ಆ್ಯಪ್ನಗರ

ಹೀರೆಕಾಯಿ ಬೋಂಡ ಬಲು ರುಚಿ

ಆರೋಗ್ಯಕ್ಕೆ ಪೂರಕವಾಗಿರುವ ಹೀರೆಕಾಯಿಯಿಂದ ಪಲ್ಯ ಮಾತ್ರವಲ್ಲದೆ ಇನ್ನಿತರ ಟೇಸ್ಟಿ ಖಾದ್ಯಗಳನ್ನೂ ...

Vijaya Karnataka 19 Oct 2019, 5:00 am
ಲೀಲಾ ಚಂದ್ರಶೇಖರ್‌
Vijaya Karnataka Web heerekayi rasapalya-1

ಆರೋಗ್ಯಕ್ಕೆ ಪೂರಕವಾಗಿರುವ ಹೀರೆಕಾಯಿಯಿಂದ ಪಲ್ಯ ಮಾತ್ರವಲ್ಲದೆ ಇನ್ನಿತರ ಟೇಸ್ಟಿ ಖಾದ್ಯಗಳನ್ನೂ ಮಾಡಬಹುದು. ಅಂಥ ಕೆಲವು ರೆಸಿಪಿ ಇಲ್ಲಿದೆ.

ಹೀರೆಕಾಯಿ ಬೋಂಡ

ಸಾಮಗ್ರಿ: ಕಡ್ಲೆಹಿಟ್ಟು-ಮುಕ್ಕಾಲು ಕಪ್‌, ಅಕ್ಕಿ ಹಿಟ್ಟು-ಅರ್ಧ ಕಪ್‌, ಉಪ್ಪು ಮತ್ತು ಖಾರ ಪುಡಿ-ರುಚಿಗೆ ತಕ್ಕಷ್ಟು, ಗರಂ ಮಸಾಲ ಪುಡಿ ಅಥವ ಜೀರಿಗೆ ಪುಡಿ-ಅರ್ಧ ಚಮಚ, ಬಿಸಿ ಎಣ್ಣೆ- 2 ಟೇಬಲ್‌ ಚಮಚ, ಅಡುಗೆ ಸೋಡಾ-1 ಚಿಟಿಕೆ, ಸಿಪ್ಪೆ ಬಲಿಯದ ದೊಡ್ಡ ಹೀರೆಕಾಯಿ-1, ಕರಿಯಲು ಎಣ್ಣೆ.

ವಿಧಾನ: ಕಡ್ಲೆಹಿಟ್ಟಿಗೆ ಅಕ್ಕಿ ಹಿಟ್ಟು, ಉಪ್ಪು, ಖಾರ ಪುಡಿ, ಜೀರಿಗೆ ಪುಡಿ, ಬಿಸಿ ಎಣ್ಣೆ ಮತ್ತು ಅಡುಗೆ ಸೋಡಾ ಹಾಕಿ ನೀರು ಸೇರಿಸಿ ಬಜ್ಜಿ ಹಿಟ್ಟಿನ ಹದಕ್ಕೆ ಕಲಸಿಡಿ. ಹೀರೆಕಾಯಿಯನ್ನು ತೊಳೆದು ದುಂಡಗೆ ಮಧ್ಯಮ ಗಾತ್ರದಲ್ಲಿಕತ್ತರಿಸಿ ಕಲಸಿಟ್ಟ ಹಿಟ್ಟಿನಲ್ಲಿಅದ್ದಿ ಹದವಾಗಿ ಕಾದ ಎಣ್ಣೆಯಲ್ಲಿಕರಿದು ಟಿಶ್ಯೂ ಪೇಪರ್‌ ಮೇಲೆ ಹಾಕಿ. ಈ ಬೋಂಡಾಗಳನ್ನು ಕಾಯಿ ಚಟ್ನಿ ಅಥವಾ ಟೊಮೇಟೊ ಸಾಸ್‌ ಜೊತೆ ಸವಿಯಿರಿ.

ಹೀರೆಕಾಯಿ ಸಿಹಿ ಹುಳಿ

ಸಾಮಗ್ರಿ: ಹೆಚ್ಚಿದ ಹೀರೆಕಾಯಿ ಹೋಳು-2 ಬಟ್ಟಲು, ಹೆಸರುಬೇಳೆ-1 ಹಿಡಿ, ಗಸಗಸೆ-1 ಚಮಚ, ತೆಂಗಿನ ತುರಿ-1 ಹಿಡಿ, ಬೆಲ್ಲ-1 ಚಮಚ, ಹಾಲು-1 ಸಣ್ಣ ಕಪ್‌, ಉಪ್ಪು-1 ಚಿಟಿಕೆ, ಒಗ್ಗರಣೆಗೆ ಎಣ್ಣೆ-2 ಚಮಚ, ಸಾಸಿವೆ-ಸ್ವಲ್ಪ, ಒಣ ಮೆಣಸಿನಕಾಯಿ ತುಂಡುಗಳು ಮತ್ತು ಕರಿಬೇವು.

ವಿಧಾನ: ಒಂದು ಹಿಡಿ ಹೀರೆಕಾಯಿ ಮತ್ತು ಹೆಸರುಬೇಳೆಗೆ ಗಸಗಸೆ, ತೆಂಗಿನ ತುರಿ ಸೇರಿಸಿ ನುಣ್ಣಗೆ ರುಬ್ಬಿಡಿ. ಐದು ಕಪ್‌ ನೀರು ಕುದಿಸಿ ಅದಕ್ಕೆ ಹೆಸರುಬೇಳೆ, ಸ್ವಲ್ಪ ಅರಿಶಿನ ಮತ್ತು ಎಣ್ಣೆ ಹಾಕಿ ಬೇಯಿಸಿ. ಹೆಸರುಬೇಳೆ ಅರ್ಧ ಬೆಂದ ಮೇಲೆ ಉಳಿದ ಹೀರೆಕಾಯಿ ಹೋಳುಗಳನ್ನು ಹಾಕಿ ಬೇಯಿಸಿ ಉಪ್ಪು, ಬೆಲ್ಲ, ಕರಿಬೇವು ಮತ್ತು ರುಬ್ಬಿದ ಮಸಾಲೆ ಸೇರಿಸಿ ತಳ ಸೀಯದಂತೆ ಕುದಿಸಿ ಒಗ್ಗರಣೆ ಬೆರೆಸಿ ಹಾಲು ಹಾಕಿ ಮುಚ್ಚಿಡಿ.

ಹೀರೆಕಾಯಿ ರಸ ಪಲ್ಯ

ಸಾಮಗ್ರಿ: ನಾಲ್ಕು ಭಾಗವಾಗಿ ಕತ್ತರಿಸಿ ಹೆಚ್ಚಿದ ಹೀರೆಕಾಯಿ ಹೋಳುಗಳು-2 ಕಪ್‌, ಹೆಚ್ಚಿದ ಈರುಳ್ಳಿ, ಆಲೂಗೆಡ್ಡೆ ಮತ್ತು ಟೊಮೇಟೊ-ತಲಾ 1 ಕಪ್‌, ಹುರಿದು ಸಿಪ್ಪೆ ತೆಗೆದ ಕಡ್ಲೆಕಾಯಿ ಬೀಜದ ಪುಡಿ ಮತ್ತು ಒಣ ಕೊಬ್ಬರಿ ತುರಿ-ತಲಾ 2 ಟೇಬಲ್‌ ಚಮಚ, ಉಪ್ಪು ಮತ್ತು ಖಾರ ಪುಡಿ-ರುಚಿಗೆ ತಕ್ಕಷ್ಟು, ಬೆಲ್ಲ-ಸ್ವಲ್ಪ, ಒಗ್ಗರಣೆಗೆ ಎಣ್ಣೆ, ಇಂಗು, ಸಾಸಿವೆ, ಜೀರಿಗೆ, ಒಣ ಮೆಣಸಿನಕಾಯಿ, ಕರಿಬೇವು, ಕೊತ್ತಂಬರಿ ಸೊಪ್ಪು-ಸ್ವಲ್ಪ.

ವಿಧಾನ: ಸಣ್ಣ ಕುಕ್ಕರ್‌ನಲ್ಲಿಸ್ವಲ್ಪ ಎಣ್ಣೆ ಬಿಸಿ ಮಾಡಿ ಒಗ್ಗರಣೆ ಸಾಮಗ್ರಿ ಹಾಕಿ ಸಿಡಿಸಿ ಈರುಳ್ಳಿ, ಆಲೂಗೆಡ್ಡೆ, ಟೊಮೇಟೊ, ಹೀರೆಕಾಯಿ ಹೋಳು ಮತ್ತು ಕರಿಬೇವು ಸೇರಿಸಿ ಬಾಡಿಸಿ ಉಪ್ಪು ಮತ್ತು ಒಂದು ಲೋಟ ನೀರು ಹಾಕಿ ತಿರುವಿ ಮುಚ್ಚಳ ಮುಚ್ಚಿ ಸೀಟಿಯಿಟ್ಟು ಐದು ನಿಮಿಷ ಸಣ್ಣ ಉರಿಯಲ್ಲಿಬೇಯಿಸಿ ಕೆಳಗಿಳಿಸಿ. ಆವಿ ರಿಲೀಸ್‌ ಆದ ಮೇಲೆ ಮುಚ್ಚಳ ತೆಗೆದು ಅದಕ್ಕೆ ಕಡ್ಲೆಕಾಯಿ ಬೀಜದ ಪುಡಿ, ಕೊಬ್ಬರಿ ತುರಿ, ಉಪ್ಪು, ಖಾರ ಪುಡಿ, ಬೆಲ್ಲಹಾಕಿ ಸಣ್ಣ ಉರಿಯಲ್ಲಿಕುದಿಸಿ ಅರ್ಧ ಲೋಟ ನೀರು ಹಾಕಿ ಕೊತ್ತಂಬರಿ ಸೊಪ್ಪು ಸೇರಿಸಿ ಇಡ್ಲಿಹಿಟ್ಟಿನ ಹದಕ್ಕೆ ಕುದಿಸಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ