ಆ್ಯಪ್ನಗರ

ಸೂಪರ್‌ ಕಿಡ್‌: ಕಲಾ ಪ್ರವೀಣೆ ಅರ್ಚನಾ

ಒಬ್ಬೊಬ್ಬರಿಗೆ ಒಂದೊಂದು ರೀತಿಯ ಪ್ರತಿಭೆಗಳು ಒಲಿದಿರುತ್ತವೆ...

Vijaya Karnataka 17 Dec 2017, 5:30 am

ಒಬ್ಬೊಬ್ಬರಿಗೆ ಒಂದೊಂದು ರೀತಿಯ ಪ್ರತಿಭೆಗಳು ಒಲಿದಿರುತ್ತವೆ. ಕೆಲವರು ನೃತ್ಯದಲ್ಲಿ ನಿಪುಣರಾಗಿದ್ದರೆ, ಇನ್ನು ಕೆಲವರು ಅಭಿನಯ, ಸಂಗೀತ, ಚಿತ್ರಕಲೆ, ಕ್ರೀಡೆ ಇತ್ಯಾದಿಗಳಲ್ಲಿ ಚತುರರಾಗಿರುತ್ತಾರೆ. ತಮಗೆ ಒಲಿದಿರುವ ಪ್ರತಿಭೆಯಲ್ಲಿಯೇ ಉನ್ನತ ಸಾಧನೆಗಳನ್ನು ಮಾಡುತ್ತಾರೆ. ಇಂತಹ ಓರ್ವ ಪ್ರತಿಭಾವಂತ ಬಾಲಕಿಯೇ ಅರ್ಚನಾ ಎಂ. ಬೆಂಗಳೂರಿನ ಈ ಬಾಲೆಗೆ ಚಿತ್ರಕಲೆ ಮುಂತಾದ ಕಲಾ ಪ್ರಕಾರಗಳಲ್ಲಿ ವಿಪರೀತ ಆಸಕ್ತಿ. ಅದರಲ್ಲಿಯೇ ಆಕೆ ವಿವಿಧ ಪ್ರಯೋಗಗಳನ್ನು ಮಾಡಿ ಗಮನ ಸೆಳೆದಿದ್ದಾಳೆ.

ಎನ್‌.ಮುಕುಂದ ಮತ್ತು ಬಿ.ಆರ್‌ ಶಾಂತ ದಂಪತಿಯ ಪುತ್ರಿಯಾಗಿರುವ ಅರ್ಚನಾ, ಚಿತ್ರಕಲೆ, ರಂಗೋಲಿ ಮತ್ತು ಆರ್ಟ್‌ ವರ್ಕ್‌ನಲ್ಲಿ ತೋರಿಸಿರುವ ಕ್ರಿಯಾಶೀಲತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಹೊಸ ವಸ್ತು, ಸಮಕಾಲೀನ ಆಗುಹೋಗುಗಳಿಗೆ ಸ್ಪಂದಿಸುವ ಮನೋಭಾವ ಮತ್ತು ಪ್ರಯೋಗಶೀಲತೆಗಳು ಈಕೆಯ ಚಿತ್ರಕಲೆಯ ವಿಶೇಷಗಳು. ಈ ಕಾರಣಕ್ಕೆ ಈಕೆ ಬಿಡಿಸಿದ ಚಿತ್ರ ಮತ್ತು ಇನ್ನಿತರ ಕಲಾ ಪ್ರಕಾರಗಳು ಸದಾಕಾಲ ನೆನಪಿನಲ್ಲಿ ಉಳಿಯುತ್ತವೆ.

ಬೆಂಗಳೂರಿನ ಜ್ಯೋತಿ ಕೇಂದ್ರಿಯ ವಿದ್ಯಾಲಯದಲ್ಲಿ 7ನೇ ತರಗತಿಯಲ್ಲಿ ಓದುತ್ತಿರುವ ಅರ್ಚನಾ ಹಲವಾರು ಸಂಘ, ಸಂಸ್ಥೆಗಳು ನಡೆಸಿದ ಚಿತ್ರಕಲೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗೆದ್ದಿದ್ದಾಳೆ. ಡೈಲಾಗ್‌ ರೈಟಿಂಗ್‌ನಲ್ಲೂ ಈಕೆಗೆ ವಿಶೇಷ ಆಸಕ್ತಿಯಿದೆ. ಈ ಕುರಿತಾದ ಸ್ಪರ್ಧೆಯಲ್ಲೂ ಪಾಲ್ಗೊಂಡು ಬಹುಮಾನ ಪಡೆದ ಹೆಗ್ಗಳಿಕೆ ಈಕೆಯದ್ದು. ಕನ್ನಡ ಭಾಷೆಯನ್ನು ತುಂಬಾ ಇಷ್ಟಪಡುವ ಈಕೆಗೆ ಅದರಲ್ಲೂ ಏನಾದರೂ ವಿಶೇಷವಾದ ಕೆಲಸವನ್ನು ಮಾಡುವ ಹಂಬಲವಿದೆ.

ಚಿತ್ರಕಲೆ ಮುಂತಾದ ಹವ್ಯಾಸಗಳ ಜೊತೆಗೆ ಓದಿನಲ್ಲೂ ಮುಂದಿರುವ ಈಕೆಗೆ ಮುಂದಿನ ದಿನಗಳಲ್ಲಿ ತನ್ನಿಷ್ಟದ ಕ್ಷೇತ್ರದಲ್ಲಿ ಅತ್ಯುತ್ತಮವಾದ ಸಾಧನೆ ಮಾಡಬೇಕೆಂಬ ಆಸೆಯಿದೆ. ಇದಕ್ಕೆ ಆಕೆಯ ಹೆತ್ತವರ ಬೆಂಬಲವೂ ಇದೆ. ಬೆಳೆಯುವ ಪೈರು ಮೊಳಕೆಯಲ್ಲಿ ಎಂಬಂತೆ ಭವಿಷ್ಯದಲ್ಲಿ ಈಕೆ ಉದಯೋನ್ಮುಖ ಚಿತ್ರ ಕಲಾವಿದೆಯಾಗಿ ಬೆಳೆಯುವ ಎಲ್ಲಾ ಲಕ್ಷ ಣಗಳು ಈಗಲೇ ಗೋಚರಿಸುತ್ತಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ