ಆ್ಯಪ್ನಗರ

ಇಡ್ಲಿಯಲ್ಲಿ ಮತದಾನ ಜಾಗೃತಿ

ವಿವಿಧ ಆಕಾರಗಳ ಮತ್ತು ಬಣ್ಣಗಳ ಇಡ್ಲಿ ತಯಾರಿಸಿ ಅದರಲ್ಲಿ ಪ್ರಜಾಪ್ರಭುತ್ವ ಮತ್ತು ಮತದಾನ ಮಹತ್ವವನ್ನು ಸಾರುವ ಚಿತ್ರಗಳನ್ನು ಮೂಡಿಸಿ ಪ್ರದರ್ಶನಕ್ಕೆ ಇಡಲಾಗಿತ್ತು.

Vijaya Karnataka Web 7 Apr 2019, 4:01 pm
ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು ಮತದಾನ ಜಾಗೃತಿ ಪ್ರಯತ್ನಗಳು ದೇಶಾದ್ಯಂತ ನಡೆಯುತ್ತಲೇ ಇವೆ. ಆದರೆ ತಮಿಳುನಾಡಿನ ರಾಜಧಾನಿಯಲ್ಲಿ ವಿಭಿನ್ನ ರೀತಿಯಲ್ಲಿ ಮತದಾನ ಜಾಗೃತಿ ಕೈಗೊಳ್ಳಲಾಗಿದೆ.
Vijaya Karnataka Web idli


ಬಗೆ ಬಗೆಯ ಇಡ್ಲಿಗಳ ಮೂಲಕ ಮತದಾನದ ಮಹತ್ವ ಸಾರುವ ಪ್ರಯತ್ನವೊಂದನ್ನು ಇತ್ತೀಚೆಗೆ ಚೆನ್ನೈನ ಫುಡ್‌ ಆರ್ಟಿಸ್ಟ್‌ ಅಸೋಸಿಯೇಷನ್‌ ಮಾಡಿದೆ. ದಕ್ಷಿಣ ಭಾರತೀಯರಿಗೆ ಇಡ್ಲಿ ಎಂದರೆ ತುಂಬಾ ಅಚ್ಚುಮೆಚ್ಚು. ಇದರ ಮೂಲಕವೇ ಮತದಾನದ ಮಹತ್ವವನ್ನು ಹೇಳಿದರೆ ಜನರಿಗೆ ಬೇಗ ತಲುಪುತ್ತದೆ ಎಂಬ ಉದ್ದೇಶದಿಂದ ಈ ರೀತಿ ಮಾಡಲಾಗಿದೆ ಎಂದು ಇಡ್ಲಿ ತಯಾರಕರು ಹೇಳಿದ್ದಾರೆ. ಈ ಕಾರಣಕ್ಕೆ ವಿವಿಧ ಆಕಾರಗಳ ಮತ್ತು ಬಣ್ಣಗಳ ಇಡ್ಲಿ ತಯಾರಿಸಿ ಅದರಲ್ಲಿ ಪ್ರಜಾಪ್ರಭುತ್ವ ಮತ್ತು ಮತದಾನ ಮಹತ್ವವನ್ನು ಸಾರುವ ಚಿತ್ರಗಳನ್ನು ಮೂಡಿಸಿ ಪ್ರದರ್ಶನಕ್ಕೆ ಇಡಲಾಗಿತ್ತು.

ಸುಮಾರು 125 ಕೆ.ಜಿ ಅಕ್ಕಿಯನ್ನು ಬಳಸಿ ತಯಾರಿಸಲಾದ ನೂರಾರು ಬಣ್ಣಗಳ ಇಡ್ಲಿಗಳು ಹಲವಾರು ಜನರನ್ನು ಆಕರ್ಷಿಸಿದವು. ಮತದಾನದ ಮಹತ್ವ ಮಾತ್ರವಲ್ಲದೆ, ಜನರು ದುಡ್ಡಿಗಾಗಿ ಮತವನ್ನು ಮಾರದಂತೆಯೂ ಹೇಳುವ ಪ್ರಯತ್ನವನ್ನು ಇಡ್ಲಿಯ ಮೂಲಕ ಮಾಡಲಾಗಿದೆ.

ಪ್ರತಿ ವರ್ಷ ಮಾರ್ಚ್‌ 30ರಂದು ವರ್ಲ್ಡ್‌ ಇಡ್ಲಿ ಡೇ ಆಚರಿಸಲಾಗುತ್ತದೆ. ಇಡ್ಲಿ ಪ್ರಿಯರ ಸಾಲಿನಲ್ಲಿ ಬೆಂಗಳೂರಿಗರು ಮೊದಲ ಸ್ಥಾನದಲ್ಲಿದ್ದರೆ ಮುಂಬಯಿ ಮತ್ತು ಚೆನ್ನೈ ವಾಸಿಗಳು ಎರಡು ಮತ್ತು ಮೂರನೆಯ ಸ್ಥಾನದಲ್ಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ