ಅನಕ್ಷರಸ್ಥ ಕುಟುಂಬದ ಕುಡಿ ಟಾಪರ್
ಆಳಂದ: ತಾಲೂಕಿನ ಗಡಿ ಗ್ರಾಮ ಕಾಮನಳ್ಳಿಯ ಅನಕ್ಷರಸ್ಥ, ಬಡತನ ಕುಟುಂಬದ ಕುಡಿ ದಾವಲ್ಮಲಿಕ್ ರಾಜಾಬಾಯಿ ಶೇಖ್ 2019ನೇ ಸಾಲಿನ ದ್ವಿತೀಯ ಪಿಯುಸಿ ಕಲಾ ವಿಭಾಗದ ಪರೀಕ್ಷೆಯಲ್ಲಿ 581(ಶೇ.96.83) ಅಂಕಗಳು ಪಡೆದು ಜಿಲ್ಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಕಾಮನಳ್ಳಿಯ ಗ್ರಾಮದಲ್ಲಿ ಜನಿಸಿರುವ ದಾವಲ್ಮಲಿಕ್ 1 ರಿಂದ 8 ನೇ ತರಗತಿಯವರೆಗೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಭ್ಯಾಸ ಮಾಡಿದ್ದಾರೆ. 9 ರಿಂದ 10 ನೇ ಜೇವರ್ಗಿ ತಾಲೂಕಿನ ಸೊನ್ನ ಶಿವಾನಂದ ಪ್ರೌಢಶಾಲೆಯಲ್ಲಿ ಅಭ್ಯಾಸ ಮಾಡಿ 10 ನೇ ತರಗತಿ ಪರೀಕ್ಷೆಯಲ್ಲಿ ಶೇ.94ರಷ್ಟು ಅಂಕ ಪಡೆದು ಸಾಧನೆ ಮಾಡಿದ್ದಾರೆ. ಆಳಂದನ ಮಾತೋಶ್ರೀ ಅಂಬವ್ವ ರುಕ್ಮಯ್ಯ ಗುತ್ತೇದಾರ್ ಪದವಿ ಪೂರ್ವ ಕಾಲೇಜಿನಲ್ಲಿ ಉಚಿತ ಪ್ರವೇಶ ಪಡೆದು ಮೆಟ್ರಿಕ್ ನಂತರದ ಅಲ್ಪಸಂಖ್ಯಾತರ ವಸತಿ ನಿಲಯದಲ್ಲಿ ಸೇರಿಕೊಂಡು ಉತ್ತಮ ಅಭ್ಯಾಸ ಮಾಡಿ, ಪಿಯು ದ್ವಿತೀಯ ಪರೀಕ್ಷೆಯಲ್ಲಿ ಕನ್ನಡ 98, ಹಿಂದಿ 97, ಇತಿಹಾಸ 97, ಸಮಾಜಶಾಸ್ತ್ರ 98, ರಾಜ್ಯಶಾಸ್ತ್ರ 95, ಅರ್ಥಶಾಸ್ತ್ರ 97 ಸೇರಿ 600ಕ್ಕೆ 581 ಅಂಕಗಳು ಪಡೆದು ಶೇ.96.83 ಪ್ರತಿಶತ ಪಡೆದಿದ್ದಾರೆ. ತಂದೆ ರಾಜಾಬಾಯಿ, ತಾಯಿ ಶಮಾಬಿ ಅವರು ಕೂಲಿ ಮಾಡಿ ಮಗನಿಗೆ ಶಿಕ್ಷಣ ಕೊಡಿಸುತ್ತಾರೆ. ನಮಗೆ ಎಷ್ಟೇ ಕಷ್ಟವಾದರೂ ಸರಿ ನೀನು ಯಾವುದೇ ಕಾರಣಕ್ಕೂ ಓದು ನಿಲ್ಲಿಸುವುದು ಬೇಡ. ಉತ್ತಮವಾಗಿ ಓದಿ ಕಾಲೇಜಿಗೆ ಕೀರ್ತಿ ತರಬೇಕೆಂದು ಹೆತ್ತವರು ಹೇಳಿದ ಮಾತುಗಳಿಂದ ಪ್ರೇರಣೆಗೊಂಡ ದಾವಲ್ಮಲಿಕ್ ಸತತ ಪ್ರಯತ್ನ, ಛಲದೊಂದಿಗೆ ಗುರಿ ಮುಟ್ಟುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
DAVAL MALIK
ವಾಚ್ಮನ್ ಪುತ್ರಿಗೆ ಉತ್ತಮ ಅಂಕ
ಕಲಬುರಗಿ: ಇಲ್ಲಿನ ಬಾಲಕಿಯರ ಸರಕಾರಿ ಪಿಯು ಕಾಲೇಜಿನ ಅಂಬಿಕಾ ದಿಗಂಬರ ಸಿಂಧೆ ಶೇ.87ರಷ್ಟು ಅಂಕಗಳನ್ನು ಪಡೆಯುವ ಮೂಲಕ ವಿಜ್ಞಾನ ವಿಭಾಗದಲ್ಲಿ ಉತ್ತಮ ಸಾಧನೆ ಪ್ರದರ್ಶಿಸಿದ್ದಾರೆ. ನಗರದ ಖಾಸಗಿ ಶಾಲೆಯೊಂದರಲ್ಲಿ ತಂದೆ ದಿಗಂಬರ ವಾಚ್ಮನ್ ವೃತ್ತಿಯಲ್ಲಿದ್ದು, ತಂದೆಯ ಕನಸಿನಂತೆ ತಾನು ಮೆಕ್ಯಾನಿಕಲ್ ಎಂಜಿನಿಯರ್ ಆಗಲು ಪ್ರಾಮಾಣಿಕ ಯತ್ನ ನಡೆಸುತ್ತಿರುವುದಾಗಿ ಅಂಬಿಕಾ ಹೇಳುತ್ತಾಳೆ. ಭೌತಶಾಸ್ತ್ರ-95, ರಾಸಾಯನಶಾಸ್ತ್ರ-89, ಗಣಿತ-94 ಮತ್ತು ಜೀವಶಾಸ್ತ್ರ-80, ಕನ್ನಡ-98 ಹಾಗೂ ಇಂಗ್ಲಿಷ್-73 ಅಂಕಗಳನ್ನು ಗಳಿಸಿರುವ ಅಂಬಿಕಾ ಓದಿನ ಕ್ರಮವೂ ಹೆಚ್ಚು ಅಚ್ಚರಿ ಮೂಡಿಸುವಂತಿದೆ. ಒಂದೇ ಒಂದು ದಿನವೂ ಟ್ಯೂಷನ್ ಮೆಟ್ಟಿಲೇರಿಲ್ಲ. ಬೆಳಗ್ಗೆ ತನ್ನ ಸ್ವಂತ ಊರಾದ ಕಲಬುರಗಿ ತಾಲೂಕಿನ ಮೇಳಕುಂದಾ (ಕೆ) ಗ್ರಾಮದಿಂದ ಬೆಳಗ್ಗೆ 6.15ಕ್ಕೆ ಸಾರಿಗೆ ಸಂಸ್ಥೆಯ ಬಸ್ ಮೂಲಕ ಕಲಬುರಗಿ ಬಂದು ಇಳಿದ ಬಳಿಕ ನಿತ್ಯ ಸಮೀಪದ ಎಸ್.ಪಿ. ಕಚೇರಿ ಎದುರಿನ ಮರದ ಅಡಿ ಕುಳಿತು ಓದುತ್ತಿದ್ದಳು. ಅಲ್ಲದೆ, ಸಂಜೆ ಮನೆಗೆ ವಾಪಸ್ಸಾದ ಬಳಿಕ 7ರಿಂದ ರಾತ್ರಿ 11ರವರೆಗೆ ಮಾತ್ರ ಈಕೆ ಅಧ್ಯಯನ ಮಾಡುತ್ತಿದ್ದುದಾಗಿ ಆಕೆ ಹೆಮ್ಮೆಯಿಂದ ಹೇಳುತ್ತಾಳೆ. ತಂದೆ-ತಾಯಿ ಇಬ್ಬರೂ ಸಾಕ್ಷರರಲ್ಲ. ತಾಯಿ ಯಲ್ಲಮ್ಮ ಮಂದಿಯ ಹೊಲಗಳಲ್ಲಿ ಕೃಷಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಾರೆ. ಈ ಬಾರಿಯ ಸಿಇಟಿ ಎದುರಿಸುವ ಮೂಲಕ, ಉತ್ತಮ ರ್ಯಾಂಕಿಂಗ್ ಪಡೆದು ಸಿವಿಲ್ ಎಂಜಿನಿಯರ್ ಕೋರ್ಸ್ ಕಲಿಯಬೇಕೆಂಬ ಮಹತ್ವಾಕಾಂಕ್ಷೆಯನ್ನು ಅಂಬಿಕಾ ಇಟ್ಟುಕೊಂಡಿದ್ದಾಳೆ.
AMBIKA
ಗುಡಿಸಲಲ್ಲಿ ಅರಳಿದ ‘ಭಾಗ್ಯಶ್ರೀ’
ಅಫಜಲಪುರ: ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಒಂದೊತ್ತಿನ ಊಟಕ್ಕಾಗಿ ಕೂಲಿಯೇ ನಂಬಿದ ಪಾಲಕರು. ಹೀಗೆ ಸಾಲು ಸಾಲು ಸವಾಲುಗಳ ಮಧ್ಯೆ ಹಳ್ಳಿ ಹೆಣ್ಣು ಮಗಳು ಅಫಜಲಪುರದ ಅಬ್ದುಲ್ ಕಲಾಂ ಪಿಯುಸಿ ಕಾಲೇಜಿನ ವಿದ್ಯಾರ್ಥಿ ಭಾಗ್ಯಶ್ರೀ ಚಂದ್ರಶ್ಯಾ ಹೊನಗುಂಟಿ ಪಿಯು ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ಶೇ.96ರಷ್ಟು ಅಂಕದೊಂದಿಗೆ ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದಾಳೆೆ. ಆಳಂದ ತಾಲೂಕಿನ ಕುಗ್ರಾಮ ಯಳಸಂಗಿಯ ಚಂದ್ರಶ್ಯಾ ಹೊನಗುಂಟಿ, ಬೋರಮ್ಮ ದಂಪತಿ ಮಗಳು. ಬಡಕುಟುಂಬದಲ್ಲಿ ಜನಿಸಿದರೂ ಛಲದೊಂದಿಗೆ ಗುರಿ ತಲುಪಿದ್ದಾಳೆ. ದ್ವಿತೀಯ ಪಿಯುಸಿಯಲ್ಲಿ 600ಕ್ಕೆ 580 ಅಂಕ (ಶೇ.96.66) ಪಡೆದು ಕಾಲೇಜಿಗೆ-ಪಾಲಕರಿಗೆ ಕೀರ್ತಿ ತಂದಿದ್ದಾಳೆ. ತಂದೆ-ತಾಯಿ ಇಬ್ಬರು ಕೂಲಿ ಕೆಲಸ ಮಾಡಿ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದಾರೆ. ಕುಟುಂಬದಲ್ಲಿ ಏಳು ಸದಸ್ಯರಿದ್ದು, ಎರಡು ಎಕರೆ ಬರಡು ಭೂಮಿಯಿದೆ. ಹೀಗಾಗಿ ಕೂಲಿ ಮಾಡಿ ನಾಲ್ವರು ಪುತ್ರಿಯರಿಗೆ ಶಿಕ್ಷಣ ಕೊಡಿಸಲು ಆಕೆಯ ಪೋಷಕರು ಸಾಕಷ್ಟು ಕಷ್ಟಪಡುತ್ತಿದ್ದಾರೆ. ಯಳಸಂಗಿ ಗ್ರಾಮದಿಂದ ಎರಡು ಕಿಮೀ ದೂರದ ಜಮೀನಲ್ಲಿ ಗುಡಿಸಲು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪ್ರತಿದಿನ 2 ಕಿಮೀ ನಡೆದುಕೊಂಡು ಹೋಗಿಯೇ ಪೂರೈಸಿದ್ದಾಳೆ. ಚಿಕ್ಕಮ್ಮನ ಮಗ ಮಾಳಪ್ಪ ಪೂಜಾರಿ ಭಾಗ್ಯಶ್ರೀ ಬೆನ್ನಿಗೆ ನಿಂತ ಪರಿಣಾಮ ಸಾಧನೆ ಸಾಧ್ಯವಾಯಿತು ಎನ್ನುತ್ತಾರೆ ವಿದ್ಯಾರ್ಥಿನಿಯ ತಂದೆ-ತಾಯಿ. ಕೆಎಎಸ್ ಮಾಡುವ ಕನಸು: ಕಡು ಬಡತನದಲ್ಲಿ ಬೆಳೆದ ಈ ಪ್ರತಿಭೆ ಕೆೆಎಎಸ್ ಮಾಡಿ ಬಡವರ, ನಿರ್ಗತಿಕರ, ದೀನ-ದಲಿತರ ಸೇವೆ ಮಾಡುವ ಮಹತ್ತರ ಕನಸು ಕಟ್ಟಿಕೊಂಡಿರುವುದಾಗಿ ಭಾಗ್ಯಶ್ರೀ ತಿಳಿಸುತ್ತಾಳೆ.
BHAGYASHREE
ಹಮಾಲಿ ಮಾಡುವವನ ಮಗಳು ಡಿಸ್ಟಿಂಕ್ಷನ್
ಕಲಬುರಗಿ: ಗಂಜ್ನಲ್ಲಿ ಹಮಾಲಿ ಕೆಲಸ ಮಾಡುವವರ ಮಗಳು ವಾಣಿಜ್ಯದಲ್ಲಿ ಶೇ.85 ಅಂಕ ಪಡೆದು ಗಮನ ಸೆಳೆದಿದ್ದಾಳೆ. ತಂದೆ ಮಲ್ಲಿನಾಥ- ತಾಯಿ ಜಯಶ್ರೀ. ಎಂಪಿಎಚ್ಎಸ್ ಕಾಲೇಜಿನ ವಿದ್ಯಾರ್ಥಿನಿ ಅಂಜು ತಾಯಿ ಊರಲ್ಲಿ ಬೇರೆಯವರ ಮನೆಕೆಲಸ ಮಾಡುತ್ತಾರೆ, ಬೇರೆಯವರ ಹೊಲದಲ್ಲಿ ಕೃಷಿ ಕೂಲಿಕಾರ್ಮಿಕರಾಗಿಯೂ ದುಡಿಯುತ್ತಿದ್ದಾರೆ. ಫಸಲು ಇದ್ದಾಗ ಹೊಲದಲ್ಲಿ ದುಡಿಯುತ್ತಾರೆ. ಇಲ್ಲದೇ ಇದ್ದರೆ ಸೀದಾ ಅಡತ್ಗೆ ಬಂದು ಕಾಳುಗಳನ್ನು ಸ್ವಚ್ಛಗೊಳಿಸುವ, ಚೀಲಗಳನ್ನು ಹೊರುವ ಕೆಲಸ ಮಾಡುತ್ತಾರೆ. ಇವರ ಮನೆ ಆರ್ಥಿಕ ಸ್ಥಿತಿ ಕರುಳು ಹಿಂಡುವಂತಿದೆ. ಇವರಿಗೆ ನಾಲ್ವರು ಮಕ್ಕಳು. ಕಿತ್ತು ತಿನ್ನುವ ಬಡತನದಲ್ಲಿಯೂ ಅಂಜು ಅಂಜದೆ ಡಿಸ್ಟಿಂಕ್ಷನ್ ಪಡೆದಿದ್ದಾಳೆ. ಕಲಬುರಗಿ ತಾಲೂಕಿನ ಹೇರೂರ್ ಬಿ. ಗ್ರಾಮದವರು. ಮುಂದೆ ಬಿಕಾಂ ಓದಿ ರ್ಯಾಂಕ್ ಬಂದು ಎಂ.ಕಾಂ ಓದಿ ಪಿಯು ಕಾಲೇಜು ಲೆಕ್ಚರ್ ಆಗಬೇಕು ಎಂಬ ಮಹದಾಸೆ ಹೊಂದಿದ್ದಾರೆ. ದಿನಾಲು ಬಸ್ಗೆ ಬರುವ ಅಂಜು, ಬಸ್ ಮಿಸ್ ಆದಾಗ ಮಳೆ-ಬಿಸಿಲಿಗೆ ಅಂಜಿದವರಲ್ಲ. ನಡೆದುಕೊಂಡು ಬಂದು ಮುಖ್ಯರಸ್ತೆಗೆ ಬಂದು ಕಾಲೇಜು ತರಗತಿಗಳಿಗೆ ಹಾಜರಾದವರು. ಸೌಲಭ್ಯ ಇಲ್ಲವೆಂದು ಕೊರಗಿ ಸಾಧನೆ ಮಾಡದ ಹಲವಾರು ವಿದ್ಯಾರ್ಥಿನಿಯರಿಗೆ ಅಂಜು ಆದರ್ಶಪ್ರಾಯವಾಗಿದ್ದಾರೆ.
ANJU
ವಾಚ್ಮನ್ ಮಗಳ ಅಪೂರ್ವ ಸಾಧನೆ
ಕಲಬುರಗಿ: ಹಳ್ಳಿಯಲ್ಲಿ ಕೆಲಸ ಸಿಗಲಿಲ್ಲ ಎಂಬ ಕಾರಣಕ್ಕಾಗಿಯೇ ಬದುಕು ನಡೆಸುವ ಸಲುವಾಗಿಯೇ ನಗರಕ್ಕೆ ಬಂದ ಪಾಲಕರು. ತಂದೆ ವಾಚ್ಮನ್, ತಾಯಿ ಬೇರೆಯವರ ಮನೆಯಲ್ಲಿ ರೊಟ್ಟಿ ಮಾಡಿ, ಬಾಂಡೆ ತಿಕ್ಕುವ ಕೂಲಿ ಕಾಯಕ. ಮನೆಯಲ್ಲಿ ಇಂಥ ಬಡತನವಿದ್ದರೂ ಪಿಯುಸಿಯಲ್ಲಿ ಜಯಲಕ್ಷ್ಮಿನೂರ್ 561 (ಶೇ.93.5ರಷ್ಟು) ಅಂಕ ಪಡೆದು ಎಲ್ಲರ ಹುಬ್ಬೇರಿಸುಂಥ ಸಾಧನೆ ಮಾಡಿದ್ದಾಳೆ. ಕಲಬುರಗಿಯ ಸರಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಓದಿದ ಜಯಲಕ್ಷ್ಮಿನೂರ್ ಚವ್ಹಾಣ ಇಂಥ ಸಾಧನೆ ಮಾಡಿದ್ದಾಳೆ. ಇವರದ್ದು ಮೂಲತಃ ಭಂಕೂರು ಗ್ರಾಮ. ಪ್ರಸ್ತುತ ಎಂಬಿ ನಗರ ಠಾಣೆ ಹತ್ತರವಿರುವ ಜಿಡಿಎ ಕಾಲೊನಿಯ ಚಿಕ್ಕ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಪಿಯು ಕಾಮರ್ಸ್ ವಿಭಾಗದಲ್ಲಿ ಕನ್ನಡ 91, ಇಂಗ್ಲಿಷ್ 85, ಇತಿಹಾಸ 93, ಬ್ಯುಸಿನೆಸ್ ಸ್ಟಡಿ 94, ಅರ್ಥಶಾಸ್ತ್ರ 97, ಅಕೌಂಟೆನ್ಸಿಯಲ್ಲಿ 100ಕ್ಕೆ 100 ಅಂಕ ಪಡೆದು ಎಲ್ಲರ ಮೆಚ್ಚುಗೆ ಪಡೆದಿದ್ದಾಳೆ. ಯಾವುದೇ ಟ್ಯೂಶನ್ಗೆ ಹೋಗದೆ ನಿತ್ಯ ತಂದೆ ತಾಯಿಗೆ ಸಹಾಯ ಮಾಡುತ್ತಾ ಹಗಲು ರಾತ್ರಿ ವಿದ್ಯಾಭ್ಯಾಸ ಮಾಡಿದ್ದೇನೆ ಎಂದು ತಿಳಿಸುತ್ತಾಳೆ ಜಯಲಕ್ಷ್ಮಿ. ವಿದ್ಯೆಯಲ್ಲಿ ಜಯ ಕಂಡ ಈಕೆಗೆ ಸಹಾಯ ಹಸ್ತ ಚಾಚುವ ಕೈಗಳು ಅಗತ್ಯವಿದೆ. ಸಿಎ ಆಗಬೇಕೆಂಬ ಈಕೆಯ ಕನಸನ್ನು ನನಸು ಮಾಡುವ ಉದಾರಿಗಳು ಅಗತ್ಯವಿದೆ.
JAYALAKSHMI
ಗಣ್ಯರ ಮೆಚ್ಚುಗೆ
ವಿಜಯ ಕರ್ನಾಟಕ ಆರಂಭಿಸಿದ ವಿಕ ವಿದ್ಯಾನಿಧಿ ಆದರ್ಶವಾದ ಕೆಲಸವಾಗಿದೆ. ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಮುಂದಿನ ಓದಿಗೆ ಅನುಕೂಲವಾಗಲು ವಿಜಯ ಕರ್ನಾಟಕ ಆರಂಭಿಸಿದ ವಿದ್ಯಾನಿಧಿಗೆ ದಾನಿಗಳು ಉದಾರವಾಗಿ ದೇಣಿಗೆ ನೀಡುವ ಮೂಲಕ ಓದಿ ಜೀವನದಲ್ಲಿ ಸಾಧನೆ ಮಾಡುವಂತಹ ಮಕ್ಕಳಿಗೆ ಬಲ ತುಂಬಬೇಕು. ಕಳೆದ ವರ್ಷ ದೇಣಿಗೆ ಪಡೆದ ವಿದ್ಯಾರ್ಥಿಗಳ ಓದಿಗೆ ನೆರವಾಗಿದೆ. ದಾನ ಮಾಡುವುದು ಪುಣ್ಯದ ಕೆಲಸ. ಬಡವರ ಸೇವೆ ಭಗವಂತನ ಸೇವೆಗೆ ಸಮವಾಗಿದೆ.
-ಡಾ. ಬಸವಲಿಂಗ ಪಟ್ಟದ್ದೇವರು, ಅಧ್ಯಕ್ಷರು, ಅನುಭವ ಮಂಟಪ ಟ್ರಸ್ಟ್, ಬಸವಕಲ್ಯಾಣ
ಫಲಾನುಭವಿ ಮಾತು
ಕಳೆದ ವರ್ಷ ವಿಜಯ ಕರ್ನಾಟಕ ನೀಡಿದ ವಿದ್ಯಾನಿಧಿಯಿಂದ ಪದವಿ ಓದಿಗೆ ಸಹಾಯವಾಗಿದೆ. ಮುಂದಿನ ಓದು ಹೇಗೆ ಎಂಬ ಚಿಂತೆಯಲ್ಲಿದ್ದಾಗ ವಿಜಯ ಕರ್ನಾಟಕ ನೀಡಿದ ನೆರವು ಜೀವನದಲ್ಲಿ ಮರೆಯಲಾಗದು. ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡಿದ ಈ ನೆರವು ಬಣ್ಣಿಸಲು ಸಾಧ್ಯವಿಲ್ಲ. ಈ ಉಪಕಾರ ಪಡೆದವರಿಗೆ ಇದು ಅರ್ಥವಾಗುತ್ತದೆ. ನನ್ನ ಓದಿಗೆ ಬಲ ತುಂಬಿದೆ. ಓದಿಗೆ ಇದ್ದ ಆರ್ಥಿಕ ಅಡಚಣೆ ದೂರವಾಗಿದ್ದು, ಈಗ ಓದು ನಿಶ್ಚಿಂತೆಯಿಂದ ಸಾಗಿದೆ.
-ಶುಭಂ ಶಿಂಧೆ, ವಿಕ ವಿದ್ಯಾನಿಧಿ ಪಡೆದ ವಿದ್ಯಾರ್ಥಿ, ಕಲಬುರಗಿ
ನೆರವು ನೀಡಲು ಹೀಗೆ ಮಾಡಿ...
ಈ ವಿದ್ಯಾರ್ಥಿಗಳ ಪೈಕಿ ಯಾರಿಗೆ ಸಹಾಯ ಮಾಡಬೇಕೆಂದು ಬಯಸುತ್ತೀರೋ ಅವರ ಹೆಸರಿಗೇ ಚೆಕ್ ಬರೆದು ನಮ್ಮ ಕಚೇರಿಗೆ ಕಳುಹಿಸಿ. ನಾವು ಅದನ್ನು ಅವರಿಗೆ ತಲುಪಿಸುತ್ತೇವೆ. ಲಕೋಟೆ ಮೇಲೆ ವಿದ್ಯಾನಿಧಿ ಎಂದು ನಮೂದಿಸಿ.
ನಮ್ಮ ವಿಳಾಸ
ವಿಜಯ ಕರ್ನಾಟಕ, ನಾರಾಯಣ ಎನ್ಕ್ಲೇವ್, 1-103/2, ಮೇಲ್ಮಹಡಿ, ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತ, ರೈಲು ನಿಲ್ದಾಣ ರಸ್ತೆ, ಕಲಬುರಗಿ-585102 ದೂ.ಸಂ.08472253013
ಆಳಂದ: ತಾಲೂಕಿನ ಗಡಿ ಗ್ರಾಮ ಕಾಮನಳ್ಳಿಯ ಅನಕ್ಷರಸ್ಥ, ಬಡತನ ಕುಟುಂಬದ ಕುಡಿ ದಾವಲ್ಮಲಿಕ್ ರಾಜಾಬಾಯಿ ಶೇಖ್ 2019ನೇ ಸಾಲಿನ ದ್ವಿತೀಯ ಪಿಯುಸಿ ಕಲಾ ವಿಭಾಗದ ಪರೀಕ್ಷೆಯಲ್ಲಿ 581(ಶೇ.96.83) ಅಂಕಗಳು ಪಡೆದು ಜಿಲ್ಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಕಾಮನಳ್ಳಿಯ ಗ್ರಾಮದಲ್ಲಿ ಜನಿಸಿರುವ ದಾವಲ್ಮಲಿಕ್ 1 ರಿಂದ 8 ನೇ ತರಗತಿಯವರೆಗೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಭ್ಯಾಸ ಮಾಡಿದ್ದಾರೆ. 9 ರಿಂದ 10 ನೇ ಜೇವರ್ಗಿ ತಾಲೂಕಿನ ಸೊನ್ನ ಶಿವಾನಂದ ಪ್ರೌಢಶಾಲೆಯಲ್ಲಿ ಅಭ್ಯಾಸ ಮಾಡಿ 10 ನೇ ತರಗತಿ ಪರೀಕ್ಷೆಯಲ್ಲಿ ಶೇ.94ರಷ್ಟು ಅಂಕ ಪಡೆದು ಸಾಧನೆ ಮಾಡಿದ್ದಾರೆ. ಆಳಂದನ ಮಾತೋಶ್ರೀ ಅಂಬವ್ವ ರುಕ್ಮಯ್ಯ ಗುತ್ತೇದಾರ್ ಪದವಿ ಪೂರ್ವ ಕಾಲೇಜಿನಲ್ಲಿ ಉಚಿತ ಪ್ರವೇಶ ಪಡೆದು ಮೆಟ್ರಿಕ್ ನಂತರದ ಅಲ್ಪಸಂಖ್ಯಾತರ ವಸತಿ ನಿಲಯದಲ್ಲಿ ಸೇರಿಕೊಂಡು ಉತ್ತಮ ಅಭ್ಯಾಸ ಮಾಡಿ, ಪಿಯು ದ್ವಿತೀಯ ಪರೀಕ್ಷೆಯಲ್ಲಿ ಕನ್ನಡ 98, ಹಿಂದಿ 97, ಇತಿಹಾಸ 97, ಸಮಾಜಶಾಸ್ತ್ರ 98, ರಾಜ್ಯಶಾಸ್ತ್ರ 95, ಅರ್ಥಶಾಸ್ತ್ರ 97 ಸೇರಿ 600ಕ್ಕೆ 581 ಅಂಕಗಳು ಪಡೆದು ಶೇ.96.83 ಪ್ರತಿಶತ ಪಡೆದಿದ್ದಾರೆ. ತಂದೆ ರಾಜಾಬಾಯಿ, ತಾಯಿ ಶಮಾಬಿ ಅವರು ಕೂಲಿ ಮಾಡಿ ಮಗನಿಗೆ ಶಿಕ್ಷಣ ಕೊಡಿಸುತ್ತಾರೆ. ನಮಗೆ ಎಷ್ಟೇ ಕಷ್ಟವಾದರೂ ಸರಿ ನೀನು ಯಾವುದೇ ಕಾರಣಕ್ಕೂ ಓದು ನಿಲ್ಲಿಸುವುದು ಬೇಡ. ಉತ್ತಮವಾಗಿ ಓದಿ ಕಾಲೇಜಿಗೆ ಕೀರ್ತಿ ತರಬೇಕೆಂದು ಹೆತ್ತವರು ಹೇಳಿದ ಮಾತುಗಳಿಂದ ಪ್ರೇರಣೆಗೊಂಡ ದಾವಲ್ಮಲಿಕ್ ಸತತ ಪ್ರಯತ್ನ, ಛಲದೊಂದಿಗೆ ಗುರಿ ಮುಟ್ಟುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
DAVAL MALIK
ವಾಚ್ಮನ್ ಪುತ್ರಿಗೆ ಉತ್ತಮ ಅಂಕ
ಕಲಬುರಗಿ: ಇಲ್ಲಿನ ಬಾಲಕಿಯರ ಸರಕಾರಿ ಪಿಯು ಕಾಲೇಜಿನ ಅಂಬಿಕಾ ದಿಗಂಬರ ಸಿಂಧೆ ಶೇ.87ರಷ್ಟು ಅಂಕಗಳನ್ನು ಪಡೆಯುವ ಮೂಲಕ ವಿಜ್ಞಾನ ವಿಭಾಗದಲ್ಲಿ ಉತ್ತಮ ಸಾಧನೆ ಪ್ರದರ್ಶಿಸಿದ್ದಾರೆ. ನಗರದ ಖಾಸಗಿ ಶಾಲೆಯೊಂದರಲ್ಲಿ ತಂದೆ ದಿಗಂಬರ ವಾಚ್ಮನ್ ವೃತ್ತಿಯಲ್ಲಿದ್ದು, ತಂದೆಯ ಕನಸಿನಂತೆ ತಾನು ಮೆಕ್ಯಾನಿಕಲ್ ಎಂಜಿನಿಯರ್ ಆಗಲು ಪ್ರಾಮಾಣಿಕ ಯತ್ನ ನಡೆಸುತ್ತಿರುವುದಾಗಿ ಅಂಬಿಕಾ ಹೇಳುತ್ತಾಳೆ. ಭೌತಶಾಸ್ತ್ರ-95, ರಾಸಾಯನಶಾಸ್ತ್ರ-89, ಗಣಿತ-94 ಮತ್ತು ಜೀವಶಾಸ್ತ್ರ-80, ಕನ್ನಡ-98 ಹಾಗೂ ಇಂಗ್ಲಿಷ್-73 ಅಂಕಗಳನ್ನು ಗಳಿಸಿರುವ ಅಂಬಿಕಾ ಓದಿನ ಕ್ರಮವೂ ಹೆಚ್ಚು ಅಚ್ಚರಿ ಮೂಡಿಸುವಂತಿದೆ. ಒಂದೇ ಒಂದು ದಿನವೂ ಟ್ಯೂಷನ್ ಮೆಟ್ಟಿಲೇರಿಲ್ಲ. ಬೆಳಗ್ಗೆ ತನ್ನ ಸ್ವಂತ ಊರಾದ ಕಲಬುರಗಿ ತಾಲೂಕಿನ ಮೇಳಕುಂದಾ (ಕೆ) ಗ್ರಾಮದಿಂದ ಬೆಳಗ್ಗೆ 6.15ಕ್ಕೆ ಸಾರಿಗೆ ಸಂಸ್ಥೆಯ ಬಸ್ ಮೂಲಕ ಕಲಬುರಗಿ ಬಂದು ಇಳಿದ ಬಳಿಕ ನಿತ್ಯ ಸಮೀಪದ ಎಸ್.ಪಿ. ಕಚೇರಿ ಎದುರಿನ ಮರದ ಅಡಿ ಕುಳಿತು ಓದುತ್ತಿದ್ದಳು. ಅಲ್ಲದೆ, ಸಂಜೆ ಮನೆಗೆ ವಾಪಸ್ಸಾದ ಬಳಿಕ 7ರಿಂದ ರಾತ್ರಿ 11ರವರೆಗೆ ಮಾತ್ರ ಈಕೆ ಅಧ್ಯಯನ ಮಾಡುತ್ತಿದ್ದುದಾಗಿ ಆಕೆ ಹೆಮ್ಮೆಯಿಂದ ಹೇಳುತ್ತಾಳೆ. ತಂದೆ-ತಾಯಿ ಇಬ್ಬರೂ ಸಾಕ್ಷರರಲ್ಲ. ತಾಯಿ ಯಲ್ಲಮ್ಮ ಮಂದಿಯ ಹೊಲಗಳಲ್ಲಿ ಕೃಷಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಾರೆ. ಈ ಬಾರಿಯ ಸಿಇಟಿ ಎದುರಿಸುವ ಮೂಲಕ, ಉತ್ತಮ ರ್ಯಾಂಕಿಂಗ್ ಪಡೆದು ಸಿವಿಲ್ ಎಂಜಿನಿಯರ್ ಕೋರ್ಸ್ ಕಲಿಯಬೇಕೆಂಬ ಮಹತ್ವಾಕಾಂಕ್ಷೆಯನ್ನು ಅಂಬಿಕಾ ಇಟ್ಟುಕೊಂಡಿದ್ದಾಳೆ.
AMBIKA
ಗುಡಿಸಲಲ್ಲಿ ಅರಳಿದ ‘ಭಾಗ್ಯಶ್ರೀ’
ಅಫಜಲಪುರ: ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಒಂದೊತ್ತಿನ ಊಟಕ್ಕಾಗಿ ಕೂಲಿಯೇ ನಂಬಿದ ಪಾಲಕರು. ಹೀಗೆ ಸಾಲು ಸಾಲು ಸವಾಲುಗಳ ಮಧ್ಯೆ ಹಳ್ಳಿ ಹೆಣ್ಣು ಮಗಳು ಅಫಜಲಪುರದ ಅಬ್ದುಲ್ ಕಲಾಂ ಪಿಯುಸಿ ಕಾಲೇಜಿನ ವಿದ್ಯಾರ್ಥಿ ಭಾಗ್ಯಶ್ರೀ ಚಂದ್ರಶ್ಯಾ ಹೊನಗುಂಟಿ ಪಿಯು ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ಶೇ.96ರಷ್ಟು ಅಂಕದೊಂದಿಗೆ ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದಾಳೆೆ. ಆಳಂದ ತಾಲೂಕಿನ ಕುಗ್ರಾಮ ಯಳಸಂಗಿಯ ಚಂದ್ರಶ್ಯಾ ಹೊನಗುಂಟಿ, ಬೋರಮ್ಮ ದಂಪತಿ ಮಗಳು. ಬಡಕುಟುಂಬದಲ್ಲಿ ಜನಿಸಿದರೂ ಛಲದೊಂದಿಗೆ ಗುರಿ ತಲುಪಿದ್ದಾಳೆ. ದ್ವಿತೀಯ ಪಿಯುಸಿಯಲ್ಲಿ 600ಕ್ಕೆ 580 ಅಂಕ (ಶೇ.96.66) ಪಡೆದು ಕಾಲೇಜಿಗೆ-ಪಾಲಕರಿಗೆ ಕೀರ್ತಿ ತಂದಿದ್ದಾಳೆ. ತಂದೆ-ತಾಯಿ ಇಬ್ಬರು ಕೂಲಿ ಕೆಲಸ ಮಾಡಿ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದಾರೆ. ಕುಟುಂಬದಲ್ಲಿ ಏಳು ಸದಸ್ಯರಿದ್ದು, ಎರಡು ಎಕರೆ ಬರಡು ಭೂಮಿಯಿದೆ. ಹೀಗಾಗಿ ಕೂಲಿ ಮಾಡಿ ನಾಲ್ವರು ಪುತ್ರಿಯರಿಗೆ ಶಿಕ್ಷಣ ಕೊಡಿಸಲು ಆಕೆಯ ಪೋಷಕರು ಸಾಕಷ್ಟು ಕಷ್ಟಪಡುತ್ತಿದ್ದಾರೆ. ಯಳಸಂಗಿ ಗ್ರಾಮದಿಂದ ಎರಡು ಕಿಮೀ ದೂರದ ಜಮೀನಲ್ಲಿ ಗುಡಿಸಲು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪ್ರತಿದಿನ 2 ಕಿಮೀ ನಡೆದುಕೊಂಡು ಹೋಗಿಯೇ ಪೂರೈಸಿದ್ದಾಳೆ. ಚಿಕ್ಕಮ್ಮನ ಮಗ ಮಾಳಪ್ಪ ಪೂಜಾರಿ ಭಾಗ್ಯಶ್ರೀ ಬೆನ್ನಿಗೆ ನಿಂತ ಪರಿಣಾಮ ಸಾಧನೆ ಸಾಧ್ಯವಾಯಿತು ಎನ್ನುತ್ತಾರೆ ವಿದ್ಯಾರ್ಥಿನಿಯ ತಂದೆ-ತಾಯಿ. ಕೆಎಎಸ್ ಮಾಡುವ ಕನಸು: ಕಡು ಬಡತನದಲ್ಲಿ ಬೆಳೆದ ಈ ಪ್ರತಿಭೆ ಕೆೆಎಎಸ್ ಮಾಡಿ ಬಡವರ, ನಿರ್ಗತಿಕರ, ದೀನ-ದಲಿತರ ಸೇವೆ ಮಾಡುವ ಮಹತ್ತರ ಕನಸು ಕಟ್ಟಿಕೊಂಡಿರುವುದಾಗಿ ಭಾಗ್ಯಶ್ರೀ ತಿಳಿಸುತ್ತಾಳೆ.
BHAGYASHREE
ಹಮಾಲಿ ಮಾಡುವವನ ಮಗಳು ಡಿಸ್ಟಿಂಕ್ಷನ್
ಕಲಬುರಗಿ: ಗಂಜ್ನಲ್ಲಿ ಹಮಾಲಿ ಕೆಲಸ ಮಾಡುವವರ ಮಗಳು ವಾಣಿಜ್ಯದಲ್ಲಿ ಶೇ.85 ಅಂಕ ಪಡೆದು ಗಮನ ಸೆಳೆದಿದ್ದಾಳೆ. ತಂದೆ ಮಲ್ಲಿನಾಥ- ತಾಯಿ ಜಯಶ್ರೀ. ಎಂಪಿಎಚ್ಎಸ್ ಕಾಲೇಜಿನ ವಿದ್ಯಾರ್ಥಿನಿ ಅಂಜು ತಾಯಿ ಊರಲ್ಲಿ ಬೇರೆಯವರ ಮನೆಕೆಲಸ ಮಾಡುತ್ತಾರೆ, ಬೇರೆಯವರ ಹೊಲದಲ್ಲಿ ಕೃಷಿ ಕೂಲಿಕಾರ್ಮಿಕರಾಗಿಯೂ ದುಡಿಯುತ್ತಿದ್ದಾರೆ. ಫಸಲು ಇದ್ದಾಗ ಹೊಲದಲ್ಲಿ ದುಡಿಯುತ್ತಾರೆ. ಇಲ್ಲದೇ ಇದ್ದರೆ ಸೀದಾ ಅಡತ್ಗೆ ಬಂದು ಕಾಳುಗಳನ್ನು ಸ್ವಚ್ಛಗೊಳಿಸುವ, ಚೀಲಗಳನ್ನು ಹೊರುವ ಕೆಲಸ ಮಾಡುತ್ತಾರೆ. ಇವರ ಮನೆ ಆರ್ಥಿಕ ಸ್ಥಿತಿ ಕರುಳು ಹಿಂಡುವಂತಿದೆ. ಇವರಿಗೆ ನಾಲ್ವರು ಮಕ್ಕಳು. ಕಿತ್ತು ತಿನ್ನುವ ಬಡತನದಲ್ಲಿಯೂ ಅಂಜು ಅಂಜದೆ ಡಿಸ್ಟಿಂಕ್ಷನ್ ಪಡೆದಿದ್ದಾಳೆ. ಕಲಬುರಗಿ ತಾಲೂಕಿನ ಹೇರೂರ್ ಬಿ. ಗ್ರಾಮದವರು. ಮುಂದೆ ಬಿಕಾಂ ಓದಿ ರ್ಯಾಂಕ್ ಬಂದು ಎಂ.ಕಾಂ ಓದಿ ಪಿಯು ಕಾಲೇಜು ಲೆಕ್ಚರ್ ಆಗಬೇಕು ಎಂಬ ಮಹದಾಸೆ ಹೊಂದಿದ್ದಾರೆ. ದಿನಾಲು ಬಸ್ಗೆ ಬರುವ ಅಂಜು, ಬಸ್ ಮಿಸ್ ಆದಾಗ ಮಳೆ-ಬಿಸಿಲಿಗೆ ಅಂಜಿದವರಲ್ಲ. ನಡೆದುಕೊಂಡು ಬಂದು ಮುಖ್ಯರಸ್ತೆಗೆ ಬಂದು ಕಾಲೇಜು ತರಗತಿಗಳಿಗೆ ಹಾಜರಾದವರು. ಸೌಲಭ್ಯ ಇಲ್ಲವೆಂದು ಕೊರಗಿ ಸಾಧನೆ ಮಾಡದ ಹಲವಾರು ವಿದ್ಯಾರ್ಥಿನಿಯರಿಗೆ ಅಂಜು ಆದರ್ಶಪ್ರಾಯವಾಗಿದ್ದಾರೆ.
ANJU
ವಾಚ್ಮನ್ ಮಗಳ ಅಪೂರ್ವ ಸಾಧನೆ
ಕಲಬುರಗಿ: ಹಳ್ಳಿಯಲ್ಲಿ ಕೆಲಸ ಸಿಗಲಿಲ್ಲ ಎಂಬ ಕಾರಣಕ್ಕಾಗಿಯೇ ಬದುಕು ನಡೆಸುವ ಸಲುವಾಗಿಯೇ ನಗರಕ್ಕೆ ಬಂದ ಪಾಲಕರು. ತಂದೆ ವಾಚ್ಮನ್, ತಾಯಿ ಬೇರೆಯವರ ಮನೆಯಲ್ಲಿ ರೊಟ್ಟಿ ಮಾಡಿ, ಬಾಂಡೆ ತಿಕ್ಕುವ ಕೂಲಿ ಕಾಯಕ. ಮನೆಯಲ್ಲಿ ಇಂಥ ಬಡತನವಿದ್ದರೂ ಪಿಯುಸಿಯಲ್ಲಿ ಜಯಲಕ್ಷ್ಮಿನೂರ್ 561 (ಶೇ.93.5ರಷ್ಟು) ಅಂಕ ಪಡೆದು ಎಲ್ಲರ ಹುಬ್ಬೇರಿಸುಂಥ ಸಾಧನೆ ಮಾಡಿದ್ದಾಳೆ. ಕಲಬುರಗಿಯ ಸರಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಓದಿದ ಜಯಲಕ್ಷ್ಮಿನೂರ್ ಚವ್ಹಾಣ ಇಂಥ ಸಾಧನೆ ಮಾಡಿದ್ದಾಳೆ. ಇವರದ್ದು ಮೂಲತಃ ಭಂಕೂರು ಗ್ರಾಮ. ಪ್ರಸ್ತುತ ಎಂಬಿ ನಗರ ಠಾಣೆ ಹತ್ತರವಿರುವ ಜಿಡಿಎ ಕಾಲೊನಿಯ ಚಿಕ್ಕ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಪಿಯು ಕಾಮರ್ಸ್ ವಿಭಾಗದಲ್ಲಿ ಕನ್ನಡ 91, ಇಂಗ್ಲಿಷ್ 85, ಇತಿಹಾಸ 93, ಬ್ಯುಸಿನೆಸ್ ಸ್ಟಡಿ 94, ಅರ್ಥಶಾಸ್ತ್ರ 97, ಅಕೌಂಟೆನ್ಸಿಯಲ್ಲಿ 100ಕ್ಕೆ 100 ಅಂಕ ಪಡೆದು ಎಲ್ಲರ ಮೆಚ್ಚುಗೆ ಪಡೆದಿದ್ದಾಳೆ. ಯಾವುದೇ ಟ್ಯೂಶನ್ಗೆ ಹೋಗದೆ ನಿತ್ಯ ತಂದೆ ತಾಯಿಗೆ ಸಹಾಯ ಮಾಡುತ್ತಾ ಹಗಲು ರಾತ್ರಿ ವಿದ್ಯಾಭ್ಯಾಸ ಮಾಡಿದ್ದೇನೆ ಎಂದು ತಿಳಿಸುತ್ತಾಳೆ ಜಯಲಕ್ಷ್ಮಿ. ವಿದ್ಯೆಯಲ್ಲಿ ಜಯ ಕಂಡ ಈಕೆಗೆ ಸಹಾಯ ಹಸ್ತ ಚಾಚುವ ಕೈಗಳು ಅಗತ್ಯವಿದೆ. ಸಿಎ ಆಗಬೇಕೆಂಬ ಈಕೆಯ ಕನಸನ್ನು ನನಸು ಮಾಡುವ ಉದಾರಿಗಳು ಅಗತ್ಯವಿದೆ.
JAYALAKSHMI
ಗಣ್ಯರ ಮೆಚ್ಚುಗೆ
ವಿಜಯ ಕರ್ನಾಟಕ ಆರಂಭಿಸಿದ ವಿಕ ವಿದ್ಯಾನಿಧಿ ಆದರ್ಶವಾದ ಕೆಲಸವಾಗಿದೆ. ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಮುಂದಿನ ಓದಿಗೆ ಅನುಕೂಲವಾಗಲು ವಿಜಯ ಕರ್ನಾಟಕ ಆರಂಭಿಸಿದ ವಿದ್ಯಾನಿಧಿಗೆ ದಾನಿಗಳು ಉದಾರವಾಗಿ ದೇಣಿಗೆ ನೀಡುವ ಮೂಲಕ ಓದಿ ಜೀವನದಲ್ಲಿ ಸಾಧನೆ ಮಾಡುವಂತಹ ಮಕ್ಕಳಿಗೆ ಬಲ ತುಂಬಬೇಕು. ಕಳೆದ ವರ್ಷ ದೇಣಿಗೆ ಪಡೆದ ವಿದ್ಯಾರ್ಥಿಗಳ ಓದಿಗೆ ನೆರವಾಗಿದೆ. ದಾನ ಮಾಡುವುದು ಪುಣ್ಯದ ಕೆಲಸ. ಬಡವರ ಸೇವೆ ಭಗವಂತನ ಸೇವೆಗೆ ಸಮವಾಗಿದೆ.
-ಡಾ. ಬಸವಲಿಂಗ ಪಟ್ಟದ್ದೇವರು, ಅಧ್ಯಕ್ಷರು, ಅನುಭವ ಮಂಟಪ ಟ್ರಸ್ಟ್, ಬಸವಕಲ್ಯಾಣ
ಫಲಾನುಭವಿ ಮಾತು
ಕಳೆದ ವರ್ಷ ವಿಜಯ ಕರ್ನಾಟಕ ನೀಡಿದ ವಿದ್ಯಾನಿಧಿಯಿಂದ ಪದವಿ ಓದಿಗೆ ಸಹಾಯವಾಗಿದೆ. ಮುಂದಿನ ಓದು ಹೇಗೆ ಎಂಬ ಚಿಂತೆಯಲ್ಲಿದ್ದಾಗ ವಿಜಯ ಕರ್ನಾಟಕ ನೀಡಿದ ನೆರವು ಜೀವನದಲ್ಲಿ ಮರೆಯಲಾಗದು. ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡಿದ ಈ ನೆರವು ಬಣ್ಣಿಸಲು ಸಾಧ್ಯವಿಲ್ಲ. ಈ ಉಪಕಾರ ಪಡೆದವರಿಗೆ ಇದು ಅರ್ಥವಾಗುತ್ತದೆ. ನನ್ನ ಓದಿಗೆ ಬಲ ತುಂಬಿದೆ. ಓದಿಗೆ ಇದ್ದ ಆರ್ಥಿಕ ಅಡಚಣೆ ದೂರವಾಗಿದ್ದು, ಈಗ ಓದು ನಿಶ್ಚಿಂತೆಯಿಂದ ಸಾಗಿದೆ.
-ಶುಭಂ ಶಿಂಧೆ, ವಿಕ ವಿದ್ಯಾನಿಧಿ ಪಡೆದ ವಿದ್ಯಾರ್ಥಿ, ಕಲಬುರಗಿ
ನೆರವು ನೀಡಲು ಹೀಗೆ ಮಾಡಿ...
ಈ ವಿದ್ಯಾರ್ಥಿಗಳ ಪೈಕಿ ಯಾರಿಗೆ ಸಹಾಯ ಮಾಡಬೇಕೆಂದು ಬಯಸುತ್ತೀರೋ ಅವರ ಹೆಸರಿಗೇ ಚೆಕ್ ಬರೆದು ನಮ್ಮ ಕಚೇರಿಗೆ ಕಳುಹಿಸಿ. ನಾವು ಅದನ್ನು ಅವರಿಗೆ ತಲುಪಿಸುತ್ತೇವೆ. ಲಕೋಟೆ ಮೇಲೆ ವಿದ್ಯಾನಿಧಿ ಎಂದು ನಮೂದಿಸಿ.
ನಮ್ಮ ವಿಳಾಸ
ವಿಜಯ ಕರ್ನಾಟಕ, ನಾರಾಯಣ ಎನ್ಕ್ಲೇವ್, 1-103/2, ಮೇಲ್ಮಹಡಿ, ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತ, ರೈಲು ನಿಲ್ದಾಣ ರಸ್ತೆ, ಕಲಬುರಗಿ-585102 ದೂ.ಸಂ.08472253013