ಆ್ಯಪ್ನಗರ

ಬಿಸಿಲ ಉರಿಗೆ ದೇಹಕ್ಕೆ ತಂಪಾಗಿಸುವ ಜ್ಯೂಸ್ ರೆಸಿಪಿ

ವಿಶೇಷವಾಗಿ ಬೇಸಿಗೆ ಕಾಲಕ್ಕೆ ಕುಡಿಯುವ ತಂಪು ಪಾನೀಯಗಳ ರೆಸಿಪಿಗಳು ನಿಮಗಾಗಿ..

Vijaya Karnataka 17 Apr 2019, 4:00 pm
ಬೇಸಿಗೆ ಎಂದರೆ ಹಾಗೆ ಬಾಯಾರಿಕೆ ಆಗುತ್ತಲೇ ಇರುತ್ತದೆ. ಅಷ್ಟೇ ಅಲ್ಲ ಉಷ್ಣ ಹವಾಮಾನದಲ್ಲಿ ನಾವು ದೇಹವನ್ನು ತಂಪಾಗಿಡಲು ನೀರು, ಪಾನೀಯ ಸೇರಿದಂತೆ ದ್ರವ ಆಹಾರ ಸೇವಿಸುವುದು ಸಹ ಮುಖ್ಯವಾಗುತ್ತದೆ. ವಿಶೇಷವಾಗಿ ಬೇಸಿಗೆ ಕಾಲಕ್ಕೆ ಕುಡಿಯುವ ತಂಪು ಪಾನೀಯಗಳ ರೆಸಿಪಿಗಳು ನಿಮಗಾಗಿ..
Vijaya Karnataka Web Juice


ಕಲ್ಲಂಗಡಿ ಜ್ಯೂಸ್‌

ಸಾಮಗ್ರಿ: ದೊಡ್ಡ ಕಲ್ಲಂಗಡಿ ಹಣ್ಣು-ಅರ್ಧ, ಸಕ್ಕರೆ-ಕಾಲು ಕಿಲೋ.

ವಿಧಾನ: ಕಲ್ಲಂಗಡಿ ಹಣ್ಣನ್ನು ಕತ್ತರಿಸಿ ಬೀಜ ತೆಗೆದು ರುಬ್ಬಿ. ಇದಕ್ಕೆ ಸಕ್ಕರೆ ಬೆರೆಸಿ, ಬೇಕಿದ್ದರೆ ಸ್ವಲ್ಪ ಕಾಳು ಮೆಣಸಿನ ಪುಡಿ ಉದುರಿಸಿ ಕುಡಿಯಬಹುದು.

ಕೋಕಂ ಶರ್ಬತ್‌

ಸಾಮಗ್ರಿ: ಪುನರ್ಪುಳಿ ಹಣ್ಣು-8, ಸಕ್ಕರೆ-ಕಾಲು ಕಿಲೋ.

ವಿಧಾನ: ಕೆಂಪಾದ ಹಾಗೂ ಗಟ್ಟಿಯಿರುವ ಪುನರ್ಪುಳಿ ಹಣ್ಣನ್ನು ಐದು ಲೋಟ ನೀರಿನಲ್ಲಿ ಬೀಜ ಸಮೇತವಾಗಿ ಕಿವುಚಿ. ಬಳಿಕ ಇದಕ್ಕೆ ಸಕ್ಕರೆ ಬೆರೆಸಿ ಕದಡಿ ಜರಡಿ ಹಿಡಿದರೆ ಕುಡಿಯಲು ರೆಡಿ.

ಹೆಸರು ಕಾಳಿನ ಜ್ಯೂಸ್‌

ಸಾಮಗ್ರಿ: ಹೆಸರು ಕಾಳು-100 ಗ್ರಾಂ, ಸಕ್ಕರೆ-ಕಾಲು ಕಿಲೋ, ಉಪ್ಪು-1 ಚಮಚ.

ವಿಧಾನ: ಹಸಿರು ಬಣ್ಣದ ಹೆಸರು ಕಾಳನ್ನು ಚೆನ್ನಾಗಿ ಹುರಿದು ಒಂದು ತಾಸು ನೆನೆಸಿಟ್ಟು ಬಳಿಕ ನುಣ್ಣಗೆ ರುಬ್ಬಿ. ಇದಕ್ಕೆ ಸಕ್ಕರೆ, ಉಪ್ಪು ಮತ್ತು ಐದು ಲೋಟ ನೀರು ಬೆರೆಸಿ ಕದಡಿದರೆ ಸವಿಯಲು ರೆಡಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ