ಆ್ಯಪ್ನಗರ

ರಾಜ್ಯದ ಇಬ್ಬರು ಕಲಾವಿದರಿಂದ ಮುಂಬಯಿನಲ್ಲಿ ಕಲಾಪ್ರದರ್ಶನ

ಚೌರಾಸ್‌ ಕಲಾವಿದರ ತಂಡವು ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ ಕಲಾಪ್ರದರ್ಶನ ನಡೆಸಿತ್ತು. ಇದೀಗ ಮುಂಬಯಿನಲ್ಲಿ ಕಲಾಪ್ರದರ್ಶನವನ್ನು ಹಮ್ಮಿಕೊಂಡಿದೆ.

Vijaya Karnataka Web 9 Sep 2019, 10:22 am
ಮುಂಬಯಿ: ಕರ್ನಾಟಕ ಮತ್ತು ಮಹಾರಾಷ್ಟ್ರದ ನಾಲ್ವರು ಯುವ ಕಲಾವಿದರ ಇತ್ತೀಚಿನ ಅತ್ಯತ್ತಮ ಕಲಾಕೃತಿಗಳು ಮುಂಬಯಿನ ಪ್ರತಿಷ್ಠಿತ ಜಹಾಂಗೀರ್‌ ಗ್ಯಾಲರಿ ಜಿ-2ನಲ್ಲಿ ಸೆಪ್ಟಂಬರ್‌ 10 ರಿಂದ 16ರ ತನಕ ಪ್ರದರ್ಶನ ಕಾಣಲಿದೆ.
Vijaya Karnataka Web Art


ಬೆಳಗಾವಿ ಮೂಲದ ಜಯಂತ್‌ ಹುಬ್ಳಿ ಮತ್ತು ಉತ್ತರ ಕನ್ನಡ ಮೂಲದ ಗಣಪತಿ ಅಗ್ನಿಹೋತ್ರಿ, ಪುಣೆ ಮೂಲದ ಕೃಷ್ಣ ಕುಚನ್‌ ಮತ್ತು ಜಾಮಲೆ ಡಿ.ದೇವರಾವ್‌ ಅವರ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ಇವರ ತಂಡವು ಚೌರಾಸ್‌ ಕಲಾವಿದರ ತಂಡವೆಂದು ಗುರುತಿಸಿಕೊಂಡಿದ್ದು ಕಳೆದ ಬಾರಿ ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ ಕಲಾಪ್ರದರ್ಶನ ನಡೆಸಿತ್ತು.

ಆಧುನಿಕ ಕಲಾ ಪ್ರಕಾರಕ್ಕೆ ಒಗ್ಗಿಕೊಂಡು ತಮ್ಮದೇ ಶೈಲಿಯಲ್ಲಿ ಹಿಡಿತ ಸಾಧಿಸಿಕೊಂಡು ಬಂದಿರುವ ಈ ನಾಲ್ವರೂ ಕಲಾವಿದರು ಈ ಕಲಾಪ್ರದರ್ಶನದ ಮೂಲಕ ಮತ್ತೊಂದು ದಾಪುಗಾಲಿಡುತ್ತಿದ್ದಾರೆ. ಕಲಾಸಂಗ್ರಹಕಾರರ, ಕಲಾಪ್ರದರ್ಶನ ಆಯೋಜಕರ, ಕಲಾಪ್ರಿಯರ ಹಾಗೂ ಕಲಾಕ್ಷೇತ್ರದ ಸ್ನೇಹಿತರ ಗಮನ ಸೆಳೆಯುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ