ಆ್ಯಪ್ನಗರ

ಸಿಲೆಬ್ರಿಟಿ ಟೇಸ್ಟ್‌: ಮುದ್ದೆ ಬಸ್ಸಾರು ಪ್ರಿಯ ಧರ್ಮಣ್ಣ

ಮುಗುಳ್ನಗೆ, ರಾಮ ರಾಮರೇ ಸಿನಿಮಾಗಳಲ್ಲಿ ವಿಭಿನ್ನ ಮಾತಿನ ಶೈಲಿಯ ಮೂಲಕ ಎಲ್ಲರನ್ನು ...

Vijaya Karnataka 30 Jun 2018, 5:00 am
ಮುಗುಳ್ನಗೆ, ರಾಮ ರಾಮರೇ ಸಿನಿಮಾಗಳಲ್ಲಿ ವಿಭಿನ್ನ ಮಾತಿನ ಶೈಲಿಯ ಮೂಲಕ ಎಲ್ಲರನ್ನು ನಗಿಸಿರುವ ನಟ ಧರ್ಮಣ್ಣ ಕಡೂರು ಅವರ ಆಹಾರ ಅಭಿರುಚಿ ಹೀಗಿದೆ.
Vijaya Karnataka Web dharmanna


ನಂದಿನಿ ಕೆ.ಎಲ್‌

ಫೇವರಿಟ್‌ ಫುಡ್‌

ನನಗೆ ವೆಜ್‌ ಹಾಗೂ ನಾನ್‌ವೆಜ್‌ ಆಹಾರಗಳು ಇಷ್ಟವಾಗುತ್ತವೆ. ಮುದ್ದೆ, ಸೊಪ್ಪಿನ ಬಸ್ಸಾರು ನನ್ನ ಆಲ್‌ ಟೈಮ್‌ ಫೇವರಿಟ್‌ ಫುಡ್‌. ಮೊಳಕೆಯೊಡೆದ ಹುರುಳಿಕಾಳು ಸಾರು, ನನ್ನ ಅತ್ತಿಗೆ ಮಾಡುವ ಚಿಕನ್‌ ಫ್ರೈಗಳನ್ನು ನಾನು ಎಷ್ಟು ಬೇಕಾದರೂ ತಿನ್ನುತ್ತೇನೆ.

ಮೆಚ್ಚಿನ ಅಡ್ಡಾ

ನಾನು ಕಡೂರಿನಲ್ಲಿ ಕಾಲೇಜಿಗೆ ಹೋಗುವಾಗ ಅಲ್ಲೊಂದು ವಿನಾಯಕ ಕೆಫೆ ಇತ್ತು. ಅಲ್ಲಿ 4 ರೂಪಾಯಿಗೆ ರೊಟ್ಟಿ, ಪರೋಟ, ಚಪಾತಿ ಕೊಡುತ್ತಿದ್ದರು. ಅದರ ಜೊತೆಗೆ ಬಕೆಟ್‌ಗಟ್ಟಲೇ ಸಾಂಬಾರು, ಚಟ್ನಿ ಕೊಡುತ್ತಿದ್ದರು. ನಾವು ಅದನ್ನೇ ಕಿತ್ತಾಡಿಕೊಂಡು ತಿನ್ನುತ್ತಿದ್ದೆವು. ಬೆಂಗಳೂರಿನಲ್ಲಿ ವಿ.ವಿ ಪುರಂನ ಫುಡ್‌ ಸ್ಟ್ರೀಟ್‌ ನನ್ನ ಮೆಚ್ಚಿನ ಫುಡ್‌ ಅಡ್ಡಾ. ಮಯ್ಯಾಸ್‌ನಲ್ಲಿ ಕಾಫಿ ಕುಡಿಯಲು ಇಷ್ಟ.

ನಳಪಾಕ ಪ್ರವೀಣ

ಚಿಕ್ಕಂದಿನಿಂದಲೂ ನಾನು ಅಮ್ಮನಿಗೆ ಅಡುಗೆಯಲ್ಲಿ ಸಹಾಯ ಮಾಡುತ್ತಾ ಬೆಳೆದವನು. ಎಲ್ಲಾ ತಿನಿಸುಗಳನ್ನು ಮಾಡುವುದರಲ್ಲಿ ಎಕ್ಸ್‌ಪರ್ಟ್‌ ನಾನು. ರವೆ ಉಂಡೆ, ಚಿತ್ರಾನ್ನ, ದೋಸೆ, ಹೋಳಿಗೆ, ಬಜ್ಜಿ, ಬೋಂಡಾಗಳನ್ನು ಚೆನ್ನಾಗಿ ಮಾಡುತ್ತೇನೆ. ನಾನು ಮಾಡುವ ಅಡುಗೆಯನ್ನು ಎಲ್ಲರು ಇಷ್ಟಪಡುತ್ತಾರೆ.

ಕೆ.ಜಿಗಟ್ಟಲೆ ಸ್ವೀಟ್ಸ್‌ ತಿನ್ನುತ್ತಿದ್ದೆ

ನನಗೆ ಖಾರಕ್ಕಿಂತ ಸ್ವೀಟ್ಸ್‌ ತಿಂಡಿ ಇಷ್ಟ. ಚಿಕ್ಕವನಿದ್ದಾಗನ ಮನೆಯಲ್ಲಿ ಏನೇ ಸಿಹಿ ತಿಂಡಿ ಮಾಡಿದರೂ ಕೆ.ಜಿಗಟ್ಟಲೇ ತಿನ್ನುತ್ತಿದ್ದೆ. ಬೇರೆಯವರಿಗೆ ತಿನ್ನಲು ಬಿಡುತ್ತಿರಲಿಲ್ಲ. ನಮ್ಮ ಮನೆಯಲ್ಲಿ ನಾನು ಸಕ್ಕರೆ ತಿನ್ನುತ್ತೇನೆ ಎಂದು ಅದನ್ನು ಬಚ್ಚಿಡುತ್ತಿದ್ದರು. ಈಗ ನಟನಾ ಕ್ಷೇತ್ರಕ್ಕೆ ಬಂದ ನಂತರ ಸ್ವೀಟ್‌ ಹಾಗೂ ಖಾರ ಎರಡನ್ನೂ ಬ್ಯಾಲನ್ಸ್‌ ಮಾಡುತ್ತೇನೆ.

ಅಮ್ಮನ ಟೇಸ್ಟಿ ಚಿತ್ರಾನ್ನ

ನನಗೆ ಹೊರಗಡೆಯ ಊಟಕ್ಕಿಂತ ಮನೆಯೂಟವೇ ಹೆಚ್ಚು ಇಷ್ಟ. ಅದರಲ್ಲೂ ನನ್ನ ಅಮ್ಮ ಮಾಡುವ ಚಿತ್ರಾನ್ನ ದಿನಾ ಕೊಟ್ಟರೂ ತಿನ್ನುತ್ತೇನೆ.ಅವರು ಮಾಡುವ ಚಿತ್ರಾನ್ನ ತುಂಬಾ ಸ್ಪೆಷಲ್‌ ಆಗಿರುತ್ತದೆ. ಅವರು ಕೇವಲ ಖಾರ ಪುಡಿ, ಉಪ್ಪು ಮತ್ತು ಒಗ್ಗರಣೆ ಹಾಕಿ ಮಿಕ್ಕಿದ ಅನ್ನದಿಂದಲೇ ಚಿತ್ರಾನ್ನ ಮಾಡಿಕೊಡುತ್ತಾರೆ. ಆ ಟೇಸ್ಟ್‌ ಫೈವ್‌ ಸ್ಟಾರ್‌ ಹೋಟೆಲ್‌ನಲ್ಲಿಯೂ ಸಿಗುವುದಿಲ್ಲ. ಅವರು ಬೆಲ್ಲ, ಎಳ್ಳು ಹಾಕಿ ಮಾಡುವ ರಾಗಿ ರೊಟ್ಟಿಯೂ ತುಂಬಾ ರುಚಿ.

ಅಡುಗೆ ಅವಾಂತರ

ನಾನು ಚಿಕ್ಕವನಿದ್ದಾಗ ಅಕ್ಕನ ಜೊತೆಗೆ ಸೇರಿ ಸ್ವೀಟ್‌ ಮಾಡಲು ಹೋಗಿದ್ದೆ. ರಾಗಿ ಹಿಟ್ಟಿಗೆ ಬೆಲ್ಲ ಬೆರೆಸಿದೆವು. ಆಮೇಲೆ ಏನು ಮಾಡಬೇಕೆಂದು ತಿಳಿಯದೇ ಹಾಗೆಯೇ ಅದನ್ನು ಹಸಿಯಾಗಿ ತಿಂದೆವು. ಮತ್ತೊಮ್ಮೆ ಹೋಳಿಗೆ ಹೂರಣವನ್ನು ಬೇಯಿಸದೆ ಹಾಗೆಯೇ ತಟ್ಟಿ ಬೇಯಿಸಿ ತಿಂದಿದ್ದೆವು. ಅದು ಹಸಿಯಾಗಿತ್ತು.

ಆಹಾರವೆಂದರೆ ಪಕ್ಕಾ ನಾಟಿ ಶೈಲಿಯ ಹಳ್ಳಿ ಸೊಗಡಿನ ಊಟವಾಗಿರಬೇಕು. ಅದರಲ್ಲಿ ಪ್ರೀತಿ, ಸ್ವಾದದ ಜೊತೆಗೆ ಆರೋಗ್ಯವೂ ಮಿಶ್ರವಾಗಿರಬೇಕು. ಅದನ್ನು ತಿಂದಷ್ಟು ಮನಸ್ಸಿಗೆ ಖುಷಿ ಸಿಗಬೇಕು.

-ಧರ್ಮಣ್ಣ ಕಡೂರು, ನಟ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ