ಆ್ಯಪ್ನಗರ

ಅ.5ರಂದು ಚಾಮುಂಡಿಬೆಟ್ಟದಲ್ಲಿ ಸಂಸದ ಪ್ರತಾಪ್‌ ಸಿಂಹ ವಿರುದ್ಧ ದಸಂಸ ಪ್ರತಿಭಟನಾ ಸಭೆ

ನೆಲಮೂಲ ಸಂಸ್ಕೃತಿಯನ್ನು ನಾಶಗೊಳಿಸಲು ಹೊರಟಿರುವ ಸರಕಾರದ ನಡೆಯನ್ನು ಖಂಡಿಸಿ ಹಾಗೂ ಮೂಲನಿವಾಸಿಗಳಿಗೆ ಆತ್ಮಸ್ಥೈರ್ಯ ಮತ್ತು ಸ್ವಾಭಿಮಾನ ತುಂಬಲು ಮತ್ತು ಸಂಸದ ಪ್ರತಾಪ್‌ ಸಿಂಹ ಗೂಂಡಾ ವರ್ತನೆ ಖಂಡಿಸಿ ಅ.5ರಂದು ದಲಿತ ಸಂಘರ್ಷ ಸಮಿತಿ ಒಕ್ಕೂಟದಿಂದ ಬೃಹತ್‌ ಪ್ರತಿಭಟನೆ ಸಭೆ ಹಮ್ಮಿಕೊಳ್ಳಲಾಗಿದೆ.

Vijaya Karnataka Web 4 Oct 2019, 3:49 pm
ಮೈಸೂರು: ನೆಲಮೂಲ ಸಂಸ್ಕೃತಿಯನ್ನು ಛಿದ್ರಗೊಳಿಸಲು ಹೊರಟಿರುವ ಮನುವಾದಿಗಳ ಮತ್ತು ಸಂಸದ ಪ್ರತಾಪ್‌ ಸಿಂಹ ಗೂಂಡಾ ವರ್ತನೆ ಖಂಡಿಸಿ ಅ.5ರಂದು ದಲಿತ ಸಂಘರ್ಷ ಸಮಿತಿ ಒಕ್ಕೂಟದಿಂದ ಬೃಹತ್‌ ಪ್ರತಿಭಟನೆ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಸಂಚಾಲಕ ಬೆಟ್ಟಯ್ಯ ಕೋಟೆ ಮಾಹಿತಿ ನೀಡಿದ್ದಾರೆ.
Vijaya Karnataka Web simha


'ಮಹಿಷಾ ಆಚರಣೆ'ಯ ವೇದಿಕೆಯನ್ನು ಬಲವಂತವಾಗಿ ತೆಗೆಸಿ, ಪೊಲೀಸರ ವಿರುದ್ಧ ಕೆಂಡಕಾರಿದ ಸಂಸದ ಸಿಂಹ

ಅಂದು ಚಾಮುಂಡಿ ಬೆಟ್ಟದಲ್ಲಿ ಮದ್ಯಾಹ್ನ 12ಕ್ಕೆ ಸಭೆ ನಡೆಯಲಿದ್ದು, ನೆಲಮೂಲ ಸಂಸ್ಕೃತಿಯನ್ನು ನಾಶಗೊಳಿಸಲು ಹೊರಟಿರುವ ಸರಕಾರದ ನಡೆಯನ್ನು ಖಂಡಿಸಿ ಹಾಗೂ ಮೂಲನಿವಾಸಿಗಳಿಗೆ ಆತ್ಮಸ್ಥೈರ್ಯ ಮತ್ತು ಸ್ವಾಭಿಮಾನ ತುಂಬಲು ಸಭೆ ಆಯೋಜಿಸಲಾಗಿದೆ. ನೂರಾರು ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

'ಮಹಿಷ ದಸರಾ ಆಚರಣೆಗೆ ಅಡ್ಡಿ': ಸಂಸದ ಪ್ರತಾಪ್‌ ಸಿಂಹ ಗಡಿಪಾರಿಗೆ ಆಗ್ರಹ

ಬಹಳ ಹಿಂದಿನಿಂದ ಮೂಲನಿವಾಸಿಗಳು ಮೈಸೂರು ಪ್ರಾಂತ್ಯದಲ್ಲಿ ಪಿತೃಪಕ್ಷ, ಮಹಿಷಾ ದಸರಾ ಹಾಗೂ ರಾವಣಾಸುರನ ಉತ್ಸವಗಳನ್ನು ಮೈಸೂರು ದಸರಾ ವೇಳೆಯಲ್ಲಿಆಚರಿಸುತ್ತಾ ಬರುತ್ತಿದ್ದಾರೆ. ಆದರೆ ಈ ಬಾರಿ ಮಹಿಷ ದಸರಾಕ್ಕೆ ಅಡ್ಡಿಪಡಿಸಿ ಮೂಲನಿವಾಸಿಗಳ ಸಂಸ್ಕೃತಿ ಪರಂಪರೆಗೆ ಜಿಲ್ಲಾಡಳಿತ ಹಾಗೂ ಸರಕಾರ ಧಕ್ಕೆ ತಂದಿದೆ ಎಂದು ಕಿಡಿಕಾರಿದರು.

ಚಾಮುಂಡಿಬೆಟ್ಟದ ಮಹಿಷನ ಪ್ರತಿಮೆಯ ಮುಂದೆ ಯಾವುದೇ ಧಾರ್ಮಿಕ ಭಾವನೆಗಳಿಗೆ ಚ್ಯುತಿ ಬರದಂತೆ ಹಲವು ಪ್ರಜ್ಞಾವಂತರು ಕಳೆದು ಏಳು ವರ್ಷಗಳಿಂದ ಮಹಿಷಾ ದಸರಾ ನಡೆಸಿಕೊಂಡು ಬಂದಿದ್ದಾರೆ. ಆದರೆ, ಈ ಬಾರಿ ಸಂಸದ ಪ್ರತಾಪ್‌ಸಿಂಹ ಮಹಿಷ ದಸರಾ ಆಚರಣೆಗೆ ತಡೆಯೊಡ್ಡಿ, ಕಾರ್ಯಕ್ರಮಕ್ಕೆ ಹಾಕಲಾಗಿದ್ದ ಶಾಮಿಯಾನವನ್ನು ತಾವೇ ಖುದ್ದು ನಿಂತು ತೆರವುಗೊಳಿಸುವ ಮೂಲಕ ಮೂಲನಿವಾಸಿಗಳನ್ನು ಅವಮಾನಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ವಧರ್ಮ ಸಮನ್ವಯ ಸಾಧಿಸಿ ಐಕ್ಯತೆ ಎಡೆಗೆ ಹೆಜ್ಜೆ ಇಡಬೇಕಿದ್ದ ಸಂಸದರು ಕ್ರೌರ್ಯ ಮತ್ತು ಹಿಂಸೆಯ ಸರ್ವಾಧಿಕಾರಿಯ ನಡೆಯಿಂದ ಶಾಂತಿಪ್ರಿಯ ಮೈಸೂರಿನ ಜನತೆಯಲ್ಲಿಆತಂಕ ಸೃಷ್ಟಿಯಾಗಿದ್ದು, ಜಿಲ್ಲಾಡಳಿತ ಕೂಡ 144 ಕಾಯ್ದೆಯನ್ನು ಬಲವಂತವಾಗಿ ಹೇರಿ ಅವರ ಗೂಂಡಾ ವರ್ತನೆಗೆ ಬೆಂಬಲ ನೀಡಿದೆ. ಇದನ್ನು ಖಂಡಿಸಬೇಕಿದ್ದ ರಾಜ್ಯ ಸರಕಾರ ಸಂಸದರಿಗೆ ಬೆನ್ನೆಲುಬಾಗಿ ನಿಂತಿದೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿಒಕ್ಕೂಟದ ಸಹ ಸಂಚಾಲಕ ಆಲಗೂಡು ಶಿವಕುಮಾರ್‌, ಚೋರನಹಳ್ಳಿ ಶಿವಣ್ಣ, ರಾಜಶೇಖರ್‌ ಕೋಟೆ, ಕಾರ್ಯ ಬಸವಣ್ಣ, ಚುಂಚನಹಳ್ಳಿ ಮಲ್ಲೇಶ್‌, ಜಗದೀಶ್‌ ಚಾಮರಾಯನಕೋಟೆ, ಶಂಭುಲಿಂಗಸ್ವಾಮಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ