ಆ್ಯಪ್ನಗರ

ದೈಹಿಕ, ಮಾನಸಿಕ ಆರೋಗ್ಯಕ್ಕೆ ಕಬ್ಬಿನ ರಸ

ತೂಕ ಕಡಿಮೆ ಮಾಡಿಕೊಳ್ಳುವವರಿಗೂ ಸುಗರ್‌ಕೇನ್‌ ಜ್ಯೂಸ್‌ ಬೆಸ್ಟ್‌. ಇದರಲ್ಲಿ ಅಧಿಕ ಪ್ರಮಾಣದಲ್ಲಿರುವ ನ್ಯಾಚುರಲ್‌ ಶುಗರ್‌ ಕ್ಯಾಲೊರಿ ಬರ್ನ್‌ ಮಾಡಲು ಸಹಕಾರಿಯಾಗಿದೆ.

Vijaya Karnataka Web 22 Apr 2019, 4:57 pm
15% ನೈಸರ್ಗಿಕ ಸಕ್ಕರೆ ಅಂಶವಿರುವ ಕಬ್ಬಿನ ಹಾಲು ಬೇಸಿಗೆಯಲ್ಲಿ ನಿರ್ಜಲೀಕರಣವನ್ನು ತಡೆಯಲು ಅತ್ಯುತ್ತಮ ಪಾನೀಯ. ಸಿಹಿ ಸಿಹಿಯಾದ ಕಬ್ಬಿನ ರಸ ದೇಹಕ್ಕೆ ಶಕ್ತಿ ತುಂಬುವುದಲ್ಲದೇ ಮಾತ್ರವಲ್ಲದೆ ಮಾನಸಿಕ ಆರೋಗ್ಯಕ್ಕೂ ಸಹಕಾರಿ ಎನ್ನಲಾಗುತ್ತದೆ.
Vijaya Karnataka Web Sugar CAne Juice


ದೈಹಿಕ ಆರೋಗ್ಯಕ್ಕೆ ಇದರ ಪ್ರಯೋಜನ

ತೂಕ ಕಡಿಮೆ ಮಾಡಿಕೊಳ್ಳುವವರಿಗೂ ಸುಗರ್‌ಕೇನ್‌ ಜ್ಯೂಸ್‌ ಬೆಸ್ಟ್‌. ಇದರಲ್ಲಿ ಅಧಿಕ ಪ್ರಮಾಣದಲ್ಲಿರುವ ನ್ಯಾಚುರಲ್‌ ಶುಗರ್‌ ಕ್ಯಾಲೊರಿ ಬರ್ನ್‌ ಮಾಡಲು ಸಹಕಾರಿಯಾಗಿದೆ.

ಮೂತ್ರ ಮಾರ್ಗದಲ್ಲಿ ಸೋಂಕಾಗಿದ್ದರೆ ಕಬ್ಬಿನ ರಸ ಕುಡಿದರೆ ನಿವಾರಣೆಯಾಗುತ್ತದೆ, ಮೂತ್ರ ಪಿಂಡಲ್ಲಿ ಕಲ್ಲಿದ್ದರೆ ನಿವಾರಣೆಯಾಗುತ್ತದೆ.

ಬಾಣಂತಿಯರ ಹಾಲು ಹೆಚ್ಚಲು ಕಬ್ಬಿನ ಹಾಲು ಅತ್ಯುತ್ತಮ ಪಾನೀಯ

ಕಬ್ಬಿನ ಗಿಡದ ಬೇರಿನ ಕಷಾಯ ಹೊಟ್ಟೆ ಹುಳು ನಾಶಕ್ಕೆ ಅತ್ಯುತ್ತಮ

ದೀರ್ಘ ಕಾಲದಿಂದ ಕೆಮ್ಮಿದ್ದರೆ ಒಂದು ಲೀಟರ್‌ ಕಬ್ಬಿನ ರಸಕ್ಕೆ 250 ಗ್ರಾಂ ದೇಸಿ ಹಸುವಿನ ತುಪ್ಪ ಸೇರಿಸಿ ಕೇವಲ ತುಪ್ಪ ಉಳಿಯುವ ಹಾಗೆ ಚೆನ್ನಾಗಿ ಕುದಿಸಿ. ಬೆಳಗ್ಗೆ ರಾತ್ರಿ ಆ ತುಪ್ಪವನ್ನು 1 ಚಮಚ ಸೇವಿಸಿದರೆ ಕೆಮ್ಮು ಬೇಗ ಗುಣವಾಗುತ್ತದೆ.

ಚೆನ್ನಾಗಿ ಕುದಿಸಿ ನಿಯಮಿತವಾಗಿ ಕುಡಿದರೆ ಜೀರ್ಣಶಕ್ತಿ ಹೆಚ್ಚುತ್ತದೆ.

ಕಬ್ಬಿನ ರಸಕ್ಕೆ ನಿಂಬೆ ರಸ ಸೇರಿಸಿ ಸೇವಿಸಿದರೆ ಮಲೇರಿಯಾದಲ್ಲಿ ಬರುವ ವಾಂತಿ ಕಡಿಮೆಯಾಗುತ್ತದೆ.

ಕಬ್ಬಿನ ರಸವನ್ನು ವಿನೆಗರ್‌ ಜೊತೆ ಬೆರೆಸಿ ದೇಹದ ಚರ್ಮಕ್ಕೆ ಹಚ್ಚಿದರೆ ಟೈಫಾಯ್ಡ್‌ ಜ್ವರದಿಂದ ದೇಹದಲ್ಲಾಗುವ ಕೆಂಪು ಕಲೆಗಳು ಮತ್ತು ನೋವು ಕಡಿಮೆಯಾಗುತ್ತವೆ.

ಒಣ ಕೆಮ್ಮಿದ್ದರೆ ದಿನಕ್ಕೆ 2 ಬಾರಿ ಕಬ್ಬಿನ ರಸ ಸೇವಿಸಿದರೆ ಬೇಗ ಗುಣವಾಗುತ್ತದೆ.

ಒಂದು ಲೋಟ ಕಬ್ಬಿನ ರಸಕ್ಕೆ 2 ಚಮಚ ಜೇನುತುಪ್ಪ ಸೇರಿಸಿ ಊಟದ ಮುಂಚೆ ಸೇವಿಸಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ.

ಮಾನಸಿಕ ಆರೋಗ್ಯಕ್ಕೆ

ಇದರಲ್ಲಿರುವ ಅಮಿನೊ ಆ್ಯಸಿಡ್ಸ್‌ ಒತ್ತಡ ಉಂಟು ಮಾಡುವ ಹಾರ್ಮೋನ್‌ಗಳ ಮಟ್ಟವನ್ನು ಬ್ಯಾಲೆನ್ಸ್‌ ಮಾಡುತ್ತದೆ. ಇದರಿಂದ ಚೆನ್ನಾಗಿ ನಿದ್ದೆ ಬಂದು ಒತ್ತಡ ಕಡಿಮೆಯಾಗುತ್ತದೆ.

ತಾಜಾ ಕಬ್ಬಿನ ರಸವನ್ನು ನಿಯಮಿತವಾಗಿ ಸೇವಿಸಿದರೆ ಇನ್ಸೊಮ್ನಿಯ ಸಮಸ್ಯೆಯೂ ದೂರವಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ