ಆ್ಯಪ್ನಗರ

'ಕೊಳ' ನಟ ಶೃಂಗ ಮುಡಿಗೆ ಮೆಟಾ ಪ್ರಶಸ್ತಿ ಕಿರೀಟ

ಅಚ್ಯುತ್‌ಕುಮಾರ್‌ ನಿರ್ದೇಶನ ಮಾಡಿದ್ದ ಕೊಳ ನಾಟಕ ಪ್ರತಿಷ್ಠಿತ ಮೆಟಾ ಅವಾರ್ಡ್‌ಗೆ ನಾಮಿನೇಟ್‌ ಆಗಿತ್ತು ಈ ನಾಟಕದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಕೊಳ ನಾಟಕದ ಪಾಲಾಗಿದೆ...

Vijaya Karnataka 23 Mar 2019, 2:03 pm
ಅಚ್ಯುತ್‌ಕುಮಾರ್‌ ನಿರ್ದೇಶನ ಮಾಡಿದ್ದ ಕೊಳ ನಾಟಕ ಪ್ರತಿಷ್ಠಿತ ಮೆಟಾ ಅವಾರ್ಡ್‌ಗೆ ನಾಮಿನೇಟ್‌ ಆಗಿತ್ತು. ಈ ನಾಟಕದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಕೊಳ ನಾಟಕದ ಪಾಲಾಗಿದೆ. ಪ್ರತಿಷ್ಠಿತ ಮೆಟಾ ಅತ್ಯುತ್ತಮ ನಟ -2019ರ ಪ್ರಶಸ್ತಿ ರಂಗಭೂಮಿ ಕಲಾವಿದ ಶೃಂಗ ಅವರಿಗೆ ಕೊಳ ನಾಟಕದ ನಟನೆಗಾಗಿ ಸಂದಿದೆ.
Vijaya Karnataka Web kola


ತನ್ನ ವಿಶಿಷ್ಟ ಅಭಿನಯದ ಮೂಲಕ ರಂಗಭೂಮಿಯಲ್ಲಿ ಹೆಸರು ಮಾಡಿರುವ ಕಲಾವಿದ ಶೃಂಗ ಅವರ ಕೊಳ ನಾಟಕದಲ್ಲಿ ಅತ್ಯುತ್ತಮವಾಗಿ ನಟಿಸಿದ್ದರು. ಈ ಹಿಂದೆ ಆದ ಎಲ್ಲ ಪ್ರದರ್ಶನಗಳಲ್ಲಿಯೂ ಅವರ ನಟನೆ ಕಂಡು ಜನ ಮೆಚ್ಚಿಕೊಂಡದ್ದರು. ವಿಶೇಷ ಎಂದರೆ ಶ್ರುಂಗ ಮೊದಲು ಅತ್ಯುತ್ತಮ ನಟ ಪ್ರಶಸ್ತಿಗೆ ನಾಮಿನೇಟ್‌ ಆಗಿರಲೇ ಇಲ್ಲ. ಆದರೆ ಇವರ ನಟನೆಯನ್ನು ನೋಡಿದ ಜ್ಯೂರಿಗಳು ಅವರನ್ನು ನಾಮಿನೇಟ್‌ ಮಾಡಿ ಅತ್ಯುತ್ತಮ ನಟ ಎಂದು ಆಯ್ಕೆ ಮಾಡಿದ್ದಾರೆ.

'ನಾನು 2004ರಿಂದ ರಂಗಭೂಮಿಯಲ್ಲಿದ್ದೇನೆ. 38 ನಾಟಕಗಳಲ್ಲಿ ನಟಿಸಿದ್ದೇನೆ. ಪ್ರಶಸ್ತಿ ಅಂತಾ ಬಂದಿರುವುದು ಇದೇ ಮೊದಲು. ಆ ಪಾತ್ರ ಒಂಥಾರ ವಿಶೇಷವಾಗಿತ್ತು. ನಟನೆ ದೃಷ್ಟಿಯಲ್ಲಿ ನನಗೆ ಈ ಅವಾರ್ಡ್‌ ಒಂದು ರೀತಿಯಲ್ಲಿ ಪ್ಲಸ್‌ ಪಾಯಿಂಟ್‌ ಆಗಿದೆ. ವಿಶೇಷ ಎಂದರೆ ಮೇಟಾದಲ್ಲಿ ಕನ್ನಡಿಗರ ಆಗಾಗ ಬಾವುಟ ಹಾರಿಸುತ್ತಲೇ ಇದ್ದಾರೆ. ಈ ಹಿಂದೆ ಆರಂದತಿ ನಾಗ್‌, ಡಿಂಗ್ರಿ ನರೇರ್ಶ, ಪ್ರಸಾದ್‌ ಚೇರ್ಕಾಡಿ ಹೀಗೆ ಸಾಕಷ್ಟು ಜನರಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದೆ. ಈ ಬಾರಿ ನಾನು ಹಾಗಾಗಿ ಖುಷಿಯಾಗಿದೆ'ಎನ್ನುತ್ತಾರೆ ನಟ ಶೃಂಗ.

ಕೊಳ ನಾಟಕವನ್ನು ಬಹುಭಾಷಾ ನಟ ಅಚ್ಯುತ್‌ಕುಮಾರ್‌ ನಿರ್ದೇಶನ ಮಾಡಿದ್ದಾರೆ. ಚೂರಿಕಟ್ಟೆ ನಿರ್ದೇಶಕ ರಾಘು ಶಿವಮೊಗ್ಗ ಲೈಟಿಂಗ್‌ ಡಿಸೈನ್‌ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ