ಆ್ಯಪ್ನಗರ

ಸರಳ ವಿಜ್ಞಾನ: ಮಿದುಳಿಗೆ ಬೇಕು ಆಮ್ಲಜನಕ

ಐದು ನಿಮಿಷಗಳಿಗಿಂತ ಹೆಚ್ಚಿನ ಸಮಯದವರೆಗೆ ಆಮ್ಲಜನಕ ಸಿಗದಿದ್ದರೆ ನಮ್ಮ ಮಿದುಳು ನಿಷ್ಕ್ರೀಯವಾಗುತ್ತದೆ ಎಂದು ನಾವು ಕೇಳಿದ್ದೇವೆ...

Vijaya Karnataka 9 Jun 2019, 12:00 am
ಐದು ನಿಮಿಷಗಳಿಗಿಂತ ಹೆಚ್ಚಿನ ಸಮಯದವರೆಗೆ ಆಮ್ಲಜನಕ ಸಿಗದಿದ್ದರೆ ನಮ್ಮ ಮಿದುಳು ನಿಷ್ಕ್ರೀಯವಾಗುತ್ತದೆ ಎಂದು ನಾವು ಕೇಳಿದ್ದೇವೆ. ಆದರೆ ಇತ್ತೀಚೆಗೆ ಕೆರೆಗೆ ಬಿದ್ದು ಅರ್ಧ ಗಂಟೆಗೂ ಹೆಚ್ಚು ಕಾಲ ಹೆಪ್ಪುಗಟ್ಟಿದ್ದ ತಣ್ಣೀರಿನಲ್ಲಿ ಮುಳುಗಿ ಹೋಗಿದ್ದ ವ್ಯಕ್ತಿಯೊಬ್ಬನನ್ನು ಹೊರತೆಗೆದ ಬಳಿಕವೂ ಆತ ಬದುಕುಳಿದಿದ್ದ. ಇದು ಸಾಧ್ಯವೇ?
Vijaya Karnataka Web Sse-278 when the body shuts down


ನೀರಿನಲ್ಲಿರುವ, ನೀರು ನುಂಗಿರುವ ಹಾಗೂ ಪ್ರಜ್ಞೆ ತಪ್ಪಿರುವ ಯಾವುದೇ ವ್ಯಕ್ತಿಯ ಮುಖದ ಮೇಲಿರುವ ಅತ್ಯಂತ ತಣ್ಣನೆಯ ನೀರು ಕೆಲವೊಮ್ಮೆ ಅವರಲ್ಲಿ ಪ್ರತಿಫಲನವೊಂದನ್ನು ಪ್ರಚೋದಿಸುತ್ತದೆ. ಇದನ್ನು ಸಸ್ತನಿ ಪ್ರತಿಫಲನ ಎನ್ನಲಾಗುತ್ತದೆ. ಈ ಪ್ರತಿಫಲನ ವ್ಯಕ್ತಿಯ ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುವ ಕಾರಣ ಮಿದುಳು ಮತ್ತು ಇತರ ಪ್ರಮುಖ ಅಂಗಗಳಿಗೆ ಕಡಿಮೆ ಆಮ್ಲಜನಕ ಸಾಕಾಗುತ್ತದೆ. ದೇಹದ ಕೈ ಕಾಲುಗಳಂತಹ ತುದಿ ಭಾಗಗಳು ತಮ್ಮ ಆಮ್ಲಜನಕ ಪೂರೈಕೆಯನ್ನು ಬಿಟ್ಟು ಬಿಡುವುದರಿಂದ ಆ ಆಮ್ಲಜನಕವು ತಾನು ಅತ್ಯಂತ ಅಗತ್ಯವಾಗಿ ಬೇಕಾದ ಅಂಗಕ್ಕೆ ಹೋಗುತ್ತದೆ. ಇದರಿಂದ ವ್ಯಕ್ತಿ ಅರ್ಧ ಗಂಟೆಯವರೆಗೆ ನೀರಿನಲ್ಲಿ ಮುಳುಗಿದ್ದರೂ ಆತ ಬದುಕುಳಿಯುವ ಸಾಧ್ಯತೆ ಇರುತ್ತದೆ. ಆತನನ್ನು ನೀರಿನಿಂದ ಹೊರಗೆ ತೆಗೆದ ಬಳಿಕ ಸಸ್ತನಿ ಪ್ರತಿಫಲನ ನಿಂತು ಹೋಗುವ ಕಾರಣ ಆ ವ್ಯಕ್ತಿಗೆ ತಕ್ಷ ಣ ಪ್ರಥಮ ಚಿಕಿತ್ಸೆ ಕೊಡಬೇಕಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ