ಆ್ಯಪ್ನಗರ

ಎಜುಕೇಷನ್‌ ಬಿಟ್ಸ್‌: ಪರೀಕ್ಷೆಯಲ್ಲಿ ಅಂತರ್ಜಾಲ

ಬ್ರಿಟನ್‌ನ ನ್ಯೂಕ್ಯಾಸಲ್‌ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್‌ ಆಗಿರುವ ಮಿತ್ರಾ, 1999ರಲ್ಲಿ ಸ್ವತಃ ಇಂತಹ ಪ್ರಯೋಗವನ್ನು ಆರಂಭಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.

Vijaya Karnataka 24 Dec 2018, 9:47 am
ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಭಯ ಹೋಗಲಾಡಿಸಿ ಈ ಮೂಲಕ ಅವರು ಖಿನ್ನತೆಗೆ ಒಳಗಾಗುವುದನ್ನು ತಪ್ಪಿಸಲು ಪರೀಕ್ಷೆ ಸಂದರ್ಭದಲ್ಲಿ ಅಂತರ್ಜಾಲ ಬಳಕೆಗೆ ಕ್ರಮ ಕೈಗೊಳ್ಳಬೇಕು ಎಂದು ಖ್ಯಾತ ಶಿಕ್ಷಣ ತಜ್ಞ ಹಾಗೂ ಟಿಇಡಿ ಪ್ರಶಸ್ತಿ ವಿಜೇತ ಸುಗತ ಮಿತ್ರಾ ಸರಕಾರವನ್ನು ಆಗ್ರಹಿಸಿದ್ದಾರೆ.
Vijaya Karnataka Web exam


ಬ್ರಿಟನ್‌ನ ನ್ಯೂಕ್ಯಾಸಲ್‌ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್‌ ಆಗಿರುವ ಮಿತ್ರಾ, 1999ರಲ್ಲಿ ಸ್ವತಃ ಇಂತಹ ಪ್ರಯೋಗವನ್ನು ಆರಂಭಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಅಂತರ್ಜಾಲದ ಸಮರ್ಪಕ ಬಳಕೆಯಿಂದ ವಿದ್ಯಾರ್ಥಿಗಳು ಸುಲಭವಾಗಿ ಕಲಿಯಲು ಸಾಧ್ಯವಾಗುತ್ತದೆ ಎಂದವರು ಅಭಿಪ್ರಾಯ ಪಟ್ಟಿದ್ದಾರೆ. ಈಗಾಗಲೇ ವಿದೇಶಗಳಲ್ಲಿ ಇಂತಹ ಪ್ರಯೋಗಗಳನ್ನು ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಇನ್ನಷ್ಟು ಸಂಶೋಧನೆ ಮತ್ತು ವಿಶ್ಲೇಷಣೆ ಅಗತ್ಯ ಎಂದವರು ಹೇಳಿದ್ದಾರೆ.

ಪೋಷಕರೇ ಎಚ್ಚರ

ಬೆಂಗಳೂರಿನ ಶೇ. 30ರಷ್ಟು ಖಾಸಗಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಲ್ಲಿ ಹಲ್ಲಿನ ಸಮಸ್ಯೆ ಇರುವುದು ಅಧ್ಯಯನದಿಂದ ಕಂಡು ಬಂದಿದೆ. ಪೋಷಕರು ಮಕ್ಕಳ ಹಾಲು ಹಲ್ಲಿನ ಕುರಿತು ಗಮನ ಹರಿಸದಿರುವುದು ಇದಕ್ಕೆ ಕಾರಣ ಎಂದು ಸಂಶೋಧನೆ ತಿಳಿಸಿದೆ. ಹಾಲು ಹಲ್ಲುಗಳ ಹುಳುಕಿಗೆ ಸರಿಯಾದ ಚಿಕಿತ್ಸೆ ಕೊಡಿಸದಿದ್ದರೆ ಮುಂದೆ ಶಾಶ್ವತ ಹಲ್ಲುಗಳ ಮೇಲೆಯೂ ಇದು ಪರಿಣಾಮ ಬೀರಲಿದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ರೈನ್‌ಬೋ ಆಸ್ಪತ್ರೆಯ ಬೆಂಗಳೂರು ಕಾಂಪ್ರಹೆನ್ಸಿವ್‌ ಚೈಲ್ಡ್‌ ಹೆಲ್ತ್‌ ಅಲೆಯನ್ಸ್‌ ನಗರದ 145 ಶಾಲೆಗಳ (ಪ್ರಾಥಮಿಕ ಮತ್ತು ಮಾಧ್ಯಮಿಕ) 83,000 ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಇವರ ಪೈಕಿ 24,817 ವಿದ್ಯಾರ್ಥಿಗಳು ಹಲ್ಲಿನ ಸಮಸ್ಯೆಯಿಂದ ಬಳಲುತ್ತಿರುವುದು ಕಂಡು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ