ಆ್ಯಪ್ನಗರ

ಇಂದು ಸಂಜೆ ಭವ ಎನಗೆ ಹಿಂಗಿತು

ಕನ್ನಡ ಹವ್ಯಾಸಿ ರಂಗ ಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಹನು ರಾಮಸಂಜೀವ್‌ ನಿರ್ದೇಶನದ ಭವ ಎನಗೆ ಹಿಂಗಿತು ನಾಟಕ ಇಂದು ಸಂಜೆ ಕೆ ಎಚ್‌ ಕಲಾಸೌಧದಲ್ಲಿ ಪ್ರದರ್ಶನ.

Vijaya Karnataka 23 Mar 2019, 1:57 pm
ಕನ್ನಡ ಹವ್ಯಾಸಿ ರಂಗ ಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಹನು ರಾಮಸಂಜೀವ್‌ ನಿರ್ದೇಶನದ ಭವ ಎನಗೆ ಹಿಂಗಿತು ನಾಟಕ ಇಂದು ಸಂಜೆ ಕೆ ಎಚ್‌ ಕಲಾಸೌಧದಲ್ಲಿ ಪ್ರದರ್ಶನ ಗೊಳ್ಳಲಿದೆ.
Vijaya Karnataka Web bhava


ಲೇಖಕ ಕರಣಂ ಪವನ್‌ ಪ್ರಸಾದ್‌ ಬರೆದಿರುವ ಈ ನಾಟಕದಲ್ಲಿ ಒಬ್ಬ ಪ್ರಸಿದ್ಧ ಬರಹಗಾರ ಪ್ರಭು ಹಾಗೂ ಆತನ ಮಗ ಚಿರಂತನ ಬದುಕಿನ ಸುತ್ತ ಹೆಣೆದಿರುವ ಕಥೆ ಇದೆ. ಒಬ್ಬ ಪ್ರಸಿದ್ಧ ಬರಹಗಾರ ಪ್ರಭು ಹಾಗೂ ಆತನ ಮಗ ಚಿರಂತನ ಬದುಕಿನ ಸುತ್ತ ಹೆಣೆದಿರುವ ಕಥೆಯೇ ಭವ ಎನಗೆ ಹಿಂಗಿತು ನಾಟಕವಾಗಿದೆ.

ಪ್ರಭುವಿನ ದಿನನಿತ್ಯದ ಬದುಕು, ಆತನ ಮಾನಸಿಕ ತುಮುಲಗಳು ಕಥೆಯ ಮುಖ್ಯ ಹಂದರ. ಕೆಲಸದಾಕೆ ಸರಳ ಮತ್ತು ಆತನ ಗಂಡ ರಾಜು ಈ ಕಥೆಗೆ ಕುತೂಹಲಕಾರಿ ತಿರುವುಗಳನ್ನು ನೀಡುತ್ತಾರೆ. ಸಂಭಾಷಣೆಯ ಜೊತೆಗಿನ ಅಭಿನಯ ಹಾಗೂ ರೋಚಕ ಕಥೆಯಿಂದ ನಾಟಕ ಕುತೂಹಲಕಾರಿಯಾಗಿದೆ. ಈಗಾಗಲೇ ಪ್ರದರ್ಶನ ಕಂಡು ನಾಟಕ ಯಶಸ್ವಿ ಕೂಡಾ ಆಗಿದೆ.

ಇದಕ್ಕೆ ಸಂಗೀತವನ್ನು ಪ್ರಸನ್ನ ಕುಮಾರ್‌, ಬೆಳಕನ್ನು ಮಂಜುನಾರಾಯಣ್‌ ನೀಡಿದ್ದಾರೆ. ಹನು ರಾಮಸಂಜೀವ, ರಾಜ್‌ ಆರಾಧ್ಯ, ಯಶ್‌ವಂತ್‌ ಸಾಗರ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ