-ತೋಟ, ಉದ್ಯಾನಗಳಲ್ಲಿ ಹಾವುಗಳು, ಸಣ್ಣ ಪುಟ್ಟ ಕೀಟಗಳು ಕಾಣಿಸುವುದು ಸಾಮಾನ್ಯ. ಇದರಿಂದ ಅಪಾಯ ತಪ್ಪಿದ್ದಲ್ಲ. ಆದ್ದರಿಂದ ವಿಷ ಜೀವಿಗಳನ್ನು ಕೈದೋಟದಲ್ಲಿ ಆದಷ್ಟು ದೂರವಿರಿಸುವುದು ಉತ್ತಮ.
-ಗಾರ್ಡನ್ನಲ್ಲಿ ಬೇಡದ ವಸ್ತುಗಳನ್ನು ಗುಡ್ಡೆ ಹಾಕಬೇಡಿ. ಏಕೆಂದರೆ ಅವುಗಳ ಒಳಗೆ ಹಾವು ಸುರುಳಿ ಸುತ್ತಿಕೊಂಡು ಮಲಗುವ ಸಾಧ್ಯತೆ ಹೆಚ್ಚಿರುತ್ತದೆ.
-ಗಿಡಗಳ ಕೊಂಬೆಗಳನ್ನು ಕತ್ತರಿಸಿ ಅಲ್ಲಿಯೆ ಬಿಸಾಡಬೇಡಿ. ಕೈತೋಟವನ್ನು ಶುಚಿಯಾಗಿಟ್ಟರೆ ಹಾವು ಬರುವುದಿಲ್ಲ. ಒಂದು ವೇಳೆ ಬಂದರೂ ಅದು ನಮ್ಮ ಕಣ್ಣಿಗೆ ಬೇಗನೆ ಕಾಣುತ್ತದೆ. ಆಗ ನಾವು ಅದನ್ನು ಓಡಿಸಬಹುದು.
-ಹಾವುಗಳು ತಂಪಾದ ಸ್ಥಳದಲ್ಲಿ ಇರಲು ಬಯಸುತ್ತವೆ. ಉದ್ದನೆಯ ಮರ, ಮರದ ಅಡಿ, ಇಟ್ಟಿಗೆ ಜೋಡಿಸಿರುವ ಸ್ಥಳಗಳಲ್ಲಿ ಹಾವು ಕಂಡು ಬರುವುದರಿಂದ ಅವುಗಳನ್ನು ಹೂತೋಟದಲ್ಲಿ ಇಡದಿರುವುದು ಒಳ್ಳೆಯದು.
-ಗುಂಪಾಗಿ ಮತ್ತು ಉದ್ದವಾಗಿ ಬೆಳೆದ ಹುಲ್ಲುಗಳಲ್ಲಿ ಹಾವುಗಳು ಇರುವ ಸಾಧ್ಯತೆ ಹೆಚ್ಚು. ಆದ್ದರಿಂದ ಅಂಥ ಹುಲ್ಲುಗಳನ್ನು ಕಿತ್ತು ಹಾಕಬೇಕು.
-ಬೆಳ್ಳುಳ್ಳಿಯನ್ನು ಜಜ್ಜಿ ಅದನ್ನು ನೀರಿಗೆ ಮಿಶ್ರ ಮಾಡಿ ಗಾರ್ಡನ್ಗೆ ಸ್ಪ್ರೇ ಮಾಡಿದರೆ ಹಾವುಗಳು ಬರುವುದಿಲ್ಲ.
-ಕೈದೋಟದಲ್ಲಿ ಪುದೀನ ಅಥವಾ ಕರಿಮೆಣಸಿನ ಗಿಡಗಳನ್ನು ಬೆಳೆಸುವುದು ಒಳ್ಳೆಯದು. ಆಗ ಅಲ್ಲಿಗೆ ಹಾವು ಬರುವುದಿಲ್ಲ.
-ತೋಟದಲ್ಲಿ ಹಾವುಗಳನ್ನು ಕಂಡರೆ ಅವುಗಳನ್ನು ಕೊಲ್ಲಬೇಡಿ. ಬದಲಾಗಿ ಅದನ್ನು ಅಲ್ಲಿಂದ ಓಡಿಸಿ ಅಥವಾ ಹಾವು ಹಿಡಿಯುವವರನ್ನು ಕರೆಸಿ ಅದನ್ನು ಅಲ್ಲಿಂದ ಸಾಗ ಹಾಕಿ.