್ನು ಪಾಸ್‌ ಮಾಡಿರಬೇಕು. ಅರ್ಜಿ ಸಲ್ಲಿಕೆ ವೇಳೆ ಆನ್‌ಲೈನ್‌ನಲ್ಲಿ ಅಂಕಪಟ್ಟಿಗಳ ಅಪ್‌ಡೇಟ್‌ ನೀಡಬೇಕಿರುತ್ತದೆ.

ವಯೋಮಿತಿ ಅರ್ಹತೆಗಳೇನು?

ಅಭ್ಯರ್ಥಿಗಳು ಇಲ್ಲಿ ಎಚ್ಚರಿಕೆಯಿಂದ ತಿಳಿಯಬೇಕಾದ ಮಾಹಿತಿ ಎಂದರೆ ಅಧಿಸೂಚನೆಯ ದಿನಾಂಕಕ್ಕೆ ಅಭ್ಯರ್ಥಿಯು ಕನಿಷ್ಠ 18 ವರ್ಷ ಪೂರೈಸಿರಬೇಕು, ಅಂತಹವರು ಮಾತ್ರ ಅರ್ಜಿ ಸಲ್ಲಿಸಬಹುದು. ಹಾಗೂ ಗರಿಷ್ಠ ವಯೋಮಿತಿ SC / ST / CAT-1 ಅಭ್ಯರ್ಥಿಗಳಿಗೆ 32 ವರ್ಷ, ಓಬಿಸಿ ಅಭ್ಯರ್ಥಿಗಳಿಗೆ 30 ವರ್ಷ, ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 27 ವರ್ಷ ನಿಗದಿಪಡಿಸಲಾಗಿದೆ. ಈ ವಯೋಮಿತಿ ಮೀರಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಂತಿಲ್ಲ.

ಕರ್ನಾಟಕ ಅರಣ್ಯ ರಕ್ಷಕ ಹುದ್ದೆ ನೇಮಕಾತಿಗೆ ಅಧಿಸೂಚನೆ ಪ್ರಕಟ; ಅರ್ಜಿ ಆಹ್ವಾನ

ಆಯ್ಕೆ ಪ್ರಕ್ರಿಯೆ ಹೇಗೆ?

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ವಿದ್ಯಾರ್ಹತೆಯ ಅಂಕಗಳ ಆಧಾರದಲ್ಲಿ ಮೀಸಲಾತಿಗೆ ಅನುಗುಣವಾಗಿ ಮತ್ತು ವೃತ್ತವಾರು ಹುದ್ದೆಗಳಿಗೆ ಅನುಗುಣವಾಗಿ 1:20 ಅನುಪಾತದಲ್ಲಿ ದೇಹದಾರ್ಢ್ಯತೆ, ದೈಹಿಕ ತಾಳ್ವಿಕೆ ಮತ್ತು ದೈಹಿಕ ಕಾರ್ಯ ಸಮರ್ಥತೆ ಪರೀಕ್ಷೆಗಳಿಗೆ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ. ನಿಗದಿಪಡಿಸಿದ ದಿನಾಂಕದಂದು ಈ ಪರೀಕ್ಷೆಗಳಿಗೆ ಪ್ರವೇಶ ಪತ್ರದೊಂದಿಗೆ ಹಾಜರಾಗಬೇಕು.

ಈ ಮೂರು ಪರೀಕ್ಷೆಗಳಲ್ಲಿ ಅರ್ಹತೆ ಹೊಂದಿದ ಅಭ್ಯರ್ಥಿಗಳು ಮಾತ್ರ ಮುಂದಿನ ಹಂತದ ಲಿಖಿತ ಪರೀಕ್ಷೆಗೆ ಅರ್ಹರಾಗುತ್ತಾರೆ.

ಪರೀಕ್ಷೆಯಲ್ಲಿ ಪಡೆದ ಅಂಕಗಳ ಶೇಕಡ ಅರ್ಧ ಮತ್ತು ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಹತೆಯಲ್ಲಿ ಗಳಿಸಿದ ಶೇಕಡ ಅಂಕಗಳ ಶೇಕಡ ಅರ್ಧ ಅಂಕಗಳನ್ನು ಕ್ರೂಢೀಕರಿಸಿ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ.

ದೇಹದಾರ್ಢ್ಯತೆ ಪರೀಕ್ಷೆ; ಶಾರೀರಿಕ ಮಾನದಂಡಗಳು

ಪುರುಷ ಅಭ್ಯರ್ಥಿಗೆ ಅರ್ಹತೆಗಳು

ಎತ್ತರ - ಕನಿಷ್ಠ 163 ಸೆಂ.ಮೀ.

ಎದೆ ಸುತ್ತಳತೆ (ಸಾಮಾನ್ಯ ಸ್ಥಿತಿಯಲ್ಲಿ ಕನಿಷ್ಠ) - 79 ಸೆಂ.ಮೀ (ಕನಿಷ್ಠ ಹಿಗ್ಗುವಿಕೆ - 5 ಸೆಂ.ಮೀ)


ಮಹಿಳಾ ಅಭ್ಯರ್ಥಿಗಳಿಗೆ ಅರ್ಹತೆಗಳು

ಎತ್ತರ - ಕನಿಷ್ಠ 150 ಸೆಂ.ಮೀ.

ಕನಿಷ್ಠ ತೂಕ - 40 ಕೆ.ಜಿ.

ಈ ದೈಹಿಕ ಮಾನದಂಡಗಳನ್ನು ಕಡ್ಡಾಯವಾಗಿ ಹೊಂದಿರುವವರು ಮಾತ್ರ ದೈಹಿಕ ತಾಳ್ವಿಕೆ ಪರೀಕ್ಷೆಗೆ ಪರಿಗಣಿಸಲಾಗುತ್ತದೆ.

ದೈಹಿಕ ತಾಳ್ವಿಕೆ ಪರೀಕ್ಷೆ

ಪುರುಷ ಅಭ್ಯರ್ಥಿಗಳು - 7 ನಿಮಿಷದಲ್ಲಿ 1600 ಮೀಟರ್ ಓಡಬೇಕು.

ಮಹಿಳಾ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳು - 6 ನಿಮಿಷದಲ್ಲಿ 1000 ಮೀಟರ್ ಓಡಬೇಕು.

ಈ ಪರೀಕ್ಷೆಗಳಲ್ಲಿ ಪಾಸ್‌ ಆದವರು ಮುಂದಿನ ಅರ್ಹತಾ ಪರೀಕ್ಷೆ ದೈಹಿಕ ಕಾರ್ಯ ಸಮರ್ಥತೆ ಪರೀಕ್ಷೆಗೆ ಹಾಜರಾಗಬಹುದು.

ದೈಹಿಕ ಕಾರ್ಯ ಸಮರ್ಥತೆ ಪರೀಕ್ಷೆ

ಪುರುಷ ಅಭ್ಯರ್ಥಿಗಳು ಪಾಸ್‌ ಮಾಡಬೇಕಾದ ಪರೀಕ್ಷೆಗಳ ವಿವರ

100 ಮೀಟರ್ ಓಟ - 15 ಸೆಕೆಂಡುಗಳು

ಎತ್ತರ ಜಿಗಿತ (3 ಅವಕಾಶಗಳು ಮಾತ್ರ) - 1.20 ಮೀಟರ್

ಉದ್ದ ಜಿಗಿತ (3 ಅವಕಾಶಗಳು ಮಾತ್ರ) - 3.80 ಮೀಟರ್

ಶಾಟ್‌ಪುಟ್ (3 ಅವಕಾಶಗಳು ಮಾತ್ರ) - 5.60 ಮೀಟರ್

800 ಮೀಟರ್ ಓಟ - 2 ನಿಮಿಷ 50 ಸೆಕೆಂಡುಗಳು


ಮಹಿಳಾ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳು ಪಾಸ್‌ ಮಾಡಬೇಕಾದ ದೈಹಿಕ ಕಾರ್ಯ ಸಮರ್ಥತೆ ಈ ಕೆಳಗಿನಂತಿದೆ.

100 ಮೀಟರ್ ಓಟ - 18.5 ಸೆಕೆಂಡುಗಳು

ಎತ್ತರ ಜಿಗಿತ (3 ಅವಕಾಶಗಳು ಮಾತ್ರ) - 0.90 ಮೀಟರ್

ಉದ್ದ ಜಿಗಿತ (3 ಅವಕಾಶಗಳು ಮಾತ್ರ) - 2.50 ಮೀಟರ್

ಶಾಟ್‌ಪುಟ್ (3 ಅವಕಾಶಗಳು ಮಾತ್ರ) - 3.76 ಮೀಟರ್

200 ಮೀಟರ್ ಓಟ - 40 ಸೆಕೆಂಡುಗಳು

ಈ ಮೇಲಿನ ಮೂರು ಪರೀಕ್ಷೆಗಳಲ್ಲಿ ಅರ್ಹತೆ ಪಡೆದವರು ಲಿಖಿತ ಪರೀಕ್ಷೆ ಬರೆಯಲು ಅರ್ಹರು.

ಲಿಖಿತ ಪರೀಕ್ಷೆ

ಅರಣ್ಯ ರಕ್ಷಕ ಹುದ್ದೆಗೆ ಲಿಖಿತ ಪರೀಕ್ಷೆಯನ್ನು ಅಧಿಸೂಚಿಸಿರುವ ವೃತ್ತವಾರು ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುತ್ತದೆ. ಪ್ರಶ್ನೆ ಪತ್ರಿಕೆ ನಿಗದಿಪಡಿಸಿದ ವಿದ್ಯಾರ್ಹತೆ ಮಟ್ಟದಲ್ಲಿದ್ದು ಬಹು ಆಯ್ಕೆ ಮಾದರಿಯದ್ದಾಗಿರುತ್ತದೆ.

- ಒಟ್ಟು 100 ಅಂಕಗಳಿಗೆ ಪರೀಕ್ಷೆ ಇರುತ್ತದೆ.

- 40 ಅಂಕಗಳಿಗೆ ಗಣಿತ, 60 ಅಂಕಗಳಿಗೆ ಸಾಮಾನ್ಯ ಜ್ಞಾನ ಪರೀಕ್ಷೆ ನಡೆಸಲಾಗುತ್ತದೆ.

- ಸಾಮಾನ್ಯ ಜ್ಞಾನ ಪ್ರಶ್ನೆಗಳು ಭಾರತದ ಪ್ರಾಚೀನ ನಾಗರಿಕತೆಗಳು, ಇತಿಹಾಸ, ಭಾರತದ ಸ್ವಾತಂತ್ರ್ಯ ಹೋರಾಟ, ಸಂವಿಧಾನ, ರಾಜನೀತಿ, ಅರ್ಥನೀತಿ, ಭೂಗೋಳ ಮತ್ತು ನೈಸರ್ಗಿಕ ಸಂಪನ್ಮೂಲಗಳು, ವಿಜ್ಞಾನ ಮತ್ತು ತಂತ್ರಜ್ಞಾನ, ಕಲೆ ಮತ್ತು ಸಂಸ್ಕೃತಿ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಪ್ರಚಲಿತ ವಿದ್ಯಮಾನಗಳು ಹಾಗೂ ಕ್ರೀಡೆ ಬಗ್ಗೆ ಒಳಗೊಂಡಿರುತ್ತವೆ.

- ಆಯ್ಕೆಯಾದ ಅಭ್ಯರ್ಥಿಗಳು ಮೂಲದಾಖಲೆಗಳ ಜೊತೆಗೆ ಮೆಡಿಕಲ್ ಸರ್ಟಿಫಿಕೇಟ್‌ ಅನ್ನು ಸಲ್ಲಿಸಬೇಕಾಗಿರುತ್ತವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ