ಆ್ಯಪ್ನಗರ

ಕಲ್ಲಂಗಡಿಯಲ್ಲಿದೆ 9 ಕಾಯಿಲೆಗೆ ಮದ್ದು!

ಪ್ರತೀದಿನ ಕಲ್ಲಂಗಡಿ ತಿನ್ನುವುದರಿಂದ ಈ 9 ಅದ್ಭುತ ಪ್ರಯೋಜನಗಳನ್ನು ಪಡೆಯಬಹುದು.

Vijaya Karnataka Web 24 Mar 2017, 2:23 pm
ಆಹಾರಕ್ರಮದಲ್ಲಿ ಸೀಸನ್‌ ಫುಡ್ಸ್‌ಗೆ ಪ್ರಾಮುಖ್ಯತೆ ನೀಡುತ್ತೀರಾ? ಇಲ್ಲ ಅಂದರೆ ಇಂದಿನಿಂದಲೇ ಶುರು ಮಾಡಿ. ಸೀಸನ್‌ ಫುಡ್ಸ್‌ (ಆಯಾ ಕಾಲದಲ್ಲಿ ದೊರೆಯುವ ಆಹಾರಗಳು)ನಲ್ಲಿ ಆಯಾ ಕಾಲಕ್ಕೆ ತಕ್ಕಂತೆ ನಮ್ಮ ದೇಹವನ್ನು ರಕ್ಷಣೆ ಮಾಡುವ ಗುಣಗಳಿರುತ್ತದೆ.
Vijaya Karnataka Web health benefit from watermelon
ಕಲ್ಲಂಗಡಿಯಲ್ಲಿದೆ 9 ಕಾಯಿಲೆಗೆ ಮದ್ದು!


ಬೇಸಿಗೆಯಲ್ಲಿ ದೊರೆಯುವ ಎಲ್ಲಾ ಹಣ್ಣುಗಳಲ್ಲಿ ನೀರಿನಂಶ ಅಧಿಕವಿರುತ್ತದೆ ಹಾಗೂ ಉಷ್ಣತೆಯ ವಿರುದ್ಧ ದೇಹವನ್ನು ತಂಪಾಗಿ ಇಡುವ ಗುಣವಿರುತ್ತದೆ. ಅಂತಹ ಹಣ್ಣುಗಳಲ್ಲೊಂದು ಕಲ್ಲಂಗಡಿ. ಪ್ರತೀದಿನ ಕಲ್ಲಂಗಡಿ ತಿನ್ನುವುದರಿಂದ ಈ 9 ಅದ್ಭುತ ಪ್ರಯೋಜನಗಳನ್ನು ಪಡೆಯಬಹುದು:

1. ಹೃದಯದ ಆರೋಗ್ಯಕ್ಕೆ ಒಳ್ಳೆಯದು



ಕಲ್ಲಂಗಡಿ ಹಣ್ಣು ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಹಾಗೂ ಹೃದಯಾಘಾತಕ್ಕೆ ಕಾರಣವಾಗುವ ಅಥೆರೊಸ್ಕೊರೊಸಿಸ್(Atherosclerosis) ಬೆಳವಣಿಗೆಯನ್ನು ತಡೆಯುತ್ತದೆ. ಕಲ್ಲಂಗಡಿಯಲ್ಲಿ ಪೊಟ್ಯಾಷಿಯಂ ಅಂಶ ಅಧಿಕವಾಗಿದ್ದು ಇದು ಹೈಪರ್‌ ಟೆನ್ಷನ್‌ ಕಡಿಮೆ ಮಾಡುತ್ತದೆ. ಹೈಪರ್‌ ಟೆನ್ಷನ್‌ ಕೂಡ ಹೃದಯಾಘಾತಕ್ಕೆ ಒಂದು ಕಾರಣ.

2. ರೋಗ ನಿರೋಧಕ ಶಕ್ತಿ ಹೆಚ್ಚುವುದು


ವಿಟಮಿನ್ ಬಿ6,ಬಿ1 ಮತ್ತು ಸಿ ಹೇರಳವಾಗಿ ಇರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವಲ್ಲಿ ಸಹಾಯಕಾರಿ.

3. ಕ್ಯಾನ್ಸರ್‌ ತಡೆಗಟ್ಟುವುದು:


ಇದರಲ್ಲಿರುವ ಲುಟಿನ್, ಜಿಯಾಕ್ಸಿಥಿನ್(zeaxanthi), ಲೈಕೊಪೆನೆ, ಬೀಟಾ ಕೆರೊಟಿನ್, ಕ್ರಿಪ್ಟಾಕ್ಸಿಥಿನ್(cryptoxanthin) ಅಂಶವಿದ್ದು ಇದು DNA ಆರೋಗ್ಯ ಕಾಪಾಡಿ ಕ್ಯಾನ್ಸರ್‌ ರೋಗ ಬರದಂತೆ ತಡೆಯುತ್ತದೆ.

4. ತೂಕ ಕಡಿಮೆ ಮಾಡುವಲ್ಲಿ ಸಹಾಯಕಾರಿ:



ರಾತ್ರಿಗೆ ಅನ್ನದ ಪದಾರ್ಥಗಳನ್ನು ಕಡಿಮೆ ಮಾಡಿ, ಕಲ್ಲಂಗಡಿ ಹಣ್ಣು ತಿನ್ನುವುದರಿಂದ ತೂಕ ಕಡಿಮೆ ಮಾಡುವಲ್ಲಿ ಸಹಕಾರಿ.

5. ಕಿಡ್ನಿಯ ಆರೋಗ್ಯಕ್ಕೆ ಒಳ್ಳೆಯದು:


ದೇಹದಲ್ಲಿರುವ ಕಶ್ಮಲವನ್ನು ಹೊರಹಾಕುವಲ್ಲಿ ಕಲ್ಲಂಗಡಿ ಸಹಾಯಕಾರಿ.

6. ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು:


ಇದರಲ್ಲಿರುವ ಬೀಟಾ ಕೆರೊಟಿನ್‌ ಅನ್ನು ನಮ್ಮ ದೇಹವು ವಿಟಮಿನ್‌ ಎ ಆಗಿ ಪರಿವರ್ತಿಸುತ್ತದೆ. ಇರುಳು ಕುರುಡು, ಕಣ್ಣಿನಲ್ಲಿ ಪೊರೆ ಬರುವುದು ಈ ರೀತಿಯ ಸಮಸ್ಯೆಗಳು ಬರದಂತೆ ತಡೆಯುವಲ್ಲಿ ಸಹಾಯ ಮಾಡುತ್ತದೆ.

7. ಮಿದುಳು ಚುರುಕಾಗುವುದು:


ಇದರಲ್ಲಿರುವ ಇಟಮಿನ್‌ ಬಿ6 ಜ್ಞಾಪಕ ಶಕ್ತಿಗೆ ತುಂಬಾ ಒಳ್ಳೆಯದು. ಓದುವ ಮಕ್ಕಳು ತಮ್ಮ ಆಹಾರಕ್ರಮದಲ್ಲಿ ಇದನ್ನು ಸೇರಿಸುವುದರಿಂದ ಜ್ಞಾಪಕ ಶಕ್ತಿ ಹೆಚ್ಚುವುದು.

8. ಲೈಂಗಿಕ ಶಕ್ತಿ ಹೆಚ್ಚುವುದು:


ಲೈಂಗಿಕ ನಿರಾಸಕ್ತಿ ಇರುವವರು ಇದನ್ನು ತಮ್ಮ ಆಹಾರಕ್ರಮದಲ್ಲಿ ಸೇರಿಸಿದರೆ ಲೈಂಗಿಕ ಆಸಕ್ತಿ ಹೆಚ್ಚುವುದು. ಆದ್ದರಿಂದಲೇ ಇದನ್ನು ನೈಸರ್ಗಿಕ ವಯಾಗ್ರ ಎಂದು ಕರೆಯುವುದು.

9. ವ್ಯಾಯಾಮದ ನಂತರ ವಿಶ್ರಾಂತಿಯ ಅನುಭವಕ್ಕೆ:


ವ್ಯಾಯಾಮದ ನಂತರ ಒಂದು ಪೀಸ್‌ ಕಲ್ಲಂಗಡಿ ತಿಂದರೆ ಹೊಟ್ಟೆ ಹಸಿವು ಕಡಿಮೆಯಾಗುವುದು ಹಾಗೂ ತುಂಬಾ ರಿಲೀಫ್ ಅನಿಸುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ