ಆ್ಯಪ್ನಗರ

ಮಧುಮೇಹಿಗಳಿಗೆ ಫೆಸ್ಟಿವಲ್‌ ಡಯಟ್‌

ಹಬ್ಬದ ಸೀಸನ್‌ನಲ್ಲಿಮಧುಮೇಹಿಗಳಿಗೆ ಕೆಲವು ಆಹಾರ ನಿಯಮಗಳನ್ನು ಪಾಲಿಸುವುದು ತುಂಬಾ ...

Vijaya Karnataka 26 Oct 2019, 5:00 am
ಲವಲವಿಕೆ ಸುದ್ದಿಲೋಕ
Vijaya Karnataka Web festival diet-2


ಹಬ್ಬದ ಸೀಸನ್‌ನಲ್ಲಿಮಧುಮೇಹಿಗಳಿಗೆ ಕೆಲವು ಆಹಾರ ನಿಯಮಗಳನ್ನು ಪಾಲಿಸುವುದು ತುಂಬಾ ಕಷ್ಟವಾಗುತ್ತದೆ. ಹಬ್ಬಕ್ಕೆಂದು ಮನೆಯಲ್ಲಿಮಾಡಿದ ಸಿಹಿ ತಿಂಡಿಗಳು ಬೇಡವೆಂದರೂ ಬಾಯಲ್ಲಿನೀರೂರಿಸುತ್ತವೆ, ಕುಟುಂಬ ಸದಸ್ಯರ ಜೊತೆ ಒಟ್ಟಿಗೆ ಹಬ್ಬದೂಟ ಮಾಡಿದಾಗ ಅವರ ಒತ್ತಾಯಕ್ಕೆ ಸಿಹಿ ತಿನ್ನಲೇಬೇಕಾದ ಸಂದರ್ಭ ಬರುತ್ತದೆ, ಹಬ್ಬಕ್ಕೆಂದು ಬೇರೆ ಕಡೆ ಅತಿಥಿಗಳಾಗಿ ಹೋದಾಗ ಅಲ್ಲೂವಿವಿಧ ಸ್ವೀಟ್‌ಗಳನ್ನು ಕೊಡುತ್ತಾರೆ. ಹಬ್ಬದ ಸಿಹಿ ಬೇಡವೆಂದರೆ ಅವರಿಗೆ ಬೇಸರವಾಗುತ್ತದೆ ಎಂದು ಒಂಚೂರು ಸಿಹಿಯನ್ನು ಬಾಯಿಗಿಟ್ಟರೂ ಆಮೇಲಿನ ಕಷ್ಟ ತಪ್ಪಿದ್ದಲ್ಲ. ಇಂಥವರು ಈ ಕೆಳಗಿನ ಸಲಹೆಗಳನ್ನು ಪಾಲಿಸಿ.

ಕಾರ್ಬೊಹೈಡ್ರೇಟ್ಸ್‌ ಆಹಾರ ಬೇಡ: ಕೊಬ್ಬು, ಕಾರ್ಬೊಹೈಡ್ರೇಟ್ಸ್‌, ಪ್ರೋಟೀನ್‌ಗಳಿರುವ ಆಹಾರಗಳು ರಕ್ತದಲ್ಲಿಸಕ್ಕರೆಯ ಮಟ್ಟದ ಮೇಲೆ ಪ್ರಮಾಣ ಬೀರುತ್ತವೆ. ಇವುಗಳು ಸಕ್ಕರೆಯಾಗಿ ವಿಭಜನೆಗೊಂಡು ರಕ್ತನಾಳದಲ್ಲಿಹೀರಸ್ಪಡುತ್ತವೆ. ಆದ್ದರಿಂದ ಪಿಷ್ಟ, ಸಕ್ಕರೆ ಮತ್ತು ನಾರಿನಂಥ ಕಾರ್ಬೊಹೈಡ್ರೇಟ್‌ ಆಹಾರಗಳನ್ನು ಮಧುಮೇಹಿಗಳು ಸೇವಿಸಬೇಡಿ.

ತಂಪು ಪಾನೀಯಗಳಿಗೆ ನೋ ಹೇಳಿ: ಅತಿಥಿಗಳಿಗೆ ಸವ್‌ರ್‍ ಮಾಡಲಾಗುವ ತಂಪು ಪಾನೀಯಗಳಿಗೆ ಸಕ್ಕರೆ ಅಥವಾ ಕೃತಕ ಸಕ್ಕರೆ ಮಧುಮೇಹಿಗಳಿಗೆ ಒಳ್ಳೆಯದಲ್ಲ. ಸೋಡಾ ಬೆರೆಸಿದ ಜ್ಯೂಸ್‌, ಐಸ್‌ ಟೀ ಮತ್ತು ಕೃತಕ ಹಣ್ಣಿನ ಜ್ಯೂಸ್‌ಗಳಲ್ಲಿರುವ ಫ್ರುಕ್ಟೋಸ್‌ ಇನ್ಸುಲಿನ್‌ ಮೇಲೆ ಪ್ರಭಾವ ಬೀರುವುದರಿಂದ ಇಂಥವುಗಳಿಂದ ದೂರವಿರಿ.

ಸಾಸ್‌ ತಿನ್ನಬೇಡಿ: ಕರಿದ ತಿಂಡಿಗಳ ಜೊತೆಗೆ ಕೊಡುವ ಕೆಚಪ್‌, ಮಯೋನಿಸಾ, ಸಾಸ್‌, ಸಿರಪ್‌ ಇತ್ಯಾದಿಗಳನ್ನು ಸೇವಿಸಬೇಡಿ. ಸಕ್ಕರೆ ಅತ್ಯಧಿಕವಾಗಿರುವ ಇದು ರಕ್ತದೊತ್ತಡದ ಮೇಲೆ ಪ್ರಭಾವ ಬೀರುತ್ತದೆ. ಕೆಲವು ಸಿಹಿಗಳಿಗೆ ಜೇನುತುಪ್ಪ, ಮೇಪಲ್‌ ಸಿರಪ್‌ಗಳನ್ನು ಹಾಕಲಾಗುತ್ತದಾದರೂ ಇವುಗಳಲ್ಲೂಸಕ್ಕರೆ ಅಧಿಕವಾಗಿರುತ್ತದೆ.

ಪ್ಯಾಕೆಟ್‌ ತಿಂಡಿ: ಆಲೂ ಚಿಫ್ಸ್‌, ವೇಫರ್‌ ಮುಂತಾದ ಪಿಷ್ಟಭರಿತ ಪ್ಯಾಕೆಟ್‌ ತಿಂಡಿಗಳು ರಕ್ತದಲ್ಲಿರುವ ಸಕ್ಕರೆಯ ಮಟ್ಟವನ್ನು ತೀವ್ರಗತಿಯಲ್ಲಿಹೆಚ್ಚಿಸುತ್ತದೆ. ಇದರಲ್ಲಿಪೌಷ್ಟಿಕ ಅಂಶಗಳೂ ಇಲ್ಲದ ಕಾರಣ ಇವುಗಳನ್ನು ತಿನ್ನಬೇಡಿ.

ಡ್ರೈಫ್ರೂಟ್ಸ್‌: ಹಬ್ಬಕ್ಕೆ ಡ್ರೈಫ್ರೂಟ್ಸ್‌ ಗಿಫ್ಟ್‌ ಮತ್ತು ಅವುಗಳಿಂದ ಮಾಡಿದ ತಿಂಡಿಗಳು ಇದ್ದೇ ಇರುತ್ತವೆ. ಇವುಗಳಲ್ಲಿಪೌಷ್ಟಿಕಾಂಶ ಅಧಿಕವಾಗಿದ್ದರೂ ಸಕ್ಕರೆ ಪ್ರಮಾಣ ಹೆಚ್ಚಿರುತ್ತದೆ. ಒಂದು ಕಪ್‌ ತಾಜಾ ದ್ರಾಕ್ಷಿಯಲ್ಲಿ27 ಗ್ರಾಂ ಕಾರ್ಬೊಹೈಡ್ರೇಟ್‌ ಇದ್ದರೆ, ಒಣ ದ್ರಾಕ್ಷಿಯಲ್ಲಿಈ ಪ್ರಮಾಣ 115 ಗ್ರಾಂ ಇದೆ. ಆದ್ದರಿಂದ ಡ್ರೈಫ್ರೂಟ್ಸ್‌ಗಿಂತ ತಾಜಾ ಹಣ್ಣು ಸೇವಿಸಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ