ಆ್ಯಪ್ನಗರ

​ಸಿನಿಮಾ ಸಂಭಾಷಣೆಗಳಲ್ಲಿ ಕನ್ನಡ ಕಂಪು

ಕರ್ನಾಟಕದಲ್ಲಿ ನಿಜವಾದ ಕನ್ನಡಿಗರು ಅಂತ ಎಷ್ಟು ಜನ ಇದ್ದಾರೋ ಅಷ್ಟು ಮರಳು ಇದರಲ್ಲಿದೆ. ಕಸ ಕಡ್ಡಿ ಏನಿದೆ ಅದೆಲ್ಲವೂ ನಿಮ್ಮಂಥವರು.

Vijaya Karnataka 1 Nov 2018, 10:40 am
ಕನ್ನಡಿಗರ ಪೌರುಷ, ಕನ್ನಡಿಗರ ಸಾಹಸ, ಕನ್ನಡಿಗರ ಸ್ವಾಭಿಮಾನ ಆಚಂದ್ರಾರ್ಕವಾಗಿ ನಿಲ್ಲುವಂಥದೇ ಹೊರತು ನಿನ್ನಂಥ ಕೋಟಿ ಪಲ್ಲವರ ನಿರಂತರ ದಾಳಿಯಿಂದ ಅಳಿಯದು ಎಂಬ ಸತ್ಯವನ್ನು ಪ್ರತ್ಯಕ್ಷ ಪ್ರಮಾಣ ಮಾಡಿ ತೋರಿಸುತ್ತೇನೆ. ಇದೇನನ್ನ ಗುರಿ, ಇದೇ ನನ್ನ ಮಂತ್ರ, ಇದೇ ನನ್ನ ಪ್ರತಿಜ್ಞೆ.
Vijaya Karnataka Web mayura


-ಡಾ. ರಾಜ್‌ಕುಮಾರ್‌(ಮಯೂರ)

ಈ ಕೈ ಕರ್ನಾಟಕದ ಆಸ್ತಿ. ಈ ಐದು ಬೆರಳಲ್ಲಿ ಇರೋದು ಕನ್ನಡಿಗರ ಶಕ್ತಿ.

-ವಿಷ್ಣುವರ್ಧನ್‌(ಕದಂಬ)

ಕರ್ನಾಟಕದಲ್ಲಿ ನಿಜವಾದ ಕನ್ನಡಿಗರು ಅಂತ ಎಷ್ಟು ಜನ ಇದ್ದಾರೋ ಅಷ್ಟು ಮರಳು ಇದರಲ್ಲಿದೆ. ಕಸ ಕಡ್ಡಿ ಏನಿದೆ ಅದೆಲ್ಲವೂ ನಿಮ್ಮಂಥವರು.

-ವಿಷ್ಣುವರ್ಧನ್‌ (ಯಜಮಾನ)

ಏ ಥ್ಯಾಕ್ರೆ, ಕನ್ನಡಿಗರ ಮಾನಾಭಿಮಾನ ನಿನ್ನಂಥ ಕಜ್ಜಿ ನಾಯಿಗೇನ್‌ ಗೊತ್ತೈತಿ. ಇದು ಕೆಚ್ಚೆದೆ ಕಲಿಗಳ ಬೀಡೈತಿ. ಅಂಜಿಕೆ ಎಂಬುದರಿಂದ ನಾಡೈತಿ. ಕಿತ್ತೂರು ದೇಶಾಭಿಮಾನ, ಸ್ವಾಭಿಮಾನದ ಗೂಡೈತಿ. ಇಂಥಾ ನಾಡಾಗ ನೀನ್‌ ಜೀವ ಭಯ ತೋರಸ್ತೀ...

-ದರ್ಶನ್‌(ಸಂಗೊಳ್ಳಿ ರಾಯಣ್ಣ)

ಏಳು ಕೋಟಿ ಕನ್ನಡಿಗರೆಂಬ ತುಂಬು ಕುಟುಂಬದ ಕಿರಿಮಗ. ಅರಸೀಕೆರೆಲಿ ಆಟಾಡಿ, ಹಾಸನದಲ್ಲಿ ಅಡ್ಡಾಡಿ ತುಮಕೂರು, ತಿಪಟೂರು, ತುರುವೇಕೆರೆಲಿ ತೆಂಗಿನ ಸಸಿ ನೆಟ್ಟು, ಚಿಕ್ಕಮಗಳೂರಲ್ಲಿ ಕಾಫಿ ಕುಡಿದು ಶಿವ್‌ಮೊಗ್ಗದಲ್ಲಿ ಈಜಾಡಿ ದಾವಣಗೆರೆಲಿ ದೋಸೆ ತಿಂದು ಡಾನ್ಸ್‌ ಮಾಡಿ ಹುಬ್ಳಿ ಧಾರವಾಡದಲ್ಲಿ ಮೈ ಪಳಗಿಸಿ ಗುಲ್ಬರ್ಗ ಬಿಜಾಪುರದಲ್ಲಿ ಬೆವರು ಸುರಿಸಿ ನಗರದಲ್ಲಿ ನಗಾರಿ ಬಾರಿಸಿ ದುರ್ಗದ ಕೋಟೆ ಹತ್ತಿ ಕೋಲಾರದಲ್ಲಿ ಚಿನ್ನ ತೆಗೆದು, ಬಳ್ಳಾರಿಲಿ ಅದಿರು ತೆಗೆದು, ಮಂಗ್ಳೂರ್‌ನಲ್ಲಿ ಮೀನು ಸವಿದು ಮಡಿಕೇರಿಲಿ ಜೇನ್‌ ಸವಿದು ಮಂಡ್ಯದಲ್ಲಿ ಕಬ್ಬು ಅರೆದು ಮೈಸೂರಿಗ್‌ ಮನ್ಸು ಕೊಟ್ಟು ಬೆಂಗಳೂರಿಗೆ ಬಂದಿರೋದು ನಾನು.

-ಧನಂಜಯ, (ಬದ್ಮಾಶ್‌)

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ