ಆ್ಯಪ್ನಗರ

ಬಾಳು ಬೆಳಗಿದ ಬಹು ಬೆಳೆ

Vijaya Karnataka 12 Sep 2017, 5:00 am

- ಮಲ್ಲಿಕಾರ್ಜುನ ಪುರದನಗೌಡರ ಕಲಘಟಗಿ

ಕೃಷಿ ಕಾಯಕ ಬೇಡ ಎಂದು ಹಲವರು ಪಟ್ಟಣ ಸೇರಿದರೆ, ರಾಚನಗೌಡ ಪಾಟೀಲರು ಚಾಲಕ ವೃತ್ತಿ ತೊರೆದು ಬಹು ಬೆಳೆ ಸಾಗುವಳಿ ಮೂಲಕ ಉತ್ತಮ ವರಮಾನ- ನೆಮ್ಮದಿ ಕಂಡಿದ್ದಾರೆ.

ರಾಚನಗೌಡರು ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ತಬಕದಹೊನ್ನಳ್ಳಿ ಗ್ರಾಮದ ಪ್ರಗತಿಪರ ರೈತ. ಮಳೆ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ನೀರಿಗೆ ಕೊಳವೆ ಬಾವಿ ಆಶ್ರಯಿಸಿದ್ದಾರೆ. ಹನಿ ನೀರಾವರಿ ಮೂಲಕ ಎಂಟು ಎಕರೆ ಭೂಮಿಯಲ್ಲಿ ಕಬ್ಬು, ಬಾಳೆ, ತಾಳೆ, ಮಾವು, ತೆಂಗು, ಪಪ್ಪಾಯಿ, ಸಾಗವಾನಿ, ಮೆಣಸಿನಕಾಯಿ, ತರಕಾರಿ ಬೆಳೆಯುತ್ತಿದ್ದಾರೆ. ಜೇನು ಸಾಕಾಣಿಕೆಯೂ ಇದೆ. ಹೊಲದ ಬದುವಿನ ಸುತ್ತ ಹೆಬ್ಬೇವು ನೆಟ್ಟು ಭವಿಷ್ಯದ ಆದಾಯ ಭದ್ರಪಡಿಸಿಕೊಂಡಿದ್ದಾರೆ. ವಾರ್ಷಿಕ 6ರಿಂದ 7 ಲಕ್ಷ ರೂಪಾಯಿ ಆದಾಯ ಪಡೆದು ಆರ್ಥಿಕ ಸಬಲತೆ ಕಂಡು ಕೊಂಡಿದ್ದಾರೆæ.

ಬಾಳೆ -ತಾಳೆ

Vijaya Karnataka Web integrated farming system
ಬಾಳು ಬೆಳಗಿದ ಬಹು ಬೆಳೆ

ಬಾಳೆ ಜತೆ ತಾಳೆ ಬೆಳೆಯುತ್ತಿದ್ದಾರೆ. ಇವುಗಳ ಮಧ್ಯ ಮೆಣಸಿನಕಾಯಿ ಬೆಳೆಯುತ್ತಾರೆ. ಪ್ರತಿವಾರ ಸಂತೆಯಲ್ಲಿ ಮೆಣಸಿನ ಕಾಯಿ ಮಾರಾಟ ಮಾಡುತ್ತಾರೆ. ತಿಂಗಳಿಗೆ ಸರಾಸರಿ 14 ಸಾವಿರ ರೂ. ಆದಾಯ ಪಡೆಯುತ್ತಾರೆ.

8 ವರ್ಷದ ಹಿಂದೆ ನಾಟಿ ಮಾಡಿದ 95 ಮಾವಿನ ಗಿಡ, 50 ತೆಂಗಿನ ಮರಗಳಿವೆ. ಅರಣ್ಯ ಕೃಷಿ ಪದ್ಧತಿಯಲ್ಲಿ 50 ಸಾಗುವಾನಿ ಹಾಗೂ 250 ಹೆಬ್ಬೇವು ಗಿಡಗಳನ್ನು ಹೊಲದ ಬದುವಿನ ಸುತ್ತ ನೆಟ್ಟಿದ್ದಾರೆ. ಎರಡು ಎಕರೆಯಲ್ಲಿ ಕಬ್ಬಿನ ಬೆಳೆಯಿದ್ದು, ಎಕರೆಗೆ 35 ರಿಂದ 45 ಟನ್‌ ಬೆಳೆಯುತ್ತಾರೆ. ನಾಲ್ಕು ಎಕರೆಯಲ್ಲಿ ಸೋಯಾಬಿನ್‌ ಬೆಳೆಯುತ್ತಾರೆ. ಭೂಮಿಗೆ ಕೊಟ್ಟಿಗೆ ಗೊಬ್ಬರ ನೀಡುತ್ತಾರೆ.

ಹೈನುಗಾರಿಕೆ

ಕೃಷಿ ಜತೆ ಹೈನುಗಾರಿಕೆಯಿದೆ. ಒಂದು ಎಮ್ಮೆ, ಮೂರು ಆಕಳುಗಳಿವೆ. ಹಾಲು ಮಾರಾಟದ ಜತೆ ಸಗಣಿ ಗೊಬ್ಬರ ತಯಾರಿಸುತ್ತಾರೆ. ಎರೆಹೊಳು ತೊಟ್ಟಿ ನಿರ್ಮಿಸಿಕೊಂಡಿದ್ದಾರೆ. ಹೀಗಾಗಿ ಕೃಷಿ ಭೂಮಿಗೆ ಉತ್ತಮ ಗೊಬ್ಬರಕ್ಕೆ ಬರವಿಲ್ಲ. ಹಸಿ ಹುಲ್ಲನ್ನೂ ಬೆಳೆಯುತ್ತಾರೆ.

ಜೇನು ಸಾಕಾಣಿಕೆ

ಹೊಲದಲ್ಲಿ ಜೇನುಸಾಕಾಣಿಕೆಗಾಗಿ 10 ಜೇನುಸಾಕಾಣಿಕೆ ಡಬ್ಬಿಗಳನ್ನು ಇಟ್ಟಿದ್ದು ಪ್ರತಿ ಒಂದೂವರೆ ತಿಂಗಳಿಗೊಮ್ಮೆ ಜೇನು ತೆಗೆಯುತ್ತಾರೆ. ಶುದ್ಧ ಜೇನಿಗೆ ಪ್ರತಿ ಲಿಟರ್‌ಗೆ 500 ರೂಪಾಯಿಯಂತೆ ಮಾರಾಟ ಮಾಡಿ ಇದರ ಮೂಲಕ ವಾರ್ಷಿಕ 20 ರಿಂದ 25 ಸಾವಿರ ರೂ. ಆದಾಯ ಪಡೆಯತ್ತಾರೆ

ರೈತ ರಾಚನಗೌಡ ಪಾಟೀಲ ಅವರ ಮೊ.9480749797

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ