ತಮಿಳುನಾಡಿನ ಪಳನಿ ಎಂಬ ಪಟ್ಟಣದಲ್ಲಿರುವ ಅರುಲ್ಮಿಗು ದಂಡಾಯುಧಪಾಣಿ ದೇವಸ್ಥಾನದಲ್ಲಿಸಿಗುವ ಪಂಚಾಮೃತ ಪ್ರಸಾದ ತನ್ನ ವಿಶೇಷ ರುಚಿಯಿಂದ ಅತ್ಯಂತ ಪ್ರಸಿದ್ಧವಾಗಿದೆ. ಬೇರೆ ಯಾವ ದೇವಸ್ಥಾನಗಳಲ್ಲೂಕಾಣಸಿಗದ ರುಚಿ ಈ ಪಂಚಾಮೃತದ್ದು. ಬಾಳೆಹಣ್ಣು, ಏಲಕ್ಕಿ, ಬೆಲ್ಲ, ಹಸುವಿನ ತುಪ್ಪ ಮತ್ತು ಜೇನುತುಪ್ಪ ಬಳಸಿ ಮಾಡುವ ಹಾಗೂ ಅಮೃತದಷ್ಟು ರುಚಿಯಾಗಿರುವ ಈ ಪ್ರಸಾದಕ್ಕೆ ಇತ್ತೀಚೆಗೆ ಭೌಗೋಳಿಕ ಮಾನ್ಯತೆ ಸಿಕ್ಕಿದೆ. ತಮಿಳುನಾಡಿನಲ್ಲಿಜಿಐ ಟ್ಯಾಗ್ ಸಿಕ್ಕಿರುವ ಹಲವಾರು ವಸ್ತುಗಳ ಲಿಸ್ಟ್ಗೆ ಹೊಸ ಸೇರ್ಪಡೆ ಪಳನಿ ಪಂಚಾಮೃತ. ಇದೀಗ ಜಗತ್ತಿನಾದ್ಯಂತ ಪಳನಿ ಪ್ರಸಾದ ಎಂದೇ ಗುರುತಿಸಲ್ಪಡುತ್ತದೆ ಮತ್ತು ಇದನ್ನು ಪಳನಿ ಪಟ್ಟಣದೊಳಗೆಯೇ ಮಾಡಬೇಕು ಎಂಬ ನಿಯಮವಿದೆ. ಆಯಾ ಪ್ರದೇಶದ ವಸ್ತುವಿನ ಗುಣಮಟ್ಟ, ಅದಕ್ಕಿಂರುವ ಹಿರಿಮೆ ಮತ್ತು ಅದಕ್ಕಿರುವ ಪ್ರಾದೇಶಿಕ ವಿಶೇಷತೆ ಇತ್ಯಾದಿಗಳನ್ನು ಪರಿಗಣಿಸಿ ಜಿಐ ಟ್ಯಾಗ್ ನೀಡಲಾಗುತ್ತದೆ.
ಪಳನಿ ಪ್ರಸಾದಕ್ಕೆ ಜಿಐ ಟ್ಯಾಗ್
ತಮಿಳುನಾಡಿನ ಪಳನಿ ಎಂಬ ಪಟ್ಟಣದಲ್ಲಿರುವ ಅರುಲ್ಮಿಗು ದಂಡಾಯುಧಪಾಣಿ ದೇವಸ್ಥಾನದಲ್ಲಿಸಿಗುವ ಪಂಚಾಮೃತ ಪ್ರಸಾದ ತನ್ನ ವಿಶೇಷ ರುಚಿಯಿಂದ ಅತ್ಯಂತ ...
Vijaya Karnataka 24 Aug 2019, 5:00 am