ಸದಾನಂದ ಹೆಗಡೆ ಹರಗಿ
ಬೆಳಗ್ಗೆ ಹೂ ಕೊಯ್ದು ತರುವಾಗ ನೆಬ್ಬೂರು ಭಾಗವತರು ಮೃತರಾದ ಸುದ್ದಿ ಓದಿದಾಗ ಪ್ರಸಿದ್ಧ ಯಕ್ಷಗಾನ ಪಠ್ಯದ 'ಪಂಚವಟಿ’ಯ ಪದವೊಂದು ನೆನಪಾಯಿತು. ಬೈಠಕ್ಗಳಲ್ಲಿ ನೆಬ್ಬೂರರ ಅತ್ಯಂತ ಹಿಟ್ ಹಾಡುಗಳಲ್ಲಿ ಅದೂ ಕೂಡ ಒಂದು. "ವನದ ಫಲಗಳ ಕೊಯ್ದು ಲಕ್ಷ್ಮಣ, ದಿನ ದಿನದಿ ತಾ ತಂದು ಕೊಡುತಿರೆ’ ಹೀಗೆ.. ಸಾಗುತ್ತದೆ. ಪಂಚವಟಿಯ ಕಾಡಿನಲ್ಲಿ ರಾಮನ ದಿನಗಳ ಪೀಠಿಕೆ ಹಾಡನ್ನು ನೆಬ್ಬೂರರು ಆರಂಭಿಸದರೆಂದರೆ, ಮದ್ದಳೆಯವರಷ್ಟೆ ಅಲ್ಲ, ಇಡೀ ಪ್ರೇಕ್ಷಕರೂ ತಮ್ಮನ್ನು ರಾಮಾಯಣದ ಯಕ್ಷ ಶ್ರುತಿಗೆ ಟ್ಯೂನ್ ಮಾಡಿಕೊಂಡು ಮುಳುಗಿ ಹೋಗುತ್ತಿದ್ದರು. ದೈಹಿಕವಾಗಿ ಯಾವತ್ತೂ ಕೃಷವಾಗಿದ್ದ ನೆಬ್ಬೂರರು, ಹಾಡಲು ಕುಳಿತರೆ ಆ ತಾರಸ್ಥಾಯಿ ಅದೆಲ್ಲಿಂದ ಬರುತ್ತಿತ್ತೊ ಎಂದು ಅಚ್ಚರಿಪಡಬೇಕು. ಚಳಿಗಾಲದ, ಇಬ್ಬನಿ ಇರಲಿ, ಬೆಳಗಿನ ಜಾವದ ಮಂಜಿನಲ್ಲೂ , ಉತ್ತರ ಕನ್ನಡದ ಅಘನಾಶಿನಿ ನದಿ ಕೊಳ್ಳದ ಈ ಹೆಮ್ಮರಕ್ಕೆ ಧ್ವನಿಯ ಸಮಸ್ಯೆಯೇ ಬರಲಿಲ್ಲ. ದೈವದತ್ತ ಸ್ವರ ಶಾರೀರದ ಭಾಗವತರು ಪರಿಪೂರ್ಣವಾಗಿ ಜೀವಿಸಿದರಲ್ಲದೆ, ಬದುಕಿನ ಅಂತ್ಯದಲ್ಲೂ ಪಂಚವಟಿಯ ಆ ಹಾಡನ್ನು ನೆನಪಿಸುವ ಸಾಂಕೇತಿಕ ಚರಣದಲ್ಲಿ ಜೀವನದ ಪದವನ್ನು ನಿಲ್ಲಿಸಿದ್ದಾರೆ ಅನ್ನಿಸಿತು.
ಇದೀಗ ಯಕ್ಷಗಾನಕ್ಕೆ ಗುಣಮಟ್ಟದ ಪ್ರೇಕ್ಷಕರು ಎಲ್ಲಿದ್ದಾರೆ ಎಂಬ ಕುತೂಹಲ ಇದ್ದೇ ಇದೆ. ನೆಟ್ನಲ್ಲಿ ಇರುವಷ್ಟು ಮದ್ದಳೆಯ ನಿಜ ನಿನಾದದ ಆಟದ ಬಯಲಿನಲ್ಲಿ ಕಾಣುತ್ತಿಲ್ಲ. ಟಿವಿ, ಕ್ರಿಕೆಟ್ಟು ಬಿಟ್ಟೇಳದ ಜನರು, ಕೊನೆಗೆ ಯಕ್ಷಗಾನಕ್ಕೆ ಬಂದರೂ, ಅಲ್ಲಿಯೇ ವಾಟ್ಸಪ್ನಲ್ಲಿ ಮಗ್ನರಾಗುವುದು ಇಂದಿನ ಪರಿಸ್ಥಿತಿ. ರಂಗಭೂಮಿ ಹಾಗೂ ಮುದ್ರಣ ಮಾಧ್ಯಮಕ್ಕೆ ಎದುರಾದ ಪರಿಸ್ಥಿತಿಯನ್ನೇ ಯಕ್ಷಗಾನವೂ ಎದುರಿಸುತ್ತಿದೆ. ಸಾಕ್ಷರರು ಹೆಚ್ಚಿರುವ ಕರಾವಳಿ ಜಿಲ್ಲೆಯ ಸಾಂಸ್ಕೃತಿಕ ಬಾಹುಳ್ಯದ ನಡುವೆ ಜನ ತಮ್ಮ ಸೀಮಿತ ಸಮಯವನ್ನು ಯಕ್ಷಗಾನಕ್ಕೂ ಕೊಟ್ಟಿದ್ದಾರೆ ನಿಜ.
ಆದರೆ ನೆಬ್ಬೂರರ ಏರುಗತಿಯ ಕಾಲದಲ್ಲಿ ಹೀಗೆಲ್ಲ ಇರಲಿಲ್ಲ.
ಕೆರೆಮನೆ ಮೇಳ ದಾಂಗುಡಿ ಕಾಲದಲ್ಲಿ ಥಿಯೇಟರ್ ಸಿನಿಮಾಗಳು ಮಾತ್ರ ಆಟ, ತಾಳಮದ್ದಳೆಗೆ ಸವಾಲಾಗಿದ್ದವು. ನಾಟಕದ ಪ್ರಭಾವವೊ ಏನೋ, ಆಗಲೇ ಯಕ್ಷಗಾನವು ಭಾಗವತರ ನಿಯಂತ್ರಣದಿಂದ ಆಚೆ ಹೋಗುತ್ತಿತ್ತು. ನೆಬ್ಬೂರರ ಬೇಡಿಕೆಯ ದಿನದಲ್ಲಿ ಯಕ್ಷಗಾನವು ಭಾಗವತ ಕೇಂದ್ರಿತವಾಗಿರಲಿಲ್ಲ. ಆದರೂ ಅವರ ಆಟವು ಅತಿ ಹೆಚ್ಚು ಸಾಂಪ್ರದಾಯಿಕ ಪ್ರೇಕ್ಷಕರನ್ನು ಸೆಳೆದಿದೆ. ಇದಕ್ಕೆ ಕಾರಣ ಎಂದರೆ ಕೆರೆಮನೆ ಮೇಳ ಎಂಬುದು ನಿರ್ವಿವಾದ.
ಇದೀಗ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಎಂ.ಎ. ಹೆಗಡೆ ಅವರ ಊರಿನ ಆಸು ಪಾಸು ಇರುವ ಶಿರಸಿ ತಾಲೂಕಿನ ಹಣಗಾರಿನ ನೆಬ್ಬೂರಿನಲ್ಲಿ ಹುಟ್ಟಿದರೂ, ಈ ‘ಮಾಣಿ’ ಹೊನ್ನಾವರ ತಾಲೂಕು ಇಡಗುಂಜಿ ಮಹಾ ಗಣಪತಿಯ ವಠಾರದಲ್ಲಿರುವ ಕೆರೆಮನೆಯಲ್ಲಿ ಬೆಳೆಯುತ್ತಾರೆ. ಅಷ್ಟೇ ಅಲ್ಲ ಯಕ್ಷಗಾನ ಅಕಾಡೆಮಿಯ ಮೊದಲ ಅಧ್ಯಕ್ಷರೂ ಆಗಿದ್ದ , ಪ್ರಸಿದ್ಧ ಕಲಾವಿದ ಕೆರೆಮನೆ ಶಂಭು ಹೆಗಡೆ ಜತೆ ಇಡೀ ವಿಶ್ವವನ್ನೇ ಸುತ್ತುವಷ್ಟರ ಮಟ್ಟಿಗೆ ಬೆಳೆದರು. ಶಂಭು ಅಭಿನಯ ಎಲ್ಲಿದೆಯೋ ಅಲ್ಲೆಲ್ಲ ನೆಬ್ಬೂರು ಭಾಗವತರು ಹೋಗಿ, ಪದ ಹೇಳಿದ್ದಾರೆ. ನೆಬ್ಬೂರು ಇಲ್ಲ ಎಂದರೆ ಬೇರೆಯವರ ಸೆಟ್ನಲ್ಲಿ ಶಂಭು ಪಾತ್ರ ಮಾಡುವ ಪ್ರಶ್ನೆಯೇ ಇರಲಿಲ್ಲ. ತಮ್ಮ ಅಭಿನಯ ಆವರ್ತಗಳಿಂದಲೂ ಖ್ಯಾತರಾದ ಶಂಭು ಅವರ ಸಾಧನೆಗೆ ನೆಬ್ಬೂರರೊಂದಿಗಿನ ರಂಗ ಸಂಬಂಧವೂ ಪ್ರಮುಖ ಕಾರಣ. ಎಲ್ಲಿ ಪದ ಎತ್ತಬೇಕು, ಎಷ್ಟು ಹಾಡಬೇಕು ಎಂಬ ವಿಷಯದಲ್ಲಿ ಇಬ್ಬರ ಆಲೋಚನೆ ಯಾವತ್ತೂ ತಾಳ ತಪ್ಪಿರಲಿಲ್ಲ.
ಚಿಕ್ಕಂದಿನಿಂದಲೂ ಕೆರೆಮನೆ ಕಲಾವಿದರ ವಾತಾವರಣದಲ್ಲೇ ಬೆಳೆದ ನಾರಾಯಣ ಭಾಗವತರು ಯಾವತ್ತೂ ನಿಯಂತ್ರಣ ತಪ್ಪುವ ಪ್ರದರ್ಶನಗಳಿಗೆ ಸಾಕ್ಷಿಯಾಗುವುದಕ್ಕೆ ಸಾಧ್ಯವಿರಲಿಲ್ಲ.
ದಶಕದ ಹಿಂದೆ ನಿಧನರಾದ ಶಂಭು ಹೆಗಡೆ ಹೋದ ನಂತರ, ನೆಬ್ಬೂರರೂ ಹಾಡು ನಿಲ್ಲಿಸಬಹುದು ಎಂದು ಅಂದುಕೊಂಡಿದ್ದರು. ಪುಣ್ಯಕ್ಕೆ ಹಾಗಾಗಲಿಲ್ಲ. ಕಲಗದ್ದೆ ವಿನಾಯಕ ಮತ್ತಿತರ ಮೇಳದಲ್ಲಿ ಅದೇ ವಾತಾವರಣವನ್ನು ಕಟ್ಟಿಕೊಡುವಲ್ಲಿ ಯಶಸ್ವಿ ಆಗಿದ್ದರು.
ಕೆರೆಮನೆ ಕುಟುಂಬಕ್ಕೆ ನೆಬ್ಬೂರರು ಹೇಗಿದ್ದರು ಎಂದರೆ, ಶಂಭು ಸ್ಮರಣೆಯ ‘ಕಲ್ಪದ ಕಲಾವಿದ’ ಪುಸ್ತಕವನ್ನು ಮಂಗಳೂರಿನಲ್ಲಿ, ಧರ್ಮದರ್ಶಿ ಹರಿಕೃಷ್ಣ ಪುನರೂರು ನೇತೃತ್ವದಲ್ಲಿ ನಾವೆಲ್ಲ ಸೇರಿ ತರುವಾಗ ಅವರು ಹೇಳಿಕೊಂಡಿದ್ದು ಅವರ ವ್ಯಕ್ತಿತ್ವವನ್ನು ಕಟ್ಟಿ ಕೊಡುತ್ತದೆ. ‘‘ ನಾನು ಕೆರೆಮನೆ ಮನೆತನದ ಎಲ್ಲರಿಗೂ ಪದ ಹೇಳಿದವನು. ಶಿವರಾಮ ಹೆಗಡೆ ಕಾಲದಲ್ಲಿ, ಅವರ ಕೃಪೆಯಿಂದಲೇ ಮೇಳಕ್ಕೆ ಹೋಗಿ, ಭಯ ಆತಂಕದಿಂದ ಅವರನ್ನು ಕುಣಿಸಿದರೆ, ನಂತರ ಅವರ ಮಗ ಶಂಭು ಹೆಗಡೆಯವರನ್ನು ಪ್ರೀತಿ ವಿಶ್ವಾಸದಿಂದ ಕುಣಿಸಿದ್ದೇನೆ. ನಂತರ ಶಂಭು ಮಗ ಶಿವಾನಂದ ಹಾಗೂ ಮೊಮ್ಮಗ ಶ್ರೀಧರ ಹೆಗಡೆಗೂ ಪದ್ಯ ಹೇಳಿ ಕುಣಿಸಿದ್ದೇನೆ’’ ಎಂದಿದ್ದಾರೆ. ವಿಶೇಷ ಎಂದರೆ, ಕೆರೆಮನೆ ಮನೆತನದ ಎಲ್ಲರಿಗೆ ನೆಬ್ಬೂರು ಪದ ಹೇಳಿದ್ದಾರೆ. ಸುಮಾರು 53 ವರ್ಷಗಳ ಕಾಲ ಯಕ್ಷಗಾನ ಜಗತ್ತಿನಲ್ಲಿ ಶಂಭು ಹೆಗಡೆ ಮೇಳದ ಜತೆಯಾಗಿ ಇದ್ದ ನೆಬ್ಬೂರು, ಶಂಭು ನಿಧನದ ನಂತರ ಅವರ ಮಕ್ಕಳಿಗೆ ಧೈರ್ಯ ತುಂಬಿದ ಹಿರಿಯ ವ್ಯಕ್ತಿ. ಅಷ್ಟೇ ಅಲ್ಲ ಚಿಟ್ಟಾಣಿ, ಕೊಂಡದಕುಳಿ, ಯಾಜಿ, ಜಲವಳ್ಳಿ ಸೇರಿದಂತೆ ಬಹುತೇಕ ಬಳಗಕ್ಕೂ ಇವರು ಹಿನ್ನೆಲೆಯ ಧ್ವನಿಯಾಗಿ ಮುಮ್ಮೇಳವನ್ನು ಆಡಿಸಿದ್ದಾರೆ.
ಮೇಲೆ ಹೇಳಿದಂತೆ ಕೃಶ ದೇಹಿ ನಾರಾಯಣ ಭಾಗವತರು, ಹಿಮ್ಮೇಳದಲ್ಲಿ ಪೇಟ ತೊಟ್ಟು ಭಾಗವತಿಕೆಗೆ ಕುಳಿತರೆಂದರೆ, ಅವರ ಸ್ವರ ಶಾರೀರಕ್ಕೆ ಇದ್ದ ಬಲವೇ ಬೇರೆ. ಗಂಟಲಿನ ನರಗಳು ಹಾಡುವಾಗ ಬಹುತೇಕ ಭಾಗವತರಂತೆ ಯಾವತ್ತೂ ಉಬ್ಬಿಯೇ ಇರುತ್ತಿತ್ತು. ಒಂದು ರೀತಿಯ ಹೆಣ್ಣು ಧ್ವನಿ ಇದ್ದರೂ, ಏರು ಸ್ವರದಲ್ಲಿ ಯಾವತ್ತೂ ಕೀರಲು ಆಗದೆ, ಮಾಗಿದ ಕಂಠದಲ್ಲಿ ಸಾತ್ವಿಕ ಶಕ್ತಿಯಾಗಿ ಗಮನ ಸೆಳೆದಿದ್ದಾರೆ. ಸುಭದ್ರಾ ಕಲ್ಯಾಣ, ಶ್ರೀ ಕೃಷ್ಣ ಸಂಧಾನ, ಕರ್ಣಪರ್ವ, ರಾಮ ನಿರ್ಯಾಣ ಹೀಗೆ ಅದೆಷ್ಟೋ ದಶಾವತಾರ ಆಟದಲ್ಲಿ ತಮ್ಮ ಧ್ವನಿಯನ್ನು ಅಚ್ಚು ಹೊತ್ತಿ ಹೋಗಿದ್ದಾರೆ. ಇಂದಿನ ಡಿಜಿಟಲ್ ಜಗತ್ತಿನಲ್ಲಿ ಪ್ರತ್ಯಕ್ಷಕ್ಕಿಂತ ಪರೋಕ್ಷ ಪ್ರೇಕ್ಷಕರೇ ಇರುವ ಯಕ್ಷಗಾನವು ನೆಬ್ಬೂರು ನಾರಾಯಣ ಭಾಗವತರಂತೆ ಹಿರಿಯರು ಹಾಕಿಕೊಟ್ಟ ಸಾಂಪ್ರದಾಯಿಕ ನೆಲೆಯಲ್ಲೇ ತನ್ನನ್ನು ತಾನು ಕಂಡುಕೊಳ್ಳಬೇಕಾಗಿದೆ.
ಬೆಳಗ್ಗೆ ಹೂ ಕೊಯ್ದು ತರುವಾಗ ನೆಬ್ಬೂರು ಭಾಗವತರು ಮೃತರಾದ ಸುದ್ದಿ ಓದಿದಾಗ ಪ್ರಸಿದ್ಧ ಯಕ್ಷಗಾನ ಪಠ್ಯದ 'ಪಂಚವಟಿ’ಯ ಪದವೊಂದು ನೆನಪಾಯಿತು. ಬೈಠಕ್ಗಳಲ್ಲಿ ನೆಬ್ಬೂರರ ಅತ್ಯಂತ ಹಿಟ್ ಹಾಡುಗಳಲ್ಲಿ ಅದೂ ಕೂಡ ಒಂದು. "ವನದ ಫಲಗಳ ಕೊಯ್ದು ಲಕ್ಷ್ಮಣ, ದಿನ ದಿನದಿ ತಾ ತಂದು ಕೊಡುತಿರೆ’ ಹೀಗೆ.. ಸಾಗುತ್ತದೆ. ಪಂಚವಟಿಯ ಕಾಡಿನಲ್ಲಿ ರಾಮನ ದಿನಗಳ ಪೀಠಿಕೆ ಹಾಡನ್ನು ನೆಬ್ಬೂರರು ಆರಂಭಿಸದರೆಂದರೆ, ಮದ್ದಳೆಯವರಷ್ಟೆ ಅಲ್ಲ, ಇಡೀ ಪ್ರೇಕ್ಷಕರೂ ತಮ್ಮನ್ನು ರಾಮಾಯಣದ ಯಕ್ಷ ಶ್ರುತಿಗೆ ಟ್ಯೂನ್ ಮಾಡಿಕೊಂಡು ಮುಳುಗಿ ಹೋಗುತ್ತಿದ್ದರು. ದೈಹಿಕವಾಗಿ ಯಾವತ್ತೂ ಕೃಷವಾಗಿದ್ದ ನೆಬ್ಬೂರರು, ಹಾಡಲು ಕುಳಿತರೆ ಆ ತಾರಸ್ಥಾಯಿ ಅದೆಲ್ಲಿಂದ ಬರುತ್ತಿತ್ತೊ ಎಂದು ಅಚ್ಚರಿಪಡಬೇಕು. ಚಳಿಗಾಲದ, ಇಬ್ಬನಿ ಇರಲಿ, ಬೆಳಗಿನ ಜಾವದ ಮಂಜಿನಲ್ಲೂ , ಉತ್ತರ ಕನ್ನಡದ ಅಘನಾಶಿನಿ ನದಿ ಕೊಳ್ಳದ ಈ ಹೆಮ್ಮರಕ್ಕೆ ಧ್ವನಿಯ ಸಮಸ್ಯೆಯೇ ಬರಲಿಲ್ಲ. ದೈವದತ್ತ ಸ್ವರ ಶಾರೀರದ ಭಾಗವತರು ಪರಿಪೂರ್ಣವಾಗಿ ಜೀವಿಸಿದರಲ್ಲದೆ, ಬದುಕಿನ ಅಂತ್ಯದಲ್ಲೂ ಪಂಚವಟಿಯ ಆ ಹಾಡನ್ನು ನೆನಪಿಸುವ ಸಾಂಕೇತಿಕ ಚರಣದಲ್ಲಿ ಜೀವನದ ಪದವನ್ನು ನಿಲ್ಲಿಸಿದ್ದಾರೆ ಅನ್ನಿಸಿತು.
ಇದೀಗ ಯಕ್ಷಗಾನಕ್ಕೆ ಗುಣಮಟ್ಟದ ಪ್ರೇಕ್ಷಕರು ಎಲ್ಲಿದ್ದಾರೆ ಎಂಬ ಕುತೂಹಲ ಇದ್ದೇ ಇದೆ. ನೆಟ್ನಲ್ಲಿ ಇರುವಷ್ಟು ಮದ್ದಳೆಯ ನಿಜ ನಿನಾದದ ಆಟದ ಬಯಲಿನಲ್ಲಿ ಕಾಣುತ್ತಿಲ್ಲ. ಟಿವಿ, ಕ್ರಿಕೆಟ್ಟು ಬಿಟ್ಟೇಳದ ಜನರು, ಕೊನೆಗೆ ಯಕ್ಷಗಾನಕ್ಕೆ ಬಂದರೂ, ಅಲ್ಲಿಯೇ ವಾಟ್ಸಪ್ನಲ್ಲಿ ಮಗ್ನರಾಗುವುದು ಇಂದಿನ ಪರಿಸ್ಥಿತಿ. ರಂಗಭೂಮಿ ಹಾಗೂ ಮುದ್ರಣ ಮಾಧ್ಯಮಕ್ಕೆ ಎದುರಾದ ಪರಿಸ್ಥಿತಿಯನ್ನೇ ಯಕ್ಷಗಾನವೂ ಎದುರಿಸುತ್ತಿದೆ. ಸಾಕ್ಷರರು ಹೆಚ್ಚಿರುವ ಕರಾವಳಿ ಜಿಲ್ಲೆಯ ಸಾಂಸ್ಕೃತಿಕ ಬಾಹುಳ್ಯದ ನಡುವೆ ಜನ ತಮ್ಮ ಸೀಮಿತ ಸಮಯವನ್ನು ಯಕ್ಷಗಾನಕ್ಕೂ ಕೊಟ್ಟಿದ್ದಾರೆ ನಿಜ.
ಆದರೆ ನೆಬ್ಬೂರರ ಏರುಗತಿಯ ಕಾಲದಲ್ಲಿ ಹೀಗೆಲ್ಲ ಇರಲಿಲ್ಲ.
ಕೆರೆಮನೆ ಮೇಳ ದಾಂಗುಡಿ ಕಾಲದಲ್ಲಿ ಥಿಯೇಟರ್ ಸಿನಿಮಾಗಳು ಮಾತ್ರ ಆಟ, ತಾಳಮದ್ದಳೆಗೆ ಸವಾಲಾಗಿದ್ದವು. ನಾಟಕದ ಪ್ರಭಾವವೊ ಏನೋ, ಆಗಲೇ ಯಕ್ಷಗಾನವು ಭಾಗವತರ ನಿಯಂತ್ರಣದಿಂದ ಆಚೆ ಹೋಗುತ್ತಿತ್ತು. ನೆಬ್ಬೂರರ ಬೇಡಿಕೆಯ ದಿನದಲ್ಲಿ ಯಕ್ಷಗಾನವು ಭಾಗವತ ಕೇಂದ್ರಿತವಾಗಿರಲಿಲ್ಲ. ಆದರೂ ಅವರ ಆಟವು ಅತಿ ಹೆಚ್ಚು ಸಾಂಪ್ರದಾಯಿಕ ಪ್ರೇಕ್ಷಕರನ್ನು ಸೆಳೆದಿದೆ. ಇದಕ್ಕೆ ಕಾರಣ ಎಂದರೆ ಕೆರೆಮನೆ ಮೇಳ ಎಂಬುದು ನಿರ್ವಿವಾದ.
ಇದೀಗ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಎಂ.ಎ. ಹೆಗಡೆ ಅವರ ಊರಿನ ಆಸು ಪಾಸು ಇರುವ ಶಿರಸಿ ತಾಲೂಕಿನ ಹಣಗಾರಿನ ನೆಬ್ಬೂರಿನಲ್ಲಿ ಹುಟ್ಟಿದರೂ, ಈ ‘ಮಾಣಿ’ ಹೊನ್ನಾವರ ತಾಲೂಕು ಇಡಗುಂಜಿ ಮಹಾ ಗಣಪತಿಯ ವಠಾರದಲ್ಲಿರುವ ಕೆರೆಮನೆಯಲ್ಲಿ ಬೆಳೆಯುತ್ತಾರೆ. ಅಷ್ಟೇ ಅಲ್ಲ ಯಕ್ಷಗಾನ ಅಕಾಡೆಮಿಯ ಮೊದಲ ಅಧ್ಯಕ್ಷರೂ ಆಗಿದ್ದ , ಪ್ರಸಿದ್ಧ ಕಲಾವಿದ ಕೆರೆಮನೆ ಶಂಭು ಹೆಗಡೆ ಜತೆ ಇಡೀ ವಿಶ್ವವನ್ನೇ ಸುತ್ತುವಷ್ಟರ ಮಟ್ಟಿಗೆ ಬೆಳೆದರು. ಶಂಭು ಅಭಿನಯ ಎಲ್ಲಿದೆಯೋ ಅಲ್ಲೆಲ್ಲ ನೆಬ್ಬೂರು ಭಾಗವತರು ಹೋಗಿ, ಪದ ಹೇಳಿದ್ದಾರೆ. ನೆಬ್ಬೂರು ಇಲ್ಲ ಎಂದರೆ ಬೇರೆಯವರ ಸೆಟ್ನಲ್ಲಿ ಶಂಭು ಪಾತ್ರ ಮಾಡುವ ಪ್ರಶ್ನೆಯೇ ಇರಲಿಲ್ಲ. ತಮ್ಮ ಅಭಿನಯ ಆವರ್ತಗಳಿಂದಲೂ ಖ್ಯಾತರಾದ ಶಂಭು ಅವರ ಸಾಧನೆಗೆ ನೆಬ್ಬೂರರೊಂದಿಗಿನ ರಂಗ ಸಂಬಂಧವೂ ಪ್ರಮುಖ ಕಾರಣ. ಎಲ್ಲಿ ಪದ ಎತ್ತಬೇಕು, ಎಷ್ಟು ಹಾಡಬೇಕು ಎಂಬ ವಿಷಯದಲ್ಲಿ ಇಬ್ಬರ ಆಲೋಚನೆ ಯಾವತ್ತೂ ತಾಳ ತಪ್ಪಿರಲಿಲ್ಲ.
ಚಿಕ್ಕಂದಿನಿಂದಲೂ ಕೆರೆಮನೆ ಕಲಾವಿದರ ವಾತಾವರಣದಲ್ಲೇ ಬೆಳೆದ ನಾರಾಯಣ ಭಾಗವತರು ಯಾವತ್ತೂ ನಿಯಂತ್ರಣ ತಪ್ಪುವ ಪ್ರದರ್ಶನಗಳಿಗೆ ಸಾಕ್ಷಿಯಾಗುವುದಕ್ಕೆ ಸಾಧ್ಯವಿರಲಿಲ್ಲ.
ದಶಕದ ಹಿಂದೆ ನಿಧನರಾದ ಶಂಭು ಹೆಗಡೆ ಹೋದ ನಂತರ, ನೆಬ್ಬೂರರೂ ಹಾಡು ನಿಲ್ಲಿಸಬಹುದು ಎಂದು ಅಂದುಕೊಂಡಿದ್ದರು. ಪುಣ್ಯಕ್ಕೆ ಹಾಗಾಗಲಿಲ್ಲ. ಕಲಗದ್ದೆ ವಿನಾಯಕ ಮತ್ತಿತರ ಮೇಳದಲ್ಲಿ ಅದೇ ವಾತಾವರಣವನ್ನು ಕಟ್ಟಿಕೊಡುವಲ್ಲಿ ಯಶಸ್ವಿ ಆಗಿದ್ದರು.
ಕೆರೆಮನೆ ಕುಟುಂಬಕ್ಕೆ ನೆಬ್ಬೂರರು ಹೇಗಿದ್ದರು ಎಂದರೆ, ಶಂಭು ಸ್ಮರಣೆಯ ‘ಕಲ್ಪದ ಕಲಾವಿದ’ ಪುಸ್ತಕವನ್ನು ಮಂಗಳೂರಿನಲ್ಲಿ, ಧರ್ಮದರ್ಶಿ ಹರಿಕೃಷ್ಣ ಪುನರೂರು ನೇತೃತ್ವದಲ್ಲಿ ನಾವೆಲ್ಲ ಸೇರಿ ತರುವಾಗ ಅವರು ಹೇಳಿಕೊಂಡಿದ್ದು ಅವರ ವ್ಯಕ್ತಿತ್ವವನ್ನು ಕಟ್ಟಿ ಕೊಡುತ್ತದೆ. ‘‘ ನಾನು ಕೆರೆಮನೆ ಮನೆತನದ ಎಲ್ಲರಿಗೂ ಪದ ಹೇಳಿದವನು. ಶಿವರಾಮ ಹೆಗಡೆ ಕಾಲದಲ್ಲಿ, ಅವರ ಕೃಪೆಯಿಂದಲೇ ಮೇಳಕ್ಕೆ ಹೋಗಿ, ಭಯ ಆತಂಕದಿಂದ ಅವರನ್ನು ಕುಣಿಸಿದರೆ, ನಂತರ ಅವರ ಮಗ ಶಂಭು ಹೆಗಡೆಯವರನ್ನು ಪ್ರೀತಿ ವಿಶ್ವಾಸದಿಂದ ಕುಣಿಸಿದ್ದೇನೆ. ನಂತರ ಶಂಭು ಮಗ ಶಿವಾನಂದ ಹಾಗೂ ಮೊಮ್ಮಗ ಶ್ರೀಧರ ಹೆಗಡೆಗೂ ಪದ್ಯ ಹೇಳಿ ಕುಣಿಸಿದ್ದೇನೆ’’ ಎಂದಿದ್ದಾರೆ. ವಿಶೇಷ ಎಂದರೆ, ಕೆರೆಮನೆ ಮನೆತನದ ಎಲ್ಲರಿಗೆ ನೆಬ್ಬೂರು ಪದ ಹೇಳಿದ್ದಾರೆ. ಸುಮಾರು 53 ವರ್ಷಗಳ ಕಾಲ ಯಕ್ಷಗಾನ ಜಗತ್ತಿನಲ್ಲಿ ಶಂಭು ಹೆಗಡೆ ಮೇಳದ ಜತೆಯಾಗಿ ಇದ್ದ ನೆಬ್ಬೂರು, ಶಂಭು ನಿಧನದ ನಂತರ ಅವರ ಮಕ್ಕಳಿಗೆ ಧೈರ್ಯ ತುಂಬಿದ ಹಿರಿಯ ವ್ಯಕ್ತಿ. ಅಷ್ಟೇ ಅಲ್ಲ ಚಿಟ್ಟಾಣಿ, ಕೊಂಡದಕುಳಿ, ಯಾಜಿ, ಜಲವಳ್ಳಿ ಸೇರಿದಂತೆ ಬಹುತೇಕ ಬಳಗಕ್ಕೂ ಇವರು ಹಿನ್ನೆಲೆಯ ಧ್ವನಿಯಾಗಿ ಮುಮ್ಮೇಳವನ್ನು ಆಡಿಸಿದ್ದಾರೆ.
ಮೇಲೆ ಹೇಳಿದಂತೆ ಕೃಶ ದೇಹಿ ನಾರಾಯಣ ಭಾಗವತರು, ಹಿಮ್ಮೇಳದಲ್ಲಿ ಪೇಟ ತೊಟ್ಟು ಭಾಗವತಿಕೆಗೆ ಕುಳಿತರೆಂದರೆ, ಅವರ ಸ್ವರ ಶಾರೀರಕ್ಕೆ ಇದ್ದ ಬಲವೇ ಬೇರೆ. ಗಂಟಲಿನ ನರಗಳು ಹಾಡುವಾಗ ಬಹುತೇಕ ಭಾಗವತರಂತೆ ಯಾವತ್ತೂ ಉಬ್ಬಿಯೇ ಇರುತ್ತಿತ್ತು. ಒಂದು ರೀತಿಯ ಹೆಣ್ಣು ಧ್ವನಿ ಇದ್ದರೂ, ಏರು ಸ್ವರದಲ್ಲಿ ಯಾವತ್ತೂ ಕೀರಲು ಆಗದೆ, ಮಾಗಿದ ಕಂಠದಲ್ಲಿ ಸಾತ್ವಿಕ ಶಕ್ತಿಯಾಗಿ ಗಮನ ಸೆಳೆದಿದ್ದಾರೆ. ಸುಭದ್ರಾ ಕಲ್ಯಾಣ, ಶ್ರೀ ಕೃಷ್ಣ ಸಂಧಾನ, ಕರ್ಣಪರ್ವ, ರಾಮ ನಿರ್ಯಾಣ ಹೀಗೆ ಅದೆಷ್ಟೋ ದಶಾವತಾರ ಆಟದಲ್ಲಿ ತಮ್ಮ ಧ್ವನಿಯನ್ನು ಅಚ್ಚು ಹೊತ್ತಿ ಹೋಗಿದ್ದಾರೆ. ಇಂದಿನ ಡಿಜಿಟಲ್ ಜಗತ್ತಿನಲ್ಲಿ ಪ್ರತ್ಯಕ್ಷಕ್ಕಿಂತ ಪರೋಕ್ಷ ಪ್ರೇಕ್ಷಕರೇ ಇರುವ ಯಕ್ಷಗಾನವು ನೆಬ್ಬೂರು ನಾರಾಯಣ ಭಾಗವತರಂತೆ ಹಿರಿಯರು ಹಾಕಿಕೊಟ್ಟ ಸಾಂಪ್ರದಾಯಿಕ ನೆಲೆಯಲ್ಲೇ ತನ್ನನ್ನು ತಾನು ಕಂಡುಕೊಳ್ಳಬೇಕಾಗಿದೆ.