ಆ್ಯಪ್ನಗರ

ಸುರಿಯುವ ಮಳೆಯಲ್ಲಿ ಪತ್ರೊಡೆ ಸವಿಯುವುದೇ ಚೆನ್ನ

ಮಳೆಗಾಲದಲ್ಲಿ ಸವಿಯುವ ಪ್ರಸಿದ್ಧ ತಿನಿಸುಗಳಲ್ಲೊಂದು ಪತ್ರೊಡೆ. ಕೆಸುವಿನ ಎಲೆಯಿಂದ ಮಾಡುವ ಈ ಪತ್ರೊಡೆ ರುಚಿಗೆ ಮನಸೋಲದವರೇ ಇಲ್ಲ ಅನ್ನಬಹುದು. ಇದನ್ನು ಮಾಡುವ ಸರಳ ರೆಸಿಪಿ ಇಲ್ಲಿ ನೀಡಲಾಗಿದೆ ನೋಡಿ.

Vijaya Karnataka Web 7 Aug 2019, 12:56 pm
ಮಳೆಗಾಲ ಬಂತೆಂದರೆ ಮಲ್ನಾಡ್‌, ಕರಾವಳಿಯಲ್ಲಿ ಪತ್ರೊಡೆ ಸವಿಯುವ ಕಾಲ. ಪತ್ರೊಡೆ ಮೈಯನ್ನು ಬೆಚ್ಚಗಾಗಿಸುವ ಆಹಾರವಾಗಿರುವುದರಿಂದ ಈ ಸಮಯದಲ್ಲಿ ಹೆಚ್ಚಾಗಿ ಮಾಡುತ್ತಾರೆ. ಅದರ ರುಚಿಯನ್ನು ಒಮ್ಮೆ ಸವಿದರೆ ಸಾಕು ಮತ್ತೆ ಆ ಹೆಸರು ಕೇಳಿದರೆ ಬಾಯಲ್ಲಿ ನೀರೂರುವುದು. ಇಲ್ಲಿ ಪತ್ರೊಡೆ ಸವಿಯಲು ರೆಸಿಪಿ ನೀಡಿದ್ದೇವೆ ನೋಡಿ.
Vijaya Karnataka Web pathrode recipe


ಬೇಕಾಗುವ ಸಾಮಾಗ್ರಿಗಳು:
1. ಕೆಸುವಿನ ಎಲೆ 20-25
2. ಅಕ್ಕಿ ಮುಕ್ಕಾಲು ಕಪ್
3. ಅರ್ಧ ಕಪ್ ತೊಗರಿಬೇಳೆ
4. ಅರ್ಧ ಕಪ್ ಕಡಲೆಬೇಳೆ
5. ಒಂದು ದೊಡ್ಡ ನಿಂಬೆ ಹಣ್ಣಿನ ಗಾತ್ರದಷ್ಟು ಹುಣಸೆಹಣ್ಣು (ಅರ್ಧ ಕಪ್ ಬಿಸಿ ನೀರಿನಲ್ಲಿ 15-20 ನಿಮಿಷ ನೀರಿನಲ್ಲಿ ನೆನೆಯಲು ಬಿಡಿ)
6. ಒಣಮೆಣಸಿನಕಾಯಿ- 10-15 (ಮೆಣಸಿನ ಪುಡಿಯೂ ಬಳಸಬಹುದು. ಖಾರಕ್ಕೆ ತಕ್ಕ ಹಾಗೆ ಬಳಸಿ)
7. ಅರ್ಧ ಕಪ್ ತೆಂಗಿನ ತುರಿ
8. ಕೊತ್ತಂಬರಿ ಬೀಜ 2 ಚಮಚ
9. 1 ಚಮಚ ಜೀರಿಗೆ
10. 3 ಚಮಚ ಬೆಲ್ಲ
11. ಚಿಟಿಕೆಯಷ್ಟು ಇಂಗು

ಮಾಡುವ ವಿಧಾನ:

* ಮೊದಲು ತೊಗರಿಬೇಳೆ, ಅಕ್ಕಿ, ಕಡಲೆಬೇಳೆ, ಜೀರಿಗೆ ಹಾಗೂ ಕೊತ್ತಂಬರಿ ಬೀಜವನ್ನು ನೀರಿನಲ್ಲಿ ಹಾಕಿ 2-3 ಗಂಟೆ ನೆನೆಯಲು ಬಿಡಿ.

* ಬಳಿಕ ಇದಕ್ಕೆ ಜೊತೆಗೆ ತೆಂಗಿನ ತುರಿ, ಹುಣಸೆಹಣ್ಣು, ಬೆಲ್ಲ ಮತ್ತು ಒಣಮೆಣಸಿನ ಕಾಯಿ ಹಾಕಿ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿ.

* ರುಬ್ಬಿದ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಗೂ 2 ಚಿಟಿಕೆ ಇಂಗು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

* ಒಂದು ದೊಡ್ಡ ಕೆಸುವಿನ ಎಲೆಯನ್ನು (ತೊಳೆದಿದ್ದು, ದಂಟು ತೆಗೆದುಕೊಳ್ಳಬೇಕು) ಉಲ್ಟಾ ಇಟ್ಟುಕೊಳ್ಳಿ. ಅದರ ಮೇಲೆ ತೆಳುವಾಗಿ ಹಿಟ್ಟನ್ನು ಹಚ್ಚಿ. ಎಲೆಗೆ ಪೂರ್ತಿಯಾಗಿ ಹಿಟ್ಟು ಹಚ್ಚಿದ ನಂತರ ಅದರ ಮೇಲೆ ಇನ್ನೊಂದು ಅದಕ್ಕಿಂತ ಸಣ್ಣ ಎಲೆಯನ್ನು ಹಾಗೆ ಉಲ್ಟಾ ಇಟ್ಟು, ಅದರ ಮೇಲೆಯೂ ತೆಳುವಾಗಿ ಹಿಟ್ಟನ್ನು ಹಚ್ಚಿ. ಹೀಗೆ 5 ಎಲೆಗಳನ್ನು ಒಂದರ ಮೇಲೊಂದರಂತೆ ಇಟ್ಟು ಹಿಟ್ಟನ್ನು ಹಚ್ಚಿ ಇಡಿ.

* ಈಗ ಎಲೆಯನ್ನು ಉಲ್ಟಾ ಹಾಕಿ (ಅದರ ದಂಟು ತೆಗೆದಿರಬೇಕು) ಅದರ ಮೇಲೆ ಆ ಮಿಶ್ರಣವನ್ನು ಹರಡಿ ಅದರ ಮೇಲೆ ಎಲೆ ಹಿಟ್ಟು ಮತ್ತೆ ಮಿಶ್ರಣವನ್ನು ಹರಡಿ ರೋಲ್ ಮಾಡಿ. ಈ ರೀತಿ 4-5 ಎಲೆಯನ್ನು ಈ ರೀತಿ ಮಾಡಿ ರೋಲ್‌ ಮಾಡಿ ಹಬೆಯಲ್ಲಿ ಬೇಯಿಸಿ.

* ಈಗ ಇಡ್ಲಿಗೆ ಬೇಯಿಸುವ ರೀತಿಯಲ್ಲಿ ಬೇಯಿಸಿ.

* ಹೀಗೆ ಕನಿಷ್ಟ 20ರಿಂದ 30 ನಿಮಿಷ ಬೇಯಿಸಿ. ಬೆಂದ ಬಳಿಕ ಒಲೆಯಿಂದ ತೆಗೆದು ಪೂರ್ತಿ ತಣ್ಣಗಾದ ನಂತ್ರ ಸಣ್ಣಗೆ ಕಟ್ ಮಾಡಿ ಒಗ್ಗರಣೆ ಹಾಕಿ ಸವಿಯಬಹುದು.
ಇನ್ನು ರೌಂಡ್‌ ರೌಂಡಾಗಿ ಕಟ್‌ ಮಾಡಿ, ಎಣ್ಣೆ ಹಾಕಿ ತವಾದಲ್ಲಿ ಫ್ರೈ ಮಾಡಿ ತಿನ್ನಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ