ಆ್ಯಪ್ನಗರ

UPSC ಪರೀಕ್ಷೆಯಲ್ಲಿ 300-400 ವರೆಗಿನ ರ‍್ಯಾಂಕ್ ಗಳಿಸಿದವರು ಯಾವ ಉದ್ಯೋಗ ಪಡೆಯಬಹುದು?

ಯುಪಿಎಸ್‌ಸಿ ಪರೀಕ್ಷಾಕಾಂಕ್ಷಿಗಳಿಗೆ ತಾವು ಈ ಎಕ್ಸಾಮ್‌ ಪಾಸ್‌ ಮಾಡಿದ್ರೆ ಸಾಕು ಐಎಎಸ್‌ ಆಗಿಬಿಡುತ್ತೇವೆ ಎಂದುಕೊಂಡಿರುತ್ತಾರೆ. ಅದರೆ ಅವರು ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಹುದ್ದೆ ನಿರ್ಧರಿತವಾಗುತ್ತದೆ.

Vijaya Karnataka Web 14 May 2020, 10:24 pm
UPSC ಪರೀಕ್ಷಾಕಾಂಕ್ಷಿಗಳಿಗೆ ತಾವು ಈ ಎಕ್ಸಾಮ್‌ ಪಾಸ್‌ ಮಾಡಿದ್ರೆ ಸಾಕು ಐಎಎಸ್‌ ಆಗಿಬಿಡುತ್ತೇವೆ ಎಂದುಕೊಂಡಿರುತ್ತಾರೆ. ಆದರೆ ಕೋಚಿಂಗ್ ಗೆ ಹೋಗಿ ಅನುಭವಿಗಳಿಂದ, ಮಾರ್ಗದರ್ಶಕರಿಂದ ಮಾಹಿತಿ ತಿಳಿದಾಗ ಬೇರೆಯದೇ ಅನುಭವ ಆಗುತ್ತದೆ. ಜಸ್ಟ್‌ ಪಾಸ್ ಮಾಡಿದವರೆಲ್ಲಾ, ಕಡಿಮೆ ರ‍್ಯಾಂಕ್ ಪಡೆದವರೆಲ್ಲಾ ಐಎಎಸ್ ಆಗಲು ಸಾಧ್ಯವಿಲ್ಲ.
Vijaya Karnataka Web UPSC EXAM TIPS
UPSC EXAM TIPS


300-400 ವರೆಗಿನ ರ‍್ಯಾಂಕ್ ಪಡೆದವರಿಗೆ ಯಾವ ರೀತಿಯ ಜಾಬ್ ಸಿಗಬಹುದು?.. ಎಂಬುದಕ್ಕೆ ಉತ್ತರ ಈ ಕೆಳಗಿನಂತಿದೆ.

ಅಂದಹಾಗೆ ಯುಪಿಎಸ್‌ಸಿ ಪಾಸ್‌ ಮಾಡಿದವರಿಗೆ ಸುಮಾರು 24-25 ವಿವಿಧ ಪೋಸ್ಟ್‌ಗಳಲ್ಲಿ ಯಾವುದಾದರೊಂದು ಹುದ್ದೆಗೆ ಅಭ್ಯರ್ಥಿಯನ್ನು ನೇಮಿಸುವ ಅವಕಾಶ ಇರುತ್ತದೆ. ಈ ಹುದ್ದೆಗಳ ವಿಂಗಡಣೆ ಅಭ್ಯರ್ಥಿ ತೆಗೆದ ರ‍್ಯಾಂಕ್ ಮತ್ತು ಅಭ್ಯರ್ಥಿಗೆ ಇರುವ ಜಾತಿ ಮೀಸಲಾತಿ ಎರಡು ಸಹ ಪರಿಗಣನೆಗೆ ಬರುತ್ತವೆ.

22 ವರ್ಷದ ಕುಡಿ ಮೀಸೆ ಚಲುವ IPS ಅಧಿಕಾರಿ

ನೀವು ಜೆನೆರಲ್ ಕೆಟಗರಿ/ ಓಪನ್ ಕೆಟಗರಿ ಆಗಿದ್ದಲ್ಲಿ ಯಾವುದೇ ಸಂದರ್ಭದಲ್ಲಿಯೂ ಸಹ 300-400 ವರೆಗಿನ ರ‍್ಯಾಂಕ್ ಗೆ ಇಂಡಿಯನ್ ಅಡ್ಮಿನಿಸ್ಟ್ರೇಟಿವ್, ಇಂಡಿಯನ್‌ ಫಾರಿನ್ ಸರ್ವೀಸ್ ಗೆ ಆಯ್ಕೆ ಆಗುವುದಿಲ್ಲ. ಕಾರಣ ಐಎಎಸ್‌ ಹುದ್ದೆಗಳು 90-95 ರ‍್ಯಾಂಕ್ ವರೆಗೆ ಮುಗಿಯುತ್ತವೆ. ಐಎಫ್‌ಎಸ್‌ 170-180 ರ‍್ಯಾಂಕ್ ವರೆಗೆ ಭರ್ತಿ ಆಗುತ್ತವೆ.

ಭಾಗಶಃ ಇಂಡಿಯನ್‌ ಪೊಲೀಸ್ ಸರ್ವೀಸ್ ಅಥವಾ ಇಂಡಿಯನ್ ರೆವಿನ್ಯೂ ಸರ್ವೀಸ್‌ಗಳಂತಹ ಹುದ್ದೆಗಳನ್ನು ಪಡೆಯಬಹುದು. ಅಥವಾ ಐಎಎಸ್ / ಐಎಫ್‌ಎಸ್ / ಐಪಿಎಸ್‌ ಹೊರತುಪಡಿಸಿ ಇತರೆ ಯಾವುದೇ ಹುದ್ದೆಗಳನ್ನು ಪಡೆಯಬಹುದು.

ಯುಪಿಎಸ್‌ಸಿ ಸಿವಿಲ್ ಸರ್ವೀಸ್ ಪ್ರಿಲಿಮ್ಸ್‌ ಮೊದಲ ಪ್ರಯತ್ನದಲ್ಲೇ ಪಾಸ್ ಮಾಡುವುದು ಹೇಗೆ?

ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿ ಆಗಿದ್ದಲ್ಲಿ 200-300 ವರೆಗಿನ ರ‍್ಯಾಂಕ್ ಇದ್ದಲ್ಲಿ ಸಹ ಶೇ.90 ರಷ್ಟು ಚಾನ್ಸ್‌ ಐಎಎಸ್‌ ಹುದ್ದೆಗೆ ಅಯ್ಕೆಯಾಗುವ ಅವಕಾಶ ಇರುತ್ತದೆ.

ಅಭ್ಯರ್ಥಿ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಲ್ಲಿ 600-650 ರ‍್ಯಾಂಕ್ ಪಡೆದಿದ್ದಲ್ಲಿ ಸಹ ಭಾರತೀಯ ಆಡಳಿತ ಸೇವೆಗೆ ಆಯ್ಕೆ ಆಗಬಹುದು.

ಪರಿಶಿಷ್ಟ ಪಂಗಡ ಅಭ್ಯರ್ಥಿ ಆಗಿದ್ದಲ್ಲಿ 750-800 ರ‍್ಯಾಂಕ್ ವರೆಗೂ ಐಎಎಸ್‌, ಐಪಿಎಸ್, ಐಎಫ್‌ಎಸ್‌ ಆಗುವ ಅವಕಾಶ ಇರುತ್ತದೆ.

ಯುಪಿಎಸ್‌ಸಿ ಆಕಾಂಕ್ಷಿಗಳು, ಪ್ರತಿವರ್ಷದ ಅಧಿಸೂಚನೆಯ ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ ಸಹ ಎಷ್ಟು ರ‍್ಯಾಂಕ್ ಗೆ ಯಾವ ಸರ್ವೀಸ್ ಸೇರಬಹುದು ಎಂದು ಕ್ಯಾಲ್ಕುಲೇಟ್‌ ಮಾಡಿಕೊಳ್ಳಬಹುದು.

ಲಾಕ್‌ಡೌನ್‌: ಯುಪಿಎಸ್‌ಸಿ ಪರೀಕ್ಷೆಗಳು ರದ್ದಾಗಿಲ್ಲ! ಮುಂದೂಡಲಾಗಿದೆ ಅಷ್ಟೇ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ