ಆ್ಯಪ್ನಗರ

ಆಷಾಢ ಶುಕ್ರವಾರ ಲಕ್ಷ್ಮಿಗೆ ಪೈನಾಪಲ್‌ ಶ್ರೀಖಂಡ ನೈವೇದ್ಯ

ಶ್ರೀಖಂಡ ಮಹಾರಾಷ್ಟ್ರದ ಪ್ರಸಿದ್ಧ ತಿನಿಸು, ಕೊಲ್ಲಾಪುರದಮ್ಮನ ನೈವೇದ್ಯ ಎಂದರೆ ಶ್ರೀಖಂಡ, ಇದನ್ನು ಮಾಡುವ ವಿಧಾನ ಸುಲಭವಾಗಿದ್ದು ರೆಸಿಪಿ ನೋಡಿ ಇಲ್ಲಿದೆ.

Vijaya Karnataka Web 11 Jul 2019, 2:22 pm
ಆಷಾಢ ಶುಕ್ರವಾರ ಮಹಾಲಕ್ಷ್ಮಿ ಪೂಜೆಗೆ ತುಂಬಾ ಮಹತ್ವ. ಈ ಪೂಜೆಗೆ ದೇವಿಗೆ ಮಲ್ಲಿಗೆ ಹೂ ಮುಡಿಸಿ, ಹಾಲಿನಿಂದ ಮಾಡಿದ ನೈವೇದ್ಯ ನೀಡಿದರೆ ಸಂತೃಪ್ತಳಾಗಿ ವರ ನೀಡುತ್ತಾಳೆ ಎಂಬ ನಂಬಿಕೆ ಇದೆ.
Vijaya Karnataka Web pine apple shreekhand


ಇಲ್ಲಿ ದೇವಿಗೆ ನೈವೇದ್ಯ ಇಡಲು ಪೈನಾಪಲ್‌ ಶ್ರೀಖಂಡ ರೆಸಿಪಿ ನೀಡಿದ್ದೇವೆ ನೋಡಿ:
(ಪೈನಾಪಲ್‌ ಬದಲು ಮಾವಿನ ಹಣ್ಣಿನ ಶ್ರೀಖಂಡ ಬೇಕಾದರೂ ಮಾಡಬಹುದು)
ಬೇಕಾಗುವ ಪದಾರ್ಥಗಳು
* ಒಂದು ಕಪ್ ಮೊಸರು
* ಮುಕ್ಕಾಲು ಕಪ್‌ ಸಕ್ಕರೆ ಪುಡಿ
* ಪೈನಾಪಲ್ ಹೋಳು
ಅಲಂಕಾರಕ್ಕೆ
* ಪಿಸ್ತಾ, ಕೇಸರಿ ದಳ, ಏಲಕ್ಕಿ ಪುಡಿ

ಮಾಡುವ ವಿಧಾನ:
ಮೊಸರನ್ನು ಚೆನ್ನಾಗಿ ಕದಡಿಕೊಳ್ಳಬೇಕು, ಅದಕ್ಕೆ ಸಕ್ಕರೆ ಪುಡಿ ಹಾಕಿ ಮಿಕ್ಸ್ ಮಾಡಿ, ನಂತರ ಪೈನಾಪಲ್ ಹೋಳು, ಕೇಸರಿ ದಳ, ಏಲಕ್ಕಿ ಪುಡಿಯನ್ನು ಬೆರೆಸಿ ಫ್ರಿಡ್ಜ್‌ನಲ್ಲಿಟ್ಟು ಸ್ವಲ್ಪ ಹೊತ್ತಿನ ಸರ್ವ್‌ ಮಾಡಿ.

ಇದನ್ನು ಪೂರಿ ಅಥವಾ ಚಪಾತಿ ಜತೆ ನೆಚ್ಚಿಕೊಂಡು ತಿನ್ನಲು ಚೆನ್ನಾಗಿರುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ