ಆ್ಯಪ್ನಗರ

ನಾಡಿನಿಂದ ಕಾಡಿನತ್ತ ಗಜಪಡೆ: ಭಾವುಕರಾದ ಅರಣ್ಯಾಧಿಕಾರಿಗಳು

ಕಳೆದ ಒಂದು ತಿಂಗಳಿನಿಂದ ನಗರದಲ್ಲಿಯೇ ವಾಸವಿದ್ದ ಲಕ್ಷ್ಮಿ ಹಾಗೂ ಈಶ್ವರ ಆನೆಗಳು ಕಾಡಿಗೆ ಹೆಜ್ಜೆ ಹಾಕಲು ಹಿಂದೇಟು ಹಾಕಿದವು. ಲಕ್ಷ್ಮೀ ಆನೆ ಲಾರಿ ಮೇಲಕ್ಕೆ ಏರದೆ ಈಜುಕೊಳದತ್ತ ಓಡಿ ಹೋಯಿತು. ಕೊನೆಗೆ ಗೋಪಿ ಆನೆ ಸಹಾಯ ಪಡೆದು ಲಾರಿ ಹತ್ತಿಸಲು ಮಾವುತರು ಮತ್ತು ಕಾವಡಿ 30 ನಿಮಿಷಗಳ ಕಾಲ ಹರಸಾಹಸಪಡಬೇಕಾಯಿತು.

Vijaya Karnataka Web 10 Oct 2019, 4:33 pm

ಮೈಸೂರು: ದಸರಾಗಾಗಿ ಮೈಸೂರಿನಲ್ಲಿ 40 ದಿನಗಳ ಕಾಲ ಬೀಡು ಬಿಟ್ಟಿದ್ದ ಆನೆಗಳು ಗುರುವಾರ ಕಾಡಿನತ್ತ ಮುಖ ಮಾಡಿದವು. ಜಂಬೂ ಸವಾರಿಯನ್ನು ಹಾಗೂ ನಾಡಹಬ್ಬ ದಸರಾವನ್ನು ಯಾವುದೇ ನಿರಾಂತಕವಿಲ್ಲದೇ ಯಶಸ್ವಿಗೊಳಿಸಿದ ಆನೆಗಳಿಗೆ ಅರಣ್ಯಾಧಿಕಾರಿಗಳು ಹಾಗೂ ಅರಮನೆ ಮಂಡಳಿ ಅಧಿಕಾರಿಗಳು ಮೈಸೂರು ಅರಮನೆ ಆವರಣದಲ್ಲಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಬೀಳ್ಕೊಟ್ಟರು.
Vijaya Karnataka Web Dasara Elephants


ಈ ಹಿಂದೆ ಗಜಪಯಣದ ಆರಂಭದ ದಿನದಲ್ಲಿ ಎರಡೆರಡು ಬಾರಿ ಪೂಜೆ ಮಾಡಿದ್ದ ಯಾವೊಬ್ಬ ಜನಪ್ರತಿನಿಧಿಗಳೂ ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ. ಬೀಳ್ಕೊಡುಗೆ ನಂತರ ಎಲ್ಲಾ ಆನೆಗಳನ್ನು ಲಾರಿಯಲ್ಲಿ ಅವುಗಳ ಕಾಡಿಗೆ ರವಾನಿಸಲಾಯಿತು.

ಅಂಬಾರಿ ಮೆರವಣಿಗೆ ಹಿಂದಿನ ರಾತ್ರಿ 2.30ರವರೆಗೆ ನಾನು, ಅರ್ಜುನ ಮಲಗಿರಲಿಲ್ಲ: ಮಾವುತ ವಿನು

ಕಳೆದ ಒಂದು ತಿಂಗಳಿನಿಂದ ನಗರದಲ್ಲಿಯೇ ವಾಸವಿದ್ದ ಲಕ್ಷ್ಮಿ ಹಾಗೂ ಈಶ್ವರ ಆನೆಗಳು ಕಾಡಿಗೆ ಹೆಜ್ಜೆ ಹಾಕಲು ಹಿಂದೇಟು ಹಾಕಿದವು. ಲಕ್ಷ್ಮೀ ಆನೆ ಲಾರಿ ಮೇಲಕ್ಕೆ ಏರದೆ ಈಜುಕೊಳದತ್ತ ಓಡಿ ಹೋಯಿತು. ಕೊನೆಗೆ ಗೋಪಿ ಆನೆ ಸಹಾಯ ಪಡೆದು ಲಾರಿ ಹತ್ತಿಸಲು ಮಾವುತರು ಮತ್ತು ಕಾವಡಿ 30 ನಿಮಿಷಗಳ ಕಾಲ ಹರಸಾಹಸ ಪಟ್ಟರು.

ಇನ್ನು ಇದೇ ವೇಳೆ ಮಾತನಾಡಿದ ಅರಣ್ಯಾಧಿಕಾರಿ ಅಲೆಕ್ಸಾಂಡರ್, ದಸರಾ ಮುಗಿದ ಬಳಿಕ ಅರಮನೆಯಿಂದ ಆನೆಗಳನ್ನು ಕಳುಹಿಸುವ ವೇಳೆ ಹೆಣ್ಣುನ್ನು ಮದುವೆ ಮಾಡಿ ಗಂಡನ ಮನೆಗೆ ಕಳುಹಿಸುವ ಭಾವ ಕಾಡುತ್ತಿದೆ ಎಂದರು. "ನಿತ್ಯವು ಎರಡು ಮೂರು ಭಾರಿ ಬೇಟಿ ಕೊಡುತ್ತಿದ್ದೆ. ತಾಲೀಮಿಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದವು. ಈಗ ಮತ್ತೆ ಅವುಗಳನ್ನು ಸ್ವಸ್ಥಾನದತ್ತ ಕಳುಹಿಸುತ್ತಿದ್ದೇವೆ. ಹೆಣ್ಣು ಮಕ್ಕಳನ್ನ ಗಂಡನ ಮನೆಗೆ ಕಳುಹಿಸುವಾಗ ಯಾವ ಭಾವನೆ ಮೂಡುತ್ತದೆಯೋ ಅದೇ ಭಾವನೆ ಈಗ ಕಾಡುತ್ತಿದೆ," ಎಂದು ಭಾವುಕರಾದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ