ಆ್ಯಪ್ನಗರ

ಶಿಶುಗೀತೆ: ಸಂಜೆಯ ಮಳೆ

ಸುರಿಯಿತು ಸಂಜೆ ಆಲಿಕಲ್ಲು ಮಳೆ

Vijaya Karnataka 21 Oct 2018, 5:00 am
ಹೊರಾ.ಪರಮೇಶ್‌
Vijaya Karnataka Web shishugeethe-raining 2


ತೊಳೆಯಿತು ಹಳ್ಳಿಯ ಕಸ ಕಡ್ಡಿ ಕೊಳೆ

ಹೊಲ ಗದ್ದೆಗಳಿಗೆ ಬಂತು ಜೀವ ಕಳೆ

ಹರುಷದಿ ಜಳಕವ ಮಾಡಿತು ಇಳೆ

ತುಂಟ ಮಕ್ಕಳು ಛತ್ರಿಯ ಹಿಡಿದು

ಸಂಗ್ರಹಿಸಿದರು ಆಲಿಕಲ್ಲುಗಳ

ಹಾರಿ ಹೋಯಿತು ಛತ್ರಿಯು ದೂರ

ಗಾಳಿಯ ಆರ್ಭಟವಿತ್ತು ಬಹಳ

ಬಾಲವ ಎತ್ತಿದ ಹಸು ಎಮ್ಮೆಗಳು

ಏದುಸಿರಿಡುತ ಓಡಿದವು ಮನೆಗೆ

ರೆಕ್ಕೆಯ ಬಡಿಯುತ ಪಕ್ಷಿಗಳೆಲ್ಲ

ಹಾರಿದವು ತಮ್ಮ ಗೂಡಿನ ಕಡೆಗೆ

ಗಂಟೆಗಟ್ಟಲೆ ಸುರಿದ ಮಳೆಗೆ

ತುಂಬಿಕೊಂಡವು ಕೆರೆಕಟ್ಟೆಗಳು

ವಟಗುಟ್ಟುತಲಿ ಹಾಡತೊಡಗಿದವು

ಕಲ್ಲು ಸಂದಿಯ ಕಪ್ಪೆಗಳು

ಜೋರು ಗಾಳಿ ಮಳೆ ಆರ್ಭಟಕೆ

ಧರೆಗುರುಳಿದವು ರಸ್ತೆ ಮರಗಳು

ವಿದ್ಯುತ್‌ ತಂತಿಯು ತುಂಡಾಗಲು

ಕತ್ತಲಲಿ ಕಳೆವಂತಾಯಿತು ಇರುಳು

ಮಳೆ ಸುರಿವಾಗ ಆಗುವ ತೊಂದರೆ

ಸಹಿಸಬೇಕಾದುದು ಅನಿವಾರ್ಯ

ನಲಿವಿನ ಹಿಂದೆ ನೋವು ಇರುವುದು

ಜೀವನ ಸಾರದಲ್ಲಿರುವ ಸ್ವಾರಸ್ಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ