ತಾಂಡಾದ ಆಶಾಕಿರಣ
ನಿಡಗುಂದಿ: ಪರೀಕ್ಷೆ ಬರೆದು ಹೊಟ್ಟೆ ಪಾಡಿಗಾಗಿ ಗೋವಾಕ್ಕೆ ಗುಳೆ ಹೋದ ಈ ಬಡ ವಿದ್ಯಾರ್ಥಿ, ಫಲಿತಾಂಶ ಬಂದಾಗಲೂ ಅಲ್ಲಿ ಕಲ್ಲು, ಮಣ್ಣು ಹೊರುತ್ತಿದ್ದ. ಮಗನ ಜತೆ ಅಲ್ಲಿಯೇ ಕೆಲಸ ಮಾಡುತ್ತಿರುವ ಪಾಲಕರಿಗೂ ತನ್ನ ಮಗನ ಸಾಧನೆಯ ಅರಿವೂ ಇಲ್ಲ. ಆದರೆ ಅಚ್ಚರಿ ಎಂಬಂತೆ ಈ ಬಡ ಕುಟುಂಬದ ಕುಡಿ ದ್ವಿತೀಯ ಪಿಯು ವಾಣಿಜ್ಯ ವಿಭಾಗದಲ್ಲಿ ಶೇ. 95ರಷ್ಟು ಅಂಕ ಪಡೆಯುವ ಮೂಲಕ ಕಾಲೇಜ್ಗೆ ಪ್ರಥಮ ಬಂದಿದ್ದಾನೆ. ನಿಡಗುಂದಿ ತಾಂಡಾದ ಕಿರಣ ರಾಠೋಡ ವಿಜಯಪುರದ ಸರಕಾರಿ ಪಪೂ ಕಾಲೇಜಿನಲ್ಲಿ ದಾಖಲಾತಿ ಪಡೆದು, ಸರಕಾರಿ ಹಾಸ್ಟೆಲ್ನಲ್ಲಿ ನೆಲೆಸಿ ಉತ್ತಮ ಅಂಕ ಸಂಪಾದಿಸಿದ್ದಾನೆ. ಬಡತನ ದಿಂದ ತತ್ತರಿಸಿ ಜೀವನ ನಿರ್ವ ಹಣೆ ಅಸಾಧ್ಯವೆನಿಸಿದಾಗ ಕಿರಣ ತಂದೆ ಸೀತಾರಾಮ್, ತಾಯಿ ಸುಶೀಲಾಬಾಯಿ ಹೊಟ್ಟೆ ತುಂಬಿಸಿಕೊಳ್ಳಲು ಕೆಲ ವರ್ಷಗಳ ಹಿಂದೆಯೇ ಗೋವಾದ ಪಣಜಿಗೆ ಗುಳೆ ಹೋಗಿದ್ದಾರೆ.
ಪೂರ್ಣ ಹೆಸರು: KIRAN. S. RATHOD
ಅವ್ವನ ನಂಬಿಕಸ್ಥೆ ಮಗಳು !
ವಿಜಯಪುರ: ಅವ್ವನ ಹೊಟ್ಟೆಯಲ್ಲಿದ್ದಾಗಲೇ ಅಪ್ಪನನ್ನು ಕಳೆದಕೊಂಡ ಈಕೆಗೆ ಅವ್ವನೇ ಎಲ್ಲ. ತನ್ನ ಕಷ್ಟದ ಬದುಕು ಮಗಳಿಗೆ ತಟ್ಟಬಾರದು ಎಂದು ಕೂಲಿ ಮಾಡಿಯೇ ಓದಿಸಿದ್ದಾರೆ. ತನಗಾಗಿಯೇ ತನ್ನ ಜೀವನ ಮುಡಿಪಿಟ್ಟ ಅವ್ವನನ್ನು ಚೆನ್ನಾಗಿ ನೋಡಿಕೊಳ್ಳುವ ಛಲದೊಂದಿಗೆ ಈ ಬಡ ವಿದ್ಯಾರ್ಥಿನಿ, ದ್ವಿತೀಯ ಪಿಯುಸಿಯಲ್ಲಿ ಶೇ.94 ಅಂಕದೊಂ ದಿಗೆ ಕಾಲೇಜ್ಗೆ ಪ್ರಥಮ ಸ್ಥಾನದಲ್ಲಿ ಬಂದಿದ್ದಾಳೆ. ವಿಜಯಪುರದ ಜಯಕರ್ನಾಟಕ ಕಾಲೊನಿ ನಿವಾಸಿ, ಕೂಲಿ ಕೆಲಸ ಮಾಡಿಕೊಂಡೇ ಜೀವನ ಸಾಗಿಸುತ್ತಿರುವ ರೇಣುಕಾಳ ಪುತ್ರಿ ಯಶೋಧಾ ಪೂಜಾರಿ ವಿಜಯಪುರದ ಎಸ್.ವೈ. ಕಾಲೇಜಿನಲ್ಲಿ ಸಂಸ್ಥೆಯವರ ನೆರವಿನಿಂದ ಓದಿ ವಾಣಿಜ್ಯ ವಿಭಾಗದಲ್ಲಿ ಶೇ.94 ರಷ್ಟು ಅಂಕಗಳಿಸಿ ಅದೇ ಕಾಲೇಜ್ನಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ಹೆತ್ತ ತಾಯಿಗೆ ಹಾಗೂ ಕಾಲೇಜ್ಗೆ ಕೀರ್ತಿ ತಂದಿದ್ದಾಳೆ.
ಪೂರ್ಣ ಹೆಸರು:YASHODHA. C. PUJARI
ವಿಜ್ಞಾನದಲ್ಲಿ ಚಂದ್ರ ಶಿಖರ !
ಸಿಂದಗಿ: ತಂದೆ ಫೋಟೊಗ್ರಾಫರ್, ತಾಯಿ ಬಳೆ ವ್ಯಾಪಾರಿಯಾಗಿ ಬದುಕಿನ ಬಂಡಿ ನಡೆಸುತ್ತಿದ್ದರೆ, ಇವರ ಮಗ ವಸತಿ ನಿಲಯದಲ್ಲಿದ್ದುಕೊಂಡೇ ಓದಿ ಪಿಯು ದ್ವಿತೀಯ ವರ್ಷದ ವಿಜ್ಞಾನ ವಿಭಾಗದಲ್ಲಿ ಶೇ.93 ರಷ್ಟು ಅಂಕಗಳಿಸಿ, ಕಾಲೇಜ್ಗೆ ಪ್ರಥಮ ಸ್ಥಾನದಲ್ಲಿ ಬಂದಿದ್ದಾನೆ. ವಿಜಯಪುರದ ಎನ್.ಬಿ. ಪಾಟೀಲ ಮೆಮೋರಿಯಲ್ ಕಾಲೇಜ್ನ ಪ್ರವೇಶ ಪಡೆದಿರುವ ಸಿಂದಗಿ ತಾಲೂಕಿನ ಬೂದಿಹಾಳ (ಪಿ.ಹೆಚ್) ಗ್ರಾಮದ ಚಂದ್ರಶೇಖರ ವೆಂಕಟೇಶ ಪತ್ತಾರ ಬಡತನವನ್ನು ಸವಾಲಾಗಿ ಸ್ವೀಕರಿಸಿ ಸಾಧನೆ ಮಾಡಿದವ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಭಾಗವೆಂದರೇ ಕಷ್ಟ. ಆದರೆ ಚಂದ್ರಶೇಖರ ವಿಜಯಪುರದಂತಹ ಮಹಾ ನಗರದಲ್ಲಿ ವಸತಿ ನಿಲಯದಲ್ಲಿ ಇದ್ದುಕೊಂಡು ಸ್ಥಿತಿವಂತರ ಮಕ್ಕಳ ಜತೆ ಸ್ಪರ್ಧೆ ಮಾಡಿ ಕಾಲೇಜ್ಗೆ ಪ್ರಥಮ ಬಂದಿದ್ದು ಹುಬ್ಬೇರಿಸುವಂತೆ ಮಾಡಿದೆ. ಟ್ಯೂಶನ್ಗೆ ಹೋಗದೇ ದಿನಕ್ಕೆ 8 ಗಂಟೆ ಓದುವ ಹವ್ಯಾಸ ಬೆಳೆಸಿಕೊಂಡಿದ್ದು, ಫೀ ಕಟ್ಟಲು ಹಣ ಇಲ್ಲದ ವೇಳೆ ಪ್ರಾಚಾರ್ಯರ ಸಹಾಯದಿಂದ ಪಿಯು ಪೂರ್ಣಗೊಳಿಸಿದ್ದಾನೆ.
ಪೂರ್ಣ ಹೆಸರು:CHANDRASHEKAR VENKATESH PATTAR.
ಆತಂಕದಲ್ಲೇ ಅಧಿಕ ಅಂಕ
ಇಂಡಿ: ಬಿತ್ತನೆ ಮಾಡಲು ಹೊಲ ಇಲ್ಲ, ವಾಸವಿರಲು ಮನೆ ಇಲ್ಲ. ದುಡಿಯದೇ ಗತಿ ಇಲ್ಲದ ಕುಟುಂಬದಲ್ಲಿ ಜನಸಿದ ಈ ಹುಡುಗ, ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಕಾಲೇಜ್ಗೆ ಪ್ರಥಮ ಸ್ಥಾನ ಬಂದಿದ್ದಾನೆ. ಇಂಡಿಯ ಅಕ್ಕಮಹಾ ದೇವಿ ನಗರದ ನಿವಾಸಿ ಅಕ್ಷಯ ಶೇವೂ ಚೌಹಾಣ್ ಇಲ್ಲಿನ ಅಂಜುಮನ್ ಪದವಿ ಪೂರ್ವ ಕಾಲೇಜ್ನಲ್ಲಿ ಪ್ರವೇಶ ಪಡೆದು 88.16 ರಷ್ಟು ಅಂಕ ಪಡೆದ ಸಾಧಕ ವಿದ್ಯಾರ್ಥಿ. ಇವರ ಕುಟುಂಬಕ್ಕೆ ಮನೆ, ಹೊಲ ಇಲ್ಲ. ಶೇವೂ ಹಾಗೂ ರುಕಮಾಬಾಯಿಯ ನಾಲ್ಕು ಗಂಡು, ನಾಲ್ಕು ಹೆಣ್ಣು ಮಕ್ಕಳಲ್ಲಿ ಎಂಟನೇ ಯವ ಈ ಅಕ್ಷಯ. ‘‘ನೀನೂ ದುಡಿಯಲು ಬರಬೇಕು’’ ಎಂಬ ಪಾಲಕರ ಒತ್ತಾಯದ ಮಧ್ಯೆಯೇ ಓದಿನ ಹವ್ಯಾಸ ಬೆಳೆಸಿಕೊಂಡು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾನೆ.
ಪೂರ್ಣ ಹೆಸರು:AKSHYA SHEVU CHAVAN
ಶಾಲಾಗೆ ಒಲಿದ ಶಾರದೆ !
ತಿಕೋಟಾ: ಕೇವಲ 1 ಎಕರೆ ಹೊಂದಿದ ಈ ರೈತ ಕುಟುಂಬದ ಪಾಲಕರ 4 ಹೆಣ್ಣು ಮಕ್ಕಳಲ್ಲಿ ಮೂವರು ಎಸ್ಸೆಸ್ಸೆಲ್ಸಿಯೊಳಗೆ ಶಿಕ್ಷಣ ಮುಗಿಸಿ ಗಂಡನ ಮನೆ ಸೇರಿದ್ದಾರೆ. ಆದರೆ ಕೊನೆ ಮಗಳು ಶಾಲಾಗೆ ಶಾರದೆ ಒಲಿದಿದ್ದಾಳೆ. ಹೀಗಾಗಿಯೇ ಈ ಬಾಲಕಿ, ತಂದೆ- ತಾಯಿಗೆ ಕೊನೆಯವಳಾದರೂ ತಿಕೋಟಾದ ಎ.ಬಿ. ಜತ್ತಿ ಪಿಯು ಕಾಲೇಜ್ನಲ್ಲಿ ವಾಣಿಜ್ಯ ವಿಭಾಗದಲ್ಲಿ ಅಮೋಘ ಸಾಧನೆ ಮಾಡಿದ್ದಾಳೆ. ತಾಜಪುರ (ಎಚ್) ಗ್ರಾಮದ ಶಾಲಾ ಲಕ್ಷ್ಮಣ ಕಟೆ ಕುಟುಂಬ ಕೂಲಿ ಮಾಡಿಯೇ ಉಪ ಜೀವನ ಮಾಡಬೇಕಿದೆ. ಮೂವರು ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಲು ಅಷ್ಟೊಂದು ಶಕ್ತಿ ಇಲ್ಲದ್ದರಿಂದ ಮದುವೆ ಮಾಡಿಕೊಟ್ಟ ಪಾಲಕರು, ಕೊನೆ ಮಗಳನ್ನು ಪಿಯುಸಿ ವರೆಗೆ ಓದಿಸಿರುವುದೇ ದೊಡ್ಡ ಸಾಧನೆ.
ಪೂರ್ಣ ಹೆಸರು: SHALA LAKSHMANA KATE
ಗಣ್ಯರ ಮೆಚ್ಚುಗೆ
ವಿದ್ಯಾರ್ಥಿಗಳ ವಿದ್ಯಾಭ್ಯಾಸದ ದೃಷ್ಠಿಯಿಂದ ವಿಜಯ ಕರ್ನಾಟಕ ಪತ್ರಿಕೆ ತನ್ನ ಸಮುದಾಯದ ಜವಾಬ್ದಾರಿ ನಿಭಾಯಿಸುತ್ತಿರುವುದು ಉತ್ತಮ ಕೆಲಸ. ಬಹಳಷ್ಟು ವಿದ್ಯಾರ್ಥಿಗಳು ಆರ್ಥಿಕ ಕೊರತೆಯಿಂದ ವಿದ್ಯಾಭ್ಯಾಸ ಮೊಟಕುಗೊಳ್ಳು ಸಾಧ್ಯತೆ ಇರುತ್ತದೆ. ಬಡವರು, ಅಲ್ಪಸಂಖ್ಯಾತರು, ಪರಿಶಿಷ್ಠ ಜಾತಿ, ಪಂಗಡ ಸೇರಿದಂತೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಶೈಕ್ಷಣಿಕ ಅಭಿವೃದ್ಧಿಗಾಗಿ ನೆರವು ನೀಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಶಿಕ್ಷಣದ ಒಂದು ಸುಭಾಷಿತ ಹೇಳುವಂತೆ ಕಲಿತ ಋಣ ಕಲಿಸಿ ತೀರಿಸುವ ಎಂದರೆ ಆರ್ಥಿಕವಾಗಿ ಅನುಕೂಲ ಇರುವ ಸಹೃದಯಿ ಬಂಧುಗಳು ನೆರವು ನೀಡುವುದು ಅಗತ್ಯ.
-ಎಸ್.ಆರ್.ಮನಹಳ್ಳಿ, ನಿರ್ದೇಶಕರು, ಮಾನವ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆ, ಬವಿವ ಸಂಘ ಬಾಗಲಕೋಟ
ಈ ಹಿಂದೆ ನೆರವು ಪಡೆದ ವಿದ್ಯಾರ್ಥಿ ಅನಿಸಿಕೆ
ವಿಜಯ ಕರ್ನಾಟಕ ಪತ್ರಿಕೆ ಕೇವಲ ಒಂದು ವಿಭಾಗಕ್ಕೆ ಸೀಮಿತವಾಗದೆ ಎಲ್ಲ ವರ್ಗಕ್ಕೂ ಗಮನ ನೀಡುತ್ತಿರುವುದು ಗಮನಾರ್ಹ. ಪಿಯುಸಿಯಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಣೆಯಿಲ್ಲದೆ ಶಿಕ್ಷಣ ಮೊಟಕುಗೊಳ್ಳುತ್ತಿರುವ ಅನೇಕ ಶೈಕ್ಷಣಿಕ ಸಾಧಕರನ್ನು ಗುರ್ತಿಸಿ ಸಹಾಯಧನ ನೀಡುತ್ತಿರುವುದು ವಿದ್ಯಾರ್ಥಿಗಳ ಓದಿಗೂ ಸಹಕಾರಿ. ಪತ್ರಿಕೆ ನನ್ನನ್ನು ಗುರ್ತಿಸಿದ ನಂತರ ಹಲವು ಎನ್ಜಿಒಗಳು ನನಗೆ ಸಹಾಯ ಮಾಡಿವೆ. ಬಡತನವಿದ್ದರೂ ಉತ್ತಮ ಸಾಧನೆ ತೋರಿರುವ ನಮ್ಮಂತಹ ಅನೇಕರಿಗೆ ವಿಜಯ ಕರ್ನಾಟಕದ ಸಹಾಯಧನ ಸ್ಪೂರ್ತಿ ಆಗುತ್ತದೆ.
-ರಿಯಾಜಅಹಮ್ಮದ ಪಾರಸ್, ವಿಕ ವಿದ್ಯಾನಿಧಿ ಪಡೆದ ವಿದ್ಯಾರ್ಥಿ.
ನೆರವು ಹೀಗೆ ನೀಡಲ ಹೀಗೆ ಮಾಡಿ
ನೀವು ಯಾವ ವಿದ್ಯಾರ್ಥಿಗೆ ಸಹಾಯ ಮಾಡಬೇಕೋ ಆ ವಿದ್ಯಾರ್ಥಿಯ ಹೆಸರನ್ನು ಸ್ಪಷ್ಟವಾಗಿ ಬರೆದು, ದಾನಿಗಳು ಈ ಕೆಳಗಿನ ವಿಳಾಸಕ್ಕೆ ತಮ್ಮ ಚೆಕ್ಗಳನ್ನು ಕಳುಹಿಸಬಹುದು. ಲಕೋಟೆ ಮೇಲೆ ಮೇಲೆ ವಿಕ ವಿದ್ಯಾನಿಧಿ ಎಂದು ನಮೂದಿಸಿ. ವಿಳಾಸ ಈ ಕೆಳಗೆ ನೀಡಲಾಗಿದೆ.
ವಿಜಯಪುರ ಕಚೇರಿ ವಿಳಾಸ
ವಿಜಯ ಕರ್ನಾಟಕ, ಪ್ರೇಮಶ್ರೀ ಟವರ್, 2ನೇ ಮಹಡಿ, ಬಿ ಎಸ್ ಎನ್ಎಲ್ ಕಚೇರಿ ಎದುರು, ಎಂ.ಜಿ. ರಸ್ತೆ, ವಿಜಯಪುರ. ದೂ: 08352 220288
ಬಾಗಲಕೋಟ ಕಚೇರಿಯ ವಿಳಾಸ
ವಿಜಯ ಕರ್ನಾಟಕ, ಪ್ಲಾಟ್ ನಂ.9, ಕೆಎಸ್ಎಸ್ಐಡಿಸಿ, ಇಂಡಸ್ಟ್ರೀಯಲ್ ಎಸ್ಟೇಟ್, ಕಲಾದಗಿ ರೋಡ್, ವಿದ್ಯಾಗಿರಿ, ಬಾಗಲಕೋಟ-587101. ದೂ: 08354 234107
ವಾಟ್ಸ್ಆ್ಯಪ್ ನಂಬರ್ 7899874141
ನಿಡಗುಂದಿ: ಪರೀಕ್ಷೆ ಬರೆದು ಹೊಟ್ಟೆ ಪಾಡಿಗಾಗಿ ಗೋವಾಕ್ಕೆ ಗುಳೆ ಹೋದ ಈ ಬಡ ವಿದ್ಯಾರ್ಥಿ, ಫಲಿತಾಂಶ ಬಂದಾಗಲೂ ಅಲ್ಲಿ ಕಲ್ಲು, ಮಣ್ಣು ಹೊರುತ್ತಿದ್ದ. ಮಗನ ಜತೆ ಅಲ್ಲಿಯೇ ಕೆಲಸ ಮಾಡುತ್ತಿರುವ ಪಾಲಕರಿಗೂ ತನ್ನ ಮಗನ ಸಾಧನೆಯ ಅರಿವೂ ಇಲ್ಲ. ಆದರೆ ಅಚ್ಚರಿ ಎಂಬಂತೆ ಈ ಬಡ ಕುಟುಂಬದ ಕುಡಿ ದ್ವಿತೀಯ ಪಿಯು ವಾಣಿಜ್ಯ ವಿಭಾಗದಲ್ಲಿ ಶೇ. 95ರಷ್ಟು ಅಂಕ ಪಡೆಯುವ ಮೂಲಕ ಕಾಲೇಜ್ಗೆ ಪ್ರಥಮ ಬಂದಿದ್ದಾನೆ. ನಿಡಗುಂದಿ ತಾಂಡಾದ ಕಿರಣ ರಾಠೋಡ ವಿಜಯಪುರದ ಸರಕಾರಿ ಪಪೂ ಕಾಲೇಜಿನಲ್ಲಿ ದಾಖಲಾತಿ ಪಡೆದು, ಸರಕಾರಿ ಹಾಸ್ಟೆಲ್ನಲ್ಲಿ ನೆಲೆಸಿ ಉತ್ತಮ ಅಂಕ ಸಂಪಾದಿಸಿದ್ದಾನೆ. ಬಡತನ ದಿಂದ ತತ್ತರಿಸಿ ಜೀವನ ನಿರ್ವ ಹಣೆ ಅಸಾಧ್ಯವೆನಿಸಿದಾಗ ಕಿರಣ ತಂದೆ ಸೀತಾರಾಮ್, ತಾಯಿ ಸುಶೀಲಾಬಾಯಿ ಹೊಟ್ಟೆ ತುಂಬಿಸಿಕೊಳ್ಳಲು ಕೆಲ ವರ್ಷಗಳ ಹಿಂದೆಯೇ ಗೋವಾದ ಪಣಜಿಗೆ ಗುಳೆ ಹೋಗಿದ್ದಾರೆ.
ಪೂರ್ಣ ಹೆಸರು: KIRAN. S. RATHOD
ಅವ್ವನ ನಂಬಿಕಸ್ಥೆ ಮಗಳು !
ವಿಜಯಪುರ: ಅವ್ವನ ಹೊಟ್ಟೆಯಲ್ಲಿದ್ದಾಗಲೇ ಅಪ್ಪನನ್ನು ಕಳೆದಕೊಂಡ ಈಕೆಗೆ ಅವ್ವನೇ ಎಲ್ಲ. ತನ್ನ ಕಷ್ಟದ ಬದುಕು ಮಗಳಿಗೆ ತಟ್ಟಬಾರದು ಎಂದು ಕೂಲಿ ಮಾಡಿಯೇ ಓದಿಸಿದ್ದಾರೆ. ತನಗಾಗಿಯೇ ತನ್ನ ಜೀವನ ಮುಡಿಪಿಟ್ಟ ಅವ್ವನನ್ನು ಚೆನ್ನಾಗಿ ನೋಡಿಕೊಳ್ಳುವ ಛಲದೊಂದಿಗೆ ಈ ಬಡ ವಿದ್ಯಾರ್ಥಿನಿ, ದ್ವಿತೀಯ ಪಿಯುಸಿಯಲ್ಲಿ ಶೇ.94 ಅಂಕದೊಂ ದಿಗೆ ಕಾಲೇಜ್ಗೆ ಪ್ರಥಮ ಸ್ಥಾನದಲ್ಲಿ ಬಂದಿದ್ದಾಳೆ. ವಿಜಯಪುರದ ಜಯಕರ್ನಾಟಕ ಕಾಲೊನಿ ನಿವಾಸಿ, ಕೂಲಿ ಕೆಲಸ ಮಾಡಿಕೊಂಡೇ ಜೀವನ ಸಾಗಿಸುತ್ತಿರುವ ರೇಣುಕಾಳ ಪುತ್ರಿ ಯಶೋಧಾ ಪೂಜಾರಿ ವಿಜಯಪುರದ ಎಸ್.ವೈ. ಕಾಲೇಜಿನಲ್ಲಿ ಸಂಸ್ಥೆಯವರ ನೆರವಿನಿಂದ ಓದಿ ವಾಣಿಜ್ಯ ವಿಭಾಗದಲ್ಲಿ ಶೇ.94 ರಷ್ಟು ಅಂಕಗಳಿಸಿ ಅದೇ ಕಾಲೇಜ್ನಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ಹೆತ್ತ ತಾಯಿಗೆ ಹಾಗೂ ಕಾಲೇಜ್ಗೆ ಕೀರ್ತಿ ತಂದಿದ್ದಾಳೆ.
ಪೂರ್ಣ ಹೆಸರು:YASHODHA. C. PUJARI
ವಿಜ್ಞಾನದಲ್ಲಿ ಚಂದ್ರ ಶಿಖರ !
ಸಿಂದಗಿ: ತಂದೆ ಫೋಟೊಗ್ರಾಫರ್, ತಾಯಿ ಬಳೆ ವ್ಯಾಪಾರಿಯಾಗಿ ಬದುಕಿನ ಬಂಡಿ ನಡೆಸುತ್ತಿದ್ದರೆ, ಇವರ ಮಗ ವಸತಿ ನಿಲಯದಲ್ಲಿದ್ದುಕೊಂಡೇ ಓದಿ ಪಿಯು ದ್ವಿತೀಯ ವರ್ಷದ ವಿಜ್ಞಾನ ವಿಭಾಗದಲ್ಲಿ ಶೇ.93 ರಷ್ಟು ಅಂಕಗಳಿಸಿ, ಕಾಲೇಜ್ಗೆ ಪ್ರಥಮ ಸ್ಥಾನದಲ್ಲಿ ಬಂದಿದ್ದಾನೆ. ವಿಜಯಪುರದ ಎನ್.ಬಿ. ಪಾಟೀಲ ಮೆಮೋರಿಯಲ್ ಕಾಲೇಜ್ನ ಪ್ರವೇಶ ಪಡೆದಿರುವ ಸಿಂದಗಿ ತಾಲೂಕಿನ ಬೂದಿಹಾಳ (ಪಿ.ಹೆಚ್) ಗ್ರಾಮದ ಚಂದ್ರಶೇಖರ ವೆಂಕಟೇಶ ಪತ್ತಾರ ಬಡತನವನ್ನು ಸವಾಲಾಗಿ ಸ್ವೀಕರಿಸಿ ಸಾಧನೆ ಮಾಡಿದವ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಭಾಗವೆಂದರೇ ಕಷ್ಟ. ಆದರೆ ಚಂದ್ರಶೇಖರ ವಿಜಯಪುರದಂತಹ ಮಹಾ ನಗರದಲ್ಲಿ ವಸತಿ ನಿಲಯದಲ್ಲಿ ಇದ್ದುಕೊಂಡು ಸ್ಥಿತಿವಂತರ ಮಕ್ಕಳ ಜತೆ ಸ್ಪರ್ಧೆ ಮಾಡಿ ಕಾಲೇಜ್ಗೆ ಪ್ರಥಮ ಬಂದಿದ್ದು ಹುಬ್ಬೇರಿಸುವಂತೆ ಮಾಡಿದೆ. ಟ್ಯೂಶನ್ಗೆ ಹೋಗದೇ ದಿನಕ್ಕೆ 8 ಗಂಟೆ ಓದುವ ಹವ್ಯಾಸ ಬೆಳೆಸಿಕೊಂಡಿದ್ದು, ಫೀ ಕಟ್ಟಲು ಹಣ ಇಲ್ಲದ ವೇಳೆ ಪ್ರಾಚಾರ್ಯರ ಸಹಾಯದಿಂದ ಪಿಯು ಪೂರ್ಣಗೊಳಿಸಿದ್ದಾನೆ.
ಪೂರ್ಣ ಹೆಸರು:CHANDRASHEKAR VENKATESH PATTAR.
ಆತಂಕದಲ್ಲೇ ಅಧಿಕ ಅಂಕ
ಇಂಡಿ: ಬಿತ್ತನೆ ಮಾಡಲು ಹೊಲ ಇಲ್ಲ, ವಾಸವಿರಲು ಮನೆ ಇಲ್ಲ. ದುಡಿಯದೇ ಗತಿ ಇಲ್ಲದ ಕುಟುಂಬದಲ್ಲಿ ಜನಸಿದ ಈ ಹುಡುಗ, ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಕಾಲೇಜ್ಗೆ ಪ್ರಥಮ ಸ್ಥಾನ ಬಂದಿದ್ದಾನೆ. ಇಂಡಿಯ ಅಕ್ಕಮಹಾ ದೇವಿ ನಗರದ ನಿವಾಸಿ ಅಕ್ಷಯ ಶೇವೂ ಚೌಹಾಣ್ ಇಲ್ಲಿನ ಅಂಜುಮನ್ ಪದವಿ ಪೂರ್ವ ಕಾಲೇಜ್ನಲ್ಲಿ ಪ್ರವೇಶ ಪಡೆದು 88.16 ರಷ್ಟು ಅಂಕ ಪಡೆದ ಸಾಧಕ ವಿದ್ಯಾರ್ಥಿ. ಇವರ ಕುಟುಂಬಕ್ಕೆ ಮನೆ, ಹೊಲ ಇಲ್ಲ. ಶೇವೂ ಹಾಗೂ ರುಕಮಾಬಾಯಿಯ ನಾಲ್ಕು ಗಂಡು, ನಾಲ್ಕು ಹೆಣ್ಣು ಮಕ್ಕಳಲ್ಲಿ ಎಂಟನೇ ಯವ ಈ ಅಕ್ಷಯ. ‘‘ನೀನೂ ದುಡಿಯಲು ಬರಬೇಕು’’ ಎಂಬ ಪಾಲಕರ ಒತ್ತಾಯದ ಮಧ್ಯೆಯೇ ಓದಿನ ಹವ್ಯಾಸ ಬೆಳೆಸಿಕೊಂಡು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾನೆ.
ಪೂರ್ಣ ಹೆಸರು:AKSHYA SHEVU CHAVAN
ಶಾಲಾಗೆ ಒಲಿದ ಶಾರದೆ !
ತಿಕೋಟಾ: ಕೇವಲ 1 ಎಕರೆ ಹೊಂದಿದ ಈ ರೈತ ಕುಟುಂಬದ ಪಾಲಕರ 4 ಹೆಣ್ಣು ಮಕ್ಕಳಲ್ಲಿ ಮೂವರು ಎಸ್ಸೆಸ್ಸೆಲ್ಸಿಯೊಳಗೆ ಶಿಕ್ಷಣ ಮುಗಿಸಿ ಗಂಡನ ಮನೆ ಸೇರಿದ್ದಾರೆ. ಆದರೆ ಕೊನೆ ಮಗಳು ಶಾಲಾಗೆ ಶಾರದೆ ಒಲಿದಿದ್ದಾಳೆ. ಹೀಗಾಗಿಯೇ ಈ ಬಾಲಕಿ, ತಂದೆ- ತಾಯಿಗೆ ಕೊನೆಯವಳಾದರೂ ತಿಕೋಟಾದ ಎ.ಬಿ. ಜತ್ತಿ ಪಿಯು ಕಾಲೇಜ್ನಲ್ಲಿ ವಾಣಿಜ್ಯ ವಿಭಾಗದಲ್ಲಿ ಅಮೋಘ ಸಾಧನೆ ಮಾಡಿದ್ದಾಳೆ. ತಾಜಪುರ (ಎಚ್) ಗ್ರಾಮದ ಶಾಲಾ ಲಕ್ಷ್ಮಣ ಕಟೆ ಕುಟುಂಬ ಕೂಲಿ ಮಾಡಿಯೇ ಉಪ ಜೀವನ ಮಾಡಬೇಕಿದೆ. ಮೂವರು ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಲು ಅಷ್ಟೊಂದು ಶಕ್ತಿ ಇಲ್ಲದ್ದರಿಂದ ಮದುವೆ ಮಾಡಿಕೊಟ್ಟ ಪಾಲಕರು, ಕೊನೆ ಮಗಳನ್ನು ಪಿಯುಸಿ ವರೆಗೆ ಓದಿಸಿರುವುದೇ ದೊಡ್ಡ ಸಾಧನೆ.
ಪೂರ್ಣ ಹೆಸರು: SHALA LAKSHMANA KATE
ಗಣ್ಯರ ಮೆಚ್ಚುಗೆ
ವಿದ್ಯಾರ್ಥಿಗಳ ವಿದ್ಯಾಭ್ಯಾಸದ ದೃಷ್ಠಿಯಿಂದ ವಿಜಯ ಕರ್ನಾಟಕ ಪತ್ರಿಕೆ ತನ್ನ ಸಮುದಾಯದ ಜವಾಬ್ದಾರಿ ನಿಭಾಯಿಸುತ್ತಿರುವುದು ಉತ್ತಮ ಕೆಲಸ. ಬಹಳಷ್ಟು ವಿದ್ಯಾರ್ಥಿಗಳು ಆರ್ಥಿಕ ಕೊರತೆಯಿಂದ ವಿದ್ಯಾಭ್ಯಾಸ ಮೊಟಕುಗೊಳ್ಳು ಸಾಧ್ಯತೆ ಇರುತ್ತದೆ. ಬಡವರು, ಅಲ್ಪಸಂಖ್ಯಾತರು, ಪರಿಶಿಷ್ಠ ಜಾತಿ, ಪಂಗಡ ಸೇರಿದಂತೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಶೈಕ್ಷಣಿಕ ಅಭಿವೃದ್ಧಿಗಾಗಿ ನೆರವು ನೀಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಶಿಕ್ಷಣದ ಒಂದು ಸುಭಾಷಿತ ಹೇಳುವಂತೆ ಕಲಿತ ಋಣ ಕಲಿಸಿ ತೀರಿಸುವ ಎಂದರೆ ಆರ್ಥಿಕವಾಗಿ ಅನುಕೂಲ ಇರುವ ಸಹೃದಯಿ ಬಂಧುಗಳು ನೆರವು ನೀಡುವುದು ಅಗತ್ಯ.
-ಎಸ್.ಆರ್.ಮನಹಳ್ಳಿ, ನಿರ್ದೇಶಕರು, ಮಾನವ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆ, ಬವಿವ ಸಂಘ ಬಾಗಲಕೋಟ
ಈ ಹಿಂದೆ ನೆರವು ಪಡೆದ ವಿದ್ಯಾರ್ಥಿ ಅನಿಸಿಕೆ
ವಿಜಯ ಕರ್ನಾಟಕ ಪತ್ರಿಕೆ ಕೇವಲ ಒಂದು ವಿಭಾಗಕ್ಕೆ ಸೀಮಿತವಾಗದೆ ಎಲ್ಲ ವರ್ಗಕ್ಕೂ ಗಮನ ನೀಡುತ್ತಿರುವುದು ಗಮನಾರ್ಹ. ಪಿಯುಸಿಯಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಣೆಯಿಲ್ಲದೆ ಶಿಕ್ಷಣ ಮೊಟಕುಗೊಳ್ಳುತ್ತಿರುವ ಅನೇಕ ಶೈಕ್ಷಣಿಕ ಸಾಧಕರನ್ನು ಗುರ್ತಿಸಿ ಸಹಾಯಧನ ನೀಡುತ್ತಿರುವುದು ವಿದ್ಯಾರ್ಥಿಗಳ ಓದಿಗೂ ಸಹಕಾರಿ. ಪತ್ರಿಕೆ ನನ್ನನ್ನು ಗುರ್ತಿಸಿದ ನಂತರ ಹಲವು ಎನ್ಜಿಒಗಳು ನನಗೆ ಸಹಾಯ ಮಾಡಿವೆ. ಬಡತನವಿದ್ದರೂ ಉತ್ತಮ ಸಾಧನೆ ತೋರಿರುವ ನಮ್ಮಂತಹ ಅನೇಕರಿಗೆ ವಿಜಯ ಕರ್ನಾಟಕದ ಸಹಾಯಧನ ಸ್ಪೂರ್ತಿ ಆಗುತ್ತದೆ.
-ರಿಯಾಜಅಹಮ್ಮದ ಪಾರಸ್, ವಿಕ ವಿದ್ಯಾನಿಧಿ ಪಡೆದ ವಿದ್ಯಾರ್ಥಿ.
ನೆರವು ಹೀಗೆ ನೀಡಲ ಹೀಗೆ ಮಾಡಿ
ನೀವು ಯಾವ ವಿದ್ಯಾರ್ಥಿಗೆ ಸಹಾಯ ಮಾಡಬೇಕೋ ಆ ವಿದ್ಯಾರ್ಥಿಯ ಹೆಸರನ್ನು ಸ್ಪಷ್ಟವಾಗಿ ಬರೆದು, ದಾನಿಗಳು ಈ ಕೆಳಗಿನ ವಿಳಾಸಕ್ಕೆ ತಮ್ಮ ಚೆಕ್ಗಳನ್ನು ಕಳುಹಿಸಬಹುದು. ಲಕೋಟೆ ಮೇಲೆ ಮೇಲೆ ವಿಕ ವಿದ್ಯಾನಿಧಿ ಎಂದು ನಮೂದಿಸಿ. ವಿಳಾಸ ಈ ಕೆಳಗೆ ನೀಡಲಾಗಿದೆ.
ವಿಜಯಪುರ ಕಚೇರಿ ವಿಳಾಸ
ವಿಜಯ ಕರ್ನಾಟಕ, ಪ್ರೇಮಶ್ರೀ ಟವರ್, 2ನೇ ಮಹಡಿ, ಬಿ ಎಸ್ ಎನ್ಎಲ್ ಕಚೇರಿ ಎದುರು, ಎಂ.ಜಿ. ರಸ್ತೆ, ವಿಜಯಪುರ. ದೂ: 08352 220288
ಬಾಗಲಕೋಟ ಕಚೇರಿಯ ವಿಳಾಸ
ವಿಜಯ ಕರ್ನಾಟಕ, ಪ್ಲಾಟ್ ನಂ.9, ಕೆಎಸ್ಎಸ್ಐಡಿಸಿ, ಇಂಡಸ್ಟ್ರೀಯಲ್ ಎಸ್ಟೇಟ್, ಕಲಾದಗಿ ರೋಡ್, ವಿದ್ಯಾಗಿರಿ, ಬಾಗಲಕೋಟ-587101. ದೂ: 08354 234107
ವಾಟ್ಸ್ಆ್ಯಪ್ ನಂಬರ್ 7899874141