ಆ್ಯಪ್ನಗರ

ವೃತ್ತಿಯಲ್ಲಿ ಸೋಲಾದಾಗ ಏನು ಮಾಡಬೇಕು?

ಕರಿಯರ್‌ನಲ್ಲಿ ವಿಫಲತೆ ಉಂಟಾದಾಗ ಏನು ಮಾಡಬೇಕು? ಇಲ್ಲೊಂದಿಷ್ಟು ಟಿಪ್ಸ್‌ಗಳಿವೆ.

Vijaya Karnataka Web 1 May 2017, 6:09 pm

ಸೋಲು ನಮ್ಮ ದೇಹದಲ್ಲಿರುವ ಶಕ್ತಿಯೆನ್ನೆಲ್ಲಾ ಬಸಿದು ಬಿಡುತ್ತದೆ. ಆದರೆ ಸೋಲಿಗೆ ಹೆದರಿದರೆ ನಮ್ಮ ಜೀವನದಲ್ಲಿ ಏನನ್ನು ಸಾಧಿಸಲು ಸಾಧ್ಯವಿಲ್ಲ. ಅದನ್ನು ಗೆಲ್ಲುವ ಪ್ರಯತ್ನ ಮಾಡಬೇಕು. ಕರಿಯರ್‌ ವಿಷಯಕ್ಕೆ ಬಂದಾಗ ಸೋಲು ಗೆಲುವು ಸಾಮಾನ್ಯ.

Vijaya Karnataka Web career tips
ವೃತ್ತಿಯಲ್ಲಿ ಸೋಲಾದಾಗ ಏನು ಮಾಡಬೇಕು?

ಕರಿಯರ್‌ನಲ್ಲಿ ಸೋಲು ಉಂಟಾದಾಗ ಕುಗ್ಗಬೇಡಿ, ಹೀಗೆ ಮಾಡಿ:

* ವಿಫಲತೆ ಸ್ವೀಕರಿಸಲು ಕಲಿಯಬೇಕು. ಸೋಲು ಉಂಟಾದಾಗ ನೋವು ಆಗುವುದು ಸಹಜ. ಸುಮ್ಮನೆ ನಗುವಿನ ಮುಖವಾಡ ತೊಡಬೇಡಿ. ಎಷ್ಟು ನೋವು ಆಗುತ್ತೋ ಅಷ್ಟು ಫೀಲ್‌ ಮಾಡಿರಿ. ಮುಚ್ಚಿಟ್ಟು ಏನು ಪ್ರಯೋಜನವಿಲ್ಲ.

* ಯಾವುದಾದರೂ ಕೆಲಸದಲ್ಲಿ ಸೋಲು ಉಂಟಾದಾಗ ಎಲ್ಲವೂ ಮುಗಿದೇ ಹೋಯ್ತು ಎಂದು ಭಾವಿಸಬೇಡಿ. ಅದನ್ನು ಜಸ್ಟ್‌ ಸೆಟ್‌ಬ್ಯಾಕ್‌ ಅಥವಾ ಕೇವಲ ಹಿನ್ನೆಡೆಯೆಂದು ತಿಳಿಯಿರಿ. ನೀವು ನಿನ್ನೆ ಸೋತಿರಬಹುದು. ಇವತ್ತು ಸೋಲಿರಬಹುದು. ಆದರೆ, ನಾಳೆ ಗೆಲ್ಲಬಹುದು. ನಾಳೆ ಗೆದ್ದೇ ಗೆಲ್ಲುತ್ತೇನೆ ಎಂದು ಪ್ರಯತ್ನಪಟ್ಟು ಕೆಲಸ ಮಾಡಿ. ನಾಳೆ ಸೋತರೆ ಮತ್ತೆ ಗೆಲುವಿಗೆ ಪ್ರಯತ್ನಿಸಿ.

* ರಚನಾತ್ಮಕವಾಗಿರಿ ಮತ್ತು ಪರಿಸ್ಥಿತಿ ನಿಭಾಯಿಸಲು ಕಲಿಯಿರಿ. ಫೈಲ್ಯೂರ್‌ ಆದಾಗ ಟೀಕೆಗಳನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಿರಿ. ಯಾವುದೇ ಕಾರಣಕ್ಕೆ ಕುಗ್ಗಿಹೋಬೇಡಿ.

* ಸೋಲು ಉಂಟಾದಾಗ ನಿಮ್ಮಲ್ಲೇ ಈ ಮುಂದಿನ ಪ್ರಶ್ನೆಗಳನ್ನು ಕೇಳಿಕೊಳ್ಳಿ. ಈ ವಿಫಲತೆಯಿಂದ ನಾನು ಕಲಿಯಬೇಕಾದ ವಿಷಯಗಳೇನು? ಮುಂದಿನ ಬಾರಿ ಇಂತಹ ತಪ್ಪು ಸಂಭವಿಸದೆ ಇರಲು ಏನು ಮಾಡಬೇಕು? ಮುಂದಿನ ಬಾರಿ ನಾನು ಭಿನ್ನವಾಗಿ ಏನು ಮಾಡಬಲ್ಲೆ? ನೀವು ವಿಫಲತೆಯ ಸಮಯದಲ್ಲಿ ರಚನಾತ್ಮಕವಾಗಿ ಯೋಚಿಸಲು ಕಲಿತರೆ ನಕಾರಾತ್ಮಕತೆಯಿಂದ ದೂರವಿರುತ್ತೀರಿ.

* ಸೋಲು ಉಂಟಾದಾಗ ದುಶ್ಚಟಗಳ ಮೊರೆ ಹೋಗಬೇಡಿ. ಆಲ್ಕೋಹಾಲ್‌, ಡ್ರಗ್ಸ್‌, ತಂಬಾಕಿನ ದಾಸರಾಗಬೇಡಿ. ನೀವು ಸೋಲಿನಿಂದ ಹೊರಬಂದ ನಂತರವೂ ಇಂತಹ ದುಶ್ಚಟಗಳಿಂದ ಹೊರಬರಲು ಕಷ್ಟವಾದೀತು.

* ಇತರರಿಗೆ ನಿಮ್ಮನ್ನು ಹೋಲಿಸಿಕೊಳ್ಳಬೇಡಿ. ಅವರು ಎಗ್ಸಾಂನಲ್ಲಿ ಪಾಸ್‌ ಆಗಿದ್ದಾರೆ, ನಾನು ಪಾಸ್‌ ಆಗಿಲ್ಲ, ನನ್ನ ಲೈಫ್‌ ಇಷ್ಟೇ ಎಂದೆಲ್ಲ ಇತರರಿಗೆ ನಿಮ್ಮನ್ನು ಹೋಲಿಸುತ್ತ ಕುಗ್ಗಬೇಡಿ. ಮುಂದೆ ಅವರಿಗಿಂತ ಉತ್ತಮ ಅವಕಾಶ ನಿಮಗೆ ದೊರಕಬಹುದು. ಪ್ರಯತ್ನ ಮುಂದುವರೆಸಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ