ಆ್ಯಪ್ನಗರ

ರಂಗದ ಮೇಲೆ ಸಿಂಹಾಚಲಂ ಸಂಪಿಗೆ

ಕಥೆಗಾರ ವಸುಧೇಂದ್ರ ಬರೆದಿರುವ ಸಿಂಹಾಚಲಂ ಸಂಪಿಗೆ ಇದೇ ಮಂಗಳವಾರ ಬೆಂಗಳೂರಿನಲ್ಲಿ ಪ್ರದರ್ಶನಗೊಳ್ಳಲಿದೆ...

Vijaya Karnataka 23 Jun 2018, 5:00 am
ಕಥೆಗಾರ ವಸುಧೇಂದ್ರ ಬರೆದಿರುವ ಸಿಂಹಾಚಲಂ ಸಂಪಿಗೆ ಇದೇ ಮಂಗಳವಾರ ಬೆಂಗಳೂರಿನಲ್ಲಿ ಪ್ರದರ್ಶನಗೊಳ್ಳಲಿದೆ.
Vijaya Karnataka Web 5S2A1073


---

ಬೆಂಗಳೂರಿನ ಹವ್ಯಾಸಿ ರಂಗ ತಂಡಗಳಲ್ಲಿ ಒಂದಾದ ಯುವಶ್ರೀ ವತಿಯಿಂದ ಇದೇ ಜೂ. 26ಕ್ಕೆ ವಸುಧೇಂದ್ರ ಅವರ ಸಿಂಹಾಚಲಂ ಸಂಪಿಗೆ ಎಂಬ ನಾಟಕ ಪ್ರದರ್ಶಗೊಳ್ಳುತ್ತಿದೆ.

ಅಡುಗೆಗೆ ಒಗ್ಗರಣೆ ಹೇಗೆ ಸ್ವಾದ ಹೆಚ್ಚಿಸಿಕೊಳ್ಳುತ್ತದೋ ಜಾಗೆ ಬದಿಲೊಗೆ ಸಣ್ಣ ಸಣ್ಣ ಭಾವನೆಗಳು ಆಸೆಗಳು, ಕನಸುಗಳು,ಹತಾಶೆಗಳು ಕೂಡಾ ಸ್ವಾದ ನೀಡುತ್ತದೆ. ಅಂತಹ ಕಥೆಯನ್ನಿಟ್ಟುಕೊಂಡು, ಈ ಸಿಂಹಾಚಲಂ ಸಂಪಿಗೆಯ ಮೂಲಕ ರಂಗ ರೂಪಕ್ಕೆ ತರಲಾಗಿದೆ.

ಒಬ್ಬ ಮನುಷ್ಯನ ಜೀವನ ಶೈಲಿ, ಕಟ್ಟು ಕಥೆಯಂತೆ ಕಾಣವು ಒಂದು ಘಟನೆ ಬಾಲ್ಯದ ಒಂದು ತೀರದ ಆಸೆ, ಬದುಕು ಕಟ್ಟುವ ರೀತಿ ಎಲ್ಲವೂ ಈ ನಾಟಕದಲ್ಲಿದೆ. ಸಾಮಾನ್ಯ ವ್ಯಕ್ತಿಯ ಬದುಕಿನ ಸೂಕ್ಷ್ಮಗಳನ್ನು ಎತ್ತಿ ಹಿಡಿದು ಗೌರವಿಸುವ ಪ್ರಯತ್ನ. ನೆಮ್ಮದಿಯ ಒಂದು ಜೀವನವೂ ಒಂದು ಸಾಧನೆ ಎಂದು ಬಿಂಬಿಸುವ ಪ್ರಯತ್ನವೇ ಈ ಸಿಂಹಾಚಲಂ ಸಂಪಿಗೆಯಾಗಿದೆ.

ಕಳೆದ ಒಂದು ದಶಕದಿಂದ ರಂಗಭೂಮಿಯಲ್ಲಿ ಸಕ್ರಿಯರಾಗಿರುವ ಶಂಕರ್‌ ಗಣೇಶ್‌ ಈ ನಾಟಕವನ್ನು ನಿರ್ದೇಶನ ಮಾಡಿದ್ದಾರೆ. ಪೊಲಿ ಕಿಟ್ಟಿ, ರೋಮಿಯೋ ಲವ್ಸ್‌ ಅನಾರ್ಕಲಿ ಮತ್ತು ಮಾವಿನ ಗುಡಿ ಕಾಲೋನಿ ಇವರು ನಿರ್ದೇಶನ ಮಾಡಿರುವ ಹಿಂದಿನ ನಾಟಕಗಳು.

ಸಿಂಹಾಚಲಂ ಸಂಪಿಗೆ ನಾಟಕ ಜೂನ್‌ 26ರಂದು ಬೆಂಗಳೂರಿನ ರಂಗಶಂಕರದಲ್ಲಿ ಪ್ರದರ್ಶನಗೊಳ್ಳಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ