ವಿಜಯಕರ್ನಾಟಕ ಸಮಗ್ರ ಸುದ್ದಿ ಯೊಂದಿಗೆ ನಾಟಕ, ಕಲೆಗಳಿಗೂ ಪ್ರೋತ್ಸಾಹ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ವಿಜಯಕರ್ನಾಟಕ ಜೂನ್ 10, 2016ರಂದು ಇಸ್ಕಾನ್ನ ಮಲ್ಟಿಮೀಡಿಯಾ ಆಡಿಟೋರಿಯಂನಲ್ಲಿ 'ನಾದ ವರ್ಣ ಸಂಜೆ' ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ನಾದ ವರ್ಣ ಸಂಜೆ ಕಾರ್ಯಕ್ರಮದಲ್ಲಿ ವಿದ್ವಾನ್ ಎಸ್. ಶಂಕರ್ ಹಾಡುಗಳನ್ನು ಹಾಡಿ ನೆರೆದ ಸಭಿಕರನ್ನು ರಂಜಿಸಿದರು. ತಬಲ ವಿದ್ವಾನ್ ಆನೂರು ಅನಂತಕೃಷ್ಣ ಶರ್ಮ ಮತ್ತವರ ತಂಡ ತಾಳವಾದನದಿಂದ ಜನರ ಗಮನ ಸೆಳೆಯಿತು. ಅಂತರಾಷ್ಟ್ರೀಯ ಖ್ಯಾತಿಯ ಕುಂಚ ಕಲಾವಿದ ವಿಲಾಸ್ ಕಾಮತ್ ತ್ವರಿತವಾಗಿ ಹಾಡಿಗೆ ತಕ್ಕಂತೆ ಕ್ಯಾನ್ವಾಸ್ ಮೇಲೆ ಚಿತ್ರವನ್ನು ಬಿಡಿಸುತ್ತಾ ಸಭಿಕರಲ್ಲಿ ಮಿಂಚಿನ ಸಂಚಲನ ಮೂಡಿಸಿದರು. ಕಾರ್ಯಕ್ರಮದಲ್ಲಿ ಇಸ್ಕಾನ್ನ ಅಕ್ಷಯ ಪಾತ್ರೆ ಸಮೂಹದ ಮುಖ್ಯಸ್ಥ ಶ್ರೀರಾಮ ಕೃಷ್ಣಧಾಮ, ನವೀನ್ ನೀರ್ದಾಸ್, ಭಾರತೀಯ ವಿದ್ಯಾಭವನದ ನಿರ್ದೇಶಕ ಬಿ.ಎನ್.ಸುರೇಶ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಇಸ್ಕಾನ್ ಬೆಂಗಳೂರು, ಎಲ್ಐಸಿ ಇಂಡಿಯಾ, ಅಲೈಸ್ ಕಾರ್ಯಕ್ರಮವನ್ನು ಪ್ರಾಯೋಜಿಸಿದ್ದವು. ಇ-ನಾರದ.ಕಾಮ್ ವೆಬ್ಕ್ಯಾಸ್ಟಿಂಗ್ ಪ್ರಸಾರಕ್ಕೆ ನೆರವು ನೀಡಿತು.
ನಾದ ವರ್ಣ ಸಂಜೆ: ಶ್ರೀಕೃಷ್ಣ ಸನ್ನಿಧಿಯಲ್ಲಿ ಸಂಗೀತ ಲಹರಿ
ವಿಜಯಕರ್ನಾಟಕ ಸಮಗ್ರ ಸುದ್ದಿ ಯೊಂದಿಗೆ ನಾಟಕ, ಕಲೆಗಳಿಗೂ ಪ್ರೋತ್ಸಾಹ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ವಿಜಯಕರ್ನಾಟಕ ಜೂನ್ 10, 2016ರಂದು ಇಸ್ಕಾನ್ನ ಮಲ್ಟಿಮೀಡಿಯಾ ಆಡಿಟೋರಿಯಂನಲ್ಲಿ 'ನಾದ ವರ್ಣ ಸಂಜೆ' ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
Vijaya Karnataka Web 14 Jun 2016, 4:00 am