ಆ್ಯಪ್ನಗರ

ಡೇ ಸ್ಪೆಷಲ್‌: ವಿಶ್ವ ದಯೆ ದಿನ

ದಯೆ ಇರಬೇಕು ಸಕಲ ಪ್ರಾಣಿಗಳಲ್ಲಿ, ದಯೆಯೇ ಧರ್ಮದ ಮೂಲವಯ್ಯ ಎಂದು ಹೇಳಿದ್ದ ಬಸವಣ್ಣರ ನುಡಿ ಮಾತುಗಳು ಇಂದಿಗೂ ಪ್ರಸ್ತುತ.

Vijaya Karnataka Web 13 Nov 2016, 4:08 am
ದಯೆ ಇರಬೇಕು ಸಕಲ ಪ್ರಾಣಿಗಳಲ್ಲಿ, ದಯೆಯೇ ಧರ್ಮದ ಮೂಲವಯ್ಯ ಎಂದು ಹೇಳಿದ್ದ ಬಸವಣ್ಣರ ನುಡಿ ಮಾತುಗಳು ಇಂದಿಗೂ ಪ್ರಸ್ತುತ. ನಮ್ಮ ಜಗತ್ತು ಎಷ್ಟೇ ಮುಂದುವರಿದಿದ್ದರೂ ಮನುಷ್ಯರಲ್ಲಿ ದಯಾ ಮನೋಭಾವವೊಂದು ಇಲ್ಲದಿದ್ದರೆ ಎಲ್ಲವೂ ವ್ಯರ್ಥ. ಮಾನವ ಎಷ್ಟೇ ಶ್ರೀಮಂತನಾಗಿರಲಿ, ಆತನಲ್ಲಿ ಎಷ್ಟೇ ವಿದ್ಯೆ, ಬುದ್ಧಿ, ಸಂಪತ್ತುಗಳಿರಲಿ, ಆದರೆ ಆತನಲ್ಲಿ ದಯೆಯೊಂದು ಇಲ್ಲದಿದ್ದರೆ ಆತ ಪ್ರಾಣಿಗೆ ಸಮ ಎಂದು ನಮ್ಮ ಹಿರಿಯರು ಹೇಳುತ್ತಲೇ ಬಂದಿದ್ದಾರೆ. ಈ ದಯಾಗುಣವೇ ಮನುಷ್ಯ ಸಂಬಂಧಗಳನ್ನು ಪರಸ್ಪರ ಬೆಸೆಯುತ್ತದೆ. ಇದರ ಮಹತ್ವವನ್ನು ಅರಿತುಕೊಂಡೇ ವಿಶ್ವದೆಲ್ಲೆಡೆ ವಿಶ್ವ ದಯೆ ದಿನ ಅಥವಾ ವರ್ಲ್ಡ್‌ ಕೈಂಡ್‌ನೆಸ್‌ ಡೇ ಎಂಬೊಂದು ಪರಿಕಲ್ಪನೆ ಬಂದಿದೆ. ಅಂದರೆ ಪ್ರತಿವರ್ಷ ನವೆಂಬರ್‌ 13 ರನ್ನು ವಿಶ್ವ ದಯೆ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
Vijaya Karnataka Web day special world kindness day
ಡೇ ಸ್ಪೆಷಲ್‌: ವಿಶ್ವ ದಯೆ ದಿನ


ಈ ದಿನಾಚರಣೆ ಆರಂಭವಾಗಿದ್ದು 1997 ರಿಂದ. ಕೆಲವು ಮಾನವ ದಯಾ ಸಂಘಟನೆಗಳು ಸೇರಿಕೊಂಡು ಇಂಥದ್ದೊಂದು ದಿನವನ್ನು ಆಚರಿಸುವ ನಿರ್ಧಾರವನ್ನು ಕೈಗೊಂಡವು. ಜೊತೆಗೆ ಮಾನವರಲ್ಲಿ ಈ ದಯಾ ಗುಣವನ್ನು ಬೆಳೆಸಿಕೊಳ್ಳುವ ಕರೆ ನೀಡಲು ನಿರ್ಧರಿಸಿದವು. ಇದರಂತೆ ಪ್ರತಿವರ್ಷವೂ ಈ ದಿನವನ್ನು ಆಚರಿಸಲಾಗುತ್ತಿದೆ. ದಯೆ ದಿನ ಅಂದರೆ ಕೇವಲ ಅನಾಥ ಮಕ್ಕಳ ಮೇಲೆ ದಯೆ ತೋರುವುದಲ್ಲಷ್ಟೇ ಅಲ್ಲ. ಬದಲಾಗಿ ಇತರರಿಗೆ ಎಲ್ಲಾ ರೀತಿಯಲ್ಲಿಯೂ ಮಾನವೀಯ ನೆರವು ನೀಡುವುದು, ಯಾರಿಗೂ ಕೆಡುಕು ಉಂಟು ಮಾಡದಿರುವುದು ಇತ್ಯಾದಿಗಳಾಗಿವೆ. ಇತರರಿಗೆ ಪುಸ್ತಕ, ಬಟ್ಟೆ ಅಥವಾ ಆಹಾರ ದಾನ ಮಾಡುವುದು ಮುಂತಾದ ಕಾರ್ಯಕ್ರಮಗಳನ್ನು ಈ ದಿನ ಹಮ್ಮಿಕೊಳ್ಳಲಾಗುತ್ತದೆ. ಭಾರತ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳು ಈ ದಿನವನ್ನು ಆಚರಿಸುತ್ತವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ