ಆ್ಯಪ್ನಗರ

ಕಷ್ಟ ಮರೆಸಿದ ಹೂವು

ಬಹುತೇಕ ರೈತರು ಸಾಂಪ್ರದಾಯಿಕ ಬೆಳೆಗಳನ್ನಷ್ಟೇ ಬೆಳೆಯುತ್ತಾರೆ. ಮನೆಯ ಅಂಗಳದಲ್ಲಿ ಹೂವು ಬೆಳೆದು ದೇವರ ಪೂಜೆಗೆ ಬಳಸುತ್ತಾರೆ. ಪುಷ್ಪ ಕೃಷಿಯನ್ನು ಮುಖ್ಯ ಬೆಳೆಯನ್ನಾಗಿ ಮಾಡುವವರು ಕಡಿಮೆ. ಆದರೆ, ಲಕ್ಷ್ಮೇಶ್ವರ ಪಟ್ಟಣದ ಹರದಗಟ್ಟಿಯ ರೈತ ಮಾಬೂಸಾಬ ಹೊಸಮನಿ ಹಾಗಲ್ಲ. ಅವರು 4 ಎಕರೆ ಜಮೀನಿನಲ್ಲಿ ವಿವಿಧ ಬಗೆಯ ಹೂವುಗಳನ್ನು ಬೆಳೆಯುತ್ತಾರೆ. ಪುಷ್ಪ ಕೃಷಿಯಲ್ಲಿ ಲಾಭ ಪಡೆದು ಜೀವನ ಕಟ್ಟಿಕೊಂಡಿದ್ದಾರೆ.

Vijaya Karnataka 18 Dec 2018, 5:00 am
- ಸುರೇಶ ಎಸ್‌.ಲಮಾಣಿ
Vijaya Karnataka Web BLG-1312-2-52-IMG20181121085445


ಬಹುತೇಕ ರೈತರು ಸಾಂಪ್ರದಾಯಿಕ ಬೆಳೆಗಳನ್ನಷ್ಟೇ ಬೆಳೆಯುತ್ತಾರೆ. ಮನೆಯ ಅಂಗಳದಲ್ಲಿ ಹೂವು ಬೆಳೆದು ದೇವರ ಪೂಜೆಗೆ ಬಳಸುತ್ತಾರೆ. ಪುಷ್ಪ ಕೃಷಿಯನ್ನು ಮುಖ್ಯ ಬೆಳೆಯನ್ನಾಗಿ ಮಾಡುವವರು ಕಡಿಮೆ. ಆದರೆ, ಲಕ್ಷ್ಮೇಶ್ವರ ಪಟ್ಟಣದ ಹರದಗಟ್ಟಿಯ ರೈತ ಮಾಬೂಸಾಬ ಹೊಸಮನಿ ಹಾಗಲ್ಲ. ಅವರು 4 ಎಕರೆ ಜಮೀನಿನಲ್ಲಿ ವಿವಿಧ ಬಗೆಯ ಹೂವುಗಳನ್ನು ಬೆಳೆಯುತ್ತಾರೆ. ಪುಷ್ಪ ಕೃಷಿಯಲ್ಲಿ ಲಾಭ ಪಡೆದು ಜೀವನ ಕಟ್ಟಿಕೊಂಡಿದ್ದಾರೆ.

ನಮಗೆ ಇರುವ ನಾಲ್ಕು ಎಕರೆ ಜಮೀನಿನಲ್ಲಿ ಮೂದಲು ತರಕಾರಿ ಶೇಂಗಾ, ಎಳ್ಳು, ಊಳಾಗಡ್ಡಿ ಇನ್ನಿತರ ಬೆಳೆಗಳನ್ನು ಬೆಳೆಯುತ್ತಿದ್ದರು. ಈ ಬೆಳೆಯಲ್ಲಿ ಅಷ್ಟೊಂದು ಲಾಭ ಅವರಿಗೆ ಸಿಗಲಿಲ್ಲ. ಸಂಬಂಧಿಕರೊಬ್ಬರು ನೀಡಿದ ಸಲಹೆಯಂತೆ ಅವರು ಮೊದಲು ಗಲಾಟೆ ಹೂವು ಬೆಳೆಯಲು ಪ್ರಾರಂಭಿಸಿದರು. ಹೂವು ಮಾರಾಟದಲ್ಲಿ ಉತ್ತಮ ಲಾಭ ಅವರಿಗೆ ಬಂತು. ಹೂವಿನ ಕೃಷಿ ಅವರಿಗೆ ಖುಷಿ ನೀಡಿತು. ಹೀಗಾಗಿ ಗಲಾಟೆ ಹೂವಿನ ಜತೆಗೆ ಮಲ್ಲಿಗೆ ಹೂವು ಬೆಳೆಯಲು ಆರಂಭಿಸಿದರು.

''ನಾನಾ ಬಗೆಯ ಹೂವುಗಳನ್ನು ಬೆಳೆಯುತ್ತಿದ್ದೇನೆ. ಇದರಿಂದ ನಮಗೆ ವರ್ಷಪೂರ್ತಿ ಹೂವು ಸಿಗುತ್ತದೆ. ಹೂವು ಮಾರಾಟದಿಂದ ಸಂಪಾದನೆ ಕಡಿಮೆ ಎಂದು ಅನಿಸುತ್ತಿಲ್ಲ'' ಎನ್ನುತ್ತಾರೆ ನಾಲ್ಕು ಎಕರೆ ಪುಷ್ಪ ಕೃಷಿಯಲ್ಲಿ ಯಶಸ್ಸು ಕಂಡಿರುವ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ರೈತ ಮಾಬೂಸಾಬ ಹೊಸಮನಿ.

ಇರುವ ನಾಲ್ಕು ಎಕರೆ ಜಮೀನಿನಲ್ಲಿ ಒಂದು ಎಕರೆ ಗಲಾಟೆ ಹೂ, ಇನ್ನೊಂದು ಎಕರೆಯಲ್ಲಿ ಮಲ್ಲಿಗೆ ಹೂ, ಸೇವಂತಿಗೆ ಬೆಳೆಯುತ್ತಾರೆ. ಉಳಿದ ಜಮೀನಿನಲ್ಲಿ ಮೆಣಸಿನ ಕಾಯಿ, ಮೆಕ್ಕೆಜೋಳ, ಕುಸುಬೆ ಬೆಳೆಯುತ್ತಾರೆ. ಮಳೆರಾಯ ಕೈಕೊಟ್ಟರೂ ಸತತ ನಾಲ್ಕು ವರ್ಷಗಳಿಂದ ಬರಗಾಲದ ಸ್ಥಿತಿಯಿದೆ. ಹೀಗಿದ್ದರೂ ಇರುವ ಅಲ್ಪಸ್ವಲ್ಪ ನೀರಿನ ಆಸರೆಯಿಂದ ನೀರಾವರಿ ಸೌಲಭ್ಯ ಕಲ್ಪಿಸಿಕೊಂಡಿದ್ದಾರೆ.

ಮಲ್ಲಿಗೆ: ಒಂದು ಎಕರೆಯಲ್ಲಿ ಮಲ್ಲಿಗೆ ಹೂವಿನ ಬೆಳೆಯಿದೆ. ಆರಂಭದಲ್ಲಿ ಸಸಿ, ನಾಟಿ, ಗೊಬ್ಬರ, ಕೂಲಿ ವೆಚ್ಚ ಸೇರಿ 24 ಸಾವಿರ ರೂ.ಗಳನ್ನೂ ಖರ್ಚು ಮಾಡಿದ್ದಾರೆ. ಕೊಟ್ಟಿಗೆ ಗೊಬ್ಬರ ಹಾಗೂ ಕುರಿಗೊಬ್ಬರ ಮಿಶ್ರಣ ಮಾಡಿ ಭೂಮಿ ಹದಗೊಳಿಸಿದ್ದರು. ಪ್ರತಿದಿನ ಈಗ 4ರಿಂದ 5 ಕೆಜಿ ಹೂವು ಕೊಯ್ಲಿಗೆ ಬರುತ್ತಿದೆ. ಒಂದು ಕೆ.ಜಿ.ಗೆ 250 ರಿಂದ 300 ರೂ.ದರದಲ್ಲಿ ಮಾರಾಟ ಮಾಡುತ್ತಿದ್ದಾರೆ.

ಗಲಾಟೆ ಹೂ: ಒಂದು ಎಕರೆಯಲ್ಲಿ ಗಲಾಟೆ ಹೂ ಬೆಳೆದಿದ್ದಾರೆ. ಇದು ಸುಮಾರು ಒಂಭತ್ತು ತಿಂಗಳ ಬೆಳೆ. ಪ್ರತಿದಿನ 20 ಕೆಜಿ ಹೂವು ಕೊಯ್ಲಿಗೆ ಬರುತ್ತದೆ. ಒಂದು ಕೆ.ಜಿ.ಗೆ 30 ರಿಂದ 40 ರೂ.ದರಲ್ಲಿ ಮಾರಾಟ ಮಾಡುತ್ತಾರೆ. ಒಂದು ಬೆಳೆಗೆ 10 ಸಾವಿರ ರೂ ವೆಚ್ಚವಾದರೂ 20 ಸಾವಿರ ರೂ. ಲಾಭವಾಗುತ್ತಿದೆ. ರೈತ ಮಾಬೂಸಾಬ ಹೊಸಮನಿ ಅವರು ಹೂವಿನ ಗಿಡಗಳ ಜೊತೆಗೆ ವಿವಿಧ ರೀತಿಯ ಬೆಳೆಗಳನ್ನು ಬೆಳೆಯುತ್ತಾರೆ. ಒಂದರಲ್ಲಿ ನಷ್ಟವಾದರೆ ಇನ್ನೂಂದರಲ್ಲಿ ಲಾಭ ಪಡೆಯುವ ಜಾಣ್ಮೆ ಅವರದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ