ಆ್ಯಪ್ನಗರ

ರುಚಿ ಶುಚಿ ಅಡುಗೆಗೆ ಕಿಚನ್ ಟಿಪ್ಸ್

ತರಕಾರಿ ಸೊಪ್ಪು ಸುತ್ತಲು ಅಥವಾ ಕೈ ಒರೆಸಲು ಇತ್ಯಾದಿಗಳಿಗೆ ನ್ಯೂಸ್‌ ಪೇಪರ್‌ ಬಳಸುವುದಾದರೆ ಪತ್ರಿಕೆಯ ಮಧ್ಯ ಪುಟಗಳನ್ನು ಉಪಯೋಗಿಸಿ. ಮೊದಲ ಪುಟ ಮತ್ತು ಕೊನೆಯ ಪುಟ ಫುಟ್‌ಪಾತ್‌ ಮೇಲೆ ಬಿದ್ದು ಕೊಳೆಯಾಗಿರುತ್ತದೆ.

Vijaya Karnataka Web 8 Apr 2019, 4:48 pm
ಅಡುಗೆ ಕೋಣೆಯಲ್ಲಿ ಕೆಲವು ವಿಷಯಗಳತ್ತ ಗಮನ ಹರಿಸಿದರೆ ಅಡುಗೆ ಕೆಲಸ ತುಂಬಾ ಸುಲಭವಾಗುತ್ತದೆ ಹಾಗೂ ಮಾಡಿದ ಆಹಾರಗಳೂ ರುಚಿ ಶುಚಿಯಾಗಿರುತ್ತವೆ.
Vijaya Karnataka Web Food


-ತರಕಾರಿ ಸೊಪ್ಪು ಸುತ್ತಲು ಅಥವಾ ಕೈ ಒರೆಸಲು ಇತ್ಯಾದಿಗಳಿಗೆ ನ್ಯೂಸ್‌ ಪೇಪರ್‌ ಬಳಸುವುದಾದರೆ ಪತ್ರಿಕೆಯ ಮಧ್ಯ ಪುಟಗಳನ್ನು ಉಪಯೋಗಿಸಿ. ಮೊದಲ ಪುಟ ಮತ್ತು ಕೊನೆಯ ಪುಟ ಫುಟ್‌ಪಾತ್‌ ಮೇಲೆ ಬಿದ್ದು ಕೊಳೆಯಾಗಿರುತ್ತದೆ.

-ಗುಲ್ಕಂದ್‌ ಗಟ್ಟಿಯಾಗಿದ್ರೆ ಅದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಚೆನ್ನಾಗಿ ಕಲಸಿದರೆ ಮೃದು ಮತ್ತು ರುಚಿಯಾಗುತ್ತದೆ

-ಕಬ್ಬಿಣದ ಮತ್ತು ಕೋಟಿಂಗ್‌ ತವಾಗಳ ಮೇಲೆ ಸ್ವಲ್ಪ ಎಣ್ಣೆ ಹಾಗೂ ಪುಡಿ ಉಪ್ಪು ಹಾಕಿ ಅರ್ಧ ಕತ್ತರಿಸಿದ ಆಲೂಗೆಡ್ಡೆ ಹಿಂಭಾಗಕ್ಕೆÜ ಫೋರ್ಕ್‌ ಚುಚ್ಚಿ ತವಾ ಮೇಲೆ ಅದನ್ನು ಒಂದೆರಡು ಸುತ್ತು ಉಜ್ಜಿ ದೋಸೆ ಮಾಡಿದರೆ ದೋಸೆ ತವಾಗೆ ಅಂಟುವುದಿಲ್ಲ.

-ರಾಗಿ ಮುದ್ದೆ ಮಾಡುವಾಗ ನೀರಿಗೆ ಉಪ್ಪು ಮತ್ತು ಎಣ್ಣೆ ಹಾಕುವ ಜೊತೆಗೆ ಸ್ವಲ್ಪ ಖಾರ ಪುಡಿ ಅಥವಾ ಸಾರಿನ ಪುಡಿ ಹಾಕಿದರೆ ಮುದ್ದೆ ರುಚಿಯಾಗಿರುತ್ತದೆ.

-ರಾಗಿ ಹಿಟ್ಟಿನ ಜೊತೆಗೆ ಒಂದು ಹಿಡಿಯಷ್ಟು ಮೆತ್ತನೆಯ ಅನ್ನ ಸೇರಿಸಿದರೂ ಮುದ್ದೆ ಟೇಸ್ಟಿಯಾಗಿರುತ್ತದೆ.

-ಒಣ ಮೆಣಸಿನಕಾಯಿಯನ್ನು ಬಿಸಿ ನೀರಲ್ಲಿ ನೆನೆಸಿ ನಂತರ ಗ್ರೇವಿ ಮಸಾಲೆಗೆ ಹಾಕಿ ರುಬ್ಬಿದರೆ ಹೆಚ್ಚು ಗಾಢವಾದ ಕೆಂಪು ಬಣ್ಣ ಬರುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ