ಅರ್ಥ:- ವೃತ್ತಾಸುರನÜ ಸಂಹಾರಕ್ಕಾಗಿ ದೇಹವನ್ನೇ ದಾನ ಮಾಡಿದ ದಧೀಚಿ ಮಹರ್ಷಿಗಳಿಗೆ ಈ ಆಸನ ಮೀಸಲು.
ವಿವರಣೆ:- ಮೊದಲು ದಧೀಚ್ಯಾಸನ ಒಂದರ ಸ್ಥಿತಿಗೆ ಬರುವುದು. ನಂತರ ಹಿಂದೆ ಇರುವ ಎಡಗಾಲಿಗೆ ಬೆರಳುಗಳನ್ನು ಎಡ ಮೊಣಕೈ ಒಳಗೆ ತೆಗೆದು ಕೊಳ್ಳುವುದು. ಬಲಗೈಯನ್ನು ಮೇಲೆ ತೆಗೆದುಕೊಂಡು, ಮೇಲಿನಿಂದಲೇ ಎಡಗೈ ಬೆರಳುಗಳನ್ನು ಹಿಡಿಯುವುದು. ಈಗ ಎಡಗಾಲಿನ ಬೆರಳುಗಳಿಂದ ಎಡ ಮೊಣಕೈಯನ್ನು ಹಿಂದಕ್ಕೆ ಎಳೆಯುತ್ತಿರಬೇಕು. ದೃಷ್ಟಿ ಹಿಂದೆ ಇರಲಿ. ಸ್ಥಿತಿಯಲ್ಲಿ ಸಹಜ ಉಸಿರಾಟ ಕ್ರಿಯೆ ಇರಲಿ. ಇದೇ ರೀತಿ ಮತ್ತೊಂದು ಕಡೆ ಮುಂದುವರಿಸುವುದು.
ಉಪಯೋಗ:- ತೊಡೆಗಳಲ್ಲಿನ ಕೊಬ್ಬಿನಂಶ ಕರಗುವುದು, ಬೆನ್ನಿನ ಭಾಗ ಚೈತನ್ಯ ಪಡೆಯುವುದು ಪಕ್ಕೆಲುಬುಗಳು ಹಿಗ್ಗಲ್ಪಟ್ಟು ಆ ಭಾಗದ ಕೊಬ್ಬಿನಂಶ ಕರಗುವುದು. ಮೂತ್ರ ಪಿಂಡ, ಮೂತ್ರಕೋಶ, ಗರ್ಭಾಶಯ, ಮುಟ್ಟಿನ ತೊಂದರೆಗೆ ಉತ್ತಮ ಆಸನ.