ಆ್ಯಪ್ನಗರ

ಸಾವಯವ ಕೃಷಿ ಸಿರಿ

'ವಿಕ - ಸೂಪರ್‌ ಸ್ಟಾರ್‌ ರೈತ ' ಪ್ರಶಸ್ತಿ ಪುರಸ್ಕೃತ ಕೆ.ಎಂ.ಚನ್ನಪ್ಪ ಅವರು ಸಾವಯವ- ಸಮಗ್ರ ಕೃಷಿಯಿಂದ ನೆಮ್ಮದಿ- ಸಮೃದ್ಧಿ ಕಂಡಿದ್ದಾರೆ.

Vijaya Karnataka 21 May 2019, 5:00 am
ರಾಸಾಯನಿಕ ರಹಿತ ಕೃಷಿ ಮಾಡುವ ಸವಾಲನ್ನು ಸ್ವೀಕರಿಸಿ ದೇಸಿ ತಳಿಗಳನ್ನು ಸಾವಯವ ವಿಧಾನದಲ್ಲಿ ಬೆಳೆಯುತ್ತಿದ್ದಾರೆ ಈ ರೈತರು.
Vijaya Karnataka Web BLG-1505-2-52-CHANNAPPA 3


ಹರಪನಹಳ್ಳಿ ತಾಲೂಕು ತಿಪ್ಪನಾಯ್ಕನಹಳ್ಳಿ ರೈತ ಕೆ.ಎಂ.ಚನ್ನಪ್ಪ ಅವರ ಪಾರಂಪರಿಕ ಬೇಸಾಯಕ್ಕೆ ಪತ್ನಿ ಶಕುಂತಲಮ್ಮ ಹಾಗೂ ಅವರ ಕುಟುಂಬದ ಇತರ ಸದಸ್ಯರು ಬೆನ್ನೆಲುಬಾಗಿ ನಿಂತಿದ್ದಾರೆ.

ಒಂದು ಕಾಲದಲ್ಲಿ ಕೇವಲ ಎರಡು ಎಕರೆ ಜಮೀನು ಹೊಂದಿದ್ದ ಇವರು ಕೃಷಿ ಚಟುವಟಿಕೆಗಳಲ್ಲಿ ಬಂದ ಆದಾಯದಿಂದ ಕೃಷಿ ಭೂಮಿ ವಿಸ್ತರಿಸಿದ್ದಾರೆ. ಇಂದು ಒಟ್ಟು 7 ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದಾರೆ. ಮೀನುಗಾರಿಕೆ, ಹೈನುಗಾರಿಕೆ ಕೃಷಿಗೆ ಪೂರಕವಾಗಿದೆ. ಕೃಷಿ ಹೊಂಡದಲ್ಲಿ ಸಂಗ್ರಹಣೆಯಾದ ನೀರಿನಿಂದ ವಾರ್ಷಿಕವಾಗಿ ಎರಡು ಮಿಶ್ರ ಬೆಳೆಗಳನ್ನು ಬೆಳೆಯುತ್ತಾರೆ. ಕ್ಯಾರೆಟ್‌, ಬಿಟ್‌ರೂಟ್‌, ಬಿನ್ಸ್‌, ಎಲೆಕೋಸು, ಈರುಳ್ಳಿ, ಹತ್ತಿ, ಮೆಣಸಿನಕಾಯಿಯಂತಹ ಮಿಶ್ರ ಬೆಳೆಯನ್ನು ಯಾವುದೇ ರಾಸಾಯನಿಕ ಗೊಬ್ಬರವಿಲ್ಲದೆ ಬೆಳೆಯುತ್ತಿದ್ದಾರೆ. ಎರಡು ಎತ್ತುಗಳಿಂದ ಭೂಮಿಯ ಉಳುಮೆ ಮಾಡುತ್ತಾರೆ.

ಮಳೆಯಾಧಾರಿತ ಜಮೀನಿನಲ್ಲಿ ದೇಸಿ ತಳಿಗಳನ್ನು ಬೆಳೆಯುತ್ತಿದ್ದು, ತಮ್ಮ ಜಮೀನಿನಲ್ಲಿ ರಾಗಿ, ಮೆಕ್ಕೆಜೋಳ, ಶೇಂಗಾ, ನವಣಿ, ಸಜ್ಜೆ ಬೆಳೆಯುತ್ತಾರೆ. ಈರುಳ್ಳಿಯನ್ನು 150 ಪಾಕೆಟ್‌(60 ಕೆಜಿ), ಮೆಣಸಿನಕಾಯಿ 5 ಕ್ವಿಂಟಾಲ್‌, ಹತ್ತಿ 5 ಕ್ವಿಂಟಾಲ್‌, ಬಿಟಂರೂಟ್‌, ಕ್ಯಾರೇಟ್‌, ಬಿನ್ಸ್‌, ಕೋಸು ಇನ್ನಿತರ ತರಕಾರಿ ಮಾರಾಟದಿಂದ ಒಟ್ಟು 2 ಲಕ್ಷ ರೂಪಾಯಿ ಆದಾಯ ಪಡೆದಿದ್ದಾರೆ. ನವಣೆ 15 ಚೀಲ, ಸಜ್ಜಿ 22 ಕ್ವಿಂಟಾಲ್‌ ಬೆಳೆದು ಆರ್ಥಿಕವಾಗಿ ಸಬಲರಾಗಿದ್ದಾರೆ. ಕೃಷಿ ಹೊಂಡದಲ್ಲಿ ಕಾಟ್ಲಾ, ಮುರುಗ, ರೋಗೋ ತಳಿಯ ಮೂರು ಸಾವಿರ ಮೀನಿನ ಮರಿಗಳ ಸಾಕಣೆ ಮಾಡುತ್ತಿದ್ದಾರೆ.

ಸಮೃದ್ಧಿ ನೀಡಿದ ಕೃಷಿ ಹೊಂಡ: ಎರಡು ವರ್ಷಗಳ ಹಿಂದೆ ಸರಕಾರದ ಕೃಷಿ ಭಾಗ್ಯ ಯೋಜನೆ ಅಡಿ 2 ಎಕರೆ ಜಮೀನಿನಲ್ಲಿ 50್ಡ30 ಮೀಟರ್‌ ಅಳತೆಯ 5 ಮೀಟರ್‌ ಆಳದ ಕೃಷಿ ಹೊಂಡ ನಿರ್ಮಿಸಿಕೊಂಡಿದ್ದಾರೆ. ಇದರಲ್ಲಿ ಮಳೆ ನೀರು ಸಂಗ್ರಹಿಸುತ್ತಾರೆ. ವಿಶೇಷ ಎಂದರೆ ಈ ಹೊಂಡದಲ್ಲಿ ಯಾವಾಗಲೂ ನೀರು ಇರುತ್ತದೆ. ಕೊಳವೆ ಬಾವಿ ಇಲ್ಲದೆ ಕೇವಲ ಕೃಷಿ ಹೊಂಡದ ನೀರಿನ ಆಶ್ರಯದಲ್ಲಿ ತರಹೇವಾರಿ ಬೆಳೆ ಬೆಳೆಯುತ್ತಿರುವುದು ಸಾಧನೆಯೇ ಸರಿ.

ಹೆಚ್ಚಿನ ಮಾಹಿತಿಗೆ ಮೊ. 9663887298

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ