ಆ್ಯಪ್ನಗರ

ವಿಮಾನಯಾನ ಶಿಕ್ಷಣಕ್ಕೆ ಅಪಾರ ಬೇಡಿಕೆ

ಏರೋನಾಟಿಕಲ್‌ ಕ್ಷೇತ್ರವು ಈಗ ಆಗಾಧ ಬೆಳವಣಿಗೆ ಕಂಡಿದೆ. ಇತ್ತೀಚೆಗೆ ಕೇಂದ್ರ ಸರಕಾರ ಮಹತ್ವಾಕಾಂಕ್ಷೆಯ ಉಡಾನ್‌ ಯೋಜನೆಯನ್ನು ಪ್ರಕಟಿಸಿದ ಬಳಿಕವಂತೂ ಇದು ಅತ್ಯುತ್ತಮ ಉದ್ಯೋಗಾವಕಾಶ ಒದಗಿಸುವ ಕ್ಷೇತ್ರವಾಗಿ ಇನ್ನಷ್ಟು ಭರವಸೆ ಮೂಡಿಸಿದೆ.

Vijaya Karnataka 23 Jul 2018, 9:54 am
ಏರೋನಾಟಿಕಲ್‌ ಕ್ಷೇತ್ರವು ಈಗ ಆಗಾಧ ಬೆಳವಣಿಗೆ ಕಂಡಿದೆ. ಇತ್ತೀಚೆಗೆ ಕೇಂದ್ರ ಸರಕಾರ ಮಹತ್ವಾಕಾಂಕ್ಷೆಯ ಉಡಾನ್‌ ಯೋಜನೆಯನ್ನು ಪ್ರಕಟಿಸಿದ ಬಳಿಕವಂತೂ ಇದು ಅತ್ಯುತ್ತಮ ಉದ್ಯೋಗಾವಕಾಶ ಒದಗಿಸುವ ಕ್ಷೇತ್ರವಾಗಿ ಇನ್ನಷ್ಟು ಭರವಸೆ ಮೂಡಿಸಿದೆ.
Vijaya Karnataka Web aironatics


ಏರೋನಾಟಿಕಲ್‌ ಕ್ಷೇತ್ರ ಬೆಳೆದಂತೆ ಏವಿಯೇಷನ್‌ ಕ್ಷೇತ್ರವೂ ಅದ್ಭುತ ಪ್ರಗತಿಯನ್ನು ದಾಖಲಿಸುತ್ತಲೇ ಬಂದಿದೆ. ಸಾರಿಗೆ ವ್ಯವಸ್ಥೆಯಲ್ಲಿ ಅತ್ಯಂತ ಪ್ರತಿಷ್ಠಿತ ಮತ್ತು ವೇಗದ ಸಾಧನವಾಗಿ ವಿಮಾನಯಾನ ಉದ್ಯಮ ಬೆಳೆಯುತಿದೆ. ದೇಶೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಇದು ಒದಗಿಸುತ್ತಿದೆ.

ವಿಮಾನಯಾನ ಕೋರ್ಸ್‌ ಅಂದರೆ ಕೇವಲ ಪೈಲಟ್‌ ಆಗುವುದು ಮಾತ್ರ ಅಲ್ಲ. ಇದನ್ನು ಹೊರತು ಪಡಿಸಿ ವಿಮಾನಗಳ ಹಾರಾಟ, ಅವುಗಳ ಕಾರ್ಯಾಚರಣೆ, ಬಳಕೆ, ನಿರ್ವಹಣೆ ಮತ್ತು ನಿಯಂತ್ರಣ ಹೀಗೆ ಹಲವು ವಿಭಾಗಗಳ ಬಗ್ಗೆ ಕಲಿಸಲಾಗುತ್ತದೆ.

ಏವಿಷೇಷನ್‌ ಬೇಡಿಕೆಗೆ ತಕ್ಕಂತೆ ಒಂದೊಂದು ವಿಷಯಕ್ಕೆ ಸಂಬಂಧಿಸಿದಂತೆ ಸರ್ಟಿಫಿಕೇಟ್‌, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಕೋರ್ಸ್‌ಗಳನ್ನು ಸಹಕಾರ ನಗರದಲ್ಲಿರುವ ಸ್ಕೈಬರ್ಡ್‌ ಏವಿಯೇಷನ್‌ ಒದಗಿಸುತ್ತದೆ. ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾದ ಸಂಸ್ಥೆಯು ವಿಮಾನ ಯಾನಕ್ಕೆ ಸಂಬಂಧಪಟ್ಟ ಹಲವಾರು ಕೋರ್ಸ್‌ಗಳನ್ನು ಆಫರ್‌ ಮಾಡುತ್ತದೆ.

ವಿಮಾನ ಯಾನ ಕ್ಷೇತ್ರದ ನಾನಾ ವಿಭಾಗಗಳಲ್ಲಿ ಸಾಕಷ್ಟು ಉದ್ಯೋಗಾವಕಾಶ ಇದೆ. ಆಡಳಿತ, ಲೆಕ್ಕಪತ್ರ, ಮಾನವ ಸಂಪನ್ಮೂಲ, ಅತಿಥಿ ಸತ್ಕಾರ, ಗಗನ ಸಖಿ, ಟಿಕೆಟ್‌ ಬುಕ್ಕಿಂಗ್‌, ಟಿಕೆಟ್‌ ತಪಾಸಣೆ, ಬೋರ್ಡಿಂಗ್‌ ಪಾಸ್‌, ಲಗ್ಗೇಜ್‌ ನಿರ್ವಹಣೆ, ಪ್ರಯಾಣಿಕರ ಸುರಕ್ಷೆ, ಪ್ರವಾಸಿ ತಾಣಗಳ ಮಾಹಿತಿ, ಸ್ಥಳೀಯ ಸಾರಿಗೆ ವ್ಯವಸ್ಥೆಯ ನೆರವು, ಗ್ರಾಹಕರ ತುರ್ತು ಸೇವೆ, ವಿಮಾನದಲ್ಲಿ ಆಹಾರ, ಪಾನೀಯ ವ್ಯವಸ್ಥೆ, ಹೊಟೇಲ್‌ ಪಟ್ಟಿ ಮುಂದುವರಿಯುತ್ತಲೇ ಹೋಗುತ್ತದೆ.

ಈ ಬಾರಿ ಕೇಂದ್ರ ಸರಕಾರವು ಉಡಾನ್ ಯೋಜನೆಯನ್ನು ಘೋಷಿಸಿದೆ. ಇದರಿಂದ ಏವಿಯೇಷನ್‌ ಕ್ಷೇತ್ರ ಇನ್ನಷ್ಟು ವಿಸ್ತಾರಗೊಳ್ಳಲಿದ್ದು, ಉದ್ಯೋಗಾವಕಾಶ ಪ್ರಮಾಣ ಇನ್ನೊಂದೆರೆಡು ವರ್ಷಗಳಲ್ಲಿ ಹಲವು ಪಟ್ಟು ಹೆಚ್ಚಲಿದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ