ಆ್ಯಪ್ನಗರ

ಕೆಆರ್‌ಎಸ್‌ ಹಿನ್ನೀರಿನಲ್ಲಿ ಜಲಕ್ರೀಡೋತ್ಸವ ಶುರು : ಅ.8ರವರೆಗೂ ಸಾಹಸಿಗರಿಗೆ ಸುಗ್ಗಿ

ದಸರಾ ಉತ್ಸವದ ಅಂಗವಾಗಿ ಇದೇ ಮೊದಲ ಬಾರಿಗೆ ಕೃಷ್ಣರಾಜಸಾಗರ ಹಿನ್ನೀರಿನಲ್ಲಿ ಸಾಹಸ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಯುವಜನ ಮತ್ತು ಕ್ರೀಡಾ ಸಬಲೀಕರಣ ಇಲಾಖೆಯಿಂದ ಈ ಕ್ರೀಡೋತ್ಸವವನ್ನು ಏರ್ಪಡಿಸಲಾಗಿದ್ದು, ಅ.8ರವರೆಗೂ ನಡೆಯಲಿದೆ.

Vijaya Karnataka 30 Sep 2019, 10:10 am
ಮೈಸೂರು: ಕೃಷ್ಣರಾಜಸಾಗರ ಹಿನ್ನೀರಿನಲ್ಲಿಯುವಜನ ಮತ್ತು ಕ್ರೀಡಾ ಸಬಲೀಕರಣ ಇಲಾಖೆಯಿಂದ ಇದೇ ಮೊದಲ ಬಾರಿಗೆ ಕಡಿಮೆ ದರದಲ್ಲಿಸಾಹಸ ಕ್ರೀಡೆಗಳನ್ನು ಆಯೋಜಿಸಲಾಗಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.
Vijaya Karnataka Web water games


ದಸರಾ ಪ್ರಯುಕ್ತ ಮೈಸೂರು ತಾಲೂಕಿನ ಉಂಡುವಾಡಿ ಬಳಿಯ ಬ್ಲೂಲಗೂನ್‌ ಹಿನ್ನೀರಿನಲ್ಲಿಇಲಾಖೆ ಆಯೋಜಿಸಿರುವ ದಸರಾ ಸಾಹಸ ಕ್ರೀಡೋತ್ಸವಕ್ಕೆ ಬೋಟ್‌ನಲ್ಲಿಸುತ್ತಾಡುವ ಮೂಲಕ ಅವರು ಭಾನುವಾರ ಚಾಲನೆ ನೀಡಿದರು.

''ಅ.8ರವರೆಗೂ ನಡೆಯುವ ಈ ಕ್ರೀಡೆಯಲ್ಲಿಪ್ರವಾಸಿಗರು ಹಾಗೂ ಸ್ಥಳೀಯರು ಭಾಗವಹಿಸಿ ಸಂಭ್ರಮಿಸಬಹುದಾಗಿದೆ. ಅಗತ್ಯ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಂಡು ಯಾವುದೇ ಅನಾಹುತವೂ ಆಗದಂತೆ ಎಚ್ಚರವಹಿಸಿ,'' ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಯುವಜನ ಮತ್ತು ಕ್ರೀಡಾ ಸಬಲೀಕರಣ ಇಲಾಖೆ ಆಯುಕ್ತ ಕೆ.ಶ್ರೀನಿವಾಸ್‌ ಮಾತನಾಡಿ, ''ಇದೇ ಮೊದಲ ಬಾರಿಗೆ ಯಾವುದೇ ಲಾಭವಿಲ್ಲದೆ ಕಾರ್ಯಕ್ರಮ ನಡೆಸುತ್ತಿದ್ದು, ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಮುಂಜಾಗ್ರತಾ ಕಾರ್ಯಕ್ರಮದ ಅಂಗವಾಗಿ 35 ಮಂದಿ ಅಂತಾರಾಷ್ಟ್ರೀಯ ಈಜು ತರಬೇತುದಾರರು ಇಲ್ಲಿನಿತ್ಯ ಕಾರ್ಯನಿರ್ವಹಿಸಲಿದ್ದು, ಸಾರ್ವಜನಿಕರು ಒಮ್ಮೆ ಭೇಟಿ ನೀಡಿ ಅನುಭವ ಪಡೆದರೆ ಮತ್ತೊಮ್ಮೆ ಬರದೇ ಇರಲಾರರು,'' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕ್ರೀಡಾ ಸಮಿತಿ ಅಧ್ಯಕ್ಷ ಜಗದೀಶ್‌, ಜಿ.ಪಂ ಸದಸ್ಯೆ ಚಂದ್ರಿಕಾ ಸುರೇಶ್‌, ಉಪಾಧ್ಯಕ್ಷ ಜಗದೀಶ್‌, ಎಚ್‌.ಜಯರಾಮ್‌, ಸದಸ್ಯರಾದ ಡಿ.ಪಿ.ಸುರೇಶ್‌, ಕೆ. ದೇವರಾಜ್‌, ಕೃಷ್ಣನಾಯಕ್‌, ಜಿತೇಂದ್ರ ಶೆಟ್ಟಿ, ಯುವಜನ ಕ್ರೀಡಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ.ಜಿ.ಕಲ್ಪನಾ, ಕ್ರೀಡಾ ಇಲಾಖೆ ಸುರೇಶ್‌ ಇತರರು ಭಾಗವಹಿಸಿದ್ದರು.

ಕ್ರೀಡೆಗಳು ಮತ್ತು ದರ:
ಜೆಟ್‌ ಸ್ಕೈ -200 ರೂ, ಸ್ಪೀಡ್‌ ಬೋಟ್‌ -100 ರೂ, ಬನಾನ ರೈಡ್‌ -100, ಕಾಯಾಕಿಂಗ್‌ -50, ಕ್ಯಾನೋಯಿಂಗ್‌ -50, ಸ್ಟಿಲ್‌ ವಾಟರ್‌ ರಾಫ್ಟಿಂಗ್‌ -50,ಅಕ್ವಾ ಸ್ಲೈಡ್‌-100, ವಾಟರ್‌ ಜೋರ್ಬ್‌ -100ರೂ. ಆಗಿದ್ದು, ಎಲ್ಲಾಆಟಗಳು-700 ರೂ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ