ಒಂದಾನೊಂದು ಊರಿನಲ್ಲಿ ಪಾಂಗ್ ಎಂಬಾತನೊಬ್ಬನಿದ್ದ. ಆತ ಈಜು ಕಲಿಯಲು ನಿರ್ಧರಿಸಿ, ಈಜು ಕಲಿಸುವ ಕೆಲಸ ಮಾಡುತ್ತಿದ್ದ ಗೆಳೆಯನ ಬಳಿಗೆ ಹೋದ. ನನಗೂ ಈಜು ಕಲಿಸಿಕೊಡು ಮಾರಾಯ ಎಂದು ಕೇಳಿಕೊಂಡ. ಇದಕ್ಕೆ ಕೂಡಲೇ ಆತ ಒಪ್ಪಿದ. ಮಾರನೇಯ ದಿನ ಪಾಂಗ್ ತನ್ನ ಗೆಳೆಯನ ಬಳಿ ಈಜು ಕಲಿಯಲೆಂದು ಹೊರಟ. ಇಬ್ಬರೂ ನದಿಯ ದಡಕ್ಕೆ ಬಂದರು. ಇನ್ನೇನು ಬಟ್ಟೆ ಬಿಚ್ಚಿ ನದಿಗೆ ಇಳಿಯಬೇಕೆನ್ನುಷ್ಟರಲ್ಲಿ ಪಾಂಗ್ ಆಯತಪ್ಪಿ ನದಿಗೆ ಬಿದ್ದೇ ಬಿಟ್ಟ. ಆತ ಬಿದ್ದ ಜಾಗ ಬಹಳ ಆಳವಾಗಿತ್ತು. ಕೂಡಲೇ ಆತನ ಗೆಳೆಯ ನದಿಗೆ ಹಾರಿ ಪಾಂಗ್ನನ್ನು ರಕ್ಷಿಸಿದ. ಆದರೆ ಅಷ್ಟರಲ್ಲಾಗಲೇ ಪಾಂಗ್ ಹಲವಾರು ಬಾರಿ ಮುಳುಗೆದ್ದಿದ್ದ. ಆತನನ್ನು ದಡಕ್ಕೆ ಕರೆದುಕೊಂಡು ಬರುತ್ತಿದ್ದಂತೆಯೇ ಎದ್ಡೆನೋ-ಬಿದ್ದೆನೋ ಎಂದು ಪಾಂಗ್ ತನ್ನ ಚಪ್ಪಲಿಯನ್ನು ಕೈಯಲ್ಲೇ ಹಿಡಿದುಕೊಂಡು ಓಡಲಾರಂಭಿಸಿದ.
ಆತನನ್ನು ಹಿಂಬಾಲಿಸಿದ ಸ್ನೇಹಿತ, ಪಾಂಗ್ನನ್ನು ತಡೆದು ನಿಲ್ಲಿಸಿ, 'ಏಕೆ ಮಾರಾಯ ಈಜು ಕಲಿಯಲೆಂದು ಬಂದವನು, ಹೀಗೆ ಓಡಿ ಹೋಗುತ್ತಿದ್ದಿ 'ಎಂದು ಪ್ರಶ್ನಿಸಿದ.
ಆಗ ಪಾಂಗ್; 'ಇನ್ನು ನದಿ ಹತ್ತಿರ ಬರಬೇಕೆಂದರೆ ಮೊದಲು ಈಜು ಕಲಿತುಕೊಂಡೇ ಬರುತ್ತೇನೆ. ಇಲ್ಲದಿದ್ದರೆ ಈಗ ಬಿದ್ದಹಾಗೆ ನದಿಗೆ ಬಿದ್ದುಬಿಟ್ಟರೆ ದೇವರೇಗತಿ. ಈಜು ಕಲಿಯುವುದಕ್ಕೂ ಮೊದಲು ಎಂದಿಗೂ ನದಿ ಹತ್ತಿರ ಬರುವುದೇ ಇಲ್ಲ. ನೀನೂ ಕರೆಯಬೇಡ' ಎಂದು ಎದುಸಿರು ಬಿಡುತ್ತಲೇ ಹೇಳಿ ಮನೆಯ ಹಾದಿ ಹಿಡಿದ.
***
ಕೆಲವೊಮ್ಮೆ ನಾವೂ ಹೀಗೆ ಅರ್ಥವಿಲ್ಲದ ಷರತ್ತುಗಳನ್ನು ಮುಂದಿಟ್ಟುಕೊಂಡು ಜೀವನ ನಡೆಸುತ್ತಿರುತ್ತೇವೆ. ಅದು ಸಿಕ್ಕರೆ ಇದನ್ನು ಮಾಡುತ್ತೇನೆ, ದುಡ್ಡು ಮಾಡಿಯಾದ ಮೇಲೆ ಅದೂ-ಇದೂ ಒಳ್ಳೆಯ ಕೆಲಸಗಳನ್ನು ಮಾಡುತ್ತೇನೆ ಎಂದು ಮನಸ್ಸಿನಲ್ಲಂದುಕೊಳ್ಳುತ್ತೇವೆ. ಬೇಸರದ ವಿಷಯವೆಂದರೆ ನಾವಂದುಕೊಂಡ ದಿನ ಬರುವುದೇ ಇಲ್ಲ. ನಿಮಗೆ ಏನನ್ನಾದರೂ ಮಾಡಬೇಕೆನಿಸಿದರೆ ಆ ಕೂಡಲೇ ಮಾಡಿಬಿಡಿ, ದುಡ್ಡು ಅಥವಾ ಇನ್ನಿತರ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಇಲ್ಲದಿದ್ದರೆ ನೀವೂ ಪಾಂಗ್ನಂತೆಯೇ ಓಡಿ ಹೋಗಬೇಕಾದೀತು!
ನೋಡಿ, ನೀರಿಗಿಳಿಯದೇ ಈಜು ಕಲಿಯಲು ಸಾಧ್ಯವೇ. ಈಜು ಕಲಿತೇ ನೀರಿಗಿಳಿಯುತ್ತೇನೆ ಎಂಬುದು ಎಷ್ಟು ಮೂರ್ಖತನದ ಮಾತು ಅಲ್ಲವೇ? ಬೀಜವನ್ನೇ ಬಿತ್ತದೆ ಏನಾದರೂ ಬೆಳೆ ಬೆಳೆಯಲು ಸಾಧ್ಯವೇ. ಲಾಭ ಮಾಡಬೇಕು, ಹೆಚ್ಚು ಬೆಳೆಯಬೇಕು ಎಂದು ಬೀಜವನ್ನು ಅಟ್ಟದಲ್ಲಿಟ್ಟುಕೊಂಡು ಕುಳಿತರೆ ಏನೂ ಪ್ರಯೋಜನವಾಗದು.
ಜೀವನದಲ್ಲಿ ನಾವೇನಾದರೂ ಸಾಧಿಸಬೇಕೆಂದರೆ ಮೊದಲು ಮೈಚಳಿ ಬಿಟ್ಟು ಕೆಲಸಮಾಡಬೇಕಾಗುತ್ತದೆ. ನಿಮ್ಮ ಕರ್ತವ್ಯವನ್ನು ನೀವು ಮಾಡಿ, ಉಳಿದುದ್ದನ್ನೆಲ್ಲಾ ದೇವರಿಗೆ ಬಿಡಿ ಎಂಬ ಮಾತನ್ನು ನೀವು ಕೇಳಿರಲೇಬೇಕು. ಇದು ಸತ್ಯ ಕೂಡ, ನೀವು ಏನನ್ನೂ ಮಾಡದೇ ಇದ್ದರೆ, ಹೊಸದನ್ನೇನಾದರೂ ಹೇಗೆ ಪಡೆಯಲು ಸಾಧ್ಯ. ನಡೆಯುವವರೇ ತಾನೇ ಎಡವಿ ಬೀಳುವುದು, ನಡೆಯದೇ ಇರುವವರು ಇದ್ದಲ್ಲಿಯೇ ಇರುತ್ತಾರೆ!
ಕೆಲವರಂತೂ ಪಾಂಗ್ನಂತೆಯೇ ಪ್ರತಿ ಸಂದರ್ಭದಲ್ಲಿಯೂ ಮೂರ್ಖ ನಿರ್ಧಾರಗಳನ್ನೇ ತೆಗೆದುಕೊಳ್ಳುತ್ತಿರುತ್ತಾರೆ. ಅವರು ನೀಡುವ ಕಾರಣಗಳಂತೂ ಹಾಸ್ಯಾಸ್ಪದವಾದವು. ಮತ್ತೆ ಹೇಳುವುದೆಲ್ಲವೂ ಕಾರ್ಯಸಾದುವಾಗಿರುವುದೇ ಇಲ್ಲ.
ನೀವು ಯಾವುದೇ ಕೆಲಸ ಮಾಡುವ ಮುನ್ನು ಹಿಂದೆ-ಮುಂದೆ ಯೋಚಿಸದೇ ಬಲವಾದ ನಿರ್ಧಾರಕ್ಕೆ ಬರಬೇಡಿ. ಇದು ನಿಮ್ಮ ಬೆಳವಣಿಗೆ ಮತ್ತು ಸೃಜನಶೀಲತೆಗೆ ಹೊಡೆತ ನೀಡಬಹುದು. ಆದ್ದರಿಂದ ಯೋಚಿಸಿ, ಯಾವುದು ಕಾರ್ಯಸಾದುವಾದದು, ಏನು ಮಾಡಿದರೆ ಏನಾಗುತ್ತದೆ ಎಂಬುದನ್ನು ತಿಳಿದುಕೊಂಡು ತೀರ್ಮಾನಕ್ಕೆ ಬನ್ನಿ. ನಂತರ ನಾನು ಕೆಲಸ ಮಾಡಲು ಹೊರಟಾಗ ಏನೆಲ್ಲಾ ವಿಷಯಗಳು ನನ್ನ ಮೇಲೆ ಪರಿಣಾಮ ಬೀರುತ್ತಿವೆ, ಅಡೆ-ತಡೆಯೊಡ್ಡುತ್ತಿವೆ ಎಂದು ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳಿ, ಕೆಲಸದ ಖುಷಿಯನ್ನು ಕಿತ್ತುಕೊಳ್ಳುತ್ತಿರುವ ಶತ್ರುವನ್ನು ನೀವೇ ಹಿಮ್ಮೆಟ್ಟಿಸಿ, ನಿಜ ಆನಂದವನ್ನು ನಿಮ್ಮದಾಗಿಸಿಕೊಳ್ಳಿ. ನೆನಪಿಡಿ ಈ ಕೆಲಸವನ್ನು ನೀವು ಮಾತ್ರ ಮಾಡಲು ಸಾಧ್ಯ. ಏಕೆಂದರೆ ನಿಮ್ಮ ಸಮಸ್ಯೆಗಳಿಗೆ ನೀವೇ ಟ್ರಬಲ್ಶೂಟರ್.
ಆತನನ್ನು ಹಿಂಬಾಲಿಸಿದ ಸ್ನೇಹಿತ, ಪಾಂಗ್ನನ್ನು ತಡೆದು ನಿಲ್ಲಿಸಿ, 'ಏಕೆ ಮಾರಾಯ ಈಜು ಕಲಿಯಲೆಂದು ಬಂದವನು, ಹೀಗೆ ಓಡಿ ಹೋಗುತ್ತಿದ್ದಿ 'ಎಂದು ಪ್ರಶ್ನಿಸಿದ.
ಆಗ ಪಾಂಗ್; 'ಇನ್ನು ನದಿ ಹತ್ತಿರ ಬರಬೇಕೆಂದರೆ ಮೊದಲು ಈಜು ಕಲಿತುಕೊಂಡೇ ಬರುತ್ತೇನೆ. ಇಲ್ಲದಿದ್ದರೆ ಈಗ ಬಿದ್ದಹಾಗೆ ನದಿಗೆ ಬಿದ್ದುಬಿಟ್ಟರೆ ದೇವರೇಗತಿ. ಈಜು ಕಲಿಯುವುದಕ್ಕೂ ಮೊದಲು ಎಂದಿಗೂ ನದಿ ಹತ್ತಿರ ಬರುವುದೇ ಇಲ್ಲ. ನೀನೂ ಕರೆಯಬೇಡ' ಎಂದು ಎದುಸಿರು ಬಿಡುತ್ತಲೇ ಹೇಳಿ ಮನೆಯ ಹಾದಿ ಹಿಡಿದ.
***
ಕೆಲವೊಮ್ಮೆ ನಾವೂ ಹೀಗೆ ಅರ್ಥವಿಲ್ಲದ ಷರತ್ತುಗಳನ್ನು ಮುಂದಿಟ್ಟುಕೊಂಡು ಜೀವನ ನಡೆಸುತ್ತಿರುತ್ತೇವೆ. ಅದು ಸಿಕ್ಕರೆ ಇದನ್ನು ಮಾಡುತ್ತೇನೆ, ದುಡ್ಡು ಮಾಡಿಯಾದ ಮೇಲೆ ಅದೂ-ಇದೂ ಒಳ್ಳೆಯ ಕೆಲಸಗಳನ್ನು ಮಾಡುತ್ತೇನೆ ಎಂದು ಮನಸ್ಸಿನಲ್ಲಂದುಕೊಳ್ಳುತ್ತೇವೆ. ಬೇಸರದ ವಿಷಯವೆಂದರೆ ನಾವಂದುಕೊಂಡ ದಿನ ಬರುವುದೇ ಇಲ್ಲ. ನಿಮಗೆ ಏನನ್ನಾದರೂ ಮಾಡಬೇಕೆನಿಸಿದರೆ ಆ ಕೂಡಲೇ ಮಾಡಿಬಿಡಿ, ದುಡ್ಡು ಅಥವಾ ಇನ್ನಿತರ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಇಲ್ಲದಿದ್ದರೆ ನೀವೂ ಪಾಂಗ್ನಂತೆಯೇ ಓಡಿ ಹೋಗಬೇಕಾದೀತು!
ನೋಡಿ, ನೀರಿಗಿಳಿಯದೇ ಈಜು ಕಲಿಯಲು ಸಾಧ್ಯವೇ. ಈಜು ಕಲಿತೇ ನೀರಿಗಿಳಿಯುತ್ತೇನೆ ಎಂಬುದು ಎಷ್ಟು ಮೂರ್ಖತನದ ಮಾತು ಅಲ್ಲವೇ? ಬೀಜವನ್ನೇ ಬಿತ್ತದೆ ಏನಾದರೂ ಬೆಳೆ ಬೆಳೆಯಲು ಸಾಧ್ಯವೇ. ಲಾಭ ಮಾಡಬೇಕು, ಹೆಚ್ಚು ಬೆಳೆಯಬೇಕು ಎಂದು ಬೀಜವನ್ನು ಅಟ್ಟದಲ್ಲಿಟ್ಟುಕೊಂಡು ಕುಳಿತರೆ ಏನೂ ಪ್ರಯೋಜನವಾಗದು.
ಜೀವನದಲ್ಲಿ ನಾವೇನಾದರೂ ಸಾಧಿಸಬೇಕೆಂದರೆ ಮೊದಲು ಮೈಚಳಿ ಬಿಟ್ಟು ಕೆಲಸಮಾಡಬೇಕಾಗುತ್ತದೆ. ನಿಮ್ಮ ಕರ್ತವ್ಯವನ್ನು ನೀವು ಮಾಡಿ, ಉಳಿದುದ್ದನ್ನೆಲ್ಲಾ ದೇವರಿಗೆ ಬಿಡಿ ಎಂಬ ಮಾತನ್ನು ನೀವು ಕೇಳಿರಲೇಬೇಕು. ಇದು ಸತ್ಯ ಕೂಡ, ನೀವು ಏನನ್ನೂ ಮಾಡದೇ ಇದ್ದರೆ, ಹೊಸದನ್ನೇನಾದರೂ ಹೇಗೆ ಪಡೆಯಲು ಸಾಧ್ಯ. ನಡೆಯುವವರೇ ತಾನೇ ಎಡವಿ ಬೀಳುವುದು, ನಡೆಯದೇ ಇರುವವರು ಇದ್ದಲ್ಲಿಯೇ ಇರುತ್ತಾರೆ!
ಕೆಲವರಂತೂ ಪಾಂಗ್ನಂತೆಯೇ ಪ್ರತಿ ಸಂದರ್ಭದಲ್ಲಿಯೂ ಮೂರ್ಖ ನಿರ್ಧಾರಗಳನ್ನೇ ತೆಗೆದುಕೊಳ್ಳುತ್ತಿರುತ್ತಾರೆ. ಅವರು ನೀಡುವ ಕಾರಣಗಳಂತೂ ಹಾಸ್ಯಾಸ್ಪದವಾದವು. ಮತ್ತೆ ಹೇಳುವುದೆಲ್ಲವೂ ಕಾರ್ಯಸಾದುವಾಗಿರುವುದೇ ಇಲ್ಲ.
ನೀವು ಯಾವುದೇ ಕೆಲಸ ಮಾಡುವ ಮುನ್ನು ಹಿಂದೆ-ಮುಂದೆ ಯೋಚಿಸದೇ ಬಲವಾದ ನಿರ್ಧಾರಕ್ಕೆ ಬರಬೇಡಿ. ಇದು ನಿಮ್ಮ ಬೆಳವಣಿಗೆ ಮತ್ತು ಸೃಜನಶೀಲತೆಗೆ ಹೊಡೆತ ನೀಡಬಹುದು. ಆದ್ದರಿಂದ ಯೋಚಿಸಿ, ಯಾವುದು ಕಾರ್ಯಸಾದುವಾದದು, ಏನು ಮಾಡಿದರೆ ಏನಾಗುತ್ತದೆ ಎಂಬುದನ್ನು ತಿಳಿದುಕೊಂಡು ತೀರ್ಮಾನಕ್ಕೆ ಬನ್ನಿ. ನಂತರ ನಾನು ಕೆಲಸ ಮಾಡಲು ಹೊರಟಾಗ ಏನೆಲ್ಲಾ ವಿಷಯಗಳು ನನ್ನ ಮೇಲೆ ಪರಿಣಾಮ ಬೀರುತ್ತಿವೆ, ಅಡೆ-ತಡೆಯೊಡ್ಡುತ್ತಿವೆ ಎಂದು ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳಿ, ಕೆಲಸದ ಖುಷಿಯನ್ನು ಕಿತ್ತುಕೊಳ್ಳುತ್ತಿರುವ ಶತ್ರುವನ್ನು ನೀವೇ ಹಿಮ್ಮೆಟ್ಟಿಸಿ, ನಿಜ ಆನಂದವನ್ನು ನಿಮ್ಮದಾಗಿಸಿಕೊಳ್ಳಿ. ನೆನಪಿಡಿ ಈ ಕೆಲಸವನ್ನು ನೀವು ಮಾತ್ರ ಮಾಡಲು ಸಾಧ್ಯ. ಏಕೆಂದರೆ ನಿಮ್ಮ ಸಮಸ್ಯೆಗಳಿಗೆ ನೀವೇ ಟ್ರಬಲ್ಶೂಟರ್.