ಆ್ಯಪ್ನಗರ

ಪಾನ್‌ನಲ್ಲೂ ಇದೆ ಆರೋಗ್ಯದ ಗುಟ್ಟು

ಊಟದ ನಂತರ ಎಲೆಯಡಿಕೆ ಅಂದರೆ ಪಾನ್‌ ತಿನ್ನುವುದು ಬಹುತೇಕರ ವಾಡಿಕೆ...

Vijaya Karnataka 27 Apr 2019, 5:00 am
ಲವಲವಿಕೆ ಸುದ್ದಿಲೋಕ
Vijaya Karnataka Web paan-1


ಊಟದ ನಂತರ ಎಲೆಯಡಿಕೆ ಅಂದರೆ ಪಾನ್‌ ತಿನ್ನುವುದು ಬಹುತೇಕರ ವಾಡಿಕೆ. ರಸವತ್ತಾದ ಪಾನ್‌ ಜಗಿಯುವ ಖುಷಿಯೇ ಬೇರೆ. ಪಾನ್‌ನಲ್ಲೂ ಹಲವಾರು ವೆರೈಟಿಗಳಿವೆ. ಭಾರತೀಯರ ಆಹಾರ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಪಾನ್‌ ಸೇವನೆಯಿಂದ ಆರೋಗ್ಯ ಪ್ರಯೋಜನಗಳೂ ಇವೆ.

ಮಲಬದ್ಧತೆ ನಿವಾರಣೆ: ವೀಳ್ಯದೆಲೆಯಲ್ಲಿ ನಾರಿನಂಶ ಅಧಿಕವಾಗಿರುವುದರಿಂದ ಪಾನ್‌ ಸೇವನೆಯಿಂದ ಮಲಬದ್ಧತೆ ನಿವಾರಣೆಯಾಗುತ್ತದೆ. ಉಗುರು ಬೆಚ್ಚನೆಯ ನೀರಿನ ಜತೆಗೆ ಸ್ವಲ್ಪ ವೀಳ್ಯದೆಲೆಯನ್ನು ತಿಂದರೆ ದೇಹದಲ್ಲಿರುವ ಕಲ್ಮಶಗಳೆಲ್ಲಾ ಹೋಗುತ್ತವೆ.

ಜೀರ್ಣಕ್ರಿಯೆ ಹೆಚ್ಚಳ: ಕರ್ಮಿನೇಟಿವ್‌ ಮತ್ತು ಗ್ಯಾಸ್ಟ್ರೊಪ್ರೊಟೆಕ್ಟಿವ್‌ ಅಂಶಗಳು ಹೆಚ್ಚಿರುವ ವೀಳ್ಯದೆಲೆ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ವೀಳ್ಯದೆಲೆಯ ರಸಕ್ಕೆ ಸ್ವಲ್ಪ ಕಾಳುಮೆಣಸಿನ ಪುಡಿ ಬೆರೆಸಿ ಸೋಸಿದ ನೀರನ್ನು ಮಕ್ಕಳಿಗೆ ಎರಡು ದಿನಕ್ಕೊಮ್ಮೆ ಎರಡು ಟೀ ಸ್ಪೂನ್‌ ಕುಡಿಸಿದರೆ ಅವರ ಜೀರ್ಣಕ್ರಿಯೆ ಚೆನ್ನಾಗಿ ಆಗಿ ಹಸಿವು ಹೆಚ್ಚುತ್ತದೆ.

ನೋವು ನಿವಾರಕ: ವೀಳ್ಯದೆಲೆಯಲ್ಲಿ ನೋವನ್ನು ನಿವಾರಿಸುವ ಔಷಧೀಯ ಗುಣಗಳಿದ್ದು, ಈ ಎಲೆಯ ಜಜ್ಜಿ ಗಾಯಕ್ಕೆ ಹಚ್ಚಿದರೆ ನೋವು ಕಡಿಮೆಯಾಗುತ್ತದೆ. ವೀಳ್ಯದೆಲೆಯನ್ನು ಜಗಿದರೂ ಹೊಟ್ಟೆ ನೋವು ಇತ್ಯಾದಿಗಳು ಕಡಿಮೆಯಾಗುತ್ತದೆ.

ಗ್ಯಾಸ್ಟ್ರಿಕ್‌ಗೆ ರಾಮಬಾಣ: ಹೊಟ್ಟೆಯಲ್ಲಿ ಆಮ್ಲೀಯತೆ ಹೆಚ್ಚಿ ಕಂಡು ಬರುವ ಹೊಟ್ಟೆ ನೋವಿಗೆ ವೀಳ್ಯದೆಲೆ ಸೇವನೆ ಬೆಸ್ಟ್‌. ಇದು ಹೊಟ್ಟೆಯ ಪಿಎಚ್‌ ಲೆವೆಲನ್ನು ಸಮತೋಲನದಲ್ಲಿಡುತ್ತದೆ.

ಚುರುಕುತನ ಹೆಚ್ಚಳ: ಯಾವುದರಲ್ಲೂ ಆಸಕ್ತಿಯಿರದೆ ಒಂದು ರೀತಿಯ ಮಂಕುತನ ಕಾಡುತ್ತಿದ್ದರೆ ವೀಳ್ಯದೆಲೆ ತಿನ್ನಿ. ಇದು ಬುದ್ಧಿಯನ್ನು ಚುರುಕುಗೊಳಿಸುತ್ತದೆ. ಒಂದು ಟೀ ಸ್ಪೂನ್‌ ವೀಳ್ಯದೆಲೆಯ ರಸಕ್ಕೆ ಸ್ವಲ್ಪ ಜೇನುತುಪ್ಪ ಬೆರೆಸಿ ಪ್ರತಿದಿನ ಎರಡು ಬಾರಿ ಸೇವಿಸಿದರೆ ಉತ್ತಮ ಪರಿಣಾಮ ಬೀರುತ್ತದೆ.

ತಲೆನೋವು ನಿವಾರಕ: ಪದೇ ಪದೆ ಕಾಡುವ ತಲೆನೋವಿಗೆ ವೀಳ್ಯದೆಲೆ ಬೆಸ್ಟ್‌. ವೀಳ್ಯದೆಲೆಯನ್ನು ಜಜ್ಜಿ ಹಣೆಗೆ ಲೇಪಿಸಿದರೆ ನೋವು ಕ್ರಮೇಣ ಕಡಿಮೆಯಾಗುತ್ತದೆ.

ಕೆಮ್ಮಿಗೆ ಬೆಸ್ಟ್‌: ಆ್ಯಂಟಿಬಯೋಟಿಕ್ಸ್‌ನ ಆಗರವಾಗಿರುವ ವೀಳ್ಯದೆಲೆ ಸತತ ಕೆಮ್ಮು ಮತ್ತು ಅದರಿಂದ ಉಂಟಾಗುವ ಉರಿಯನ್ನು ಕಡಿಮೆಗೊಳಿಸುತ್ತದೆ.

ಬಾಯಿಯ ಆರೋಗ್ಯ ಹೆಚ್ಚಳ: ವೀಳ್ಯದೆಲೆಯ ಎಣ್ಣೆಯು ದಂತಕ್ಷ ಯವನ್ನು ತಡೆಯುತ್ತದೆ. ಬಾಯಿಯೊಳಗೆ ಬ್ಯಾಕ್ಟೀರಿಯಾ ಬೆಳವಣಿಗೆಯನ್ನು ತಡೆದು ವಸಡು ಮತ್ತು ಹಲ್ಲನ್ನು ಸದೃಢಗೊಳಿಸುತ್ತದೆ. ಕೆಲವು ಹನಿ ವೀಳ್ಯದೆಲೆಯ ಎಣ್ಣೆ ಬೆರೆಸಿದ ಒಂದು ಕಪ್‌ ಉಗುರು ಬೆಚ್ಚನೆಯ ನೀರಿನಲ್ಲಿ ಬೆಳಗ್ಗೆ ಮತ್ತು ರಾತ್ರಿ ಬಾಯಿ ಮುಕ್ಕಳಿಸಿದರೆ ಬಾಯಿಯ ದುರ್ವಾಸನೆ ಹೋಗುತ್ತದೆ.

ಮೊಡವೆ ನಿವಾರಕ: ಪಾನ್‌ನಲ್ಲಿ ಆ್ಯಂಟಿಮೈಕ್ರೊಬಲ್‌ ಅಂಶಗಳಿದ್ದು ಇದು ಮೊಡವೆ ನಿವಾರಿಸಿ ಚರ್ಮಕ್ಕೆ ಕಾಂತಿ ನೀಡುತ್ತದೆ. ಅಲರ್ಜಿ, ಸನ್‌ಬರ್ನ್‌, ಕಜ್ಜಿ, ಕೆರೆತ, ದುರ್ಗಂಧ ಮುಂತಾದ ಚರ್ಮದ ಸಮಸ್ಯೆಗಳನ್ನು ನಿವಾರಿಸುತ್ತದೆ. ವೀಳ್ಯದೆಲೆಯ ರಸಕ್ಕೆ ಸ್ವಲ್ಪ ಅರಶಿನ ಪುಡಿ ಹಾಕಿ ಮುಖಕ್ಕೆ ಲೇಪಿಸಿದರೆ ಉತ್ತಮ ಪರಿಣಾಮ ಬೀರುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ