ವಿಶ್ವದ ವಿವಿಧ ಖಂಡಗಳನ್ನು ಸಂಪರ್ಕಿಸಲು ಜಲ ಮಾರ್ಗಗಳನ್ನು ಕಂಡು ಹಿಡಿಯಲು ಆರಂಭಿಸಿದ್ದೇ ವ್ಯಾಪಾರ ವಹಿವಾಟು ನಡೆಸಲು. ಇದನ್ನು ಯೂರೋಪ್ನ ಹಲವು ದೇಶಗಳು ಮೊದಲಿಗೆ ಶುರು ಮಾಡಿದವು. ಪೋರ್ಚುಗೀಸ್, ಡಚ್, ಫ್ರೆಂಚ್, ಡ್ಯಾನಿಷ್ ಹಾಗೂ ಬ್ರಿಟನ್ ದೇಶಗಳು ಇದರಲ್ಲಿ ಮುಂಚೂಣಿಯಲ್ಲಿದ್ದವು.
ಭಾರತದ ಕಡಲ ತೀರಗಳಿಗೆ ಬರಲಾರಂಭಿಸಿದ ಫ್ರೆಂಚ್ ಹಡಗುಗಳು ತನ್ನಲ್ಲಿದ್ದ ಸರಕುಗಳನ್ನು ಮಾರಿ ಆರ್ಥಿಕ ಸಂಪನ್ಮೂಲಗಳನ್ನು ಹೆಚ್ಚಿಸಿಕೊಳ್ಳಲು ಮೊದಲ ಆದ್ಯತೆ ಕೊಟ್ಟವು. 17 ಹಾಗೂ 18 ನೇ ಶತಮಾನಗಳಲ್ಲಿ ಜರುಗಿದ ಯುದ್ಧಗಳಲ್ಲಿ ಫ್ರೆಂಚರು ಬ್ರಿಟಿಷರಿಗೆ ಸೋತರು. ಆ ಬಳಿಕ ಮೇಲುಗೈ ಸಾಧಿಸಿದ ನೆಪೋಲಿಯನ್ ಯುದ್ಧಗಳು ಫ್ರೆಂಚರಿಗೆ ಭಾರತದಲ್ಲೂ ರಾಜಕೀಯ ಆಕ್ಷಾಂಕ್ಷೆಗಳು ಮೂಡುವಂತೆ ಮಾಡಿದವು.
ಆಗ ಫ್ರೆಂಚರು ಪೂರ್ವ ಹಾಗೂ ಪಶ್ಚಿಮ ಕರಾವಳಿಗಳಲ್ಲಿ ಕೆಲವು ಆಯಕಟ್ಟಿನ ಸ್ಥಳಗಳಲ್ಲಿ ನೆಲೆ ನಿಂತರು. ಇದರಲ್ಲಿ ಪಾಂಡಿಚೆರಿ, ಕಾರೈಕಲ್, ಮಾಹೆ, ಬಾಂಗ್ಲಾ ಸಮೀಪದ ಚಂದರ್ ನಾಗೋರ್ ಸೇರಿದ್ದವು. ಆಧುನಿಕ ಅಂಚೆ ವ್ಯವಸ್ಥೆ ರೂಪುಗೊಳ್ಳುತ್ತಿದ್ದ ಆ ಸಂದರ್ಭದಲ್ಲಿ ಫ್ರಾನ್ಸ್, ಅಂಚೆ ಚೀಟಿಗಳನ್ನು ಚಲಾವಣೆಗೆ ತಂದಿತು. ಭಾರತವೂ ಸೇರಿದಂತೆ ಹಲವೆಡೆ ಇದ್ದ ತನ್ನ ವಸಾಹತುಗಳಲ್ಲಿ ಕೂಡಾ ಏಕರೂಪದ ಅಂಚೆ ಚೀಟಿಗಳನ್ನು ಉಪಯೋಗಿಸಲು ನಿರ್ಧರಿಸಿತು.
ಯೂರೋಪ್ ರಾಷ್ಟ್ರಗಳು ಬೇರೆ ಬೇರೆ ಖಂಡಗಳಲ್ಲಿ ಸ್ಥಾಪಿಸಿದ್ದ ವಸಾಹತುಗಳಲ್ಲಿ ಒಂದೇ ಬಗೆಯ ಕಾಯಂ ವಸಾಹತು ಕಾಯ್ದೆಯನ್ನು 1793 ರಲ್ಲಿ ಜಾರಿಗೆ ತರುವಲ್ಲಿ ಲಾರ್ಡ್ ಕಾರ್ನ್ವಾಲೀಸ್ ಯಶಸ್ವಿಯಾದರು. ಇದರ ಪರಿಣಾಮ ವಸಾಹತು ಹೊಂದಿರುವ ರಾಷ್ಟ್ರಗಳೆಲ್ಲಾ ಹೊಂದಾಣಿಕೆಯಿಂದ ರಾಜಕೀಯ ಮತ್ತು ಆರ್ಥಿಕ ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಯಿತು. ಇದಾದ ನಂತರ ಭಾರತದಲ್ಲಿದ್ದ ಎಲ್ಲಾ ವಸಾಹತುಗಳೂ ಪ್ರತ್ಯೇಕ ಅಂಚೆ ವ್ಯವಸ್ಥೆ ರೂಪಿಸಿಕೊಳ್ಳಲು ಮುಂದಾದವು.
ಭಾರತದ ಕಡಲ ತೀರಗಳಿಗೆ ಬರಲಾರಂಭಿಸಿದ ಫ್ರೆಂಚ್ ಹಡಗುಗಳು ತನ್ನಲ್ಲಿದ್ದ ಸರಕುಗಳನ್ನು ಮಾರಿ ಆರ್ಥಿಕ ಸಂಪನ್ಮೂಲಗಳನ್ನು ಹೆಚ್ಚಿಸಿಕೊಳ್ಳಲು ಮೊದಲ ಆದ್ಯತೆ ಕೊಟ್ಟವು. 17 ಹಾಗೂ 18 ನೇ ಶತಮಾನಗಳಲ್ಲಿ ಜರುಗಿದ ಯುದ್ಧಗಳಲ್ಲಿ ಫ್ರೆಂಚರು ಬ್ರಿಟಿಷರಿಗೆ ಸೋತರು. ಆ ಬಳಿಕ ಮೇಲುಗೈ ಸಾಧಿಸಿದ ನೆಪೋಲಿಯನ್ ಯುದ್ಧಗಳು ಫ್ರೆಂಚರಿಗೆ ಭಾರತದಲ್ಲೂ ರಾಜಕೀಯ ಆಕ್ಷಾಂಕ್ಷೆಗಳು ಮೂಡುವಂತೆ ಮಾಡಿದವು.
ಆಗ ಫ್ರೆಂಚರು ಪೂರ್ವ ಹಾಗೂ ಪಶ್ಚಿಮ ಕರಾವಳಿಗಳಲ್ಲಿ ಕೆಲವು ಆಯಕಟ್ಟಿನ ಸ್ಥಳಗಳಲ್ಲಿ ನೆಲೆ ನಿಂತರು. ಇದರಲ್ಲಿ ಪಾಂಡಿಚೆರಿ, ಕಾರೈಕಲ್, ಮಾಹೆ, ಬಾಂಗ್ಲಾ ಸಮೀಪದ ಚಂದರ್ ನಾಗೋರ್ ಸೇರಿದ್ದವು. ಆಧುನಿಕ ಅಂಚೆ ವ್ಯವಸ್ಥೆ ರೂಪುಗೊಳ್ಳುತ್ತಿದ್ದ ಆ ಸಂದರ್ಭದಲ್ಲಿ ಫ್ರಾನ್ಸ್, ಅಂಚೆ ಚೀಟಿಗಳನ್ನು ಚಲಾವಣೆಗೆ ತಂದಿತು. ಭಾರತವೂ ಸೇರಿದಂತೆ ಹಲವೆಡೆ ಇದ್ದ ತನ್ನ ವಸಾಹತುಗಳಲ್ಲಿ ಕೂಡಾ ಏಕರೂಪದ ಅಂಚೆ ಚೀಟಿಗಳನ್ನು ಉಪಯೋಗಿಸಲು ನಿರ್ಧರಿಸಿತು.
ಯೂರೋಪ್ ರಾಷ್ಟ್ರಗಳು ಬೇರೆ ಬೇರೆ ಖಂಡಗಳಲ್ಲಿ ಸ್ಥಾಪಿಸಿದ್ದ ವಸಾಹತುಗಳಲ್ಲಿ ಒಂದೇ ಬಗೆಯ ಕಾಯಂ ವಸಾಹತು ಕಾಯ್ದೆಯನ್ನು 1793 ರಲ್ಲಿ ಜಾರಿಗೆ ತರುವಲ್ಲಿ ಲಾರ್ಡ್ ಕಾರ್ನ್ವಾಲೀಸ್ ಯಶಸ್ವಿಯಾದರು. ಇದರ ಪರಿಣಾಮ ವಸಾಹತು ಹೊಂದಿರುವ ರಾಷ್ಟ್ರಗಳೆಲ್ಲಾ ಹೊಂದಾಣಿಕೆಯಿಂದ ರಾಜಕೀಯ ಮತ್ತು ಆರ್ಥಿಕ ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಯಿತು. ಇದಾದ ನಂತರ ಭಾರತದಲ್ಲಿದ್ದ ಎಲ್ಲಾ ವಸಾಹತುಗಳೂ ಪ್ರತ್ಯೇಕ ಅಂಚೆ ವ್ಯವಸ್ಥೆ ರೂಪಿಸಿಕೊಳ್ಳಲು ಮುಂದಾದವು.